ಇಂದು ಮುಂಜಾನೆ ನಡೆಸಲಾದ ದಾಳಿಯಲ್ಲಿ ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಒಂಬತ್ತು ಅಲ್-ಖೈದಾ ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ (NIA) ಹೇಳಿದೆ.
ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಮತ್ತು ಕೇರಳದ ಎರ್ನಾಕುಲಂನಲ್ಲಿ ಈ ದಾಳಿ ನಡೆಸಲಾಗಿದೆ ಎಂದು NIA ಹೇಳಿದ್ದು, “ಪಶ್ಚಿಮ ಬಂಗಾಳ ಮತ್ತು ಕೇರಳ ಸೇರಿದಂತೆ ಭಾರತದ ವಿವಿಧ ಸ್ಥಳಗಳಲ್ಲಿ ಅಲ್-ಖೈದಾ ಕಾರ್ಯಕರ್ತರ ಅಂತರ್-ರಾಜ್ಯ ಘಟಕಗಳ ಬಗ್ಗೆ ಎನ್ಐಎ ತಿಳಿದುಕೊಂಡಿತ್ತು. ಭಾರತದ ಪ್ರಮುಖ ಸ್ಥಳಗಳಲ್ಲಿ ಭಯೋತ್ಪಾದಕ ದಾಳಿಯನ್ನು ನಡೆಸಿ ಮುಗ್ಧ ಜನರನ್ನು ಕೊಲ್ಲುವ ಬಗ್ಗೆ ಈ ಗುಂಪು ಯೋಜಿಸುತ್ತಿತ್ತು” ಎಂದು ಹೇಳಿದೆ.
ಇದನ್ನೂ ಓದಿ: ಶಂಕಿತ ಭಯೋತ್ಪಾದಕ ದೇವೀಂದರ್ ಸಿಂಗ್ ವಿರುದ್ದ ಚಾರ್ಜ್ಶೀಟ್ ಸಲ್ಲಿಸಿದ ಎನ್ಐಎ
ಆರು ಜನರನ್ನು ಪಶ್ಚಿಮ ಬಂಗಾಳದಿಂದ, ಮೂವರನ್ನು ಕೇರಳದಿಂದ ಬಂಧಿಸಲಾಗಿದೆ ಎಂದು NIA ಹೇಳಿದೆ. “ಡಿಜಿಟಲ್ ಸಾಧನಗಳು, ದಾಖಲೆಗಳು, ಜಿಹಾದಿ ಸಾಹಿತ್ಯ, ಶಸ್ತ್ರಾಸ್ತ್ರಗಳು, ದೇಶೀಯವಾಗಿ ನಿರ್ಮಿಸಿದ ಬಂದೂಕುಗಳು, ಸ್ಥಳೀಯವಾಗಿ ತಯಾರಿಸಿದ ದೇಹದ ರಕ್ಷಾಕವಚ ಮುಂತಾದವುಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಹೇಳಿದೆ.
NIA Arrests Nine Al-Qaeda Terrorists from West Bengal and Kerala pic.twitter.com/qL7p4rR9lc
— NIA India (@NIA_India) September 19, 2020
“ಇವರು ನಿಧಿಸಂಗ್ರಹದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಗುಂಪಿನ ಕೆಲವು ಸದಸ್ಯರು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಲು ದೆಹಲಿಗೆ ಪ್ರಯಾಣಿಸಲು ಯೋಜಿಸುತ್ತಿದ್ದರು” ಎಂದು ಎಂದು NIA ಹೇಳಿದೆ.
ಇದನ್ನೂ ಓದಿ: ಶೋಪಿಯಾನ ಯುವಕರ ಹತ್ಯೆಯಲ್ಲಿ ಸೈನಿಕರು ಕಾನೂನು ಉಲ್ಲಂಘನೆ ಮಾಡಿದ್ದಾರೆ: ಭಾರತೀಯ ಸೇನೆ