Homeಕರ್ನಾಟಕಅಪ್ಪು ಹೆಸರಲ್ಲಿ ಮುಸ್ಲಿಮರ ವಿರುದ್ಧ ದ್ವೇಶ ಬಿತ್ತಲು ಯತ್ನಿಸಿದ ಪೋಸ್ಟ್‌ಕಾರ್ಡ್; ಜನರಿಂದ ತರಾಟೆ

ಅಪ್ಪು ಹೆಸರಲ್ಲಿ ಮುಸ್ಲಿಮರ ವಿರುದ್ಧ ದ್ವೇಶ ಬಿತ್ತಲು ಯತ್ನಿಸಿದ ಪೋಸ್ಟ್‌ಕಾರ್ಡ್; ಜನರಿಂದ ತರಾಟೆ

- Advertisement -
- Advertisement -

ಬಿಜೆಪಿಯ ಪ್ರೊಪಗಾಂಡ ವೇದಿಕೆಯಾಗಿರುವ ಪೋಸ್ಟ್‌ಕಾರ್ಡ್ ಫೇಸ್‌ಬುಕ್‌ ಪೇಜ್‌ನಲ್ಲಿ ಇಂದು ಮಾಡಲಾಗಿರುವ ಪೋಸ್ಟ್‌ಗಳು ಜನರಿಂದ ಟೀಕೆಗೆ ಒಳಗಾಗಿವೆ. ಬಿಜೆಪಿ ಪರ ಪ್ರಚಾರ, ಕೋಮುದ್ವೇಷ, ಸುಳ್ಳು ಸುದ್ದಿಗಳ ಕಾರಣಕ್ಕೆ ಹೆಸರಾಗಿರುವ ಪೋಸ್ಟ್‌ ಕಾರ್ಡ್ ಹಾಗೂ ಅದರ ಸಂಪಾದಕ ಮಹೇಶ್‌ ವಿಕ್ರಂ ಹೆಗಡೆಯವರನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.

ಹಠಾತ್ ನಿಧನರಾದ ಪವರ್‌ ಸ್ಟಾರ್‌ ಪುನೀತ್ ರಾಜ್‌ಕುಮಾರ್‌ ಅವರ ಅಗಲಿಕೆಯ ನೋವಿನ ನಡುವೆ ಇಂದು ಅವರು ಜನ್ಮದಿನ ಬಂದಿದೆ. ಪುನೀತ್‌ ಅವರ ಕೊನೆಯ ಸಿನಿಮಾ ‘ಜೇಮ್ಸ್‌’ ಕೂಡ ಬಿಡುಗಡೆಯಾಗಿದೆ. ಇದರ ನಡುವೆ ಮುಸ್ಲಿಂ ಸಮುದಾಯ ಹಿಜಾಬ್‌ ಹಕ್ಕಿಗಾಗಿ ಹೋರಾಟ ಮುಂದುವರಿಸಿದ್ದು, ತಮ್ಮ ವ್ಯಾಪಾರ ವಹಿವಾಟುಗಳನ್ನು ಬಂದ್‌ ಮಾಡಿ ಇಂದು ಪ್ರತಿಭಟಿಸಿದೆ.

ಆದರೆ ಪುನೀತ್‌ ಅವರ ಜನ್ಮದಿನಕ್ಕೂ ಮುಸ್ಲಿಂ ಸಮುದಾಯದ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೂ ಒಂದಕ್ಕೊಂದು ಸಂಬಂಧ ಕಲ್ಪಿಸಲು ಯತ್ನಿಸಿರುವ ಪೋಸ್ಟ್‌ ಕಾರ್ಡ್‌ಗೆ ಕನ್ನಡಿಗರು ಛೀಮಾರಿ ಹಾಕಿದ್ದಾರೆ. ಮುಸ್ಲಿಂ ಸಮುದಾಯದ ಬಂದ್‌ಗೆ ಸಂಬಂಧಿಸಿದಂತೆ ಇತರ ಪೋಸ್ಟರ್‌ಗಳನ್ನೂ ಪೋಸ್ಟ್‌ಕಾರ್ಡ್‌ನಲ್ಲಿ ಕಾಣಬಹುದು. ಪುನೀತ್ ರಾಜ್‌ಕುಮಾರ್‌ ಅವರ ಜನ್ಮದಿನವನ್ನು ಹಿಜಾಬ್‌ ಹೋರಾಟಕ್ಕೆ ತಳುಕು ಹಾಕಿರುವ ಎರಡು ಪೋಸ್ಟರ್‌ಗಳು ಈಗ ಚರ್ಚೆಗೆ ಗ್ರಾಸವಾಗಿವೆ. ಎಲ್ಲ ಜಾತಿ, ಧರ್ಮಗಳಾಚೆಗೆ ಆಲದ ಮರದಂತೆ ವಿಸ್ತರಿಸಿರುವ ಮೇರು ವ್ಯಕ್ತಿತ್ವ ಪುನೀತ್ ಅವರನ್ನು ತಮ್ಮ ಕೋಮು ಅಜೆಂಡಾಕ್ಕೆ ಪೋಸ್ಟ್‌ಕಾರ್ಡ್ ಬಳಸಲು ಯತ್ನಿಸಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ.

“ಶಾಂತಿಧೂತರು ಎನಿಸಿಕೊಂಡವರಿಂದ ಪವರ್ ಸ್ಟಾರ್‌ ಪುನೀತ್ ರಾಜ್‌ಕುಮಾರ್‌ ಅವರಿಗೆ ಅವಮಾನ… ಅಪ್ಪು ಹುಟ್ಟಿದ ದಿನ ಇಂದು, ಇದೇ ದಿನ ಕರ್ನಾಟಕ ಬಂದ್ ಎಂಬುದಾಗಿ ಕರೆ ನೀಡಿ ಕನ್ನಡದ ಮಣ್ಣಿನ ಹೆಮ್ಮೆಯ ಮಗನಿಗೆ ಅವಮಾನ ಮಾಡಿದ ಮುಸಲ್ಮಾನರು” ಎಂದು  ಪೋಸ್ಟರ್‌ಗಳನ್ನು ಮಾಡಿ ಪೋಸ್ಟ್‌ ಮಾಡಿರುವ  ಪೋಸ್ಟ್‌ಕಾರ್ಡ್, ಜನರ ನಡುವೆ ದ್ವೇಷ ಬಿತ್ತಲು ಯತ್ನಿಸಿದೆ.

“ಊರಿಗೆ ಬೆಂಕಿ ಹಚ್ಚಿ ಚಳಿ ಕಾಯುವುದರಲ್ಲಿ ನಿಮಗಿಂತ ಜಾಣರು ಯಾರು ಇಲ್ಲ ಅಂತ ಎಲ್ಲರಿಗೂ ಗೊತ್ತು. ಅವರು ಅಪ್ಪು ಬಾಸ್‌ಗೆ ಅವಮಾನ ಮಾಡಿಲ್ಲ. ಇಷ್ಟ ಇರೋರು ತಮ್ಮ ಅಂಗಡಿಗಳನ್ನು ಬಂದ್ ಮಾಡಬಹುದು ಎಂದು ಕರೆ ಕೊಟ್ಟಿದ್ದಾರೆ‌. ಆದ್ರೆ ನೀವು ಮಾತ್ರ ಈ ವಿಷಯದಲ್ಲಿ ಅಪ್ಪು ಬಾಸ್‌ಗೆ ಅವಮಾನ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ” ಎಂದು ಅಮರ್‌ ಎಂಬವರು ಕಮೆಂಟ್ ಮಾಡಿದ್ದಾರೆ.

ಬಿಜೆಪಿ ಪ್ರೊಪಗಾಂಡಕ್ಕೆ ಬಳಕೆಯಾಗುತ್ತಿರುವ ‘ಕಾಶ್ಮೀರ್‌ ಫೈಲ್ಸ್‌’ ಸಿನಿಮಾಕ್ಕೆ ಅಪಾರ ಪ್ರಚಾರ ನೀಡುವುದರ ಜೊತೆಗೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿಯನ್ನೂ ನೀಡಿರುವುದನ್ನು ಪ್ರಸ್ತಾಪಿಸಿರುವ ಜನರು, ಪುನೀತ್‌ ರಾಜ್‌ಕುಮಾರ್‌ ಅವರು ಕೊನೆಯ ಸಿನಿಮಾಕ್ಕೆ ಸರ್ಕಾರ ತೆರಿಗೆ ವಿನಾಯಿತಿ ಏಕೆ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.

“ಕಾಶ್ಮೀರ್ ಫೈಲ್ಸ್ ಸಿನೆಮಾ ತೆರಿಗೆ ವಿನಾಯಿತಿ ಕೊಟ್ಟು ಜೇಮ್ಸ್‌‌ಗೆ ವಿನಾಯಿತಿ ಕೊಡದೇ ಇರೋ ಸರ್ಕಾರ ಅಪ್ಪು ಸರ್‌ಗೆ ಅವಮಾನ ಮಾಡಿದೆ. ಇದರ ಬಗ್ಗೆ ಮಾತನಾಡಿ” ಎಂದು  ಮುಸ್ತಫಾ ಮೊಹಮದ್‌ ಹಾಗೂ ಐಜಿ ಚಿನ್ನಪ್ಪ ಎಂಬವರು ಆಗ್ರಹಿಸಿದ್ದಾರೆ.

“ಕೇವಲ ಮುಸಲ್ಮಾನರ ವಹಿವಾಟು ಸ್ವಯಂ ಪ್ರೇರಿತ ಬಂದ್ ಅಷ್ಟೇ. ರಾಜ್ ಫ್ಯಾಮಿಲಿ ನೆಪ ಮಾಡಿ ಬೆಂಕಿ ಹಚ್ಚಬೇಡಿ ಮಹೇಶ್ ವಿಕ್ರಂ ಹೆಗ್ಡೆ” ಎಂದು  ಸಫಾನ್ ಮೊಹಮ್ಮದ್ ವಿನಂತಿಸಿದ್ದಾರೆ.

ಹಿಜಾಬ್‌ ಧಾರ್ಮಿಕ ಹಕ್ಕಿನ ಭಾಗವಾಗಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಪ್ರಕರಣ ಸುಪ್ರೀಂ ಕೋರ್ಟ್ ಕದ ತಟ್ಟಿದೆ. ಇದರ ನಡುವೆ, ತಮ್ಮ ಧಾರ್ಮಿಕ ಹಕ್ಕಿಗಾಗಿ ಮುಸ್ಲಿಂ ಸಮುದಾಯಗಳು ಆಗ್ರಹಿಸುತ್ತಿವೆ. ತೀರ್ಪು ಬಂದ ಒಂದು ದಿನದ ಬಳಿಕ  ಬಂದ್ ಆಚರಿಸುವುದಾಗಿ ಮುಸ್ಲಿಂ ಮುಖಂಡರು ಹೇಳಿದ್ದರು.

ಕೋಮುದ್ವೇಷ: ರಿಪೋರ್ಟ್ ಮಾಡುವುದು ಹೇಗೆ?

ಕೋಮುದ್ವೇಷ ಹರಡುವುದು ಫೇಸ್‌ಬುಕ್‌ ಕಮ್ಯುನಿಟಿ ನಿಯಮಗಳ ಉಲ್ಲಂಘನೆಯಾಗಿರುತ್ತದೆ. ಹೀಗಾಗಿ ಸಂಬಂಧಪಟ್ಟ ಪೋಸ್ಟ್‌ನಲ್ಲಿ ಬಲಭಾಗದಲ್ಲಿನ ಮೂರು ಚುಕ್ಕೆಗಳನ್ನು ಕ್ಲಿಕ್ ಮಾಡಿ, ‘ರೀಪೋರ್ಟ್ ಪೋಸ್ಟ್‌’ ಆಯ್ಕೆ ಮಾಡಿದರೆ, ಯಾವ ಆಯಾಮದ ಪೋಸ್ಟ್‌ ಎಂದು ಫೇಸ್‌ಬುಕ್ ಕೇಳುತ್ತದೆ. ಪೋಸ್ಟ್‌ಗೆ ಸಂಬಂಧಿಸಿದ ಆಯಾಮಗಳನ್ನು (ಉದಾಹರಣೆಗೆ ‘hate speech’, violence) ಆಯ್ಕೆ ಮಾಡಿ ರಿಪೋರ್ಟ್ ಮಾಡಬಹುದು.


ಇದನ್ನೂ ಓದಿರಿ: ಕನ್ನಡ ಚಿತ್ರರಂಗಕ್ಕೆ ಹೊಸ ಕ್ರಿಯಾಶೀಲತೆ ತಂದುಕೊಟ್ಟ ’ಅಪ್ಪು ಡ್ಯಾನ್ಸ್’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. The judgement of the Karanataka High Court on Hijab shows how the facist BJP has hijacked the judiciary of the country. May God have mercy upon our land, sweet homeland, free Her from the clutches of the destructive forces. Jai Hind!

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...