ರಾಜಸ್ಥಾನದ ಜಲೋರ್ ಜಿಲ್ಲೆಯಲ್ಲಿ 9 ವರ್ಷದ ದಲಿತ ಬಾಲಕನನ್ನು ಶಿಕ್ಷಕನೊಬ್ಬ ಥಳಿಸಿ ಕೊಂದಿರುವ ಘಟನೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸ್ಥಳೀಯ ಶಾಸಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಆರೋಪಿ ಶಿಕ್ಷಕನ ಪರ ನಡೆದ ಪ್ರತಿಭಟನೆಯಲ್ಲಿ ಜಲೋರ್ನ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಷ್ಠಾಧಿಕಾರಿಗಳು ಭಾಗವಹಿಸಿ ಭಾಷಣಕಾರನ ಮಾತುಗಳಿಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಭೀಮ್ ಆರ್ಮಿ ಸಂಘಟನೆಯ ಚಂದ್ರಶೇಖರ್ ಆಜಾದ್ ಈ ಕುರಿತು ವಿಡಿಯೋ ಒಂದನ್ನು ಟ್ವೀಟ್ ಮಾಡಿ, “ಹತ್ಯೆಯಾದ ದಲಿತ ವಿದ್ಯಾರ್ಥಿ ಇಂದ್ರನ ಹಂತಕರ ಪರವಾಗಿ ಬೆದರಿಕೆ ಹಾಕುವವರನ್ನು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಷ್ಠಾಧಿಕಾರಿಗಳು ಶ್ಲಾಘಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ತನಿಖೆ ಹೇಗೆ ನಡೆಯಬಹುದು? ನಮ್ಮ ಸಹೋದರನಿಗೆ ನ್ಯಾಯ ಸಿಗುವುದೇ?” ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರವರು ಆರೋಪಿಗಳ ಪರವಾಗಿ ನಿಂತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರೆಯೇ? ಎಂದು ಸಹ ಅಜಾದ್ ಪ್ರಶ್ನಿಸಿದ್ದಾರೆ.
जब प्रशासन और पुलिस इन्द्र के हत्यारोपी के पक्ष में धमकी देने वालों की तालियां बजाके उनका हौसलावज़ाई करेंगे तो आप अंदाजा लगा सकते हैं कि कैसी जाँच होगी और हमारे भाई को न्याय किस तरह मिलेगा?
अशोक गहलोत जी जो अधिकारी आरोपी के पक्ष में खड़े हैं क्या उनके खिलाफ सख्त कार्यवाही होगी? pic.twitter.com/nXnAE7tTcE
— Chandra Shekhar Aazad (@BhimArmyChief) August 18, 2022
“ಇಂದು ನಾನು ಇಂದ್ರಕುಮಾರ್ ಕುಟುಂಬದೊಂದಿಗೆ ದೂರವಾಣಿ ಮೂಲಕ ಮಾತನಾಡಿ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದೇನೆ. 144 ಸೆಕ್ಷನ್ ಇದ್ದರೂ ಪಂಚಾಯಿತಿಗಳು ಆರೋಪಿಗಳ ಪರವಾಗಿರುವುದರಿಂದ ಆಡಳಿತದ ಮೇಲೆ ಒತ್ತಡ ಹೇರಲಾಗುತ್ತಿದ್ದು, ಕುಟುಂಬದವರು ಭಯಭೀತರಾಗಿದ್ದಾರೆ. ಹಾಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸುತ್ತೇವೆ” ಎಂದು ಆಜಾದ್ ಟ್ವೀಟ್ ಮಾಡಿದ್ದಾರೆ.
राजस्थान के जालौर में दलित छात्र इंद्र की मौत में अभियुक्त टीचर के पक्ष में हुई सर्व समाज की जनसभा में जालौर जिला कलेक्टर व एसपी ताली बजाते हुए दिखे। pic.twitter.com/oe4EOya8hj
— Dalit Times | दलित टाइम्स (@DalitTime) August 18, 2022
ಇನ್ನು ದಲಿತ ಕುಟುಂಬಕ್ಕೆ ಆ ಗ್ರಾಮದಲ್ಲಿ ವಾಸಿಸುವುದು ಸುರಕ್ಷಿತವಲ್ಲ. ಪಂಚಾಯತ್ಗಳ ಗುಂಪು ನಮ್ಮ ಕುಟುಂಬಕ್ಕೆ ಯಾವಾಗ ಬೇಕಾದರೂ ಹಾನಿ ಮಾಡಬಹುದು. ಆದ್ದರಿಂದ ಕುಟುಂಬಕ್ಕೆ ನಗರದಲ್ಲಿ ಮನೆ ಹಾಗೂ ಕುಟುಂಬಕ್ಕೆ ಭದ್ರತೆ ಒದಗಿಸಬೇಕು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕುಟುಂಬದ ಸುರಕ್ಷತೆಯನ್ನು ಖಚಿತಪಡಿಸಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ; ಉತ್ತರ ಪ್ರದೇಶ: 250 ರೂ. ಶಾಲಾ ಶುಲ್ಕ ಕಟ್ಟಿಲ್ಲವೆಂದು 3ನೇ ತರಗತಿಯ ದಲಿತ ವಿದ್ಯಾರ್ಥಿಯನ್ನು ಹೊಡೆದು ಕೊಂದ ಶಿಕ್ಷಕ
ಈ ಎಸ್.ಪಿ. ಹಾಗೂ ಡಿ.ಸಿ.ಯನ್ನು ಕೂಡಲೇ ಅಮಾನತು ಮಾಡಬೇಕು.