Homeಮುಖಪುಟಬಾಹ್ಯ ಏಜೆನ್ಸಿಗಳಿಗೆ ಪ್ರವೇಶವಿಲ್ಲ, ಇವಿಎಂ ಪ್ರೋಗ್ರಾಮಿಂಗ್ ಪ್ರಕ್ರಿಯೆಯು ದೃಢವಾಗಿದೆ: ಚುನಾವಣಾ ಆಯೋಗ

ಬಾಹ್ಯ ಏಜೆನ್ಸಿಗಳಿಗೆ ಪ್ರವೇಶವಿಲ್ಲ, ಇವಿಎಂ ಪ್ರೋಗ್ರಾಮಿಂಗ್ ಪ್ರಕ್ರಿಯೆಯು ದೃಢವಾಗಿದೆ: ಚುನಾವಣಾ ಆಯೋಗ

- Advertisement -
- Advertisement -

ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಇಂಡಿಯಾ (I.N.D.I.A.) ಒಕ್ಕೂಟದ ಸದಸ್ಯರು ಆಗಸ್ಟ್‌ನಲ್ಲಿ ಚುನಾವಣಾ ಆಯೋಗಕ್ಕೆ (ಇಸಿ) ಪತ್ರ ಬರೆದಿದ್ದರು. ಇವಿಎಂಗಳ ಕುರಿತು ಪದೇಪದೆ ಕೇಳಲಾಗುವ ಪ್ರಶ್ನೆಗಳ (ಎಫ್ಎಕ್ಯೂ) ಕುರಿತ ಪುಟವನ್ನು ಇದೀಗ ಆಯೋಗ ಪರಿಷ್ಕರಿಸಿದ್ದು, ‘ಜರ್ಮನಿಯಲ್ಲಿ ನಿಷೇಧಿತ ಇವಿಎಂಗಳಿಗಿಂತ ಭಾರತೀಯ ಇವಿಎಂಗಳು ಹೇಗೆ ಭಿನ್ನವಾಗಿವೆ; ಒಂದು ವೇಳೆ ವಿವಿ ಪ್ಯಾಟ್‌ಗಳು ಪ್ರೋಗ್ರಾಮೆಬಲ್ ಮೆಮೊರಿಯನ್ನು ಹೊಂದಿದ್ದರೆ ಹಾಗೂ ಇವಿಎಂ ತಯಾರಕರು ವಿದೇಶಿ ಮೈಕ್ರೋಚಿಪ್ ತಯಾರಕರೊಂದಿಗೆ ಸಾಫ್ಟ್ವೇರ್ ಅನ್ನು ಹಂಚಿಕೊಂಡರೆ ಏನಾಗುತ್ತದೆ’ ಎಂಬ ಬಗ್ಗೆ ತನ್ನ ಉತ್ತರವನ್ನು ಮತ್ತಷ್ಟು ವಿವರಿಸಿದೆ.

ನವೀಕರಿಸಿದ ಎಫ್ಎಕ್ಯೂಗಳನ್ನು ಆಗಸ್ಟ್ 23 ರಂದು ಅಪ್ಲೋಡ್ ಮಾಡಲಾಗಿದೆ. 76 ಪ್ರಶ್ನೆಗಳನ್ನು ಒಳಗೊಂಡಿದ್ದು, ಹಿಂದಿನ ಆವೃತ್ತಿಯು 39 ಪ್ರಶ್ನೆಗಳಿಗೆ ಉತ್ತರಿಸಲಾಗಿತ್ತು.

‘ಮೈಕ್ರೋಕಂಟ್ರೋಲರ್‌ಗಳನ್ನು ಬಿಇಎಲ್/ಇಸಿಐಎಲ್ ಕಂಪನಿಗಳು ಫರ್ಮ್‌ವೇರ್ ತಂತ್ರಜ್ಞಾನದ ಮೂಲಕ, ತಮ್ಮದೆ ಜಾಗದಲ್ಲಿ ಉನ್ನತ ಮಟ್ಟದ ಭದ್ರತೆ ಮತ್ತು ಸುರಕ್ಷತೆಗಳ ಅಡಿಯಲ್ಲಿ ಪೋರ್ಟ್ ಮಾಡಲಾಗುತ್ತದೆ. ನಾಲ್ಕು ಹಂತಗಳ ಸುರಕ್ಷಿತ ಉತ್ಪಾದನಾ ಪ್ರಕ್ರಿಯೆಯಲ್ಲಿ ಮೈಕ್ರೋಕಂಟ್ರೋಲರ್ಗಳನ್ನು ‘ಎಲ್-3’ ಪ್ರದೇಶದಲ್ಲಿ ಪೋರ್ಟ್ ಮಾಡಲಾಗುತ್ತದೆ. ಅಲ್ಲಿಗೆ ಪ್ರವೇಶ ಕಾರ್ಡ್‌ಗಳನ್ನು ಹೊಂದಿರುವ, ನಿಗದಿಪಡಿಸಿದ ಎಂಜಿನಿಯರ್‌ಗಳು ಮಾತ್ರ ಬಯೋಮೆಟ್ರಿಕ್ ಸ್ಕ್ಯಾನ್‌ರ್‌ಗಳ ಮೂಲಕ ಅಧಿಕೃತ ಪ್ರವೇಶವನ್ನು ಹೊಂದಿರುತ್ತಾರೆ. ಮೈಕ್ರೊ ನಿಯಂತ್ರಕಗಳಲ್ಲಿ ಫರ್ಮ್‌ವೇರ್ ಪ್ರೋಗ್ರಾಂ ಅನ್ನು ಲೋಡ್ ಮಾಡುವಾಗ ಯಾವುದೇ ಬಾಹ್ಯ ಏಜೆನ್ಸಿ, ಸ್ಥಳೀಯ ಅಥವಾ ವಿದೇಶಿ ಏಜೆನ್ಸಿಗಳು ತೊಡಗಿಸಿಕೊಂಡಿಲ್ಲ’ ಎಂದು ಆಯೋಗ ತನ್ನ ಉತ್ತರದಲ್ಲಿ ತಿಳಿಸಿದೆ.

ವಿವಿ ಪ್ಯಾಟ್ (ಮತದಾರರು ಪರಿಶೀಲಿಸಬಹುದಾದ ಕಾಗದದ ಆಡಿಟ್ ಟ್ರಯಲ್) ನಲ್ಲಿ, ಎರಡು ರೀತಿಯ ಖಚಿತ ಪ್ರಕ್ರಿಯೆ ಹೊಂದಿವೆ ಎಂದು ಬರೆದಿರುವ ಅಯೋಗ, ಪ್ರೋಗ್ರಾಂ ಸೂಚನೆಗಳನ್ನು ಮೈಕ್ರೋಕಂಟ್ರೋಲರ್‌ಗಳಿಗೆ ಒಂದೇ ಬಾರಿ ಪ್ರೋಗ್ರಾಮ್ ಮಾಡಬಹುದಾಗಿರುತ್ತದೆ. ಇನ್ನೊಂದರಲ್ಲಿ ಚಿತ್ರಗಳನ್ನು (ಚಿಹ್ನೆಗಳು) ಸಂಗ್ರಹಿಸಲಾಗುತ್ತದೆ. ಚಿಹ್ನೆಗಳನ್ನು ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಲೋಡ್ ಮಾಡಲಾಗುತ್ತದೆ’ ಎಂದು ವಿವರಿಸಿದೆ.

‘ಜರ್ಮನ್ ಸಾಂವಿಧಾನಿಕ ನ್ಯಾಯಾಲಯವು ನಿಷೇಧಿಸಿರುವ ಮತದಾನ ವ್ಯವಸ್ಥೆಗಳಿಗಿಂತ ಭಾರತದ ಇವಿಎಂಗಳು ಹೇಗೆ ಭಿನ್ನವಾಗಿವೆ?” ಎಂಬ ಪ್ರಶ್ನೆಗೆ, ‘ಇವಿಎಂಗಳನ್ನು ಕೇಂದ್ರ ಸರ್ಕಾರದ ಪಿಎಸ್ಯುಗಳು ಸುರಕ್ಷಿತ ಸೌಲಭ್ಯಗಳಲ್ಲಿ ತಯಾರಾಗುತ್ತಿದ್ದು, ಮೂರನೇ ವ್ಯಕ್ತಿಯ ಪರೀಕ್ಷೆಗೆ ಒಳಗಾಗುತ್ತವೆ. ಜರ್ಮನ್ಗಿಂತಲೂ ಭಾರತೀಯ ಇವಿಎಂಗಳು ದೃಢವಾಗಿರುತ್ತವೆ. ವಿಭಿನ್ನವಾದ, ಹೋಲಿಸಲಾಗದ ತಂತ್ರಜ್ಞಾನಗಳು ಮತ್ತು ಪ್ರಕ್ರಿಯೆಗಳನ್ನು ಕಾರ್ಯಗತಗೊಳಿಸುತ್ತವೆ. ದೇಶದ ಸುಪ್ರೀಂ ಕೋರ್ಟ್ ಮತ್ತು ವಿವಿಧ ಹೈಕೋರ್ಡ್‌ಗಳು ಯಂತ್ರಗಳನ್ನು ಮತ್ತೆ ಮತ್ತೆ ಪರಿಶೀಲಿಸಿವೆ. ಇಸಿಐ ಇವಿಎಂಗಳಲ್ಲಿ ತಮ್ಮ ವಿಶ್ವಾಸ ಮತ್ತು ನಂಬಿಕೆಯನ್ನು ಮರುಸ್ಥಾಪಿಸಿವೆ’ ಎಂದು ಆಯೋಗ ಹೇಳಿದೆ.

ಇವಿಎಂಗಳನ್ನು ಟ್ಯಾಂಪರಿಂಗ್ ಮಾಡುವ ಕುರಿತ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿರುವ ಆಯೋಗ, ಸೆಲ್ಫೋನ್ ಅಥವಾ ಬ್ಲೂಟೂತ್ ಸಾಧನಗಳನ್ನು ಬಳಸಿಕೊಂಡು ಇವಿಎಂಗಳನ್ನು ಮ್ಯಾನಿಪುಲೇಟ್ ಮಾಡಬಹುದೆಂಬ ಪ್ರತಿಪಾದನೆಗೆ, ‘ಇದು ಆಧಾರರಹಿತ ಮತ್ತು ಅವೈಜ್ಞಾನಿಕವಾಗಿದೆ… ಮೈಕ್ರೋ ಕಂಟ್ರೋಲರ್‌ಗಳ ಕುರಿತು ತಾಂತ್ರಿಕ ಮಾಹಿತಿಯು ಸಾರ್ವಜನಿಕವಾಗಿ ಲಭ್ಯವಿದೆ. ಬೇಕಿದ್ದರೆ ಮೈಕ್ರೋಕಂಟ್ರೋಲರ್ ತಯಾರಕರ ವೆಬ್‌ಸೈಟ್ ಪ್ರವೇಶಿಸಿ ಪರಿಶೀಲಿಸಬಹುದು’ ಎಂದಿದೆ.

20 ಲಕ್ಷ ಇವಿಎಂಗಳು ನಾಪತ್ತೆಯಾಗಿವೆ ಎಂಬ ಮಾಧ್ಯಮ ವರದಿಗಳು ನಿಜವೇ ಎಂಬುದು ಮತ್ತೊಂದು ಪ್ರಶ್ನೆಯಾಗಿದೆ. ‘ಈ ವಿಷಯವು ನ್ಯಾಯಾಲಯದಲಲ್ಲಿದೆ. ಬಾಂಬೆ ಹೈಕೋರ್ಟಿಗೆ ಅಗತ್ಯ ಸ್ಪಷ್ಟೀಕರಣಗಳನ್ನು ಒದಗಿಸಲಾಗಿದೆ. ಪಟ್ಟಭದ್ರ ಹಿತಾಸಕ್ತಿಗಳಿಗೆ ಸತ್ಯಗಳನ್ನು ತಿರುಚುವುದು ದೊಡ್ಡ ವಿಷಯವಲ್ಲ’ ಎಂದು ಇಸಿ ಉತ್ತರಿಸಿದೆ.

ಇದನ್ನೂ ಓದಿ; ಮರಗಳ್ಳತನ ಪ್ರಕರಣ: ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಹೋದರನ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಮೂಲಕ ಕೇಂದ್ರ ಸರ್ಕಾರ ಪ್ರಜಾತಂತ್ರ ವ್ಯವಸ್ಥೆಯನ್ನು ನಾಶ ಮಾಡಲು ಹೊರಟಿದೆ: ಮಾಜಿ ಸಚಿವ ಬಿ.ಬಿ.ಲಿಂಗಯ್ಯ ಆಕ್ರೋಶ

ಕೇಂದ್ರದ ಬಿಜೆಪಿ ಸರ್ಕಾರವು ‘SIR’ ಜಾರಿಯ ಮೂಲಕ ಜನರ ಮತದಾನದ ಹಕ್ಕನ್ನು ಕಿತ್ತುಕೊಳ್ಳಲು ಮತ್ತು ಪ್ರಜಾತಂತ್ರ ವ್ಯವಸ್ಥೆಯನ್ನು ಕಗ್ಗೊಲೆ ಮಾಡಲು ಸಂಚು ರೂಪಿಸಿದೆ ಎಂದು ಮಾಜಿ ಸಚಿವ ಬಿ.ಬಿ. ಲಿಂಗಯ್ಯ ತೀವ್ರ ಆಕ್ರೋಶ...

ಖ್ಯಾತ ಪತ್ರಕರ್ತ ಪಿ. ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

ಕನ್ನಡ ಪತ್ರಿಕೋದ್ಯಮದ ಧ್ರುವತಾರೆ, ದಿವಂಗತ ಪಿ. ಲಂಕೇಶ್ ಅವರ ಧರ್ಮಪತ್ನಿ ಹಾಗೂ ದಿವಂಗತ ಪತ್ರಕರ್ತೆ ಗೌರಿ ಲಂಕೇಶ್ ಅವರ ತಾಯಿಯಾದ ಇಂದಿರಾ ಲಂಕೇಶ್ (84) ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ...

ಬಾಗಲಕೋಟೆಯ ವಿವಿಧ ಪ್ರದೇಶಗಳಲ್ಲಿ ಎಸ್‌ಐಆರ್‌ ವಿರುದ್ಧ ಜನಜಾಗೃತಿ ಜಾಥಾ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಬಾಗಲಕೋಟೆ ನಗರದ ವಿವಿಧ ಭಾಗಗಳಲ್ಲಿ ಭಾನುವಾರ (ಜೂ.14) ಜಾಗೃತಿ ಜಾಥಾ ನಡೆಯಿತು. ನವನಗರದ ವಿದ್ಯಾಗಿರಿ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಸರ್ಕಲ್‌ನಿಂದ ಪ್ರಾರಂಭವಾದ ಜಾಥಾ...

SIR ವಿರೋಧಿ ಜನಜಾಗೃತಿ ಜಾಥಾ: ಕಾಫಿ ನಾಡು ಚಿಕ್ಕಮಗಳೂರಲ್ಲಿ ಅದ್ದೂರಿ ಸ್ವಾಗತ

ಚಿಕ್ಕಮಗಳೂರು: ರಾಜ್ಯಾದ್ಯಂತ ಐದು ವಿಭಾಗಗಳಲ್ಲಿ ಸಂಚರಿಸುತ್ತಿರುವ 'SIR ವಿರೋಧಿ ಜನಜಾಗೃತಿ ಜಾಥಾ'ದ 3ನೇ ಮಾರ್ಗದ ತಂಡಕ್ಕೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಭಾನುವಾರ ಬೆಳಗ್ಗೆ ಜಿಲ್ಲೆಯ ಕೊಪ್ಪ ತಾಲ್ಲೂಕಿಗೆ ಆಗಮಿಸಿದ ಜಾಥಾ...

ಚಿಕ್ಕಮಗಳೂರಿನಲ್ಲಿ ಎಸ್‌ಐಆರ್ (SIR) ವಿರೋಧಿ ಜಾಥಾ: ಮತದಾರರ ಹಕ್ಕು ಕಸಿಯುವ ಹುನ್ನಾರದ ವಿರುದ್ಧ ಆಕ್ರೋಶ

ಭಾರತ ಚುನಾವಣಾ ಆಯೋಗವು ಜಾರಿಗೆ ತಂದಿರುವ ವಿಶೇಷ ತೀವ್ರ ಪರಿಷ್ಕರಣೆ (SIR - Special Intensive Revision) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ....

ಮಂಗಳೂರು: ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ: ವಿ.ಎಸ್. ಶ್ರೀಧರ್ 

ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು, ಎದ್ದೇಳು ಕರ್ನಾಟಕ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ಜನಜಾಗೃತಿ ಜಾಥಾದ ಭಾಗವಾಗಿ ಇಂದು (ಜೂನ್-14) ಮಂಗಳೂರಿನಲ್ಲಿ ಸಭೆ...

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...