Homeಕರ್ನಾಟಕಮಾತೃಭಾಷೆ ಮೂಲಕವೇ ಜನರನ್ನು ತಲುಪಿದ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್…

ಮಾತೃಭಾಷೆ ಮೂಲಕವೇ ಜನರನ್ನು ತಲುಪಿದ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್…

- Advertisement -
- Advertisement -

ಮಾತೃಭಾಷೆ ಎಂಬುದು ತಾಯಿಯ ಹಾಲಿನ ಜೊತೆಜೊತೆಗೆ ಪ್ರತಿಯೊಬ್ಬರ ನರನಾಡಿಗಳಲ್ಲಿ ಬೆರೆಯುತ್ತದೆ. ಜೀವನದ ಕೊನೆಯವರೆಗೂ ಯಾರೂ ತಮ್ಮ ಮಾತೃಭಾಷೆಯನ್ನು ಮರೆಯುವುದು ಸಾಧ್ಯವಿಲ್ಲ. ಕೆಲವು ಸಮಯ ವಿದೇಶಗಳಲ್ಲಿ ಇರುವ ಪ್ರಸಂಗ ಬಂದಾಗ ಅಲ್ಲಿನ ಭಾಷೆ ಮಾತಾಡುವವರೂ ಮರಳಿ ತಮ್ಮ ನೆಲಕ್ಕೆ ಬಂದಾಗ ತಮ್ಮ ನುಡಿಯಲ್ಲಿಯೇ ವ್ಯವಹರಿಸುತ್ತಾರೆ. ಅವರ ಉಚ್ಛಾರಣೆಯಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಾಗಬಹುದೇ ಹೊರತಾಗಿ ಅವರು ಭಾಷೆಯನ್ನು ಮರೆತಿರುವುದಿಲ್ಲ. ಅಲ್ಲದೆ ತಾಯಿ, ತಾಯಿನಾಡು, ತಾಯಿನುಡಿಯ ಮೇಲಿನ ಪ್ರೀತಿ ಯಾವುದನ್ನೂ ಮರೆಯಲು ಬಿಡುವುದಿಲ್ಲ.

ಜಯದೇವಿತಾಯಿ ಲಿಗಾಡೆಯವರ ಮಾತೃಭಾಷೆ ಕನ್ನಡ, ವ್ಯವಹಾರ ಭಾಷೆಯೂ ಅದೇ. ಆದರೆ ಅವರು ಮಹಾರಾಷ್ಟ್ರದಲ್ಲಿ ಇದ್ದ ಕಾರಣಕ್ಕೆ ಅಲ್ಲಿನ ಮರಾಠಿ ಭಾಷೆಯನ್ನು ಶಾಲಾಶಿಕ್ಷಣದಲ್ಲಿ ಕಲಿತರು. ಆದರೆ ಮಾತೃಭಾಷೆಯ ಮೇಲಿನ ಪ್ರೀತಿಯಿಂದ ಅವರು ಕನ್ನಡದತ್ತ ಹೊರಳಿದರು. ಬಹುಕಡಿಮೆ ಅವಧಿಯಲ್ಲಿಯೇ ಕನ್ನಡ ಕಲಿತರು. ಕನ್ನಡದಲ್ಲಿಯೇ ಉನ್ನತ ಅಧ್ಯಯನ ಮಾಡಿದರು. ಕನ್ನಡದಲ್ಲಿಯೇ ಮೇರು ಸಾಹಿತ್ಯ ಕೃತಿಗಳನ್ನು ರಚಿಸಿದರು. ಪಿ.ಎಚ್.ಡಿ. ಮತ್ತು ಡಿ.ಲಿಟ್. ಕೂಡ ಪಡೆದರು. ಭಾಷೆಯ ಮೇಲಿನ ಪ್ರೀತಿಯಿದು.

ಜಯದೇವಿತಾಯಿ ಲಿಗಾಡೆಯವರಂತೆಯೇ ಮಾತೃಭಾಷೆಯ ಪ್ರೀತಿ ಮತ್ತು ಪ್ರಭಾವಕ್ಕೊಳಗಾದವರು ಗೌರಿ ಲಂಕೇಶ್ ಅವರೂ ಕೂಡ. ವಿದೇಶದಲ್ಲಿ ಓದಿ, ಅಲ್ಲಿ ಇದ್ದು, ಅಲ್ಲಿನ ಪ್ರಗತಿಪರ ಅಂಶಗಳನ್ನು, ಅಲ್ಲಿನ ಸಮಾಜ ಜೀವನವನ್ನು ಕಂಡ ಗೌರಿ ಲಂಕೇಶ್ ಅವರು ಕನ್ನಡವನ್ನು ಮರೆತಿರಲಿಲ್ಲ. ಅವರು ದೇಶಕ್ಕೆ ಮರಳಿದ ಮೇಲೆ ಪುನಃ ಬಹುಆಸ್ಥೆಯಿಂದ ಕನ್ನಡ ಕಲಿತರು. ಕನ್ನಡದ ಪ್ರಮುಖ ಲೇಖಕರೂ, ಕನ್ನಡದ ಉಪನ್ಯಾಸಕರೂ ಆಗಿದ್ದ ಅವರ ತಂದೆ ಪಿ. ಲಂಕೇಶ್ ಅವರ ಪ್ರಭಾವ ಗೌರಿಯವರ ಮೇಲೆ ಇದ್ದೇ ಇತ್ತು. ಗೌರಿ ಬೇಕಿದ್ದರೆ ಹೈಪ್ರೋಫೈಲ್ ಜನರ ಸಲುವಾಗಿ ಒಂದು ಇಂಗ್ಲೀಷ್ ಪತ್ರಿಕೆಯನ್ನೂ ಹುಟ್ಟು ಹಾಕಬಹುದಿತ್ತು. ಆದರೆ ಅವರ ಕನ್ನಡ ಪ್ರೀತಿ ಹಾಗೆ ಮಾಡಗೊಡಲಿಲ್ಲ, ಜನಸಾಮಾನ್ಯರ ಮೇಲೆ ಅವರಿಗಿದ್ದ ಕಾಳಜಿ ಅವರನ್ನು ಇಂಗ್ಲೀಷ್ ಕಡೆಗೆ ಹೋಗದಂತೆ ತಡೆಯಿತು.

ಅವರು ಲಂಕೇಶ್ ಪತ್ರಿಕೆಯಲ್ಲಿ ಬರೆಯುತ್ತಿದ್ದ ಲೇಖಕರ, ಪತ್ರಿಕೆಯಲ್ಲಿ ಕೆಲಸಕ್ಕಿದ್ದವರ ಕನ್ನಡವನ್ನೂ ಶುದ್ಧಗೊಳಿಸುವಷ್ಟು, ಪ್ರೂಫ್ ನೋಡಿ ತಿದ್ದುವಷ್ಟು ಕನ್ನಡ ಕಲಿತರು. ಮುಂದೆ ತಾವೂ ಕೂಡ ಕನ್ನಡದಲ್ಲಿ ಬರೆದರು, ಪತ್ರಿಕೆ ನಡೆಸಿದರು. ತಮ್ಮ ವಿಚಾರಗಳನ್ನು ಕನ್ನಡದ ಮೂಲಕ ವ್ಯಕ್ತಪಡಿಸುವಷ್ಟು ಪ್ರಭಾವಿಯಾಗಿ ಹಾಗೂ ಕನ್ನಡದ ಮೂಲಕ ಓದುಗರಿಗೆ, ಜನಸಾಮಾನ್ಯರಿಗೆ ತಲುಪುವಷ್ಟು ವ್ಯಾಪಕವಾಗಿ ಅನ್ಯಭಾಷೆಯಿಂದ ತಲುಪುವುದು ಸಾಧ್ಯವಿಲ್ಲ ಎಂಬುದನ್ನು ಅವರು ಬಹುಬೇಗ ಮನಗಂಡಿದ್ದರು. ಅವರ ಹೋರಾಟದ ಹಿಂದಿನ ಶಕ್ತಿ ಕನ್ನಡ ನಾಡು, ನುಡಿಯೇ ಆಗಿತ್ತು. ಈ ನಾಡು, ನುಡಿ, ಗೌರಿಯವರೂ ಎಂದಿಗೂ ಅಮರ.

ಗಿರೀಶ ಜಕಾಪುರೆ, ಮೈಂದರ್ಗಿ, ಮಹಾರಾಷ್ಟ್ರ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...