Homeಮುಖಪುಟದೇವರನ್ನು ರಾಜಕೀಯದಿಂದ ದೂರವಿರಿಸಿದ್ದಕ್ಕೆ ಕೇರಳದ ಜನತೆಗೆ ಧನ್ಯವಾದಗಳು: ಪ್ರಕಾಶ್ ರಾಜ್‌

ದೇವರನ್ನು ರಾಜಕೀಯದಿಂದ ದೂರವಿರಿಸಿದ್ದಕ್ಕೆ ಕೇರಳದ ಜನತೆಗೆ ಧನ್ಯವಾದಗಳು: ಪ್ರಕಾಶ್ ರಾಜ್‌

- Advertisement -
- Advertisement -

ದೇವರನ್ನು ರಾಜಕೀಯದಿಂದ ದೂರವಿರಿಸಿದ್ದಕ್ಕೆ ಕೇರಳದ ಜನತೆಗೆ ಧನ್ಯವಾದಗಳು ಎಂದು ಬಹುಭಾಷಾ ನಟ ಪ್ರಕಾಶ್ ರಾಜ್‌ ಅವರು ಹೇಳಿದ್ದಾರೆ.

ತಿರುವನಂತಪುರಂನಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಬಹುಭಾಷಾ ನಟ ಪ್ರಕಾಶ್ ರಾಜ್‌, ನನ್ನ ಪ್ರೀತಿಯ ಕೇರಳ, ಇಲ್ಲಿ ನಾನು ಇರಲು ಸಂತಸಪಡುತ್ತೇನೆ. ನಿಮ್ಮ ಪ್ರೀತಿಗಾಗಿ ಸಂತೋಷವಾಗುತ್ತದೆ, ನೀವು ಹೊಂದಿರುವ ನಂಬಿಕೆಗಳಿಗಾಗಿ ಮತ್ತು ವಿಶೇಷವಾಗಿ ಇದು ದೇವರ ಸ್ವಂತ ನಾಡು, ಆದರೂ ನೀವು ದೇವರನ್ನು ರಾಜಕೀಯದಿಂದ ದೂರವಿರಿಸಿದ್ದೀರಿ ನಿಮಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಉತ್ಸವದಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಹಿರಿಯ ನಿರ್ದೇಶಕ ಕ್ರಿಸ್ಜ್ಟೋಫ್ ಜನುಸ್ಸಿ ಅವರಿಗೆ ನೀಡಿರುವ ಬಗ್ಗೆ ಮಾತನಾಡಿದ ಪ್ರಕಾಶ್ ರಾಜ್, ಕೆಲವೊಮ್ಮೆ ರಾಜಕೀಯ ದೃಷ್ಟಿಕೋನಗಳಲ್ಲಿ ಭಿನ್ನವಾಗಿದ್ದರೂ  ಕೇರಳ ಅವರಿಗೆ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಶ್ಲಾಘಿಸಿದರು. ರಾಜಕೀಯವು ನಮ್ಮ ಜೀವನದಲ್ಲಿ ಅದರದ್ದೇ ಆದ ಸ್ಥಾನವನ್ನು ಹೊಂದಿದೆ ಆದರೆ ಕಲೆಯು ರಾಜಕೀಯವನ್ನು ಮೀರಿದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಚಲನಚಿತ್ರೋತ್ಸವವನ್ನು ಶ್ಲಾಘಿಸಿದರು. ಸಿದ್ಧಾಂತಗಳ ಬಗ್ಗೆ ವಿವರಿಸಲು ಸಂಸತ್ತಿನಲ್ಲಿ ಇತ್ತೀಚೆಗೆ ನಡೆದ ದಾಳಿಯನ್ನು ಉಲ್ಲೇಖಿಸಿದ ಅವರು, ಆಡಳಿತ ಮತ್ತು ವಿರೋಧ ಪಕ್ಷಗಳ ನಿರೂಪಣೆಗಳನ್ನು ಮತ್ತು ಟಿಆರ್‌ಪಿಗಳಿಗಾಗಿ ಡಬ್ಬಿಯೊಂದಿಗೆ ಜೋಕರ್‌ಗಳಂತೆ ಹೋರಾಡುವ ಪತ್ರಕರ್ತರ ಬಗ್ಗೆ ಪ್ರಸ್ತಾಪಿಸಿದರು. ವಿರೋಧ ಪಕ್ಷಗಳು ಆಡಳಿತ ಪಕ್ಷವನ್ನು ಟೀಕಿಸುತ್ತದೆ. ಆಡಳಿತ ಪಕ್ಷದ ನಾಯಕರ ಜೊತೆ ಆರೋಪಿಗಳಿರುವ ಪೋಟೋಗಳಿದೆ ಎಂದು ಆಡಳಿತ ಪಕ್ಷಗಳು ಹೇಳುತ್ತಿದೆ. ಆದರೆ ಯುವಕರು ಈ ದಾಳಿ ಮಾಡಲು ಕಾರಣವೇನು ಎಂದು ಚರ್ಚಿಸುವ ಅಗತ್ಯ ಇರುತ್ತದೆ. ನಿರುದ್ಯೋಗಿಯಾಗಿರುವುದು, ಮಣಿಪುರದ ವಿಚಾರದಲ್ಲಿ ಉತ್ತರ ಸಿಗದಿರುವುದು ಎಷ್ಟು ಹತಾಶೆಯನ್ನು ಉಂಟುಮಾಡುತ್ತದೆ ಎಂಬುದರ ಬಗ್ಗೆ ಅವಲೋಕಿಸಿದ್ದೇವೆಯೇ?  ಈ ಪರಿಸ್ಥಿತಿಗಳಲ್ಲಿ ನಿಮ್ಮೆಲ್ಲರ ನಡುವೆ ಇರುವುದು, ಚರ್ಚಿಸುವುದು, ನೋಡುವುದು ಮತ್ತು ಕೇಳುವುದು ಸಂತಸ ತಂದಿದೆ ಎಂದು ಅವರು ಕೇರಳದ ಜನರಿಗೆ ಹೇಳಿದರು.

ಡಿ.8ರಿಂದ 15ರವೆರೆಗೆ ತಿರುವನಂತಪುರಂನಲ್ಲಿ 28ನೇ ಕೇರಳದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಡೆದಿದೆ. ಉತ್ಸವದಲ್ಲಿ 175 ಚಲನಚಿತ್ರಗಳನ್ನು ಪ್ರದರ್ಶಿಸಲಾಯಿತು ಮತ್ತು ಈವೆಂಟ್‌ನಲ್ಲಿ ಸುಮಾರು 14,000 ಜನರು ಭಾಗವಹಿಸಿದ್ದರು. ಸಮಾರಂಭದಲ್ಲಿ ಏಸ್ ಪೋಲಿಷ್ ಚಲನಚಿತ್ರ ನಿರ್ಮಾಪಕ ಕ್ರಿಸ್ಜ್ಟೋಫ್ ಜನುಸ್ಸಿ ಅವರು ಚಲನಚಿತ್ರೋತ್ಸವದಲ್ಲಿ ಜೀವಮಾನ ಸಾಧನೆಗಾಗಿ ಪ್ರಶಸ್ತಿಯನ್ನು ಪಡೆದಿದ್ದಾರೆ.

ಇದನ್ನು ಓದಿ: ಸಂಸತ್ತಿನ ಭದ್ರತಾ ಲೋಪ: ಅವಲೋಕನ ಮಾಡಬೇಕಾದ ಅಂಶಗಳಿವು..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ನ್ನು ಚುನಾವಣೆಗೆ ಮುನ್ನ ಬಂಧಿಸಿದ್ದು ಏಕೆ? EDಗೆ ಉತ್ತರಿಸುವಂತೆ ಸೂಚಿಸಿದ ಸುಪ್ರೀಂ ಕೋರ್ಟ್‌

0
ಸಾರ್ವತ್ರಿಕ ಚುನಾವಣೆಗೆ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವಂತೆ ಸುಪ್ರೀಂಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದ್ದು, ಅರವಿಂದ್ ಕೇಜ್ರಿವಾಲ್ ಅವರನ್ನು ಚುನಾವಣೆಗೂ ಮುನ್ನ ಬಂಧಿಸಿದ್ದು ಏಕೆ? ಎಂದು...