ಅಮೃತಸರದ ಸ್ವರ್ಣಮಂದಿರದಲ್ಲಿ ವಿದೇಶಿ ದೇಣಿಗೆ ಸ್ವೀಕರಿಸಲು ಇದ್ದ ತೊಡಕುಗಳನ್ನು ಕೇಂದ್ರ ಗೃಹ ಸಚಿವಾಲಯ ನಿವಾರಿಸಿದೆ. ಹಾಗಾಗಿ ಇನ್ನು ಮುಂದೆ ವಿದೇಶಿ ದೇಣಿಗೆ ಪಡೆಯಬಹುದಾಗಿದೆ. ಈ ಕುರಿತು ಗೃಹ ಸಚಿವ ಅಮಿತ್ ಶಾ ಟ್ವೀಟ್ಟರ್ನಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ.
2010 ರಲ್ಲಿ ಎಫ್ಸಿಆರ್ಎ (ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ) ಅಡಿಯಲ್ಲಿ ನೋಂದಣಿಗೆ ಸಚ್ಖಂಡ್ ಶ್ರೀ ಹರ್ಮಂದಿರ್ ಸಾಹಿಬ್ ಶ್ರೀ ದರ್ಬಾರ್ ಸಾಹಿಬ್ ಪಂಜಾಬ್ ಅಸೋಸಿಯೇಷನ್ಗೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿತು. ಅಸೋಸಿಯೇಷನ್ 1925 ರಲ್ಲಿ ಸ್ಥಾಪನೆಯಾಗಿತ್ತು. ಸಂಘದ ಎಫ್ಸಿಆರ್ಎ ನೋಂದಣಿ ಐದು ವರ್ಷಗಳ ಅವಧಿಗೆ ಮಾನ್ಯವಾಗಿರುತ್ತದೆ. ಅಮೃತಸರದಲ್ಲಿರುವ ಸುವರ್ಣ ದೇವಾಲಯವನ್ನು ಶ್ರೀ ಹರ್ಮಂದೀರ್ ಸಾಹಿಬ್ ಎಂದೂ ಕರೆಯುತ್ತಾರೆ.
ಅಮೃತಸರದಲ್ಲಿರುವ ಸುವರ್ಣ ದೇವಾಲಯಕ್ಕೆ ವಿದೇಶಿ ಹಣವನ್ನು ಸ್ವೀಕರಿಸಲು ಅನುಮತಿ ನೀಡುವ ಸರ್ಕಾರದ ನಿರ್ಧಾರವು ಒಂದು ಮಹತ್ವದ ಕ್ರಮವಾಗಿದೆ. ಇದು ಮತ್ತೊಮ್ಮೆ ಸಿಖ್ ಸಮುದಾಯದ ಸೇವೆಯ ಮನೋಭಾವವನ್ನು ತೋರಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಇದನ್ನೂ ಓದಿ: ನಕಲಿ ಚೆಕ್ ಮೂಲಕ ಅಯೋಧ್ಯೆ ಮಂದಿರ ಟ್ರಸ್ಟ್ನಿಂದ 6 ಲಕ್ಷ ರೂ ಕಳ್ಳತನ!
ಈ ಕುರಿತು ಗೃಹ ಸಚಿವ ಅಮಿತ್ ಶಾ ಟ್ವೀಟ್ಗಳನ್ನು ಮಾಡಿ ಖುಷಿ ಹಂಚಿಕೊಂಡಿದ್ದಾರೆ.
ਸੇਵਕ ਕਉ ਸੇਵਾ ਬਨਿ ਆਈ ॥
PM @narendramodi ji is blessed that Wahe Guru ji has taken Seva from him.
The decision on FCRA at the Sri Harmandir Sahib is a pathbreaking one which will once again showcase the outstanding spirit of service of our Sikh sisters and brothers.
— Amit Shah (@AmitShah) September 10, 2020
‘ವಾಹೆ ಗುರು ಜಿ’ ಪ್ರಧಾನಿಯವರಿಂದ ಸೇವೆ ತೆಗೆದುಕೊಂಡಿರುವುದಕ್ಕೆ ಪ್ರಧಾನಿ ಮೋದಿ ಆಶೀರ್ವಾದ ಪಡೆದವರಾಗಿದ್ದಾರೆ ಎಂದಿದ್ದಾರೆ.
“ಶ್ರೀ ದರ್ಬಾರ್ ಸಾಹಿಬ್ ಅವರ ದೈವತ್ವವು ನಮಗೆ ಬಲವನ್ನು ನೀಡುತ್ತದೆ. ದಶಕಗಳಿಂದ, ವಿಶ್ವಾದ್ಯಂತದ ಸಂಗತ್ಗೆ ಅಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗಲಿಲ್ಲ. ಶ್ರೀ ಹರ್ಮಂದಿರ್ ಸಾಹಿಬ್ಗೆ ಎಫ್ಸಿಆರ್ಎಗೆ ಅವಕಾಶ ನೀಡುವ ಮೋದಿ ಸರ್ಕಾರದ ನಿರ್ಧಾರವು ಜಾಗತಿಕವಾಗಿ ಸಂಗತ್ ಮತ್ತು ಶ್ರೀ ದರ್ಬಾರ್ ಸಾಹಿಬ್ ನಡುವಿನ ಸೇವಾ ಸಂಪರ್ಕವನ್ನು ಗಟ್ಟಿಗೊಳಿಸಿದೆ. ಇದು ಆಶೀರ್ವಾದದ ಕ್ಷಣ! ” ಅವರು ಟ್ವೀಟ್ ಮಾಡಿದ್ದಾರೆ.
ಸುವರ್ಣ ದೇವಾಲಯಕ್ಕೆ ಎಫ್ಸಿಆರ್ಎ ನೋಂದಣಿ ನೀಡಿದ್ದಕ್ಕಾಗಿ ಕೇಂದ್ರ ಆಹಾರ ಸಂಸ್ಕರಣಾ ಸಚಿವ ಮತ್ತು ಅಕಾಲಿ ದಳದ ಮುಖಂಡೆ ಹರ್ಸಿಮ್ರತ್ ಕೌರ್ ಬಾದಲ್ ಅಮಿತ್ ಶಾ ಅವರಿಗೆ ಧನ್ಯವಾದ ಅರ್ಪಿಸಿದರು.
Happy to share that MHA has granted approval under FCRA to Sri Harmandir Sahib. This will enable the shrine to receive 'sewa' from all over the world & go a long way in propagating Gurusahab’s philosophy of ‘sarbat da bhala’. I'm grateful to @AmitShah Ji for making this possible. pic.twitter.com/ccyWi8ps76
— Harsimrat Kaur Badal (@HarsimratBadal_) September 9, 2020
“ಶ್ರೀ ಹರ್ಮಂದೀರ್ ಸಾಹಿಬ್ಗೆ ಎಫ್ಸಿಆರ್ಎ ಅಡಿಯಲ್ಲಿ ಎಂಹೆಚ್ಎ ಅನುಮೋದನೆ ನೀಡಿದೆ ಎಂದು ಹಂಚಿಕೊಳ್ಳಲು ಸಂತೋಷವಾಗಿದೆ. ಇದು ದೇವಾಲಯಕ್ಕೆ ಪ್ರಪಂಚದಾದ್ಯಂತ ‘ಸೇವಾ’ ಸ್ವೀಕರಿಸಲು ಮತ್ತು ಗುರುಸಹಬ್ನ ತತ್ತ್ವಶಾಸ್ತ್ರವನ್ನು ಪ್ರಚಾರ ಮಾಡಲು ಸಹಾಯವಾಗುತ್ತದೆ. ಇದನ್ನು ಸಾಧ್ಯವಾಗಿಸಿದ ಅಮಿತ್ಶಾ ಜಿಗೆ ನಾನು ಆಭಾರಿಯಾಗಿದ್ದೇನೆ “ಎಂದು ಅವರು ಟ್ವೀಟ್ ಮಾಡಿದ್ದಾರೆ.