Homeಮುಖಪುಟಪಿಎಂ ವಸತಿ ಯೋಜನೆ: 2.6 ಲಕ್ಷ ಫೇಕ್ ಅಕೌಂಟ್, 14 ಸಾವಿರ ಕೋಟಿ ರೂ ಗುಳುಂ!

ಪಿಎಂ ವಸತಿ ಯೋಜನೆ: 2.6 ಲಕ್ಷ ಫೇಕ್ ಅಕೌಂಟ್, 14 ಸಾವಿರ ಕೋಟಿ ರೂ ಗುಳುಂ!

ಪ್ರಧಾನ್‌ಮಂತ್ರಿ ಆವಾಸ್ ಯೋಜನಾ ಹಲವು ಕುಖ್ಯಾತ ಕಳ್ಳರ ಪಾಲಿಗೆ ಹುಲ್ಲುಗಾವಲು ಆಗಿತ್ತು ಎಂಬುದಕ್ಕೆ ಈಗ ಬೆಳಕಿಗೆ ಬಂದಿರುವ 14 ಸಾವಿರ ಕೋಟಿ ರೂ ಹಗರಣವೇ ಸಾಕ್ಷಿಯಾಗಿದೆ.

- Advertisement -
- Advertisement -

ಇತ್ತೀಚೆಗೆ ಫೆಬ್ರುವರಿ 25ರಂದು ‘ಆತ್ಮನಿರ್ಭರ್ ಬಂಗಾಳ’ ಹೆಸರಿನಲ್ಲಿ ಪ್ರಕಟವಾದ ಜಾಹಿರಾತಿನಲ್ಲಿ ಪ್ರಧಾನಿ ಚಿತ್ರದೊಂದಿಗೆ ಕಾಣಿಸಿಕೊಂಡಿದ್ದ ಬಂಗಾಳದ ಮಹಿಳೆ ಲಕ್ಷ್ಮಿದೇವಿ ಎಂಬುವವರು, ‘ಪಿಎಂ ವಸತಿ ಯೋಜನೆಯಿಂದಾಗಿ ತಲೆ ಮೇಲೊಂದು ಸೂರು ಸಿಕ್ಕಿತು’ ಎಂದು ಹೇಳಿದ್ದರು. ಆದರೆ ವಾಸ್ತವವಾಗಿ ಅವರು ಇರುವುದು ಒಂದು ಸಾದಾ ಬಾಡಿಗೆ ಮನೆಯಲ್ಲಿ!
ಪ್ರಧಾನ್‌ಮಂತ್ರಿ ಆವಾಸ್ ಯೋಜನಾ ಹಲವು ಕುಖ್ಯಾತ ಕಳ್ಳರ ಪಾಲಿಗೆ ಹುಲ್ಲುಗಾವಲು ಆಗಿತ್ತು ಎಂಬುದಕ್ಕೆ ಈಗ ಬೆಳಕಿಗೆ ಬಂದಿರುವ 14 ಸಾವಿರ ಕೋಟಿ ರೂ ಹಗರಣವೇ ಸಾಕ್ಷಿಯಾಗಿದೆ.

ಪ್ರಧಾನ್ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ)ಗೆ ಸಂಬಂಧಿಸಿದ ಹಗರಣವನ್ನು ಸಿಬಿಐ ಬುಧವಾರ ಪತ್ತೆ ಹಚ್ಚಿದೆ. ಈಗಾಗಲೇ ಬಿಕ್ಕಟ್ಟಿನಲ್ಲಿರುವ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಎಚ್‌ಎಫ್‌ಎಲ್) ನ ಪ್ರವರ್ತಕರು ಈ ಹಗರಣದ ಸೃಷ್ಟಿಕರ್ತರು ಮತ್ತು ಫಲಾನುಭವಿಗಳು ಎಂಬ ಸತ್ಯ ಹೊರಬಿದ್ದಿದೆ.

ವಂಚನೆ ಮತ್ತು ಹಣದ ಪ್ರಕರಣದಲ್ಲಿ ಜೈಲಿನಲ್ಲಿರುವ ಸಹೋದರರಾದ ಕಪಿಲ್ ಮತ್ತು ಧೀರಜ್ ವಾಧ್ವಾನ್ ವಸತಿ ಯೋಜನೆಯಲ್ಲಿ ’14 ಸಾವಿರ ಕೋಟಿ’ ನುಂಗಿದ ಫಲಾನುಭವಿಗಳಾಗಿದ್ದಾರೆ.

ಸಿಬಿಐ ಪ್ರಕಾರ, ಕಪಿಲ್ ಮತ್ತು ಧೀರಜ್ ವಾಧ್ವಾನ್ “ನಕಲಿ ಮತ್ತು ಕಾಲ್ಪನಿಕ” ಗೃಹ ಸಾಲ ಖಾತೆಗಳನ್ನು ಸೃಷ್ಟಿಸಿ ಭಾರತ ಸರ್ಕಾರದಿಂದ 1,880 ಕೋಟಿ ಬಡ್ಡಿ ಸಹಾಯಧನವನ್ನು ಪಡೆದಿದ್ದಾರೆ.

ಎಲ್ಲರಿಗೂ ವಸತಿ ಖಾತ್ರಿಪಡಿಸುವ ಕೇಂದ್ರ ಯೋಜನೆ ಪಿಎಂಎವೈ ಅನ್ನು ಅಕ್ಟೋಬರ್ 2015 ರಲ್ಲಿ ಘೋಷಿಸಲಾಯಿತು. ಯೋಜನೆಯಡಿಯಲ್ಲಿ ಆರ್ಥಿಕ ದುರ್ಬಲ ವಿಭಾಗಗಳ (ಇಡಬ್ಲ್ಯೂಎಸ್) ಮತ್ತು ಕಡಿಮೆ ಮತ್ತು ಮಧ್ಯಮ ಆದಾಯದ ಗುಂಪುಗಳಿಗೆ ನೀಡಲಾಗುವ ವಸತಿ ಸಾಲಗಳು ಕ್ರೆಡಿಟ್-ಸಂಬಂಧಿತ ಬಡ್ಡಿ ಸಹಾಯಧನಕ್ಕೆ ಅರ್ಹವಾಗಿವೆ.

ಈ ಸಾಲಗಳನ್ನು ಮಂಜೂರು ಮಾಡಿದ ಡಿಎಚ್‌ಎಫ್‌ಎಲ್‌ನಂತಹ ಹಣಕಾಸು ಸಂಸ್ಥೆಗಳಿಂದ ಸಬ್ಸಿಡಿಯನ್ನು ಪಡೆಯಬೇಕು. ಸಿಬಿಐ ಪ್ರಕಾರ, 2018 ರ ಡಿಸೆಂಬರ್‌ನಲ್ಲಿ ಡಿಎಚ್‌ಎಫ್‌ಎಲ್ ಹೂಡಿಕೆದಾರರಿಗೆ ಪಿಎಂಎವೈ ಅಡಿಯಲ್ಲಿ 88,651 ಸಾಲಗಳನ್ನು ಪ್ರಕ್ರಿಯೆಗೊಳಿಸಿದೆ ಮತ್ತು 539.4 ಕೋಟಿ ರೂ. ಸಬ್ಸಿಡಿಗಳನ್ನು ಪಡೆದುಕೊಂಡಿದೆ ಮತ್ತು ಇನ್ನೂ 1,347.8 ಕೋಟಿ ರೂ ಬಾಕಿ ಇದೆ ಎಂದು ಹೇಳಿಕೊಂಡಿದೆ.

2007-19ರ ನಡುವೆ ಡಿಎಚ್‌ಎಫ್‌ಎಲ್‌ನ ಕಪಿಲ್ ಮತ್ತು ಧೀರಜ್ ವಾಧ್ವಾನ್ ಅವರು ಮುಂಬೈನ ಅಸ್ತಿತ್ವದಲ್ಲೇ ಇಲ್ಲದ ಬಾಂದ್ರಾ ಶಾಖೆಯಲ್ಲಿ 2.6 ಲಕ್ಷ ನಕಲಿ ವಸತಿ ಸಾಲ ಖಾತೆಗಳನ್ನು ತೆರೆದಿದ್ದಾರೆ.

2007 ಮತ್ತು 2019 ರ ನಡುವೆ ಈ ಖಾತೆಗಳಿಗೆ 14,046 ಕೋಟಿ ಮೊತ್ತದ ವಸತಿ ಸಾಲಗಳನ್ನು ಈ ಖಾತೆಗಳಿಗೆ ಮಂಜೂರು ಮಾಡಲಾಗಿದೆ ಎಂದು ತೋರಿಸಲಾಗಿದೆ. ಅದರಲ್ಲಿ 11,755.79 ರೂ.ಗಳನ್ನು ಅನ್ನು ಇತರ ಕಾಲ್ಪನಿಕ ಸಂಸ್ಥೆಗಳಿಗೆ ರವಾನಿಸಲಾಗಿದೆ. ಈ ಮೊತ್ತವನ್ನು ಪಿಎಂ ವಸತಿ ಯೋಜನೆಯಲ್ಲಿ ನೀಡಲಾದ ಸಾಲಗಳು ಎಂದು ನಮೂದಿಸಿ, ಸಬ್ಸಿಡಿ ಹಣವನ್ನು ಗುಳುಂ ಮಾಡಲಾಗಿದೆ. ಈ ನಕಲಿ ಗೃಹಸಾಲ ವಿತರಣೆಗಾಗಿ ಈಗಾಗಲೇ ಡಿಎಚ್‌ಎಫ್‌ಎಲ್ 539.40 ಕೋಟಿ ರೂ ಬಡ್ಡಿ ಸಬ್ಸಿಡಿ ಪಡೆದುಕೊಂಡಿದೆ. ಇನ್ನೂ 1,347.80 ಕೋಟಿ ರೂ ಸಬ್ಸಿಡಿಗಾಗಿ ಕಾದು ಕೂತಿದೆ. ಒಟ್ಟು 1,887.20 ಕೋಟಿ ರೂ. ಸಬ್ಸಿಡಿ ಹಣ ಅದಕ್ಕೆ ದಕ್ಕಲಿದೆ. ಎಲ್ಲವೂ ಭಾರತ ಸರ್ಕಾರದ ಕೃಪೆ ಎಂಬ ಆರೋಪ ಕೇಳಿಬಂದಿದೆ.

ಇದಕ್ಕಾಗಿ ವಾಧ್ವಾನ್ ಸಹೋದರರು ಸರ್ಕಾರದ ನ್ಯಾಷನಲ್ ಹೌಸಿಂಗ್ ಬ್ಯಾಂಕ್‌ನ ಕೆಲವರೊಂದಿಗೆ ಶಾಮೀಲಾಗಿ ಈ ಕೃತ್ಯ ಎಸಗಿದ್ದಾರೆ. ಡಿಎಚ್‌ಎಫ್‌ಎಲ್‌ನಂತಹ ಕಂಪನಿಗಳು ವಸತಿ ಸಾಲ ನೀಡುತ್ತವೆ. ಸರ್ಕಾರದ ಸಬ್ಸಿಡಿ ಹಣವು ಅವುಗಳಿಗೆ ಪಾವತಿಯಾಗುತ್ತದೆ. ಆದರೆ ಫೇಕ್ ಅಕೌಂಟುಗಳನ್ನು ತೆರೆದ ಡಿಎಚ್‌ಎಫ್‌ಎಲ್ ತೆರಿಗೆದಾರರ ಹಣವನ್ನು ಸಬ್ಸಿಡಿ ರೂಪದಲ್ಲಿ ನುಂಗಿ ಕುಳಿತಿದೆ. ಹೀಗಾಗಿ ಕೊಲ್ಕೊತ್ತದ ಲಕ್ಷ್ಮಿದೇವಿಯಂತಹವರಿಗೆ ಮನೆ ಎಂಬುದು ಮರೀಚಿಕೆಯಾಗಿಯೇ ಉಳಿಯುತ್ತದೆ.

ಪಕ್ಕಾ ವಂಚಕರು!

ಕಳೆದ ವರ್ಷ ಜೂನ್‌ನಲ್ಲಿ ಸಿಬಿಐ ವಾಧ್ವಾನ್ ಸಹೋದರರು ಮತ್ತು ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತ್ತು, ಕಪೂರ್ ಅವರ ಕುಟುಂಬವು ಡಿಎಚ್‌ಎಫ್‌ಎಲ್‌ನಲ್ಲಿ ಹೂಡಿಕೆ ಮಾಡಿದ್ದಕ್ಕಾಗಿ ಕಿಕ್‌ಬ್ಯಾಕ್ ಪಡೆದಿದೆ ಎಂದು ಚಾರ್ಜ್‌ಶೀಟ್ ನಲ್ಲಿ ಆರೋಪಿಸಲಾಗಿತ್ತು.

ಆ ಹಗರಣದಲ್ಲಿ 2018 ರ ಏಪ್ರಿಲ್ ಮತ್ತು ಜೂನ್ ನಡುವೆ ಯೆಸ್ ಬ್ಯಾಂಕ್ 3,700 ಕೋಟಿ ರೂ, ಸಾರ್ವಜನಿಕ ಹಣವನ್ನು ಡಿಎಚ್‌ಎಫ್‌ಎಲ್‌ನ ಅಲ್ಪಾವಧಿಯ ಡಿಬೆಂಚರ್‌ಗಳಲ್ಲಿ ಹೂಡಿಕೆ ಮಾಡಿತು. ಇದಕ್ಕೆ ಪ್ರತಿಯಾಗಿ, ವಾಧ್ವಾನ್‌ಗಳು ಕಪೂರ್ ಅವರ ಪತ್ನಿ ಮತ್ತು ಹೆಣ್ಣುಮಕ್ಕಳಿಂದ ನಿಯಂತ್ರಿಸಲ್ಪಡುವ ಸಂಸ್ಥೆಗೆ ಸಾಲ ರೂಪದಲ್ಲಿ 600 ಕೋಟಿ ರೂ. ಕಿಕ್ ಬ್ಯಾಕ್ ಪಾವತಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ವಾಧ್ವಾನ್ ಸಹೋದರರನ್ನು ಬಂಧಿಸಲಾಗಿತ್ತು. ಕಪೂರ್ ಅವರನ್ನು ಮಾರ್ಚ್‌ನಲ್ಲಿ ಬಂಧಿಸಲಾಯಿತು.


ಇದನ್ನೂ ಓದಿ: ಬಿಜೆಪಿಯ ಜಾಹೀರಾತಿನಲ್ಲಿ ಸಿಕ್ಕ ಮನೆ ಪತ್ರಿಕೆಗೆ ಮಾತ್ರ ಸೀಮಿತ- ವಾಸ್ತವದಲ್ಲಿ ಬಾಡಿಗೆ ಮನೆಯಲ್ಲಿರುವ ಮಹಿಳೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...