Homeಕರೋನಾ ತಲ್ಲಣಆಕ್ಸ್‌ಫರ್ಡ್ ಕೊರೊನಾ ಲಸಿಗೆಗಳ ಪ್ರಯೋಗಗಳಿಗೆ ಭಾರತದಲ್ಲಿ ಅರ್ಜಿ

ಆಕ್ಸ್‌ಫರ್ಡ್ ಕೊರೊನಾ ಲಸಿಗೆಗಳ ಪ್ರಯೋಗಗಳಿಗೆ ಭಾರತದಲ್ಲಿ ಅರ್ಜಿ

ಆಕ್ಸ್‌ಫರ್ಡ್‌ನ ಕೊರೊನಾ ಲಸಿಕೆಯ ಮೊದಲ ಫಲಿತಾಂಶಗಳು ಲಸಿಕೆಯು ಸುರಕ್ಷಿತವೆಂದು ತೋರಿಸಿದ ಕಾರಣ ಕೊರೊನಾ ವಿರುದ್ಧದ ಯುದ್ಧದಲ್ಲಿ ಸೋಮವಾರವನ್ನು ಒಂದು ಪ್ರಮುಖ ದಿನವೆಂದು ಗುರುತಿಸಲಾಗಿದೆ.

- Advertisement -
- Advertisement -

ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಭಾರತದಲ್ಲಿ ಅಸ್ಟ್ರಾಜೆನೆಕಾ-ಆಕ್ಸ್‌ಫರ್ಡ್ ಕೊರೊನಾ ಲಸಿಕೆಯ ಪ್ರಯೋಗ ನಡೆಸಲು ಭಾರತೀಯ ನಿಯಂತ್ರಕರಿಗೆ ಮುಂದಿನ ಒಂದು ವಾರದೊಳಗೆ ಅರ್ಜಿ ಸಲ್ಲಿಸಲಿದೆ ಎಂದು ತಿಳಿಸಿದೆ.

ಅಸ್ಟ್ರಾಜೆನೆಕಾ-ಆಕ್ಸ್‌ಫರ್ಡ್ ಲಸಿಕೆ ಫಲಿತಾಂಶಗಳ ಕುರಿತು ಪ್ರತಿಕ್ರಿಯಿಸಿದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನವಾಲ್ಲಾ, “ಪ್ರಯೋಗಗಳು ಭರವಸೆಯ ಫಲಿತಾಂಶಗಳನ್ನು ತೋರಿಸಿವೆ ಮತ್ತು ಅದರ ಬಗ್ಗೆ ನಮಗೆ ತುಂಬಾ ಸಂತೋಷವಾಗಿದೆ. ನಾವು ಭಾರತೀಯ ನಿಯಂತ್ರಕರಿಗೆ ಪರವಾನಗಿ ಪ್ರಯೋಗಗಳಿಗೆ ವಾರಗಳೊಳಗೆ ಅರ್ಜಿ ಸಲ್ಲಿಸುತ್ತೇವೆ. ಅವರು ನಮಗೆ ಅನುಮತಿ ನೀಡಿದ ಕೂಡಲೇ, ನಾವು ಭಾರತದಲ್ಲಿ ಲಸಿಕೆಗಾಗಿ ಪ್ರಯೋಗಗಳನ್ನು ಪ್ರಾರಂಭಿಸುತ್ತೇವೆ. ಇದಲ್ಲದೆ, ಶೀಘ್ರದಲ್ಲೇ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲು ಪ್ರಾರಂಭಿಸುತ್ತೇವೆ.” ಎಂದು ಹೇಳಿದ್ದಾರೆ.

ಆಕ್ಸ್‌ಫರ್ಡ್‌ನ ಕೊರೊನಾ ಲಸಿಕೆಯ ಮೊದಲ ಫಲಿತಾಂಶಗಳು ಲಸಿಕೆಯು ಸುರಕ್ಷಿತವೆಂದು ತೋರಿಸಿದ ಕಾರಣ ಕೊರೊನಾ ವಿರುದ್ಧದ ಯುದ್ಧದಲ್ಲಿ ಸೋಮವಾರವನ್ನು ಒಂದು ಪ್ರಮುಖ ದಿನವೆಂದು ಗುರುತಿಸಲಾಗಿದೆ.

ವರ್ಷಾಂತ್ಯಕ್ಕೆ ಲಸಿಕೆ ಸಿದ್ಧವಾಗಬಹುದು ಎಂದು ಸಂಶೋಧಕರು ಸೂಚಿಸುತ್ತಿದ್ದಾರೆ. ಚುಚ್ಚುಮದ್ದಿನಿಂದ ಶೇಕಡಾ 91 ಕ್ಕಿಂತ ಹೆಚ್ಚು ಸ್ವಯಂಸೇವಕರು ಕೊರೊನಾ ವೈರಸ್ ವಿರುದ್ಧ ರೋಗನಿರೋಧಕ ಪ್ರತಿಕ್ರಿಯೆಯನ್ನು ಉಂಟುಮಾಡಿದ್ದಾರೆ ಎಂದು ಫಲಿತಾಂಶಗಳು ತೋರಿಸಿದವು.

ಈ ಪ್ರಯೋಗವು ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ನಡೆಯಿತು. ಪ್ರತಿರಕ್ಷಣಾ (ಇಮ್ಯೂನಿಟೆ) ಪ್ರತಿಕ್ರಿಯೆಗಳು ಕನಿಷ್ಠ 56 ದಿನಗಳವರೆಗೆ ಪ್ರಬಲವಾಗಿದ್ದವು ಎಂದಿದ್ದಾರೆ.

AZD1222 ಎಂದು ಕರೆಯಲ್ಪಡುವ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಲಸಿಕೆಯನ್ನು ಪ್ರಮುಖ ಔಷಧೀಯ ಸಂಸ್ಥೆ ಅಸ್ಟ್ರಾಜೆನೆಕಾ ತಯಾರಿಸುತ್ತಿದೆ. ಯುಕೆ ಸರ್ಕಾರವು ಈಗಾಗಲೇ 100 ಮಿಲಿಯನ್ ಡೋಸ್‌ಗಳನ್ನು ಆದೇಶಿಸಿದೆ.

ಫಲಿತಾಂಶಗಳ ಪ್ರಕಾರ, ಲಸಿಕೆಯು ಟಿ ಸೆಲ್ ಮತ್ತು ಆಂಟಿಬಾಡಿ ಇಮ್ಯುನಿಟಿಯನ್ನು ಹೆಚ್ಚಿಸಿದೆ. ಈ ಎರಡೂ ವಿಷಯದಲ್ಲಿ ಲಸಿಕೆಯು ಹೆಚ್ಚಿನ ಪ್ರತಿಕ್ರಿಯೆ ನೀಡಿದೆ ಎಂದು ಅಧ್ಯಯನವು ಕಂಡುಹಿಡಿದಿದೆ.

ಟಿ ಕೋಶಗಳ ಇಮ್ಯೂನಿಟಿಯು ಎರಡು ವಾರಗಳ ನಂತರ ಉತ್ತುಂಗಕ್ಕೇರಿತು ನಂತರ 56 ನೇ ದಿನಕ್ಕೆ ಸ್ವಲ್ಪ ಇಳಿಯಿತು ಎಂದು ಅಧ್ಯಯವು ಹೇಳಿದೆ.

ಮತ್ತೊಂದೆಡೆ, ಆಂಟಿಬಾಡಿ ಇಮ್ಯೂನಿಟಿಯು ನಾಲ್ಕು ವಾರಗಳ ನಂತರ ಉತ್ತುಂಗಕ್ಕೇರಿತು ಹಾಗೂ 56 ನೇ ದಿನಗಳವರೆಗೆ ಉಳಿಯಿತು ಎಂದು ಅಧ್ಯಯನ ಹೇಳಿದೆ. ಇದು ಇನ್ನೂ ಹೆಚ್ಚು ಕಾಲ ಉಳಿಯಬಹುದು ಎಂದು ಅದು ಸೂಚಿಸುತ್ತದೆ.


ಓದಿ: ಕೊರೊನಾ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಿದ ಚೀನಾ ಮತ್ತು ಯುಕೆ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...