Homeಕರ್ನಾಟಕಭಾರತದಿಂದ 300ಕ್ಕೂ ಅಧಿಕ ಜನರು ಬಾಂಗ್ಲಾಕ್ಕೆ ಗಡೀಪಾರು: ಧ್ವನಿ ಎತ್ತಿದ ಮಾನವ ಹಕ್ಕು ಕಾರ್ಯಕರ್ತರು

ಭಾರತದಿಂದ 300ಕ್ಕೂ ಅಧಿಕ ಜನರು ಬಾಂಗ್ಲಾಕ್ಕೆ ಗಡೀಪಾರು: ಧ್ವನಿ ಎತ್ತಿದ ಮಾನವ ಹಕ್ಕು ಕಾರ್ಯಕರ್ತರು

- Advertisement -
- Advertisement -

ನವದೆಹಲಿ: ಭಾರತವು ಅಕ್ರಮ ವಲಸಿಗರೆಂದು ಪರಿಗಣಿಸುವ ಜನರನ್ನು ನೆರೆಯ ಬಾಂಗ್ಲಾದೇಶಕ್ಕೆ ತಳ್ಳುವುದಕ್ಕೆ ಪ್ರಾರಂಭಿಸಿದೆ. ಅಧಿಕಾರಿಗಳು ದೇಶದಿಂದ ಜನರನ್ನು ನಿರಂಕುಶವಾಗಿ ಹೊರಹಾಕುತ್ತಿದ್ದಾರೆ ಎಂದು ಮಾನವ ಹಕ್ಕು ಕಾರ್ಯಕರ್ತರು ಆರೋಪಿಸಿದ್ದಾರೆ.

ಮೇ ತಿಂಗಳಿನಿಂದ, ಈಶಾನ್ಯ ಭಾರತದ ಅಸ್ಸಾಂ ರಾಜ್ಯವು ವಿವಿಧ ನ್ಯಾಯಮಂಡಳಿಗಳು ವಿದೇಶಿಯರೆಂದು ಘೋಷಿಸಿದ 30,000 ಜನರಲ್ಲಿ 303 ಜನರನ್ನು ಬಾಂಗ್ಲಾದೇಶಕ್ಕೆ “ಹಿಂದಕ್ಕೆ ತಳ್ಳಿದೆ” ಎಂದು ಉನ್ನತ ಅಧಿಕಾರಿಯೊಬ್ಬರು ಈ ವಾರದಂದು ಹೇಳಿದ್ದಾರೆ.

ಅಸ್ಸಾಂನಲ್ಲಿರುವ ಅಂತಹ ಜನರು ಸಾಮಾನ್ಯವಾಗಿ ರಾಜ್ಯದಲ್ಲಿ ಕುಟುಂಬಗಳು ಮತ್ತು ಭೂಮಿಯನ್ನು ಹೊಂದಿರುವ ದೀರ್ಘಕಾಲೀನ ನಿವಾಸಿಗಳಾಗಿದ್ದಾರೆ. ಇದು ಮುಸ್ಲಿಂ ಬಹುಸಂಖ್ಯಾತ ಬಾಂಗ್ಲಾದೇಶಕ್ಕೆ ತಮ್ಮ ಬೇರುಗಳನ್ನು ಗುರುತಿಸುವ ಹತ್ತಾರು ಸಾವಿರ ಕುಟುಂಬಗಳಿಗೆ ನೆಲೆಯಾಗಿದೆ.

ಅವರಲ್ಲಿ ಅನೇಕರು ಮತ್ತು ಅವರ ಕುಟುಂಬಗಳನ್ನು ಭಾರತದಲ್ಲಿ ವಿದೇಶಿಯರೆಂದು ತಪ್ಪಾಗಿ ವರ್ಗೀಕರಿಸಲಾಗುತ್ತದೆ ಮತ್ತು ಉನ್ನತ ನ್ಯಾಯಾಲಯಗಳಲ್ಲಿ ನ್ಯಾಯಮಂಡಳಿಯ ತೀರ್ಪುಗಳನ್ನು ಪ್ರಶ್ನಿಸಲು ತುಂಬಾ ಬಡವರಾಗಿರುತ್ತಾರೆ ಎಂದು ಮಾನವ ಹಕ್ಕು ಕಾರ್ಯಕರ್ತರು ಹೇಳಿದ್ದಾರೆ.

ಪ್ರತೀಕಾರದ ಭಯದಿಂದ ಹೆಸರು ಬಹಿರಂಗಪಡಿಸಲು ಇಷ್ಟಪಡದ ಕೆಲವು ಕಾರ್ಯಕರ್ತರು, ಗಡಿಪಾರು ಕಾರ್ಯಾಚರಣೆಯಲ್ಲಿ ಮುಸ್ಲಿಮರನ್ನು ಮಾತ್ರ ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳುತ್ತಾರೆ. ಅಸ್ಸಾಂ ಸರ್ಕಾರದ ವಕ್ತಾರರು ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಲಿಲ್ಲ.

ಬಾಂಗ್ಲಾದೇಶದೊಂದಿಗೆ 260 ಕಿಮೀ (160 ಮೈಲಿ) ಗಡಿಯನ್ನು ಹೊಂದಿರುವ ಅಸ್ಸಾಂ, ಕಳೆದ ತಿಂಗಳು ತನ್ನ ವಿದೇಶಿಯರ ನ್ಯಾಯಮಂಡಳಿಗಳಿಂದ ವಿದೇಶಿಯರೆಂದು ಘೋಷಿಸಲ್ಪಟ್ಟ ಜನರನ್ನು ವಾಪಸ್ ಕಳುಹಿಸಲು ಪ್ರಾರಂಭಿಸಿತು. ಇಂತಹ ಕ್ರಮವು ಅಸ್ಸಾಂನಲ್ಲಿ ರಾಜಕೀಯವಾಗಿ ಜನಪ್ರಿಯವಾಗಿದೆ. ಅಲ್ಲಿ ಬಾಂಗ್ಲಾದೇಶದಲ್ಲಿ ಸಂಭಾವ್ಯ ಸಂಬಂಧದ ಬೇರುಗಳನ್ನು ಹೊಂದಿರುವ ಬಂಗಾಳಿ ಭಾಷೆ ಮಾತನಾಡುವವರು ಸ್ಥಳೀಯ ಅಸ್ಸಾಮಿ ಭಾಷಿಕರೊಂದಿಗೆ ಉದ್ಯೋಗ ಮತ್ತು ಸಂಪನ್ಮೂಲಗಳಿಗಾಗಿ ಪೈಪೋಟಿ ನಡೆಸುತ್ತಾರೆ.

ವಿದೇಶಿಯರ ಗಡಿಪಾರು ಕುರಿತು ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್‌ನಿಂದ ಒತ್ತಡವಿದೆ. ನಾವು 303 ಜನರನ್ನು ಹಿಂದಕ್ಕೆ ತಳ್ಳಿದ್ದೇವೆ. ಈ ಗಡಿಪಾರನ್ನು ತೀವ್ರಗೊಳಿಸಲಾಗುವುದು. ರಾಜ್ಯದ ಉಳಿವಿಗೆ ನಾವು ಹೆಚ್ಚು ಸಕ್ರಿಯ ಮತ್ತು ಪೂರ್ವಭಾವಿಯಾಗಿರಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೋಮವಾರ ರಾಜ್ಯ ವಿಧಾನಸಭೆಗೆ ತಿಳಿಸಿದರು.

ವಿದೇಶಿಯರನ್ನು ಗಡೀಪಾರು ಮಾಡುವ ಬಗ್ಗೆ ಏಕೆ ಮುಂದಾಗಿಲ್ಲ ಎಂದು ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ಅಸ್ಸಾಂ ಅನ್ನು ಪ್ರಶ್ನಿಸಿದ್ದನ್ನು ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

ಮುಖ್ಯಮಂತ್ರಿಯ ಈ ಹೇಳಿಕೆಗೆ ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ತೌಹಿದ್ ಹೊಸೇನ್ ಅವರಿಗೆ ಕೋರಿ ಬಂದ ಇಮೇಲ್‌ಗೆ ತಕ್ಷಣ ಉತ್ತರಿಸಲಿಲ್ಲ. ಭಾರತದಿಂದ ಜನರನ್ನು ತಮ್ಮ ದೇಶಕ್ಕೆ ಕಳುಹಿಸಲಾಗುತ್ತಿದೆ ಮತ್ತು ಸರ್ಕಾರವು ಅದರ ಬಗ್ಗೆ ನವದೆಹಲಿಯೊಂದಿಗೆ ಸಂಪರ್ಕದಲ್ಲಿದೆ ಎಂದು ಅವರು ಕಳೆದ ವಾರ ವರದಿಗಾರರಿಗೆ ತಿಳಿಸಿದ್ದರು.

ಪೌರತ್ವ ಪ್ರಕರಣಗಳ ವಿರುದ್ಧ ನಿಯಮಿತವಾಗಿ ಹೋರಾಡುವ ಮತ್ತು ಈಗ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ಸಿನ ಸದಸ್ಯರಾಗಿರುವ ಅಸ್ಸಾಂ ಮೂಲದ ವಕೀಲ ಅಮನ್ ವಾದುದ್ ಅವರು, ಸರ್ಕಾರವು ದೇಶದಿಂದ ಜನರನ್ನು ನಿರಂಕುಶವಾಗಿ ಹೊರಹಾಕುತ್ತಿದೆ ಎಂದು ಆರೋಪಿಸಿದರು.

ನೆಲದಲ್ಲಿ ಬಹಳಷ್ಟು ಭೀತಿ ಇದೆ. ಅದು ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಕೆಲವರನ್ನು ಹಿಂತಿರುಗಿಸಲಾಗಿದೆ

ಯಾವುದೇ ನಿಜವಾದ ಭಾರತೀಯ ನಾಗರಿಕರನ್ನು ಹೊರಹಾಕಲಾಗುವುದಿಲ್ಲ ಎಂದು ಶರ್ಮಾ ಹೇಳಿದ್ದಾರೆ. ಆದರೆ ಗಡೀಪಾರು ಮಾಡಲಾದವರಲ್ಲಿ ನಾಲ್ವರು ಜನರನ್ನು ಭಾರತಕ್ಕೆ ಹಿಂದಿರುಗಿ ಕರೆ ತರಲಾಗಿದೆ. ಏಕೆಂದರೆ ಅವರ ಭಾರತೀಯರಲ್ಲದ ಸ್ಥಾನಮಾನವನ್ನು ಪ್ರಶ್ನಿಸುವ ಮೇಲ್ಮನವಿಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇವೆ ಎಂದು ಅವರು ಹೇಳಿದರು.

ಅವರಲ್ಲಿ ಒಬ್ಬರು 51 ವರ್ಷದ ಮಾಜಿ ಸರ್ಕಾರಿ ಶಾಲಾ ಶಿಕ್ಷಕ ಖೈರುಲ್ ಇಸ್ಲಾಂ ಅವರನ್ನು ಹಿಂದಕ್ಕೆ ಕರೆ ತರಲಾಗಿದೆ. ಅವರನ್ನು 2016ರಲ್ಲಿ ನ್ಯಾಯಮಂಡಳಿಯು ವಿದೇಶಿಯರೆಂದು ಘೋಷಿಸಿತು. ಅವರು ಎರಡು ವರ್ಷಗಳ ಕಾಲ ಅಸ್ಸಾಂ ಬಂಧನ ಕೇಂದ್ರದಲ್ಲಿ ಕಳೆದರು ಮತ್ತು ಆಗಸ್ಟ್ 2020ರಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

ಮೇ 23ರಂದು ಪೊಲೀಸರು ಅವರನ್ನು ತಮ್ಮ ಮನೆಯಿಂದ ಕರೆದುಕೊಂಡು ಹೋಗಿ ಬಂಧನ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿಂದ ಅವರನ್ನು ಮತ್ತು ಇತರ 31 ಜನರನ್ನು ಭಾರತೀಯ ಗಡಿ ಭದ್ರತಾ ಪಡೆಯವರು ಸುತ್ತುವರೆದ ವ್ಯಾನ್‌ಗೆ ತುಂಬಿಸಿದರು. ಅಲ್ಲಿ ಅವರಿಗೆ ಕಣ್ಣುಗಳಿಗೆ ಬಟ್ಟೆ ಕಟ್ಟಿ, ಕೈಗಳನ್ನು ಕಟ್ಟಿದರು ಎಂದು ಅವರು ಹೇಳಿದರು.

ನಂತರ, ನಮ್ಮಲ್ಲಿ 14 ಜನರನ್ನು ಮತ್ತೊಂದು ಟ್ರಕ್‌ಗೆ ಹಾಕಲಾಯಿತು. ನಮ್ಮನ್ನು ಗಡಿಯುದ್ದಕ್ಕೂ ಕರೆದುಕೊಂಡು ಹೋಗುತ್ತಾ ಒಂದು ಸ್ಥಳದಲ್ಲಿ ಬಾಂಗ್ಲಾದೇಶಕ್ಕೆ ನೂಕಿದರು. ಇದು ಭಯಾನಕವಾಗಿತ್ತು. ನಾನು ಎಂದಿಗೂ ಅಂತಹ ಅನುಭವವನ್ನು ಅನುಭವಿಸಿಲ್ಲ. ಆಗ ತಡರಾತ್ರಿಯಾಗಿತ್ತು. ಅಲ್ಲೊಂದು ನೇರ ರಸ್ತೆ ಇತ್ತು ಮತ್ತು ನಾವೆಲ್ಲರೂ ಅದರ ಉದ್ದಕ್ಕೂ ನಡೆಯಲು ಪ್ರಾರಂಭಿಸಿದೆವು ಎಂದು ಶಿಕ್ಷಕ ಖೈರುಲ್ ಇಸ್ಲಾಂ ಹೇಳಿದರು.

ಬಾಂಗ್ಲಾದೇಶದ ಹಳ್ಳಿಯ ನಿವಾಸಿಗಳು ಆಗ ಬಾಂಗ್ಲಾದೇಶದ ಗಡಿ ಭದ್ರತಾ ಪಡೆಯವರಿಗೆ ಮಾಹಿತಿ ನೀಡಿದರು. ನಂತರ ಅವರು ನಮ್ಮ 14 ಜನರ ಗುಂಪನ್ನು ಎರಡೂ ದೇಶಗಳ ನಡುವಿನ ನಿರ್ಜನ ಪ್ರದೇಶದೊಳಕ್ಕೆ ತಳ್ಳಿದರು ಎಂದು ಇಸ್ಲಾಂ ಹೇಳಿದರು.

ಇಡೀ ದಿನ ನಾವು ಸುಡು ಬಿಸಿಲಿನಲ್ಲಿ ಬಯಲು ಮೈದಾನದಲ್ಲಿ ನಿಂತಿದ್ದೆವು ಎಂದು ಅವರು ತಿಳಿಸಿದರು.

ನಂತರ, ನಮ್ಮ ಗುಂಪನ್ನು ಬಾಂಗ್ಲಾದೇಶ ಭದ್ರತಾ ಶಿಬಿರಕ್ಕೆ ಕರೆದೊಯ್ಯಲಾಯಿತು. ಆದೇ ವೇಳೆ ಇಸ್ಲಾಂ ಅವರ ಪತ್ನಿ ಅಸ್ಸಾಂನ ಪೊಲೀಸರಿಗೆ ತಮ್ಮ ಪತಿಯ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇರುವುದರಿಂದ ಅವರನ್ನು ಮರಳಿ ಕರೆತರಬೇಕೆಂದು ಹೇಳಿದರು.

ಕೆಲವು ದಿನಗಳ ನಂತರ, ನನ್ನನ್ನು ಇದ್ದಕ್ಕಿದ್ದಂತೆ ಭಾರತೀಯ ಪೊಲೀಸರಿಗೆ ಹಸ್ತಾಂತರಿಸಲಾಯಿತು. ನಾನು ಮನೆಗೆ ಹಿಂದಿರುಗಿದ್ದು ಹೀಗೆಯೇ. ನನ್ನೊಂದಿಗಿದ್ದ ಇತರರಿಗೆ ಏನಾಯಿತು ಅಥವಾ ಅವರು ಎಲ್ಲಿದ್ದಾರೆಂದು ನನಗೆ ತಿಳಿದಿಲ್ಲ ಎಂದು ಅವರು ಹೇಳಿದರು.

ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆಂದು ಪರಿಗಣಿಸಲಾದ ಜನರ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದು ಅಸ್ಸಾಂ ಮಾತ್ರವಲ್ಲ. ಗುಜರಾತಿನ ಅಹಮದಾಬಾದ್‌ನಲ್ಲಿ 250ಕ್ಕೂ ಹೆಚ್ಚು ಜನರು ಅಕ್ರಮವಾಗಿ ವಾಸಿಸುತ್ತಿರುವ ಬಾಂಗ್ಲಾದೇಶಿ ವಲಸಿಗರು ಎಂದು ದೃಢಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವರನ್ನು ಗಡೀಪಾರು ಮಾಡುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಜಿತ್ ರಾಜಿಯನ್ ಹೇಳಿದ್ದಾರೆ.

ಹನಿಮೂನ್ ಹತ್ಯೆ: ಮೇಘಾಲಯ ಜನರ ಕುರಿತು ಮಾಧ್ಯಮಗಳಿಂದ ಅಪಪ್ರಚಾರ; ಕ್ಷಮೆಗೆ ಒತ್ತಾಯಿಸಿ ರ‍್ಯಾಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. The alleged foreigner, agrived by the order any court, he cannot be deprived to challenge the same in the higher court as per theme of our Constitution. The law of the land, provide an opportunity to fole appeal on free of cost. Therefore I suggested to approach National Legal Services Authority for getting free legal aid.

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...