ವಿಶ್ವವಾಣಿ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ್ ಭಟ್ ತಮ್ಮ ಅಂಕಣ ಬರಹದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮುರವರ ಬಣ್ಣವನ್ನು ಅವಮಾನಕರ ರೀತಿಯಲ್ಲಿ ಚಿತ್ರಿಸಿ ಜನಾಂಗೀಯ ನಿಂದನೆಗೈದಿದ್ದಾರೆ.
ವಿಶ್ವವಾಣಿ ಪತ್ರಿಕೆಯ ಅಕ್ಟೋಬರ್ 06ರ ನೂರೆಂಟು ವಿಶ್ವ ಎಂಬ ಅಂಕಣದಲ್ಲಿ ನದಿಯ ಹೆಸರಿಟ್ಟುಕೊಂಡು ನೀರಿಗಾಗಿ ನರಳುವ ಜೋರ್ಡಾನ್! ಎಂಬ ಬರಹದಲ್ಲಿ “ಸುಟ್ಟು ಕರಕಲಾದ ಕಾಗೆ! ಥೇಟು ‘ಮುರ್ಮು’ ಅವತಾರ!” ಎಂದು ಬರೆಯುವ ಮೂಲಕ ರಾಷ್ಟ್ರಪತಿಯವರ ಮೈಬಣ್ಣವನ್ನು ಅವಹೇಳನ ಮಾಡಿದ್ದಾರೆ ಎಂದು ಪೀಪಲ್ ಮೀಡಿಯಾ ವರದಿ ಮಾಡಿದೆ.
ವಿಶ್ವೇಶ್ವರ ಭಟ್ ತಮ್ಮ ಅಂಕಣದಲ್ಲಿ ಜೋರ್ಡಾನ್ ದೇಶದ ಬಿಸಿಲಿನ ಝಳವನ್ನು ವರ್ಣಿಸುವಾಗ “ಅಪ್ಪಟ ಬೀನ್ಕಿ ಕೆಂಡ! ಅರ್ಧಗಂಟೆ ಆ ಮರುಭೂಮಿಯಲ್ಲಿ ನಿಂತರೆ ಇಡೀ ಶರೀರವೆಲ್ಲ ಸುಟ್ಟು ಕರಕಲಾದ ಕಾಗೆ! ಥೇಟು ‘ಮುರ್ಮು’ ಅವತಾರ! ಕಣ್ಮುಚ್ಚಿದರೂ ಜೋಗದ ಜಲಪಾತದಂತೆ ಸುರಿಯುವ ನಿಗಿನಿಗಿ ಬಿಸಿಲ ಧಾರೆ” ಎಂದು ಬರೆದಿದ್ದಾರೆ. ಆ ಮೂಲಕ ನಮ್ಮ ರಾಷ್ಟ್ರಪತಿಯವರ ಬಣ್ಣವನ್ನು ಅಪಹಾಸ್ಯ ಮಾಡಿದ್ದಾರೆ.
ರಾಷ್ಟ್ರಪತಿ ಸ್ಥಾನಕ್ಕೆ ಮುರ್ಮುರವರ ಹೆಸರು ಘೋಷಣೆಗೊಂಡ ದಿನದಿಂದಲೂ ಅವರ ಹೆಸರಿನ ಕಾರಣಕ್ಕೆ ಹಲವರು ಅವಹೇಳನ ಮಾಡಿ ಟೀಕೆಗೆ ಗುರಿಯಾಗಿದ್ದರು. ದ್ರೌಪದಿ ಹೆಸರಿದ್ದ ಕಾರಣಕ್ಕೆ ಗೇಲಿ ಮಾಡಲಾಗಿತ್ತು. ಕನ್ನಡ ಪ್ರಭ ಪತ್ರಿಕೆ ‘ದ್ರೌಪದಿ ಮಹಾಭಾರತದ ರಾಷ್ಟ್ರಪತಿ’ ಎಂದು ಕರೆದಿತ್ತು. ಅಲ್ಲದೆ ಪ್ರತಿಭಾ ಪಾಟೀಲ್ ನಂತರ ಮೊದಲ ಮಹಿಳಾ ರಾಷ್ಟ್ರಪತಿ ಎಂದು ಬರೆದಿತ್ತು. ಇತ್ತೀಚೆಗೆ ಬಿಜೆಪಿ ಶಾಸಕ ಕೂಡ ಮೊದಲ ಮಹಿಳಾ ರಾಷ್ಟ್ರಪತಿ ಎಂದು ಬ್ಯಾನರ್ನಲ್ಲಿ ಬರೆಸಿದ್ದರು.
My column today in Vishwavani pic.twitter.com/v2D6Rgpujh
— Vishweshwar Bhat (@VishweshwarBhat) October 6, 2022
ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಮಾತಿನ ನಡುವೆ ರಾಷ್ಟ್ರಪತ್ನಿ ಎಂದು ಹೇಳಿದ್ದಕ್ಕಾಗಿ ಬಿಜೆಪಿ ಸಂಸತ್ತಿನ ಕಲಾಪ ನಡೆಯದಂತೆ 2-3 ದಿನ ಭಾರೀ ಪ್ರತಿಭಟನೆ ನಡೆಸಿತ್ತು. ಚೌಧರಿ ಬಾಯ್ತಪ್ಪಿನಿಂದ ಆದ ಪ್ರಮಾದ ಎಂದು ಕ್ಷಮೆ ಕೇಳಿದರೂ ಸಹ ಬಿಜೆಪಿ ಪ್ರತಿಭಟನೆ ನಿಂತಿರಲಿಲ್ಲ. ಈಗ ಪತ್ರಕರ್ತ ವಿಶ್ವೇಶ್ವರ ಭಟ್ ರಾಷ್ಟ್ರಪತಿ ದ್ರೌಪದಿ ಮುರ್ಮುರವರ ವಿರುದ್ಧ ಜನಾಂಗೀಯ ನಿಂದನೆ ನಡೆಸಿದ್ದಾರೆ. ಇದಕ್ಕೆ ಬಿಜೆಪಿ ಹೇಗೆ ಪ್ರತಿಕ್ರಿಯಿಸುತ್ತದೆ ಕಾದು ನೋಡಬೇಕಿದೆ.
ಇದನ್ನೂ ಓದಿ; ಬುಡಕಟ್ಟು ಮಹಿಳೆ ಅತ್ಯುನ್ನತ ಸ್ಥಾನಕ್ಕೇರಿರುವುದು ಪ್ರಜಾಪ್ರಭುತ್ವದ ಶಕ್ತಿ: ನೂತನ ರಾಷ್ಟ್ರಪತಿ ಮುರ್ಮು ಮೊದಲ ಭಾಷಣ ಹೀಗಿತ್ತು…
ಮನುವಾದಿ ವಿಶ್ವೇಶ್ವರಬಟ್ಟನಿಗೆ ಆದಿವಾಸಿ ಮಹಿಳೆಯೊಬ್ಬರು ಈ ದೇಶದ ರಾಷ್ಟ್ರಪತಿ ಆಗಿರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಇಂತಹ ಮಾತುಗಳು ಬರುತ್ತಿವೆ.
ಭಾರತ ದೇಶದ ಪ್ರಪ್ರಥಮ ಪ್ರಜೆ…
ಭಾರತ ದೇಶದ ಸೇನೆಯ ಮುಖ್ಯಸ್ಥರು…
ಭಾರತ ದೇಶದ ಸಂವಿಧಾನಿಕ ಮುಖ್ಯಸ್ಥರು
ಭಾರತ ದೇಶದ ಅತ್ಯುನ್ನತ ಹುದ್ದೆ..
ಅಲಂಕರಿಸಿದ ಗೌರವಾನ್ವಿತ ರಾಷ್ಟ್ರಪತಿಗಳು ಆದ
ದ್ರೌಪದಿ ಮುರ್ಮುರವರು ನಮ್ಮ ಭಾರತೀಯರ ಹೆಮ್ಮೆ. ಮಾನ್ಯರ ಬಗ್ಗೆ ಈ ರೀತಿಯ ಕ್ಷುಲ್ಲಕ; ಕೀಳು ಮನಸ್ಥಿತಿ ಹೊಂದಿರುವ ಭಟ್ ರವರಿಗೆ ದಿಕ್ಕಾರ…