Homeಅಂತರಾಷ್ಟ್ರೀಯಗಾಝಾ ನೆರವಿಗೆ ಉತ್ತರ ಆಫ್ರೀಕಾ ದೇಶಗಳ ಜನರ ಕಾಲ್ನಡಿಗೆ ರ‍್ಯಾಲಿ | ತಡೆದ ಈಜಿಫ್ಟ್‌

ಗಾಝಾ ನೆರವಿಗೆ ಉತ್ತರ ಆಫ್ರೀಕಾ ದೇಶಗಳ ಜನರ ಕಾಲ್ನಡಿಗೆ ರ‍್ಯಾಲಿ | ತಡೆದ ಈಜಿಫ್ಟ್‌

- Advertisement -
- Advertisement -

ಪ್ಯಾಲೆಸ್ತೀನ್ ಮೇಲಿನ ಇಸ್ರೇಲ್‌ ದಿಗ್ಬಂಧನವನ್ನು ಪ್ರತಿಭಟಿಸಿ ಮತ್ತು ಪ್ಯಾಲೆಸ್ತೀನಿ ಜನರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಉತ್ತರ ಆಫ್ರಿಕಾದ ದೇಶಗಳ ಸುಮಾರು 2,000 ಹೋರಾಟಗಾರರ ”ಸುಮುದ್ ಕ್ಯಾನ್ವಾಯ್” ಎಂದು ಕರೆಯಲ್ಪಡುವ ರ‍್ಯಾಲಿಯನ್ನು ಈಜಿಫ್ಟ್‌ ಅಧಿಕಾರಿಗಳು ತಡೆದಿದ್ದಾರೆ ಎಂದು ಗುರುವಾರ ವರದಿಯಾಗಿದೆ. ರ‍್ಯಾಲಿಯಲ್ಲಿ ಭಾಗವಹಿಸಲು ಆಗಮಿಸಿದ ಹಲವಾರು ವ್ಯಕ್ತಿಗಳನ್ನು ಈಜಿಪ್ಟ್ ಅಧಿಕಾರಿಗಳು ತಡೆದು ಕೈರೋ ವಿಮಾನ ನಿಲ್ದಾಣದಿಂದ ಅವರನ್ನು ಹಿಂದಿರುಗಿಸಿದ್ದು, ಆದರೆ ಈಗಾಗಲೇ ಈಜಿಪ್ಟ್ ಪ್ರದೇಶವನ್ನು ಪ್ರವೇಶಿಸಿದ್ದ ಇತರರನ್ನು ಗಡೀಪಾರು ಮಾಡಲಾಯಿತು ಎಂದು ಸ್ವತಂತ್ರ ಮಾಧ್ಯಮವಾದ ಮಾಡಾ ಮಸ್ರ್ ಹೇಳಿದೆ. ಗಾಝಾ ನೆರವಿಗೆ ಉತ್ತರ

ಪ್ಯಾಲೆಸ್ತೀನ್ ಮೇಲಿನ ಇಸ್ರೇಲ್‌ ದಿಗ್ಬಂಧನವನ್ನು ಪ್ರತಿಭಟಿಸಿ ಮತ್ತು ಪ್ಯಾಲೆಸ್ತೀನಿ ಜನರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವ ಸಾಂಕೇತಿಕ ಪ್ರಯತ್ನದ ಭಾಗವಾಗಿ ಉತ್ತರ ಆಫ್ರಿಕಾದ ದೇಶಗಳಾದ ಟುನೀಶಿಯಾ, ಅಲ್ಜೀರಿಯಾ, ಮೊರಾಕೊ, ಮಾರಿಟಾನಿಯಾ ಮತ್ತು ಲಿಬಿಯಾದ ಸುಮಾರು 2,000 ಹೋರಾಟಗಾರರನ್ನು ಹೊತ್ತ ಬಸ್‌ಗಳು ಮತ್ತು ಕಾರುಗಳ ”ಸುಮುದ್ ಕ್ಯಾನ್ವಾಯ್” ಸೋಮವಾರದಂದು ಹೊರಟಿತ್ತು.

ಇಸ್ರೇಲ್ ಆಕ್ರಮಿತ ಫ್ಯಾಲೆಸ್ತೀನ್‌ನ ರಫಾ ಮತ್ತು ಗಾಝಾಗೆ ನೆರವು ತಲುಪಿಸುವಲ್ಲಿ ವಿಫಲವಾಗಿರುವುದನ್ನು ಪ್ರತಿಭಟಿಸುವ ಉದ್ದೇಶವನ್ನು ಹೊಂದಿರುವ ಉತ್ತರ ಆಫ್ರಿಕಾದ ದೇಶಗಳ ಸ್ವಯಂಸೇವಕರ ಈ ರ‍್ಯಾಲಿಗೆ ವಿಶ್ವದಾದ್ಯಂತ ಜನರ ಬೆಂಬಲ ವ್ಯಕ್ತವಾಗಿದೆ. ಇಸ್ರೇಲ್ ವಿರೋಧದ ಹೊರತಾಗಿಯೂ ರ‍್ಯಾಲಿಯು ಬುಧವಾರ ಲಿಬಿಯಾ ಪ್ರದೇಶವನ್ನು ಪ್ರವೇಶಿಸಿತು.

ಈ ಬಗ್ಗೆ ಬುಧವಾರ ಪ್ರತಿಕ್ರಿಯಿಸಿದ್ದ ಪ್ಯಾಲೆಸ್ತೀನ್ ಆಕ್ರಮಿತ ಇಸ್ರೇಲ್‌ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, ರ‍್ಯಾಲಿಯು ಗಾಝಾ ತಲುಪುವುದನ್ನು ತಡೆಯುವಂತೆ ಈಜಿಪ್ಟ್ ಅಧಿಕಾರಿಗಳನ್ನು ಒತ್ತಾಯಿಸಿದ್ದು, “ಈ ಹೆಜ್ಜೆಯನ್ನು ಅನುಮತಿಸಲಾಗುವುದಿಲ್ಲ” ಎಂದು ಒತ್ತಿ ಹೇಳಿದ್ದಾರೆ.

 

View this post on Instagram

 

A post shared by PeaceBrands (@peacebrands)

ರ‍್ಯಾಲಿಯು ಜೂನ್ 12 ರೊಳಗೆ ಈಜಿಫ್ಟ್‌ನ ಕೈರೋ ತಲುಪಿ, ನಂತರ ಮರುದಿನ ಬಸ್ ಮೂಲಕ ಅಲ್-ಅರಿಶ್‌ಗೆ ಪ್ರತ್ಯೇಕ ಗುಂಪುಗಳಲ್ಲಿ ಪ್ರಯಾಣಿಸುವುದಾಗಿ ರ‍್ಯಾಲಿಯನ್ನು ಆಯೋಜಿಸಿದ್ದ ”ಗ್ಲೋಬಲ್ ಮಾರ್ಚ್ ಟು ಗಾಝಾ” ಹೇಳಿತ್ತು. ಅಲ್ಲಿಂದ ಭಾಗವಹಿಸುವವರು ರಫಾಗೆ 48 ಕಿಲೋಮೀಟರ್ ಮೆರವಣಿಗೆಯನ್ನು ಪ್ರಾರಂಭಿಸುತ್ತಾರೆ ಎಂದು ಅದು ಸೂಚಿಸಿದೆ. ಹೋರಾಟಗಾರರು ಜೂನ್ 15 ರಿಂದ 19 ರವರೆಗೆ ಸ್ವಲ್ಪ ಸಮಯ ಗಾಝಾದ ರಫಾದಲ್ಲಿ ಉಳಿದು ನಂತರ ಕೈರೋಗೆ ಹಿಂತಿರುಗಲು ಉದ್ದೇಶಿಸಿದ್ದು, ಅದಕ್ಕಾಗಿ ಈಜಿಪ್ಟ್ ಸರ್ಕಾರದಿಂದ ಅನುಮೋದನೆಗಾಗಿ ಕಾಯುತ್ತಿದ್ದಾರೆ ಎಂದು ತುರ್ಕಿಟುಡೆ ಹೇಳಿದೆ.

ಜೂನ್ 11 ರಂದು ಈಜಿಪ್ಟ್ ವಿದೇಶಾಂಗ ಸಚಿವಾಲಯವು, ಪ್ಯಾಲೆಸ್ತೀನಿ ಹಕ್ಕುಗಳನ್ನು ಬೆಂಬಲಿಸುವ ಮತ್ತು ಗಾಝಾದಲ್ಲಿ ಇಸ್ರೇಲಿ ಆಕ್ರಮಣವನ್ನು ಖಂಡಿಸುವ ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ನಿಲುವುಗಳನ್ನು ಸ್ವಾಗತಿಸುವ ಅಧಿಕೃತ ಹೇಳಿಕೆಯನ್ನು ನೀಡಿತು. ಅದಾಗ್ಯೂ, ಈಜಿಪ್ಟ್ ಸಾರ್ವಭೌಮತ್ವವನ್ನು ಗೌರವಿಸುವ ಮತ್ತು ಭದ್ರತಾ ಅವಶ್ಯಕತೆಗಳನ್ನು ಪರಿಗಣಿಸುವ ಸಂದರ್ಭದಲ್ಲಿ, ವಿಶೇಷವಾಗಿ ವಿದೇಶಿ ಸಂದರ್ಶಕರಿಗೆ, ರಫಾ ಕ್ರಾಸಿಂಗ್ ಮತ್ತು ಗಡಿ ಪ್ರದೇಶಕ್ಕೆ ಭೇಟಿ ನೀಡಲು ಪೂರ್ವಾನುಮೋದನೆಗಳನ್ನು ಪಡೆಯುವುದು ಮೂಲಭೂತ ಷರತ್ತು ಎಂದು ಹೇಳಿಕೆ ಒತ್ತಿಹೇಳಿತ್ತು.

ಹೇಳಿಕೆ ಬಿಡುಗಡೆಯಾದ ಸ್ವಲ್ಪ ಸಮಯದ ನಂತರ, ಈಜಿಪ್ಟ್ ಅಧಿಕಾರಿಗಳು ”ಸುಮುದ್ ಕ್ಯಾನ್ವಾಯ್”ನಲ್ಲಿ ಭಾಗವಹಿಸುವ ಹಲವಾರು ಹೋರಾಟಗಾರರನ್ನು ಗಡೀಪಾರು ಮಾಡಲು ಪ್ರಾರಂಭಿಸಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ದೇಶವನ್ನು ಪ್ರವೇಶಿಸಲು ಅಗತ್ಯ ದಾಖಲೆಗಳು ಮತ್ತು ಅಧಿಕೃತ ಪರವಾನಗಿಗಳ ಕೊರತೆಯ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಈಜಿಫ್ಟ್‌ ಸರ್ಕಾರ ತನ್ನನ್ನು ಸಮರ್ಥಿಸಿಕೊಂಡಿದೆ.

ರ‍್ಯಾಲಿಯಲ್ಲಿ ಭಾಗವಹಿಸುವವರು ಈಜಿಪ್ಟ್‌ಗೆ ಬರದಂತೆ ತಡೆಯಲು ಸಂಬಂಧಪಟ್ಟ ದೇಶಗಳಲ್ಲಿನ ಸಂಬಂಧಿತ ಅಧಿಕಾರಿಗಳೊಂದಿಗೆ ಸಂವಹನ ನಡೆಸಲು ಸರ್ಕಾರ ಪ್ರಯತ್ನಿಸಿದೆ ಎಂದು ಸರ್ಕಾರಿ ಮೂಲವೊಂದನ್ನು ಉಲ್ಲೇಖಿಸಿ ಮಡಾ ಮಾಸ್ರ್‌ ವರದಿ ಮಾಡಿದೆ. ಸಾರ್ವಭೌಮತ್ವ ಮತ್ತು ಭದ್ರತಾ ಕಾರಣಗಳಿಂದಾಗಿ ಅವರಲ್ಲಿ ಯಾರಿಗೂ ರಫಾಗೆ ಹೋಗಲು ಅವಕಾಶವಿರುವುದಿಲ್ಲ ಎಂದು ಮೂಲವು ಹೇಳಿದೆ. ಈಜಿಫ್ಟ್ ವಿದೇಶಾಂಗ ಸಚಿವಾಲಯದ ಹೇಳಿಕೆಗೆ ಮುಂಚೆಯೇ, ಕೈರೋ ವಿಮಾನ ನಿಲ್ದಾಣದ ಅಧಿಕಾರಿಗಳು ಸಂಭಾವ್ಯ ಭಾಗವಹಿಸುವವರಲ್ಲಿ ಕೆಲವರನ್ನು ಬಂಧಿಸಿ ಹಿಂದಿರುಗಿಸಲು ಪ್ರಾರಂಭಿಸಿದ್ದರು, ಆದರೆ ಈಗಾಗಲೇ ದೇಶದೊಳಗೆ ಇದ್ದ ಇತರರನ್ನು ಗಡೀಪಾರು ಮಾಡಲಾಯಿತು ಎಂದು ವರದಿ ಹೇಳಿದೆ.

ಈಜಿಪ್ಟ್ ಭದ್ರತಾ ಪಡೆಗಳು ಗುರುವಾರ ಬೆಳಿಗ್ಗೆಯಿಂದ ಕೈರೋ ವಿಮಾನ ನಿಲ್ದಾಣದಲ್ಲಿ ಮೂವರು ವಕೀಲರು ಸೇರಿದಂತೆ 40 ಅಲ್ಜೀರಿಯಾದ ನಾಗರಿಕರನ್ನು ಬಂಧಿಸಿವೆ ಎಂದು ಅಲ್ಜೀರಿಯಾದ ವಕೀಲರಾದ ಫಾತಿಹಾ ರೂಯಿಬಿ ಆರೋಪಿಸಿದ್ದಾರೆ. ಅದೇ ರೀತಿ, ಮೊರೊಕ್ಕೊದ ಹತ್ತುಕ್ಕೂ ಹೆಚ್ಚು ಹೋರಾಟಗಾರರನ್ನು ಗಡೀಪಾರು ಮಾಡಿದ್ದಾರೆ ಎಂದು ವರದಿಯಾಗಿದ್ದು, ಜೊತೆಗೆ ಹಲವಾರು ಟರ್ಕಿಶ್ ನಾಗರಿಕರನ್ನು ಗಡೀಪಾರು ಮಾಡಲಾಗಿದೆ ಎಂದು ಅದು ತಿಳಿಸಿದೆ.

ಈಜಿಪ್ಟ್ ಸಾರ್ವಭೌಮತ್ವಕ್ಕೆ ಗೌರವ: ಪುನರುಚ್ಚರಿಸಿದ ಸಂಘಟಕರು

ಈ ನಡುವೆ ಗುರುವಾರದ ಪತ್ರಿಕಾಗೋಷ್ಠಿಯಲ್ಲಿ, 35 ಕ್ಕೂ ಹೆಚ್ಚು ದೇಶಗಳಿಂದ ಸುಮಾರು 4,000 ಹೋರಾಟಗಾರರನ್ನು ಕಾಲ್ನಡಿಗೆಯಲ್ಲಿ ರಫಾ ಕ್ರಾಸಿಂಗ್‌ಗೆ ಕರೆತರುವುದು, ಗಾಝಾದ ಮೇಲಿನ ಯುದ್ಧವನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸುವುದು ಮತ್ತು ಸಾವಿರಾರು ನೆರವು ಟ್ರಕ್‌ಗಳಿಗೆ ಪ್ರವೇಶವನ್ನು ಅನುಮತಿಸುವುದು ತಮ್ಮ ಗುರಿಯಾಗಿದೆ ಎಂದು ಪುನರುಚ್ಚರಿಸಿದ್ದಾರೆ. ಇಸ್ರೇಲ್ ಮೇಲೆ ನಿರ್ಬಂಧಗಳನ್ನು ವಿಧಿಸಲು ತಮ್ಮ ಸರ್ಕಾರಗಳ ಮೇಲೆ ಒತ್ತಡ ಹೇರುವ ಗುರಿಯನ್ನು ಸಹ ಅವರು ಹೊಂದಿದ್ದಾರೆ.

ಸಂಘಟಕರು ಈಜಿಪ್ಟ್‌ನ ಭದ್ರತಾ ಆತಂಕಗಳನ್ನ ಗೌರವಿಸುವುದಾಗಿ ಹೇಳಿದ್ದು, ತಮ್ಮ ಮೆರವಣಿಗೆಯು ಈಜಿಪ್ಟ್‌ಗೆ ಯಾವುದೇ ಬೆದರಿಕೆಯನ್ನುಂಟುಮಾಡುವುದಿಲ್ಲ ಮತ್ತು ಕದನ ವಿರಾಮಕ್ಕಾಗಿ ಈಜಿಫ್ಟ್‌ನ ನಿಲುವಿಗೆ ತಮ್ಮ ಪ್ರಯತ್ನಗಳು ಹೊಂದಿಕೆಯಾಗುತ್ತದೆ ಎಂದು ಸ್ಪಷ್ಟಪಡಿಸುವ ಅಧಿಕೃತ ಪತ್ರಗಳನ್ನು ಈಜಿಪ್ಟ್ ಸರ್ಕಾರಕ್ಕೆ ಕಳುಹಿಸಿದ್ದೇವೆ ಎಂದು ಒತ್ತಿ ಹೇಳಿದ್ದಾರೆ. ಈಜಿಪ್ಟ್‌ನ ಆಂತರಿಕ ವಿಷಯಗಳಿಗೆ ಸಂಬಂಧಿಸಿ ಪ್ರತಿಕ್ರಿಯಿಸಿ, ಈಜಿಪ್ಟ್ ನಿಯೋಗಗಳನ್ನು ಮೆರವಣಿಗೆಯಿಂದ ಹೊರಗಿಡುವ ತಮ್ಮ ಬದ್ಧತೆಯನ್ನು ಅವರು ಒತ್ತಿ ಹೇಳಿದ್ದಾರೆ.

ಪಶ್ಚಿಮ ದೇಶಗಳ ಈ ಸುಮುದ್ ಕ್ಯಾನ್ವಾಯ್ ಸೋಮವಾರ ಟುನೀಶಿಯಾದ ರಾಜಧಾನಿಯಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿತು ಮತ್ತು ಮಂಗಳವಾರದ ವೇಳೆಗೆ ಲಿಬಿಯಾದ ನಗರವಾದ ಜಾವಿಯಾವನ್ನು ತಲುಪಿದೆ. ಈಜಿಫ್ಟ್‌ ಮತ್ತು ಇಸ್ರೇಲ್ ಆಕ್ರಮಿತ ಪ್ಯಾಲೆಸ್ತೀನ್‌ನ ರಫಾ ಗಡಿಯ ಮೂಲಕ ಗಾಝಾ ತಲುಪುವ ಉದ್ದೇಶದಿಂದ ಹೊರಟಿರುವ ಈ ರ‍್ಯಾಲಿ ಲಿಬಿಯಾ ಮತ್ತು ಈಜಿಪ್ಟ್ ಮೂಲಕ ಮುಂದುವರಿಯುತ್ತದೆ ಎಂದು ಸಂಘಟಕರು ಹೇಳಿದ್ದರು.

ಜೂನ್‌ ಒಂದರಂದು ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ ಎಂಬ ಅಂತಾರಾಷ್ಟ್ರೀಯ ಹೋರಾಟಗಾರರ ಗುಂಪೊಂದು ಇಟಲಿಯ ಸಿಸಿಲಿಯ ಬಂದರಿನಿಂದ ಮೆಡಿಟರೇನಿಯನ್ ಸಮುದ್ರದಲ್ಲಿ ಗಾಝಾಕ್ಕೆ ಹಡಗಿನ ಮೂಲಕ ಹೊರಟಿತ್ತು. ಸುಮಾರು ಎಂಟು ದಿನಗಳ ಪ್ರಯಾಣದಲ್ಲಿ ಗಾಝಾ ತೀರಕ್ಕೆ 150 ಕಿ.ಮಿ. ದೂರದಲ್ಲಿ ಅಂತಾರಾಷ್ಟ್ರೀಯ ಜಲ ಪ್ರದೇಶದಲ್ಲಿ ಇರುವಾಗ ಇಸ್ರೇಲ್ ಹಡಗು ಮತ್ತು ಅದರಲ್ಲಿದ್ದ ಹೋರಾಟಗಾರರನ್ನು ಅಪಹರಣ ಮಾಡಿ, ಇಸ್ರೇಲ್‌ಗೆ ಕೊಂಡೊಯ್ದು ಗಡಿಪಾರು ಮಾಡಿತ್ತು.

ಗಾಝಾದ ಆರೋಗ್ಯ ಸಚಿವಾಲಯದ ಪ್ರಕಾರ, ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ಹತ್ಯಾಕಾಂಡದಲ್ಲಿ ಕನಿಷ್ಠ 54,927 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಮತ್ತು 126,615 ಜನರು ಗಾಯಗೊಂಡಿದ್ದಾರೆ. ಅಕ್ಟೋಬರ್ 7, 2023 ರಂದು ಹಮಾಸ್ ನೇತೃತ್ವದ ದಾಳಿಯ ಸಮಯದಲ್ಲಿ ಇಸ್ರೇಲ್‌ನಲ್ಲಿ ಅಂದಾಜು 1,139 ಜನರು ಸಾವನ್ನಪ್ಪಿದ್ದಾರೆ ಮತ್ತು 200 ಕ್ಕೂ ಹೆಚ್ಚು ಜನರನ್ನು ಸೆರೆಹಿಡಿಯಲಾಗಿದೆ. ಜೊತೆಗೆ ಗಾಝಾದ ಮೇಲೆ ದಿಗ್ಬಂಧನ ಹೇರಿರುವ ಇಸ್ರೇಲ್ ಕಳೆದ ಎರಡು ತಿಂಗಳಿನಿಂದ ಅಲ್ಲಿನ ಜನರಿಗೆ ಆಹಾರ, ವೈದ್ಯಕೀಯ ನೆರವುಗಳನ್ನು ನಿರಾಕರಿಸುತ್ತಿವೆ. ಸುಮಾರು 20 ಲಕ್ಷ ಜನರಿರುವ ಪ್ರದೇಶದಲ್ಲಿ ಲಕ್ಷಾಂತರ ಜನರು ಹಸಿವನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ಸಂಘಟನೆಗಳು ಎಚ್ಚರಿಸಿವೆ. ಗಾಝಾ ನೆರವಿಗೆ ಉತ್ತರ

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ನೆರವು ಹೊತ್ತು ಗಾಝಾದತ್ತ ತೆರಳಿದ್ದ ‘ಮದ್ಲೀನ್’ ಹಡಗನ್ನು ವಶಕ್ಕೆ ಪಡೆದ ಇಸ್ರೇಲಿ ಪಡೆ: ಅಪಹರಿಸಲಾಗಿದೆ ಎಂದ ಹೋರಾಟಗಾರರು

ನೆರವು ಹೊತ್ತು ಗಾಝಾದತ್ತ ತೆರಳಿದ್ದ ‘ಮದ್ಲೀನ್’ ಹಡಗನ್ನು ವಶಕ್ಕೆ ಪಡೆದ ಇಸ್ರೇಲಿ ಪಡೆ: ಅಪಹರಿಸಲಾಗಿದೆ ಎಂದ ಹೋರಾಟಗಾರರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ’: ಪ್ರಿಯಾಂಕ್ ಖರ್ಗೆ

ಬೆಂಗಳೂರು: ‘ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ನಿಯಮಗಳಿಗೆ ಅತೀತರಲ್ಲ’ ಎಂದು ಆರ್.ಎಸ್.ಎಸ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಮತ್ತೆ ಗುಡುಗಿದ್ದಾರೆ.  ರಾಜ್ಯದ ಗಮನ‌ ಸೆಳೆದಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ...

“ಮಾಸ್ಕ್ ಧರಿಸಿದರೂ ಪ್ರಯೋಜನವಿಲ್ಲ”: ದೆಹಲಿ ವಾಯುಮಾಲಿನ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್

ದೆಹಲಿಯ ವಾಯುಮಾಲಿನ್ಯ 'ಗಂಭೀರ ಮಟ್ಟ' ತಲುಪಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಮಾಸ್ಕ್‌ ಧರಿಸಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ವಕೀಲರು ವರ್ಚುವಲ್ ಮೂಲಕ ನ್ಯಾಯಾಲಯಕ್ಕೆ ಹಾಜರಾದರೆ ಸಾಕು ಎಂದು ಹೇಳಿದೆ. ವಿವಿಧ ಪ್ರಕರಣಗಳಲ್ಲಿ...

ಛತ್ತೀಸ್‌ಗಢ| ಇಬ್ಬರು ಉನ್ನತ ಕಮಾಂಡರ್‌ಗಳು ಸೇರಿದಂತೆ ಆರು ಜನ ಮಾವೋವಾದಿಗಳ ಎನ್‌ಕೌಂಟರ್‌

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನವೆಂಬರ್ 11 ರಂದು ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಆರು ಮಾವೋವಾದಿಗಳಲ್ಲಿ ಮಾವೋವಾದಿ ನಾಯಕಿ, ಹಿರಿಯ ಕಾರ್ಯಕರ್ತ ಪಾಪಾ ರಾವ್ ಅವರ ಪತ್ನಿ ಊರ್ಮಿಳಾ ಮತ್ತು ಬುಚಣ್ಣ...

ಗ್ರೆನೇಡ್ ದಾಳಿಗೆ ಸಂಚು ರೂಪಿಸಿದ್ದ, ಪಾಕ್ ಐಎಸ್ಐ ಬೆಂಬಲಿತ ಗುಂಪು: ವಿದೇಶಿ ಮೂಲದ 10 ಹ್ಯಾಂಡ್ಲರ್‌ಗಳ ಬಂಧನ

ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿರುವ ಲುಧಿಯಾನ ಕಮಿಷನರೇಟ್ ಪೊಲೀಸರು, ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಬೆಂಬಲಿತ ಗ್ರೆನೇಡ್ ದಾಳಿ ಘಟಕದ 10 ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಅವರಿಂದ ಸ್ಪೋಟಕಗಳನ್ನು ವಶಕ್ಕೆ ಪಡೆದಿದ್ದಾರೆ.  ನವೆಂಬರ್...

ಗಾಜಾದಲ್ಲಿ ಮುಂದುವರೆದ ಪ್ಯಾಲೆಸ್ತೀನಿಯನ್ ಮಕ್ಕಳ ಕಾಣೆ ಪ್ರಕರಣ: ಮಕ್ಕಳ ಹಕ್ಕುಗಳ ಗುಂಪು

ಬುಧವಾರ ಪ್ಯಾಲೆಸ್ತೀನಿಯನ್ ಹಕ್ಕುಗಳ ಗುಂಪಿನ ವರದಿಯ ಪ್ರಕಾರ, ಇತ್ತೀಚಿನ ತಿಂಗಳುಗಳಲ್ಲಿ ಗಾಜಾದಿಂದ ಕನಿಷ್ಠ ಆರು ಮಕ್ಕಳು ಕಣ್ಮರೆಯಾಗಿದ್ದಾರೆ ಎಂದು 'ಮಕ್ತೂಬ್‌ ಮೀಡಿಯಾ' ವರದಿ ಮಾಡಿದೆ. ಕಾಣೆಯಾದ ಮಕ್ಕಳ ಕುಟುಂಬಗಳು ಈ ಪ್ರದೇಶದಲ್ಲಿನ ತನ್ನ ಮಿಲಿಟರಿ...

ರೂ. 15 ಲಕ್ಷ ಲಂಚ ಪಡೆದ ಪ್ರಕರಣ : ನ್ಯಾಯಾಧೀಶನ ಮೇಲೆ ಕೇಸ್, ಕೋರ್ಟ್ ಗುಮಾಸ್ತ ಅರೆಸ್ಟ್

ವಾಣಿಜ್ಯ ಮೊಕದ್ದಮೆಯೊಂದರಲ್ಲಿ ಅನುಕೂಲಕರ ಆದೇಶವನ್ನು ಪಡೆಯಲು 15 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮತ್ತು ಸ್ವೀಕರಿಸಿದ ಆರೋಪದ ಮೇಲೆ ಮುಂಬೈ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮಜಗಾಂವ್ ಸಿವಿಲ್ ಮತ್ತು ಸೆಷನ್ಸ್...

ಅಲಿಘರ್| ಶಾಲೆಯಲ್ಲಿ ‘ವಂದೇ ಮಾತರಂ’ ಹಾಡುವುದಕ್ಕೆ ಆಕ್ಷೇಪಿಸಿದ ಶಿಕ್ಷಕನ ಅಮಾನತು

ಉತ್ತರ ಪ್ರದೇಶದ ಶಾಹಪುರ್ ಕುತುಬ್‌ನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 'ವಂದೇ ಮಾತರಂ' ಹಾಡುವುದನ್ನು ಆಕ್ಷೇಪಿಸಿದ ಆರೋಪದ ಮೇಲೆ ಸರ್ಕಾರಿ ಶಾಲಾ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ರಾಷ್ಟ್ರಗೀತೆಯ ನಂತರ ವಂದೇಮಾತರಂ...

ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ ನೀಡಿದ ಹೈಕೋರ್ಟ್

ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನಕ್ಕೆ ಕರ್ನಾಟಕ ಹೈಕೋರ್ಟ್ ನ ಕಲಬುರಗಿ ಪೀಠ ಷರತ್ತುಬದ್ಧ ಅನುಮತಿ ನೀಡಿದೆ. ಇದರಿಂದ ತೀವ್ರ ಪ್ರತಿಷ್ಠೆಯ ವಿಷಯವಾಗಿದ್ದ ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನಕ್ಕೆ ದಿನಾಂಕ ನಿಗದಿಯಾಗಿದೆ. ನವೆಂಬರ್ 16ರ‌ ಭಾನುವಾರ...

ಯಡಿಯೂರಪ್ಪ ವಿರುದ್ದದ ಪೋಕ್ಸೋ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಈ ಮೂಲಕ ನ್ಯಾಯಮೂರ್ತಿ ಎಂ.ಐ ಅರುಣ್ ಅವರು, ವಿಚಾರಣಾ ನ್ಯಾಯಾಲಯ ಸಂಜ್ಞೇ (cognisance)ಪರಿಗಣಿಸಿ ಯಡಿಯೂರಪ್ಪ ಅವರಿಗೆ ಸಮನ್ಸ್ ಜಾರಿ...

ಗುಜರಾತ್| ಗೋಹತ್ಯೆ ಮಾಡಿದ್ದಕ್ಕಾಗಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ; ರೂ.18 ಲಕ್ಷ ದಂಡ

ಗುಜರಾತ್‌ನ ಅಮ್ರೇಲಿಯಲ್ಲಿರುವ ಸೆಷನ್ಸ್ ನ್ಯಾಯಾಲಯವು, ಗುಜರಾತ್ ಪ್ರಾಣಿ ಸಂರಕ್ಷಣಾ ಕಾಯ್ದೆಯಡಿ ಗೋಹತ್ಯೆ ಮಾಡಿದ್ದಕ್ಕಾಗಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಗೋ ಕುಟುಂಬಕ್ಕೆ ಸೇರಿದ ಪ್ರಾಣಿಗಳ ಹತ್ಯೆಯನ್ನು ಕಾನೂನು...