Homeಕರ್ನಾಟಕಪ್ರತಿಭಟನಾನಿರತ ಕುಸ್ತಿಪಟುಗಳ ಮೇಲೆ ಪೊಲೀಸ್ ದರ್ಪ; ಭುಗಿಲೆದ್ದ ಜನಾಕ್ರೋಶ

ಪ್ರತಿಭಟನಾನಿರತ ಕುಸ್ತಿಪಟುಗಳ ಮೇಲೆ ಪೊಲೀಸ್ ದರ್ಪ; ಭುಗಿಲೆದ್ದ ಜನಾಕ್ರೋಶ

- Advertisement -
- Advertisement -

ಅಪ್ರಾಪ್ತ ಮತ್ತು ವಯಸ್ಕ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ, ಭಾರತೀಯ ಕುಸ್ತಿ ಫೆಡರೇಷನ್‌ ಮುಖ್ಯಸ್ಥ, ಬಿಜೆಪಿ ಸಂಸದ ಬ್ರಿಜ್‌ ಭೂಷಣ್ ಶರಣ್‌ನನ್ನು ಬಂಧಿಸಬೇಕೆಂದು ಹೋರಾಟ ನಡೆಸುತ್ತಿರುವ ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರು ತೋರಿಸುವ  ದರ್ಪಕ್ಕೆ ಜನಾಕ್ರೋಶ ವ್ಯಕ್ತವಾಗಿದೆ.

ಕರ್ನಾಟಕದ ಅನೇಕ ಜನರು ಈ ಘಟನೆಯನ್ನು ಖಂಡಿಸಿದ್ದಾರೆ. ನೂತನ ಸಂಸತ್‌ ಭವನದ ಉದ್ಘಾಟನೆಯ ವೈಭವದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರವಿದ್ದರೆ, ದೇಶಕ್ಕಾಗಿ ಪದಕಗಳನ್ನು ತಂದುಕೊಟ್ಟ ಕುಸ್ತಿಪಟುಗಳು ಬಂಧನಕ್ಕೊಳಗಾಗಿದ್ದಾರೆ.

ಸಾಮಾಜಿಕ ಮಾಧ್ಯಮಗಳ ಮೂಲಕ ಆಕ್ರೋಶ ಹೊರಹಾಕುತ್ತಿರುವ ಜನತೆ, ಮೋದಿ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿದ್ದಾರೆ. ದೇಶಕ್ಕಾಗಿ ಪದಕಗಳನ್ನು ತಂದ ಕುಸ್ತಿಪಟುಗಳ ಸಾಧನೆಯನ್ನು ಸ್ಮರಿಸಿದ್ದಾರೆ. ಕುಸ್ತಿಪಟುಗಳನ್ನು ಬೆಂಬಲಿಸಿ ಬೆಂಗಳೂರಿನಲ್ಲಿ ಪ್ರತಿಭಟನೆಯೂ ನಡೆದಿದೆ.

ಲೈಂಗಿಕ ಕುರುಕುಳ ಪ್ರಕರಣದ ಆರೋಪಿ ಬ್ರಿಜ್‌ಭೂಷಣ್ ಶರಣ್‌ಸಿಂಗ್‌ನನ್ನು ಬಂಧಿಸಬೇಕೆಂದು ಆಗ್ರಹಿಸಿ ಬೆಂಗಳೂರಿನಲ್ಲಿ ಇಂದು ಪ್ರತಿಭಟನೆ ನಡೆಯಿತು.

“ಕಲ್ಲಿನ ಕಟ್ಟಡದೊಳಗೆ ನಿಂತು ಭಾರತ‌ಮಾತೆಗೆ ಜೈ ಎನ್ನುವವರಿಗೆ ಬೀದಿಯಲ್ಲಿ ಭಾರತ ಮಾತೆಯರನ್ನು ಎಳೆದಾಡುತ್ತಿರುವುದು ಕಾಣುತ್ತಿಲ್ಲವಲ್ಲ, ನಾಚಿಕೆಗೇಡು. ಬಂಧಿಸಲಾದ ಎಲ್ಲ ಕುಸ್ತಿಪಟುಗಳು ಮತ್ತು ಹೋರಾಟಗಾರ್ತಿಯರನ್ನು ಬಿಡುಗಡೆ ಮಾಡಲೇಬೇಕು. ಲೈಂಗಿಕ ದೌರ್ಜನ್ಯದ ವಿರುದ್ಧ ಕ್ರಮ ಜರುಗಿಸಬೇಕು” ಎಂದು ಲಿಂಗತ್ವ ಅಲ್ಪಸಂಖ್ಯಾತ ಹೋರಾಟಗಾರ್ತಿ ಮಲ್ಲು ಕುಂಬಾರ್‌ ಆಗ್ರಹಿಸಿದ್ದಾರೆ.

“ಅಂದು ಈ ಮಹಿಳಾ ಕುಸ್ತಿಪಟುಗಳು ದೇಶಕ್ಕೆ ಪದಕದ ಜೊತೆ ಕೀರ್ತಿ ಹೊತ್ತು ತಂದರು. ಇಂದು ನ್ಯಾಯ ಬೇಡಿದ್ದೆ ತಪ್ಪಾಗಿ, ಹೊಡೆದು ಬಡಿದು ಚಿತ್ರಹಿಂಸೆ ನೀಡಿ ಅವರನ್ನು ಜೈಲಿಗೆ ಅಟ್ಟುತ್ತಿದ್ದಾರೆ. ಎಂಥ ದರಿದ್ರ ಆಡಳಿತದಲ್ಲಿ ನಾವಿಂದು ಬದುಕುತ್ತಿದ್ದೇವೆ. ಹೆಣ್ಣುಮಕ್ಕಳಿಗೆ ಗೌರವ ಕೊಡದವನು ಯಾವ ರಾಜದಂಡ ಹಿಡಿದರೇನು ಪ್ರಯೋಜನ?” ಎಂದು ಮಂಜುನಾಥ್ ಎಂಬವರು ಪ್ರಶ್ನಿಸಿದ್ದಾರೆ.

ಲೇಖಕಿ ಪಲ್ಲವಿ ಇಡೂರು ಪ್ರತಿಕ್ರಿಯಿಸಿ, “ನನ್ನಂತಹ ಕೋಟ್ಯಂತರ ಮಂದಿಯ ಮನಸ್ಸು ಬಿಜೆಪಿ ಅಥವಾ ಬಲಪಂಥೀಯರ ಅಸಹ್ಯದ ರಾಜಕಾರಣದೆಡೆಗೆ ತಿರುಗುವುದಿಲ್ಲ, ಆದರೆ ಅದಾಗಲೇ ಭಕ್ತಿಯಲ್ಲಿ ಮಿಂದೇಳುತ್ತಿರುವ ಅಸಹ್ಯದ ಹುಳುಗಳು ಬದಲಾಗುತ್ತಾರೆ ಎನ್ನುವ ಭ್ರಮೆಯೂ ನನಗಿಲ್ಲ. ಇನ್ನು ಅವರನ್ನು ದಿನ ಬೆಳಗಾದರೆ ಖಂಡಿಸುತ್ತಾ ಕೂರುವುದರಿಂದ ನನ್ನ ಮಾನಸಿಕ ಸ್ಥಿತಿ ಒತ್ತಡಕ್ಕೊಳಗಾಗಿ ಜೀವನಕ್ಕೆ ಮಾರಕವೇ ಹೊರತು ಬೇರೆ ಉಪಯೋಗವಂತೂ ಆಗಲಾರದು. ಮನುಷ್ಯ ಪ್ರತಿಯೊಬ್ಬನೂ ಪ್ರತಿಕ್ರಿಯಿಸುವುದು ತನಗೆ ಬಿಸಿಯ ಅನುಭವವಾದಾಗಲೇ! ನಾವೆಷ್ಟೇ ಎಚ್ಚರಿಸಿದರೂ ಎಚ್ಚರಗೊಳ್ಳಲಾರರು” ಎಂದು ವಿಷಾದಿಸಿದ್ದಾರೆ.

“ಈಗ ಹೀಗೆ ಬೀದಿಯಲ್ಲಿ ನಿಂತು ಪ್ರತಿಭಟಿಸುತ್ತಿರುವ ದೇಶದ ಅತ್ಯುನ್ನತ ಕ್ರೀಡಾಪಟುಗಳು ಅವರ ಸಾಧನೆಯ ಸಲುವಾಗಿಯಾದರೂ ಚರ್ಚೆಗೊಳಗಾಗುತ್ತಿದ್ದಾರೆ. ನನ್ನಂತವರು ಹೀಗೆ ಬೀದಿಗಿಳಿದರೆ ಕೇಳುವವರೇ ಇರುವುದಿಲ್ಲ. ಕಹಿ ಅನಿಸಬಹುದು ಆದರೆ ಇದೇ ಸತ್ಯ. ಇಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಸಾಲಿಡಾರಿಟಿಯ ಪೋಸ್ಟ್‌ಗಳನ್ನು ಬರೆಯಲೂ ನಮಗೆ ಕಮ್ಯುನಿಟಿ ಸ್ಟಾಂಡರ್ಡ್ ಫಿಕ್ಸ್ ಮಾಡಲಾಗಿದೆ. ಇಂತದ್ದೊಂದು ಕೈಕಾಲು ಮುರಿದುಕೊಂಡ ಪ್ರಜಾಪ್ರಭುತ್ವದಲ್ಲಿ ಒಗ್ಗಟ್ಟಿನ ವಿರೋಧ ಮತಗಟ್ಟೆಯಲ್ಲಷ್ಟೇ ತೋರಿಸಲು ಸಾಧ್ಯ ಅನ್ನುವ ದಿವ್ಯಸತ್ಯದ ಅರಿವಾಗಿರುವುದಕ್ಕೇ ಮಾತಿಗಿಂತ ಕೃತಿ ಮೇಲೆನ್ನಿಸಿರುವುದು. ಅಂದಹಾಗೆ ಒಂದುಕಾಲದಲ್ಲಿ ಬಿಜೆಪಿಯ ಪ್ರಧಾನಮಂತ್ರಿಯವರ ಆರಾಧಕರಾಗಿದ್ದ ಈ ಕ್ರೀಡಾಪಟುಗಳು ತಮ್ಮ ಹಕ್ಕಿಗಾಗಿ ತಮ್ಮದೇ ಸರ್ಕಾರದ ಮುಂದೆ ಹೀಗೆ ಬೀದಿ ಬದಿಯಲ್ಲಿ ತುಳಿತಕ್ಕೊಳಗಾಗಬೇಕಾದ ಈ ಪರಿಸ್ಥಿತಿಯನ್ನು ನೋಡುವಾಗ ನೋವಾಗುವುದಂತೂ ನಿಜ. ಸಂವೇದನೆಯನ್ನು ಕಳೆದುಕೊಂಡಿರುವ ಈ ದೇಶದ ಭಕ್ತರು ಬೇಗ ಎಚ್ಚೆತ್ತುಕೊಂಡು ದೇಶ ಉಳಿಸಲಿ ಅನ್ನುವುದಷ್ಟೇ ನನ್ನ ಈ ಕ್ಷಣದ ಆಸೆ” ಎಂದು ಆಶಿಸಿದ್ದಾರೆ.

“ನಿಮ್ಮ ಆತ್ಮವಂಚನೆಗೆ, ಅಷಾಢಭೂತಿತನಕ್ಕೆ ಕೊನೆಯೇ ಇಲ್ಲವೇ ಮಿಸ್ಟರ್ ಪಿಎಂ?” ಎಂದು ಪತ್ರಕರ್ತ ಶಶಿ ಸಂಪಳ್ಳಿ ಪ್ರಶ್ನಿಸಿದ್ದಾರೆ.

“ಸರ್ವಾಧಿಕಾರಿ ಆಡಳಿತದಲ್ಲಿ ಇದೆಲ್ಲಾ ಸಹಜವಾಗಿಯೇ ನಡೆಯುವ ಘಟನಾವಳಿಗಳು ನ್ಯಾಯ ಎಲ್ಲಿದೆ?” ಎಂದು ಯುವ ಹೋರಾಟಗಾರ ಹನುಮೇಶ್ ಗುಂಡೂರು ಪ್ರತಿಕ್ರಿಯಿಸಿದ್ದಾರೆ.

“ಲೈಂಗಿಕ ಕಿರುಕುಳ ನೀಡಿರುವ ಆರೋಪಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅಂಜಿಕೆಯಿಲ್ಲದೆ ಬೀದಿ ಸುತ್ತುತ್ತಿದ್ದಾನೆ. ಸಂತ್ರಸ್ತ ಹೆಣ್ಮಕ್ಳು ಲಾಠಿ, ಬೂಟುಗಳ ಪೆಟ್ಟು ತಿಂದು ಬಂಧಿಯಾಗಿದ್ದಾರೆ. ದೇಶಕ್ಕೆ ಪದಕ, ಹೆಮ್ಮೆ ತಂದ ಕುಸ್ತಿಪಟುಗಳ ಪರಿಸ್ಥಿತಿಯೇ ಹೀಗಾದರೆ, ನ್ಯಾಯಕ್ಕಾಗಿ ಜನಸಾಮಾನ್ಯರು ಧ್ವನಿ ಎತ್ತಿದರೆ ಅವರ ಪಾಡೇನು? ಮಿಸ್ಟರ್ ಮೋದಿ ಅಮಿತ್ ಷಾ ಅವರೇ, ಬೇಟಿ ಬಚಾವೋ, ಬೇಟಿ ಪಡಾವೋ ಎಂಬ ಘೋಷವಾಕ್ಯಕ್ಕೆ ಅರ್ಥವಿದೆಯಾ?” ಎಂದು ಯುವ ಪತ್ರಕರ್ತೆ ಧನಲಕ್ಷ್ಮಿ ಪೋಸ್ಟ್‌ ಮಾಡಿದ್ದಾರೆ.

“ಅಗೋ ಅಲ್ಲಿ ನೋಡಿ ಭವ್ಯ ಸಂಸತ್ತು, ಸಂವಿಧಾನವನ್ನು ಪಕ್ಕಕ್ಕೆ ಎಸೆದು ನಮ್ಮ ಕೋಟ್ಯಾಂತರ ರೂಪಾಯಿ ತೆರಿಗೆ ಹಣದಲ್ಲಿ ಕಟ್ಟಿಸಿ ಸ್ವಂತ ಮನೆಯಂತೆ ಗೃಹ ಪ್ರವೇಶ ಮಾಡಿದ ಕೆಟ್ಟ ಪ್ರಧಾನಿ. ಇಲ್ಲಿ ನೋಡಿ, ನಮ್ಮ ದೇಶದ ಹೆಮ್ಮೆಯ ಕುಸ್ತಿಪಟುಗಳು. ದೇಶದ ಹೆಮ್ಮೆ ಎಂದು ಟೀ ಕುಡಿಯಲು, ಸೆಲ್ಫಿ ತೆಗೆದುಕೊಳ್ಳಲು ಕರೆದ ಸೋಗಲಾಡಿಗೆ ಈಗ ಇವರು ಯಾರು ನೆನಪಿಲ್ಲ. ರಸ್ತೆಯಲ್ಲಿ ಹೀಗೇ ಹೀನಾಯವಾಗಿ ಎಳೆದಾಡುತ್ತಿದ್ದರೂ ಬಿಜೆಪಿಯ ಯಾವ ಮಹಿಳಾ ನಾಯಕಿಯು ತುಟಿ ಬಿಚ್ಚಿಲ್ಲ. ಇವರು ಕೇಳುತ್ತಿರುವುದು ಕೂಡ ಏಳು ಹೆಣ್ಣು ಮಕ್ಕಳ ಮೇಲೆ ಅದರಲ್ಲೂ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಒಬ್ಬ ಬಿಜೆಪಿ ಸಂಸದನ ವಿರುದ್ಧ ಕ್ರಮ! ಅದು ಬಿಜೆಪಿ ಸಾಧ್ಯವಿಲ್ಲ. ಆತ ಮುಂದಿನ ತಿಂಗಳು ಅಯೋಧ್ಯೆಯಲ್ಲಿ ಬೃಹತ್ ರ್‍ಯಾಲಿ ನಡೆಸುತ್ತಿದ್ದಾನೆ. ನೆನಪಿಡಿ ನೀವು ರೈತರನ್ನು ಹೀಗೆ ನಡೆಸಿಕೊಂಡಿದ್ದಿರಿ, ಕೊನೆಗೆ ಏನಾಯಿತು?” ಎಂಬ ಸಂದೇಶವನ್ನು ಶರಣು ಎಂಬವರು ಹಂಚಿಕೊಂಡಿದ್ದಾರೆ.

“ಅವರೆಲ್ಲಾ ದೇಶವನ್ನು ಪ್ರತಿನಿಧಿಸಿ, ದೇಶದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸುವ ಕನಸು ಹೊತ್ತು ಕುಸ್ತಿಪಟುಗಳಾಗಲು ಮುಂದಾದವರು. ಅಪ್ರಾಪ್ತ ವಯಸ್ಸಿನಲ್ಲೇ ಅಭ್ಯಾಸ ನಿರತರಾಗಿ, ವಿಶೇಷ ಕೋಚಿಂಗ್ ಪಡೆದು ಕುಸ್ತಿಪಟುಗಳಾಗಿ ದೇಶಕ್ಕೆ ಒಲಂಪಿಕ್ ನಲ್ಲಿ ಪದಕವನ್ನೂ ತಂದುಕೊಟ್ಟ ಭಾರತಾಂಬೆಯ ಹೆಮ್ಮೆಯ ಕುವರಿಯರು. ಲೈಂಗಿಕ ದೌರ್ಜನ್ಯ ಎಸಗಿದ್ದಾರೆನ್ನುವ ಆರೋಪ ಹೊರಿಸಿರುವ ಮಹಿಳಾ ಕುಸ್ತಿಪಟುಗಳು ತಮಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಧರಣಿ ನಡೆಸುತ್ತಿದ್ದಾರೆ. ಆದರೆ ಬಿಜೆಪಿ ಸರಕಾರ ತನ್ನ ಸಂಸದನ ಪರವಾಗಿ ನಿಂತು ಈ ಹೆಣ್ಣುಮಕ್ಕಳನ್ನೇ ಬಂಧಿಸಿದೆ ಇಂದು? ಇದೆಂತಹ ಅನ್ಯಾಯ ಸ್ವಾಮಿ, ಈ ದೇಶದಲ್ಲಿ ಕಾನೂನು ಇದೆಯೋ ಇಲ್ಲವೋ? ಲೈಂಗಿಕ ದೌರ್ಜನ್ಯ ಆಗಿದೆ ಎಂದು ನೊಂದು ಪ್ರತಿಭಟಿಸುವ ಈ ಹೆಣ್ಣು ಮಕ್ಕಳನ್ನು ಹಾದಿಬೀದಿಯಲ್ಲಿ ಪ್ರಾಣಿಗಳಂತೆ ಎಳೆದೊಯ್ಯುತ್ತಿರುವುದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಲ್ಲವೇ?” ಎಂದು ಸುಬ್ರಮಣ್ಯ ಭಟ್‌ ಕೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...