Homeಕರ್ನಾಟಕಪೆದ್ದನಹಳ್ಳಿಯಲ್ಲಿ ದಲಿತರ ಕೊಲೆ: ಲಿಂಗಾಯತ ಜಾತಿಯ ಆರೋಪಿ ಸೇರಿ ಕೆಲವರ ಬಂಧನ

ಪೆದ್ದನಹಳ್ಳಿಯಲ್ಲಿ ದಲಿತರ ಕೊಲೆ: ಲಿಂಗಾಯತ ಜಾತಿಯ ಆರೋಪಿ ಸೇರಿ ಕೆಲವರ ಬಂಧನ

- Advertisement -
- Advertisement -

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಪೆದ್ದನಹಳ್ಳಿಯಲ್ಲಿ ಇಬ್ಬರು ದಲಿತ ಯುವಕರ ಕೊಲೆಯಾಗಿದ್ದು ಲಿಂಗಾಯತ ಸಮುದಾಯದ ಆರೋಪಿ ಸೇರಿದಂತೆ ಕೆಲವರನ್ನು ಗುಬ್ಬಿ ಪೊಲೀಸರು ಬಂಧಿಸಿದ್ದಾರೆ.

ಪೆದ್ದನಹಳ್ಳಿಯ ಪರಿಶಿಷ್ಟ ಜಾತಿ ಮಾದಿಗ ಸಮುದಾಯಕ್ಕೆ ಸೇರಿದ ಪಿ.ಎಂ.ಗಿರೀಶ್‌ (32), ಮಂಚಲದೊರೆ ಗ್ರಾಮದ ಪರಿಶಿಷ್ಟ ಪಂಗಡ ನಾಯಕ ಸಮುದಾಯಕ್ಕೆ ಸೇರಿದ ಗಿರೀಶ್‌ ಅವರನ್ನು ಕೊಲೆ ಮಾಡಿರುವ ಸಂಬಂಧ ದೂರು ಸಲ್ಲಿಕೆಯಾಗಿದ್ದು, ಪೆದ್ದನಹಳ್ಳಿ ಗ್ರಾಮದ ಲಿಂಗಾಯತ ಜಾತಿಗೆ ಸೇರಿದ ನಂದೀಶ್‌ ಮತ್ತು ಇತರ ಕೆಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಎಫ್‌ಐಆರ್‌ನಲ್ಲಿ ನಂದೀಶ್ ಹೆಸರು ಮಾತ್ರ ಉಲ್ಲೇಖವಾಗಿದ್ದು, ಇತರರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಐಪಿಸಿ ಸೆಕ್ಷನ್‌ 302, 201 ಹಾಗೂ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಘಟನೆಯ ಹಿಂದಿನ ರಾತ್ರಿ ಆರೋಪಿ ನಂದೀಶ್‌, ಪೆದ್ದನಹಳ್ಳಿಯ ಪಿ.ಎಂ.ಗಿರೀಶ್‌ ಮನೆಗೆ ಬಂದು ಅವರನ್ನು ಕರೆದುಕೊಂಡು ಹೋಗಿದ್ದಾನೆ. ಆದರೆ ಶುಕ್ರವಾರ ಬೆಳಿಗ್ಗೆ ಗ್ರಾಮದ ನೀರಿನ ಕಟ್ಟೆಯಲ್ಲಿ ಗಿರೀಶ್ ಶವ ಪತ್ತೆಯಾಗಿದ್ದು, ದಾರಿಹೋಕರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಸ್ವಲ್ಪ ದೂರದಲ್ಲಿ ಹಾಗಲವಾಡಿ ಹೋಬಳಿಯ ಮಂಚಲದೊರೆ ಗ್ರಾಮದ ಮತ್ತೊಬ್ಬ ಯುವಕ ಗಿರೀಶ್‌ ಶವ ದೊರೆತಿದೆ. ಇಬ್ಬರ ದೇಹದ ಮೇಲೂ ಗಾಯದ ಗುರುತುಗಳು ಕಂಡು ಬಂದಿವೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಪೆದ್ದನಹಳ್ಳಿಯ ಗಿರೀಶ್ ಸಹೋದರ ಪಿ.ಎಂ.ಶ್ರೀಧರ್‌ ದೂರು ನೀಡಿದ್ದು, “ನಂದೀಶ್‌ ಹಾಗೂ ಇತರರು ಸೇರಿಕೊಂಡು ಈ ಇಬ್ಬರನ್ನೂ ಕೊಂದಿದ್ದಾರೆ” ಎಂದು ಉಲ್ಲೇಖಿಸಿದ್ದಾರೆ.

ಲೇಟ್‌ ಮೂಡ್ಲಗಿರಿಯಪ್ಪ ದಂಪತಿಗೆ ಐವರು ಮಕ್ಕಳಿದ್ದು, ಮೊದಲನೆಯವರು ಶ್ರೀಧರ್‌ ಪಿ.ಎಂ., ಕೊಲೆಯಾಗಿರುವ ಗಿರೀಶ್ ಅವಿವಾಹಿತರಾಗಿದ್ದರು. ತಾಯಿ ಗೌರಮ್ಮ ಕೂಲಿ ಮಾಡಿಕೊಂಡು ಊರಿನಲ್ಲಿ ವಾಸವಿದ್ದಾರೆ.

ನಿಟ್ಟೂರು ಹೋಬಳಿ ಅದಲಗೆರೆ ಗ್ರಾಮದಲ್ಲಿ ಅಜ್ಜಿಯ ಮನೆಯಲ್ಲಿ ಸಂಸಾರ ಸಮೇತ ಪಿ.ಎಂ.ಶ್ರೀಧರ್‌ ವಾಸವಿದ್ದು, ದಿನಾಂಕ 22.04.2022ರಂದು ತಾಯಿ ಗೌರಮ್ಮನವರು ಬೆಳಿಗ್ಗೆ 6 ಗಂಟೆ ಸುಮಾರಿಗೆ ಶ್ರೀಧರ್‌ಗೆ ಕರೆ ವಿಷಯ ತಿಳಿಸಿದ್ದಾರೆ.

“ದಿನಾಂಕ 21.04.2022ರಂದು ರಾತ್ರಿ 8.30ರಿಂದ 9 ಗಂಟೆ ಸಮಯದಲ್ಲಿ ಮನೆಯ ಬಳಿ ಬಂದ ಪೆದ್ದನಹಳ್ಳಿ ನಿವಾಸಿ, ಲಿಂಗಾಯತ ಜಾತಿಗೆ ಸೇರಿದ ಪರಮೇಶ್ವರಪ್ಪನವರ ಮಗ ನಂದೀಶ್‌ ಮತ್ತು ಇತರರು ಗಿರೀಶ್‌ ಅವರನ್ನು ಮನೆಯಿಂದ ಕರೆದುಕೊಂಡು ಹೋಗಿದ್ದಾರೆ. ವಾಪಸ್ ಮನೆಗೆ ಬಂದಿರಲಿಲ್ಲ. ಸಹೋದರ ಗಿರೀಶ್‌ ಶವ ಶಿರಾ- ನೆಲ್ಲಿಗೆರೆ ರಸ್ತೆಯಲ್ಲಿನ ಪೆದ್ದನಹಳ್ಳಿ ಗ್ರಾಮ ಸಮೀಪದ ಗುಂಡಿಯ ನೀರಿನಲ್ಲಿ ಪತ್ತೆಯಾದರೆ, ಇಲ್ಲಿಂದ ಸುಮಾರು ದೂರದಲ್ಲಿ ಮತ್ತೊಬ್ಬರನ್ನು ಕೊಲೆ ಮಾಡಿ ಕಾಲುವೆ ದಂಡೆಗೆ ಹೋಗುವ ಮಣ್ಣಿನ ರಸ್ತೆಯಲ್ಲಿ ಹಾಕಿದ್ದಾರೆ” ಎಂದು ಎಫ್‌ಆರ್‌ಐನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿರಿ: ಗುಬ್ಬಿ: ಇಬ್ಬರು ದಲಿತ ಯುವಕರ ಭೀಕರ ಹತ್ಯೆ; ಖೈರ್ಲಾಂಜಿ ಮಾದರಿ ಪ್ರಕರಣ?

“ಈ ಇಬ್ಬರನ್ನು ನಂದೀಶ್‌ ಮತ್ತು ಇತರರು ದಿನಾಂಕ 21.04.2022ರಂದು ರಾತ್ರಿ ಯಾವುದೋ ಸಮಯದಲ್ಲಿ ಯಾವುದೋ ಉದ್ದೇಶದಿಂದ ಯಾವುದೋ ಆಯುಧಗಳಿಂದ ಎಲ್ಲಿಯೋ ಹೊಡೆದು ಕೊಲೆ ಮಾಡಿ ಸತ್ಯ ಸಂಗತಿಯನ್ನು ಮರೆಮಾಚಲು ಪಿ.ಎಂ.ಗಿರೀಶ್ ಅವರ ಶವವನ್ನು ಮಟ್ಟದ ಗುಂಡಿಯ ನೀರಿನ ಅಂಚಿಗೆ ಹಾಕಿರುತ್ತಾರೆ. ಮಂಚಲಗೆರೆ ಗಿರೀಶ್‌ ಅವರನ್ನು ಮಟ್ಟದ ಗುಂಡಿಯಿಂದ ಸುಮಾರು 150 ಅಡಿ ದೂರದ ಬಂಡಿ ರಸ್ತೆಯ ಮೇಲೆ ಕೊಲೆ ಮಾಡಿ ಹಾಕಿರುತ್ತಾರೆ” ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಗ್ರಾಮಕ್ಕೆ ಶ್ವಾನದಳ ಕರೆಸಿದ್ದಾಗ, ಶ್ವಾನಗಳು ಹಲವು ಮನೆಗಳ ಬಳಿ ಹೋಗಿದ್ದವು. ಇದರಿಂದ ಕೆಲವರು ಪರಾರಿಯಾಗಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕೊಲೆಯಾದವರ ಮೇಲೆ ಕಳ್ಳತನದ ಆರೋಪ ಹೊರಿಸಿ ಪ್ರಕರಣವನ್ನು ತಿರುಚುವ ಯತ್ನ ಮಾಡಲಾಗುತ್ತಿದೆ ಎಂಬ ಆರೋಪಗಳು ಬಂದಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್ ವೇಮುಲಾ ಪ್ರಕರಣ: ಪೊಲೀಸರ ವರದಿ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ; ಪ್ರತಿಕ್ರಿಯಿಸಿದ ಕುಟುಂಬ

0
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣ ಪೊಲೀಸರು ಮುಕ್ತಾಯದ ವರದಿಯನ್ನು ಸಲ್ಲಿಸಿದ್ದಾರೆ. ಇದಲ್ಲದೆ ವರದಿಯಲ್ಲಿ ರೋಹಿತ್‌ ವೇಮುಲಾ 'ದಲಿತ ಅಲ್ಲ', ತನ್ನ “ನಿಜವಾದ ಜಾತಿಯ ಗುರುತು”...