Homeಮುಖಪುಟಫೆ:13-ಎಂಡಿಎನ್ ಜನ್ಮದಿನ ನೆನಪು; ಪ್ರಾಮಾಣಿಕತೆಯ-ಸ್ಪಷ್ಟತೆಯ ನಾಯಕ ಪ್ರೊ. ನಂಜುಂಡಸ್ವಾಮಿ

ಫೆ:13-ಎಂಡಿಎನ್ ಜನ್ಮದಿನ ನೆನಪು; ಪ್ರಾಮಾಣಿಕತೆಯ-ಸ್ಪಷ್ಟತೆಯ ನಾಯಕ ಪ್ರೊ. ನಂಜುಂಡಸ್ವಾಮಿ

- Advertisement -
- Advertisement -

ನನಗೆ ಪ್ರೊ. ನಂಜುಂಡಸ್ವಾಮಿಯವರ ಸಂಪರ್ಕ ಬಂದಿದ್ದು 1998ರ ಇಸವಿಯಲ್ಲಿ. ಅದು ನಾನು ಕರ್ನಾಟಕ ರಾಜ್ಯ ರೈತಸಂಘ ಸೇರಿದ ಮೇಲೆ. ಅಕ್ಟೋಬರ್ 2 ಬೆಂಗಳೂರಿನಲ್ಲಿ ಅವರನ್ನು ಭೇಟಿ ಮಾಡಿ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ರೈತ ಸಂಘದ ಘಟಕವನ್ನು ಕಟ್ಟಲು ನಿರ್ಧರಿಸಿದ್ದೆವು. ನಂಜುಂಡಸ್ವಾಮಿಯವರ ಮನೆಯಲ್ಲಿ ಭೇಟಿ ಮಾಡಿದ ನಂತರ, ನನ್ನ ವಿವರಗಳನ್ನು ತಿಳಿದ ಅವರು, ’ನೀವು ಮುಂದುವರೆದು ಕೆಲಸ ಮಾಡಿ, ನಾನು ನವೆಂಬರ್ ತಿಂಗಳ 30ನೇ ತಾರಿಖು ಹಗರಿಬೊಮ್ಮನಹಳ್ಳಿಗೆ ಬರುತ್ತೇನೆ’ ಎಂದರು. ವಾಪಸ್ಸು ಹೋದವನು, ಅಕ್ಟೋಬರ್ ತಿಂಗಳ 2ನೇ ವಾರದಿಂದ ನವಂಬರ್ 30ರವರೆಗೂ 116 ಗ್ರಾಮಗಳಲ್ಲಿ ರೈತರನ್ನು ಸಂಘಟಿಸಲು ಓಡಾಡಿದೆನು.

ನವಂಬರ್ 30ಕ್ಕೆ ಕರ್ನಾಟಕ ರಾಜ್ಯ ರೈತಸಂಘದ ರಾಜ್ಯ ಸಮಿತಿಯ ಹಲವಾರು ಮುಖಂಡರುಗಳ ಜೊತೆಗೆ ಎಂಡಿಎನ್ ಅಲ್ಲಿಗೆ ಧಾವಿಸಿದರು. ನವೆಂಬರ್ 30, ವಿದ್ಯುತ್ ಬಿಲ್ ಬಾಕಿ ಕಟ್ಟುವುದಕ್ಕೆ ಕೊನೆಯ ದಿನವಾಗಿತ್ತು. 10ಸಾವಿರಕ್ಕೂ ಹೆಚ್ಚು ರೈತರು ಹಗರಿಬೊಮ್ಮನಹಳ್ಳಿಯಲ್ಲಿ ಸೇರಿದ್ದರು. ಗೋಕಾಕ್ ಚಳವಳಿಯನ್ನು ಬಿಟ್ಟರೆ ಹಗರಿಬೊಮ್ಮನಹಳ್ಳಿಯ ಇತಿಹಾಸದಲ್ಲಿ ಎರಡನೇ ದೊಡ್ಡ ಚಳವಳಿಯಾಗಿ ರೈತಸಂಘದ ಬೃಹತ್ ಸಮಾವೇಶ ನಡೆಯಿತು. ಆ ಸಮಾವೇಶದಲ್ಲಿ ನಂಜುಂಡಸ್ವಾಮಿಯವರು ’ವಿದ್ಯುತ್ ಬಾಕಿಗೆ ಹೆದರುವ ಅವಶ್ಯಕತೆ ಇಲ್ಲ, ಸಮಾನ ವಿದ್ಯುತ್ ನೀತಿ ಕೊಟ್ಟಾಗ ಮಾತ್ರ, ಸಮಾನ ವಿದ್ಯುತ್ ಒದಗಿಸಿದಾಗ ಮಾತ್ರ ಈ ಸರ್ಕಾರಕ್ಕೆ ತೆರಿಗೆಯನ್ನು ಮತ್ತು ಬಾಕಿಯನ್ನು ಕಟ್ಟಬೇಕೇ ವಿನಃ, ಕಿರುಕುಳಕ್ಕೆ ತೆರಿಗೆ ಕಟ್ಟುವ ಪದ್ಧತಿ ಪ್ರಪಂಚದಲ್ಲಿ ಎಲ್ಲೂ ಇಲ್ಲ. ಇಲ್ಲಿ ಮೌಢ್ಯತೆ ಇರುವುದರಿಂದ, ತಿಳಿವಳಿಕೆ ಇಲ್ಲದಿರುವುದರಿಂದ ಈ ರೀತಿಯ ಸಮಸ್ಯೆಗಳು ಜರುಗುತ್ತವೆ. ನೀವು ಜಾಗೃತರಾಗಬೇಕು’ ಅಂತ ಹೇಳಿ ಅಲ್ಲಿಗೆ ತಂದಿದ್ದಂತಹ ಎಲ್ಲ ಬಿಲ್‌ಗಳನ್ನು ಸಂಗ್ರಹಿಸಿ ಸುಟ್ಟು ಹಾಕಿದರು. ಅದಾದ ಕೆಲವು ತಿಂಗಳುಗಳಲ್ಲಿ, ಆಗತಾನೇ ಅಧಿಕಾರಕ್ಕೆ ಬಂದಿದ್ದ ಎಸ್ ಎಂ ಕೃಷ್ಣ ಕಾಂಗ್ರೆಸ್ ಸರ್ಕಾರ ವಿದ್ಯುತ್ ಬಾಕಿಯನ್ನು ಸಂಪೂರ್ಣ ಮನ್ನಾ ಮಾಡುವಂತಹ ಪರಿಸ್ಥಿತಿ ಕೂಡ ರಾಜ್ಯದಲ್ಲಿ ನಿರ್ಮಾಣವಾಯಿತು.

ಹೀಗೆ ಪ್ರಾರಂಭವಾದ ನನ್ನ ಮತ್ತು ಅವರ ಸಂಪರ್ಕ ನಂತರದ ದಿನಗಳಲ್ಲಿ ಗಾಢವಾಯಿತು. 10 ಸಾವಿರಕ್ಕೂ ಹೆಚ್ಚು ಜನ ಸೇರಿದ್ದನ್ನು ನೋಡಿ ಸಂತಸಪಟ್ಟಿದ್ದ ಅವರು, ’ವೀರಸಂಗಯ್ಯ ನೀನು ಸಂಘಟನೆಯ ಕೆಲಸವನ್ನ ಬರೀ ತಾಲೂಕಿಗೆ ಅಥವಾ ಜಿಲ್ಲೆಗೆ ಸೀಮಿತ ಮಾಡುವುದಲ್ಲ, ರಾಜ್ಯಮಟ್ಟದಲ್ಲಿ ಕೂಡ ನಮ್ಮ ಜೊತೆ ಇರಬೇಕು’ ಎಂಬ ತಮ್ಮ ಆಶಯವನ್ನು ವ್ಯಕ್ತಪಡಿಸಿದರು. ’ಇಲ್ಲ ಸಾರ್ ನನಗೆ ತೊಂದರೆಯಾಗುತ್ತದೆ, ನಾನು ಕೇವಲ ತಾಲೂಕು ಮಟ್ಟದಲ್ಲಿ ಮಾತ್ರ ಈ ಕೆಲಸವನ್ನ ಸದ್ಯಕ್ಕೆ ಮಾಡುತ್ತೇನೆ’ ಎಂದಾಗ, ’ಸರಿಸರಿ ಮುಂದೆ ನೋಡೋಣ’ ಎಂದರು. ಹಗರಿಬೊಮ್ಮನಹಳ್ಳಿಯ ಅನೇಕ ಸಮಸ್ಯೆಗಳಿಗೆ ತೀವ್ರವಾದ ಹೋರಾಟವನ್ನು ನಡೆಸುವಂತಹ ಹಲವಾರು ಸಂದರ್ಭಗಳು ಎದುರಾದವು. 1998, 1999, 2000 ಮತ್ತು 2001 ಇಸವಿಗಳಲ್ಲಿ ಹಲವು ಹೋರಾಟಗಳನ್ನು ನಾವು ನಿರಂತರವಾಗಿ ಸಂಘಟಿಸಿದೆವು. ಅದರ ಭಾಗವಾಗಿ ಪ್ರತಿ ಸಾರಿಯೂ ಪ್ರೊ ಎಂ.ಡಿ ನಂಜುಂಡಸ್ವಾಮಿಯವರು ನಮ್ಮ ಜೊತೆ ಬಂದು ತಮ್ಮ ನಾಯಕತ್ವವನ್ನು ಧಾರೆಯೆರೆಯುತ್ತಿದ್ದರು.

ಇಂತಹ ಸಂದರ್ಭವೊಂದರಲ್ಲಿ ಸಮಾನ ವಿದ್ಯುತ್ ನೀತಿಗಾಗಿ ಕೆಇಬಿ ಕಚೇರಿ ಮುಂದೆ ನಿರಂತರವಾಗಿ ಒಂದು ತಿಂಗಳ ಕಾಲ ನೆರೆದು, ಅಲ್ಲಿಯೇ ಅಡುಗೆ ಮಾಡಿಕೊಂಡು ಊಟ ಮಾಡುವಂತಹ ಬೃಹತ್ ಚಳವಳಿಯನ್ನು ನಾವು ಸಂಘಟಿಸಿದೆವು. ಆಗ ಒಂದು ದಿನ ನಂಜುಂಡಸ್ವಾಮಿಯವರು ನೇರವಾಗಿ ಅಲ್ಲಿಗೆ ಬಂದು, ನಮ್ಮ ಜೊತೆ ಕುಳಿತು ಬೀದಿಯಲ್ಲಿಯೇ ಊಟ ಮಾಡಿ ಅದರಲ್ಲಿ ಭಾಗಿಯಾದರು. ಒಂದು ದಿನ ’ಧಾರವಾಡಗೆ ಹೊರಟಿದ್ದೇವೆ, ನೀವೂ ಬರಬೇಕು’ ಎಂದು ಹೇಳಿ ನನ್ನನ್ನು ಕರೆದುಕೊಂಡು ಹೊರಟರು. ಆಗ ದಾರಿಯುದ್ದಕ್ಕೂ ಅನೇಕ ವಿಷಯಗಳು ಚರ್ಚೆಯಾದವು. ಹುಬ್ಬಳ್ಳಿಯ ಹತ್ತಿರ ನಾವು ಹೋಗುತ್ತಿರುವಾಗ, ಪ್ರವೇಶದ್ವಾರದಲ್ಲಿಯೇ ಕಾಣುವ ಸಮಾಧಿಗಳನ್ನು ತೋರಿಸಿ, ’ವೀರಸಂಗಯ್ಯನವರೇ ಇಲ್ಲಿರುವ ಸಮಾಧಿಗಳನ್ನು ನೋಡಿದರೆ ಏನನಿಸುತ್ತದೆ’ ಎಂದು ಕೇಳಿದರು. ಆಗ ನಾನು ’ಯಾಕ್ ಸರ್ ಇದ್ದಕ್ಕಿದ್ದಂತೆ ಈ ಪ್ರಶ್ನೆ’ ಎಂದು ಮುಂದೇನೂ ಹೇಳಲು ತೋಚದೆ ’ಏನೋ ಗೊತ್ತಾಗ್ತ ಇಲ್ಲ ಸರ್’ ಎಂದು ಹೇಳಿದೆ. ಆಗ ಅವರು ’ಮನುಷ್ಯರು ಸತ್ತಾಗ ಎಲ್ಲರಿಗೂ ಈ ರೀತಿಯ ಸಮಾಧಿಗಳನ್ನು ಸೃಷ್ಟಿ ಮಾಡುತ್ತಾ ಹೋದರೆ, ಮುಂದೆ ಬರುವ ಜನಾಂಗಕ್ಕೆ ಭೂಮಿಯೇ ಇರುವುದಿಲ್ಲ. ಹಾಗಾಗಿ ಸಮಾಧಿ ಕಟ್ಟುವ ಮತ್ತು ಪ್ರತಿಮೆಯನ್ನು ಮಾಡುವ ಆಮಿಷಗಳು ನಮ್ಮ ತಲೆಯಲ್ಲಿ ಯಾವಾಗಲೂ ಇರಬಾರದು. ಇದು ಚಳವಳಿಗಾರರಿಗೆ ಸಲ್ಲದು’ ಅನ್ನುವಂತಹ ಮಾತುಗಳನ್ನ ಬಹಳ ಸ್ಪಷ್ಟವಾಗಿ ತಮ್ಮ ಎಂದಿನ ವಿಚಾರಪರತೆಯ ದೃಷ್ಟಿಕೋನದಲ್ಲಿ ಹೇಳಿದರು. ಆಗ ನನಗೆ ಆಶ್ಚರ್ಯವಾಯಿತು. ’ಸರಿ ಸಾರ್, ಸರಿ ಇದೆ ನಿಮ್ಮ ಮಾತು. ಯಾಕೆಂದರೆ ಸತ್ತವರಿಗೆಲ್ಲ ಒಂದು ಗುರುತು ಮಾಡುತ್ತಾ ಹೋದರೆ ಭೂಮಿ ಏನೂ ಬೆಳೆಯುವುದಿಲ್ಲ, ಆದರೆ ಜನಸಂಖ್ಯೆ ನಿರಂತರವಾಗಿ ಬೆಳೆಯುತ್ತಾ ಇರುತ್ತದೆ. ಸಾವು ಕೂಡ ನಿರಂತವಾಗಿರುತ್ತದೆ. ಹಾಗಾಗಿ ತಾವು ಹೇಳುವ ಮಾತಿನಲ್ಲಿ ಸತ್ಯಾಂಶ ಇದೆ’ ಎಂದು ಪ್ರಶಂಸಾಧಾಟಿಯಲ್ಲಿ ಹೇಳಿದೆ.

ಅಂದು ನಮ್ಮ ಜೊತೆ ಕರ್ನಾಟಕ ರಾಜ್ಯ ರೈತಸಂಘದ ಪ್ರಧಾನ ಕಾರ್ಯದರ್ಶಿಗಳಾದ ಕೋಡಿಹಳ್ಳಿ ಚಂದ್ರಶೇಖರ್, ಕೆ.ಟಿ ಗಂಗಾಧರ್ ಕೂಡ ಇದ್ದರು. ಹುಬ್ಬಳ್ಳಿ ದಾಟಿರಬಹುದು, ಆಗ ಇನ್ನೊಂದು ಪ್ರಶ್ನೆಯನ್ನು ಕೆ.ಟಿ ಗಂಗಾಧರ್ ಮತ್ತು ಕೋಡಿಹಳ್ಳಿ ಚಂದ್ರಶೇಖರ್ ಜೊತೆಗೆ ಎಂಡಿಎನ್ ಚರ್ಚೆ ಮಾಡುತ್ತ ಬಂದರು. ಕರ್ನಾಟಕ ರಾಜ್ಯ ರೈತಸಂಘದ ಇವತ್ತಿನ ಈ ಸ್ಥಿತಿಗೆ, ಅದರ ವಿಘಟನೆಗೆ ರಾಮಕೃಷ್ಣ ಹೆಗಡೆಯವರು ಪ್ರಮುಖ ಕಾರಣ ಎಂಬ ಮಾತನ್ನ ನಮ್ಮ ಅಂದಿನ ಕಾರ್ಯದರ್ಶಿಗಳು ಹೇಳಿದರು. ಆಗ ನಾನು ಮಧ್ಯಪ್ರವೇಶಿಸಿ ಬಹಳ ಪ್ರಮುಖವಾದ ಒಂದು ಪ್ರಶ್ನೆಯನ್ನು ಎತ್ತಿದೆ: ’ರೈತ ಸಂಘವನ್ನು ಇನ್ನೊಬ್ಬರು ವಿಘಟನೆ ಮಾಡುವಂತಹ ರೀತಿಯಲ್ಲಿ ನೀವು ಕಟ್ಟಿದ್ದೀರ?’ ಅಂದೆ. ಅದಕ್ಕೊಂದು ಉದಾಹರಣೆಯನ್ನು ಕೊಟ್ಟು, ’ನಾವು ತಾಳಿ ಕಟ್ಟಿರುವ ಹೆಂಡತಿ ಇನ್ನೊಬ್ಬರಿಗೆ ಕಣ್ಣು ಹೊಡೆದು, ನಮ್ಮನ್ನು ಬಿಟ್ಟುಹೋಗುತ್ತಾಳೆ ಎಂದರೆ ಅದು ನಮ್ಮ ಮೇಲೆ ಇಲ್ಲದಿರುವ ವಿಶ್ವಾಸ ಎಂದು ಅರ್ಥವಾಗುತ್ತದೆ. ಆ ನಿಟ್ಟಿನಲ್ಲಿ, ಒಂದು ಸಂಘಟನಾತ್ಮಕ ಸೈದ್ಧಾಂತಿಕ ಹಿನ್ನೆಲೆಯಲ್ಲಿ ರೈತ ಸಂಘಟನೆಯನ್ನ ಕಟ್ಟಿದ್ದರೆ ಆ ಪರಿಸ್ಥಿತಿ ಬರುತ್ತಿರಲಿಲ್ಲವೆನೋ’ ಎಂದು ಮುಂದುವರೆದು ಹೇಳಿದೆ. ಆಗ ಅದಕ್ಕೆ ಉತ್ತರಿಸಿದ ನಮ್ಮ ಕಾರ್ಯದರ್ಶಿಗಳು ’ಮಂಡಲ ಪಂಚಾಯ್ತಿಗಳನ್ನು ತಂದು, ಕರ್ನಾಟಕ ರಾಜ್ಯ ರೈತ ಸಂಘದ ಶೇ.40 ಕಾರ್ಯಕರ್ತರನ್ನು ಸೆಳೆದು, ಅವರಿಗೆ ಮಂಡಲ ಪಂಚಾಯ್ತಿ ಸದಸ್ಯತ್ವ ಆಸೆಯನ್ನು ತೋರಿಸಿ, ರೈತ ಸಂಘಟನೆಯನ್ನ ರಾಜಕೀಯವಾಗಿ ನಾಶ ಮಾಡಿರುವಂತಹ ಸಂದರ್ಭವನ್ನ ಹುಟ್ಟುಹಾಕಿದ್ದನ್ನು’ ವಿವರಿಸಿದರು.

ಆದರೆ ನಾನು ನನ್ನ ಪ್ರಶ್ನೆಯನ್ನು ಮುಂದುವರಿಸಿ, ’ಹಾಗಾದರೆ ಗ್ರಾಮಿಣ ಪ್ರದೇಶಕ್ಕೆ ಸೂಕ್ತವಾದ, ಜನಪರವಾದ ರಾಜಕೀಯವನ್ನ ಆ ದಿನ ಸಂಘಟನೆ ಕೈಗೊಳ್ಳಬೇಕಿತ್ತಲ್ಲ’ ಎಂದೆ. ನಂಜುಂಡಸ್ವಾಮಿಯವರು ಮೌನವಾಗಿ ಇದನ್ನೆಲ್ಲ ಆಲಿಸುತ್ತಾ, ಕಾರ್ಯದರ್ಶಿಗಳೆ ’ವೀರಸಂಗಯ್ಯನವರ ಪ್ರಶ್ನೆಗಳಿಗೆ ಉತ್ತರ ಕೊಡಿ. ಅವರು ಹೇಳುವುದರಲ್ಲಿ ಅರ್ಥ ಇದೆ. ಒಂದು ಸಂಘಟನೆ ಸೈದ್ಧಾಂತಿಕವಾಗಿ ಗಟ್ಟಿಯಾಗಿ ಬೆಳೆದಾಗ, ಯಾರೂ ಸಂಘಟನೆಯನ್ನ ಅಲ್ಲಾಡಿಸುವುದಕ್ಕೆ ಆಗುವುದಿಲ್ಲ. ಆದರೆ ನಮ್ಮ ಸಂಘಟನೆಯಲ್ಲಿ ಸೈದ್ಧಾಂತಿಕ ತಿಳವಳಿಕೆ ಕಮ್ಮಿ ಇರುವುದೇ ಆ ರೀತಿ ಸಂಘಟನೆ ವಿಘಟನೆಯಾಗಲು ಕಾರಣ. ರಾಜಕೀಯ ಅಸ್ಥಿರತೆ ಮತ್ತು ರಾಜಕೀಯ ಭಾಗವಹಿಸುವಿಕೆ ಒಂದು ಸಂದರ್ಭದಲ್ಲಿ ಹೇಗೆ ಮುಖ್ಯವಾಗುತ್ತದೆ ಎಂಬ ಅವರ ಮಾತನ್ನ ಅರ್ಥಮಾಡಿಕೊಳ್ಳಬೇಕು’ ಎಂದು ಹೇಳಿ ಮಾತು ಮುಗಿಸಿದರು.

ನಂತರ ನಾವು ಧಾರವಾಡದ ಐಬಿಗೆ ಹೋದೆವು. ರಾಮಣ್ಣ ಎಂಬ ಪ್ರಾಮಾಣಿಕ ರೈತ ಸಂಘಟಕ ಅಲ್ಲಿ ನಮಗೆ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿದ್ದರು. ನಾವು ಮೂರ್ನಾಲ್ಕು ದಿನಗಳ ಕಾಲ ಅಲ್ಲಿ ಉಳಿದು, ಅಲ್ಲಿನ ಹಳ್ಳಿಗಳಲ್ಲಿ ಪ್ರಚಾರ ಮಾಡಿದೆವು. ರೈತ ಸಂಘಟನೆಗಾಗಿ ನಾವು ಕೆಲಸ ಮಾಡಿದೆವು. ಆಗ ದಿನಕ್ಕೆ ಮೂರರಿಂದ ನಾಲ್ಕು ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದೆವು. ಪ್ರತಿಯೊಂದು ಕಡೆ ನಂಜುಂಡಸ್ವಾಮಿಯವರು ನೀವು ಮಾತನಾಡಿ ಎಂದು ಹುರಿದುಂಬಿಸಿ ಅವಕಾಶವನ್ನು ಕೊಡುತ್ತಿದ್ದರು. ಅಲ್ಲಿನ ಹಳ್ಳಿಯ ರೈತರನ್ನು ಕುರಿತು, ಸಮಸ್ಯೆಗಳ ಕುರಿತು ಅನೇಕ ಅಂಶಗಳ ಬಗ್ಗೆ ನಾವು ಚರ್ಚಿಸಿದೆವು. ನಂಜುಂಡಸ್ವಾಮಿಯವರ ನಂತರ, ಗ್ರಾಮೀಣ ಪ್ರದೇಶದಲ್ಲಿ ತಳಮಟ್ಟಕ್ಕಿಳಿದು, ರೈತರನ್ನು ಸಂಘಟನೆಗೆ ಕರೆತರುವ ಕೆಲಸ ಮಾಡಿದ ವ್ಯಕ್ತಿತ್ವವನ್ನು ನೋಡಿದ್ದು ಅಪರೂಪ. ರಾಜ್ಯ ಮಟ್ಟದ ಮುಖಂಡರು ಹಳ್ಳಿಗಳಿಗೆ ಸಂಚರಿಸಿ ಅಡ್ಡಾಡಿ ಕೆಲಸ ಮಾಡುವ ಸ್ಥಿತಿ ಬಹಳ ಕ್ಷೀಣವಾಗಿದೆ. ತಮ್ಮ ಇಳಿವಯಸ್ಸಿನಲ್ಲಿಯೂ ಆ ಮಹಾನ್ ನಾಯಕ ನಮ್ಮ ಜೊತೆ ಅಷ್ಟೊಂದು ಹಳ್ಳಿಗಳಿಗೆ ತಿರುಗಿ, ಮತ್ತೆ ಸಂಘಟಿಸುವ ಅವರ ಛಲ ನೋಡಿ ನನಗೆ ಆಶ್ಚರ್ಯವಾಗಿತ್ತು. ಅವರ ಬದ್ಧತೆ ಮತ್ತು ಪ್ರಾಮಾಣಿಕತೆಗಳು ಅಷ್ಟೇ ಖುಷಿ ಕೊಟ್ಟಿದ್ದವು.
ಪ್ರೊ. ನಂಜುಂಡಸ್ವಾಮಿಯವರ ಜತೆಗಿನ ನನ್ನ ಅನುಭವದ ಕೆಲವು ನೆನಪುಗಳು ಇವು.

ಜೆ ಎಂ ವೀರಸಂಗಯ್ಯ

ಜೆ ಎಂ ವೀರಸಂಗಯ್ಯ
ಪ್ರೊ ಎಂ.ಡಿ.ಎನ್ ಒಡನಾಡಿಗಳಾಗಿದ್ದ ವೀರಸಂಗಯ್ಯನವರು ಚಳವಳಿಯ ಸಂಗಾತಿ. ಸದ್ಯ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿಗಳು. ಕರ್ನಾಟಕ ರಾಜ್ಯ ಕಿಡ್ನಿ ಕ್ಷೇಮಾಭಿವೃದ್ಧಿ ಸಂಸ್ಥೆಯ ರಾಜ್ಯಾಧ್ಯಕ್ಷರು.


ಇದನ್ನೂ ಓದಿ: ಕರ್ನಾಟಕವನ್ನಾವರಿಸಿದ ರೈತ ಚಳುವಳಿ; ಮತ್ತಷ್ಟು ಸಂಗತಿಗಳು ಮತ್ತು ನೆನಪುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉಪಚುನಾವಣೆ : ಬಿಹಾರದ ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್‌ಗೆ ಐತಿಹಾಸಿಕ ಗೆಲುವು; ಇನ್ನೆರಡು ಕ್ಷೇತ್ರಗಳು ಕಾಂಗ್ರೆಸ್-ಬಿಜೆಪಿ ಪಾಲು

ಬಿಹಾರದ ಬಂಕಿಪುರ, ಗುಜರಾತ್‌ನ ಮಂಜಲ್‌ಪುರ ಮತ್ತು ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರಗಳಿಗೆ ಜುಲೈ 30ರಂದು ನಡೆದ ಉಪಚುನಾವಣೆಯ ಫಲಿತಾಂಶ ಸೋಮವಾರ (ಆ.3) ಹೊರಬಿದ್ದಿದ್ದಿದೆ. ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದ್ದ, ಕಳೆದ 31 ವರ್ಷಗಳಿಂದ ಬಿಜೆಪಿಯೇ...

‘ಪಂಕ್ಚರ್-ತಲಾ ಬನಾನೆ ವಾಲೆಗಳೇ ಹೆಚ್ಚು’: ನೀಟ್ ಅಕ್ರಮಗಳ ವಿರುದ್ಧ ಪ್ರತಿಭಟಿಸಿದವರ ವಿರುದ್ಧ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕ ರಮೇಶ್ ಬಿಧು

ದೆಹಲಿಯ ಜಂತರ್ ಮಂತರ್‌ನಲ್ಲಿ ‘ನೀಟ್’ (NEET) ಪರೀಕ್ಷೆಯ ಅಕ್ರಮಗಳ ವಿರುದ್ಧ ಧ್ವನಿಯೆತ್ತಿದ ಯುವಜನತೆ ಮತ್ತು ವಿದ್ಯಾರ್ಥಿಗಳ ಹೋರಾಟವನ್ನು ದಮನ ಮಾಡಲು ಯತ್ನಿಸುತ್ತಿರುವ ಬಿಜೆಪಿ, ಈಗ ಅವರ ವಿರುದ್ಧವೇ ಅತ್ಯಂತ ಕೀಳುಮಟ್ಟದ ಇಸ್ಲಾಮೋಫೋಬಿಕ್ ಮತ್ತು...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಖುಲಾಸೆ : ಇಡೀ ವ್ಯವಸ್ಥೆಯೇ ಬ್ರಿಜ್ ಭೂಷಣ್‌ರನ್ನು ರಕ್ಷಿಸಿತು ಎಂದ ವಿನೇಶ್ ಫೋಗಟ್; ಮೇಲ್ಮನವಿ ಸಲ್ಲಿಸಲು ಮಹಿಳಾ ಕುಸ್ತಿಪಟುಗಳ ನಿರ್ಧಾರ

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ದೆಹಲಿಯ ರೋಸ್...

ಕರ್ನಾಟಕದಲ್ಲಿ SIR ಬಿಹಾರ-ಬಂಗಾಳಕ್ಕಿಂತ ಭೀಕರ: ಆಗಸ್ಟ್ 4 ರಂದು ಜನಪರ ಸಂಘಟನೆಗಳಿಂದ ಮಹತ್ವದ ಮಾಧ್ಯಮಗೋಷ್ಠಿ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆಯು ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗಿಂತಲೂ ಅತ್ಯಂತ ಭೀಕರ ರೂಪ ಪಡೆದುಕೊಳ್ಳುತ್ತಿದೆ ಎಂದು 'SIR ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ'...

“ನೈರ್ಮಲ್ಯ ಕಾರ್ಮಿಕರು ಕೆಲಸ ಬಿಡಲು ಸಾಧ್ಯವಿಲ್ಲ”: ದೇಶಾದ್ಯಂತ ಪ್ರತಿಭಟನೆಗೆ DASAM ಬೆಂಬಲ, ಉದ್ಯೋಗ ಖಾಯಂಗೊಳಿಸಲು ತೀವ್ರ ಒತ್ತಾಯ

ನವದೆಹಲಿ: ಉದ್ಯೋಗ ಕ್ರಮಬದ್ಧಗೊಳಿಸುವಿಕೆ (ಖಾಯಂಗೊಳಿಸುವುದು), ನ್ಯಾಯಯುತ ವೇತನ, ಸಾಮಾಜಿಕ ಭದ್ರತೆ, ಸುರಕ್ಷಿತ ಕೆಲಸದ ವಾತಾವರಣ ಮತ್ತು ಕೆಲಸದ ಸ್ಥಳದಲ್ಲಿ ಮಾನವ ಘನತೆಯನ್ನು ಎತ್ತಿಹಿಡಿಯುವಂತೆ ಒತ್ತಾಯಿಸಿ ದೇಶದ ನಾನಾ ಭಾಗಗಳಲ್ಲಿ ನೈರ್ಮಲ್ಯ ಕಾರ್ಮಿಕರು ನಡೆಸುತ್ತಿರುವ...

ದ್ವೇಷ ಭಾಷಣ ಪ್ರಕರಣ: ಬಿಜೆಪಿ ನಾಯಕರಾದ ಅನುರಾಗ್‌ ಠಾಕೂರ್‌, ಪರ್ವೇಶ್‌ ವರ್ಮಾಗೆ ಕ್ಲೀನ್ ಚೀಟ್: ಪುನರ್ ಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ: 2020ರ ದೆಹಲಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಉದ್ರೇಕಕಾರಿ ಹಾಗೂ ದ್ವೇಷಪೂರಿತ ಭಾಷಣ ಮಾಡಿದ ಆರೋಪ ಹೊತ್ತಿದ್ದ ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್ ಮತ್ತು ಪರ್ವೇಶ್‌...

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ನೂತನ ಸಚಿವರ ಪಟ್ಟಿಗೆ ವರಿಷ್ಠರ ಅನುಮೋದನೆ: ಇಂದು ಸಂಜೆ 4:05 ಕ್ಕೆ ಪ್ರಮಾಣ ವಚನ

ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ನೂತನ ಸಚಿವರ ಪಟ್ಟಿಗೆ ಅಧಿಕೃತ ಅನುಮೋದನೆ ನೀಡಿದೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ತೀವ್ರ...

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ : WFI ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್‌ ಸಿಂಗ್‌ ಖುಲಾಸೆ

ದೆಹಲಿ ನ್ಯಾಯಾಲಯವು ಸೋಮವಾರ (ಆ.3) ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದಿಂದ...

ಪ್ರಶ್ನೆ ಪತ್ರಿಕೆ ಸೋರಿಕೆ : ಫಾಸ್ಟ್‌ ಟ್ರ್ಯಾಕ್ ಕೋರ್ಟ್ ನ್ಯಾಯಾಧೀಶೆ ಒಂದೇ ವಾರದಲ್ಲಿ ವರ್ಗಾವಣೆ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾದ ತ್ವರಿತಗತಿ (ಫಾಸ್ಟ್‌ ಟ್ರ್ಯಾಕ್) ನ್ಯಾಯಾಲಯದ ನೇತೃತ್ವ ವಹಿಸಲು ನೇಮಕಗೊಂಡ ಕೇವಲ ಒಂದು ವಾರದ ನಂತರ, ದೆಹಲಿ ಹೈಕೋರ್ಟ್ ಶನಿವಾರ (ಆಗಸ್ಟ್ 1) ವಿಶೇಷ ನ್ಯಾಯಾಧೀಶರಾದ...

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...