Homeಚಳವಳಿಅಂದಿನ ಸಾದತ್‌ ಹಸನ್‌ ಮಂಟೋ ಮತ್ತು ಇಂದಿನ ನಾವು...!! : ಇಸ್ಮತ್ ಪಜೀರ್

ಅಂದಿನ ಸಾದತ್‌ ಹಸನ್‌ ಮಂಟೋ ಮತ್ತು ಇಂದಿನ ನಾವು…!! : ಇಸ್ಮತ್ ಪಜೀರ್

ಮಂಟೋನಿಗೆ ಮನುಷ್ಯನ ಧರ್ಮ ಯಾವತ್ತೂ ಮಹತ್ವದ್ದಾಗಿರಲಿಲ್ಲ. ಆತನ ಕಾಳಜಿ ಕೇವಲ ಮನುಷ್ಯತ್ವ ಮಾತ್ರವಾಗಿತ್ತು.

- Advertisement -
- Advertisement -

ಎನ್ನಾರ್ಸಿಯ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತುಂಗಕ್ಕೇರಿದ್ದಾಗ ನಾನು ಫೇಸ್‌ಬುಕ್‌ನ ನನ್ನ ಅನೇಕ ಹಿಂದೂ ಗೆಳೆಯರ ಪ್ರೊಫೈಲ್ ಮತ್ತು ಕೆಲವು ಸಜ್ಜನ ಹಿಂದೂಗಳ ಟೈಮ್‌ಲೈನ್‌ಗೆ ಆಗಾಗ ಇಣುಕುತ್ತಿದ್ದೆ. ನನಗೆ ನಿರಾಶೆಯೇ ಕಾದಿತ್ತು. ಮತಿಭ್ರಮಣೆಯಾಗುವುದೊಂದೇ ಉಳಿದಿತ್ತು.‌ ಆ ಮಟ್ಟಿಗೆ ನಾನು ಅತಿಯಾಗಿ ಪ್ರೀತಿಸುತ್ತಿದ್ದ ನನ್ನ ಬದುಕಿನ ನೋವು, ನಲಿವುಗಳನ್ನು ಹಂಚಿಕೊಳ್ಳುತ್ತಿದ್ದ ಮತ್ತು ಮನೆಯ ಸಂಕಷ್ಟಗಳನ್ನೆಲ್ಲಾ ನನ್ನಲ್ಲಿ ತೋಡಿಕೊಳುತ್ತಿದ್ದ ಗೆಳೆಯರಲ್ಲಿ ಬಹುತೇಕರು ಎನ್ನಾರ್ಸಿಯ ಪರವಿದ್ದರು ಮಾತ್ರವಲ್ಲಾ “ಇದು ಹಿಂದೂ ರಾಷ್ಟ್ರ, ಇಲ್ಲಿ ಹಿಂದೂಗಳಿಗಲ್ಲದೇ ಬೇರ್ಯಾರಿಗೂ ಬದುಕುವ ಹಕ್ಕಿಲ್ಲ”ಎಂಬರ್ಥದಲ್ಲಿ ಬರೆದು ಹಾಕಿದ್ದರು.

ಅವರಲ್ಲಿ ಎಂತವರೆಲ್ಲಾ ಇದ್ದರೆಂದರೆ “ನನ್ನಿಂದ ವೈಯಕ್ತಿಕವಾಗಿ ಸಹಾಯ ಪಡೆದವರು, ನನ್ನದೇ ರಕ್ತ ಪಡೆದು ಜೀವವುಳಿಸಿಕೊಂಡವ, ಸಹೋದರಿಯ ಮದುವೆಗೆ ನನ್ನವಳ ಒಡವೆಗಳನ್ನು ಕಡಪಡಕೊಂಡವರು…. ಹೀಗೆ ಪಟ್ಟಿ ಮುಂದುವರಿಯುತ್ತದೆ. ಆದರೆ ನನ್ನ ಆ ಗೆಳೆಯರು ಯಾರೂ ಆರೆಸ್ಸೆಸ್ ಅಥವಾ ಸಂಘಪರಿವಾರದವರೂ ಅಲ್ಲ. ನನಗೀಗಲೂ ಅವರು ನನ್ನನ್ನು ದ್ವೇಷಿಸುತ್ತಾರೆಂದೆನಿಸುವುದಿಲ್ಲ.. ಮತ್ತು ಆಂತರ್ಯದಲ್ಲಿ ಅವರಿಗೆ ನಾನು ಪಾಲಿಸುವ ಧರ್ಮದ ಬಗ್ಗೆ ದ್ವೇಷವೂ ಇಲ್ಲ. ಹಾಗಾದರೆ ಅವರು ಯಾಕೆ ಹಾಗೆಲ್ಲಾ ಬರೆದುಕೊಂಡಿದ್ದಾರೆ..? ಇದನ್ನೇ ಸಮೂಹ ಸನ್ನಿಯೆನ್ನುವುದು.

ಅವರು ಏಕಾಂಗಿಯಾಗಿದ್ದಾಗ ಅಥವಾ ನನ್ನ ಜೊತೆಗಿರುವಾಗ ಹಾಗೆ ಎಂದೂ ಯೋಚಿಸಲಾರರು ಎಂದೇ ನನ್ನ ದೃಢವಾದ ನಂಬಿಕೆ. ಅವರಿಂದ ಸಮೂಹ ಸನ್ನಿಯ ಮನೋಸ್ಥಿತಿ ಹಾಗೆ ಬರೆಯಿಸಿತ್ತು ಎಂದೇ ನಾನು ನಂಬಿರುವೆ ಮತ್ತು ಮುಂದೆಯೂ ನಂಬುತ್ತೇನೆ. ನನಗೆ ಅವರ ಬಗ್ಗೆ ಕಿಂಚಿತ್ತೂ ದ್ವೇಷವಿಲ್ಲ. ಅವರಿಗೆ ನಾನಿಲ್ಲದ ಅವರ ಬಗ್ಗೆ ಯೋಚಿಸಲೂ ಸಾಧ್ಯವಾಗದು.

ಅಂತಹ ಕೆಲವು ಗೆಳೆಯರ ಬಳಿ ನಾನು ನೇರವಾಗಿ ಮಾತನಾಡುತ್ತ ಕೇಳಿದೆ.. “ಏನು ಮಾರಾಯ.. ನಾವು ಇಲ್ಲಿರುವುದು ನಿಮಗೆ ಅಷ್ಟೂ ಇಷ್ಟವಿಲ್ಲವೇ…?
ಯಾರು ಹಾಗೆಂದರು ಮಾರಾಯ..?
ಯಾರು ಹೇಳುವುದ್ಯಾಕೆ… ನಾನೇ ನೋಡಿದೆನಲ್ಲಾ….?
ಅದುವಾ….. ಅದು ನಿನ್ನಂತವರ ಬಗೆಗಲ್ಲ ಮಾರಾಯ…
ನಾನು ಮುಸ್ಲಿಮನೇ ಮಾರಾಯ..
‌ನಾನೂ ನಮಾಜು ಮಾಡುತ್ತೇನೆ, ನಾನೂ ದನದ ಮಾಂಸ ತಿನ್ನುತ್ತೇನೆ.

ಅದೇನು ನಮಗೆ ಗೊತ್ತಿಲ್ಲದ್ದಾ…?
ಮತ್ಯಾಕೆ ಹಾಗೆ ಬರೆದಿರಿ..?
ಏ ಅದೆಲ್ಲಾ ಬಿಡು ಮಾರಾಯ.. ನಿನ್ನನ್ನು ನಾವು ದ್ವೇಷಿಸಲಾಗುತ್ತಾ…?

ಸಾದತ್ ಹಸನ್ ಮಂಟೋ ಎಂಬ ಜಗತ್ಪ್ರಸಿದ್ದ ಮತ್ತು ಅತ್ಯಂತಿಕವಾದ ವಿವಾದಾತ್ಮಕ ಉರ್ದು ಸಣ್ಣ ಕತೆಗಾರನೂ ಇಂತಹದ್ದನ್ನೇ ಅನುಭವಿಸಿದ್ದ.‌ ದೇಶ ವಿಭಜನೆಯ ಕಾಲದ ಅತಿಮಾನುಷ ಕ್ರೌರ್ಯಗಳನ್ನು ಕಂಡು ಮಾನಸಿಕ ಸ್ಥಿಮಿತವನ್ನೇ ಕಳಕೊಂಡಿದ್ದ ಮಂಟೋ ವಿಭಜನೆಯ ಕಾಲದ ಕ್ರೌರ್ಯವನ್ನು, ಹಿಂಸೆಯನ್ನು ಬರೆದಷ್ಟು ಮನೋಜ್ಞವಾಗಿ ಇನ್ಯಾವ ಲೇಖಕನೂ ಬರೆದಿಲ್ಲ. ಮಂಟೋನ ಮಾನವೀಯ ಅಂತಃಕರಣ ಆ ಕಾಲದ ಇತರೆಲ್ಲಾ ಲೇಖಕರಿಗಿಂತಲೂ‌ ಆತನನ್ನು ಭಿನ್ನವಾಗಿ ನೋಡುವಂತೆ ಮಾಡುತ್ತದೆ. ಆತ ಜನರನ್ನು ಹಿಂದೂ ಮುಸಲ್ಮಾನರೆಂದು ಪ್ರತ್ಯೇಕಿಸಿ ನೋಡಲಿಲ್ಲ.‌ ಅದಕ್ಕೆ ಆತ ಬರೆದ ಸುಮಾರು ಇನ್ನೂರೈವತ್ತಕ್ಕೂ ಮಿಕ್ಕಿದ ಸಣ್ಣ ಕತೆಗಳಲ್ಲಿ ನೂರರಷ್ಟು ಕತೆಗಳು ಸಾಕ್ಷ್ಯವೊದಗಿಸುತ್ತದೆ. ಆತನ ಕೇವಲ ಎರಡು ಗೆರೆಯ ಕತೆ “ಮಿಸ್ಟೇಕ್” ಒಂದನ್ನೇ ನೋಡಿದರೆ ಸಾಕು.

“ಹೊಟ್ಟೆಯನ್ನು ಸೀಳಿದ ಚಾಕು ಸೀಳುತ್ತಾ ಬಂದು ಪೈಜಾಮದ ಲಾಡಿ ಬಿಚ್ಚಿಸಿತು…
ಅಯ್ಯೋ ಎಂತಹಾ ‘ಮಿಸ್ಟೇಕ್’ ಮಾಡಿ ಬಿಟ್ಟೆನೆಲ್ಲಾ”

ಈ ಕತೆಯನ್ನು ಇನ್ನೊಮ್ಮೆ ಓದಿ. ಒಂದು ವೇಳೆ ಸತ್ತವನು ಮುಸ್ಲಿಮನಾದರೆ ಕೊಂದವನೂ ಮುಸ್ಲಿಂ. ಒಂದು ವೇಳೆ ಸತ್ತವನು ಹಿಂದೂವಾದರೆ ಕೊಂದವನೂ ಹಿಂದೂ.

ಕೊಲೆಗಾರ ಸತ್ತವನ ಜನನಾಂಗ ನೋಡಿ ನಿರ್ಧರಿಸುತ್ತಾನೆ. ಇದರಲ್ಲಿ ಮಂಟೋನ ತಂತ್ರಗಾರಿಕೆಯೂ ಅಡಗಿದೆ. ಅವನೊಳಗಿನ ಅತ್ಯಂತ ಆರ್ದ್ರ ಹೃದಯದೊಳಗಿನ ತಲ್ಲಣವೂ ಇದೆ. ಮಂಟೋನಿಗೆ ಮನುಷ್ಯನ ಧರ್ಮ ಯಾವತ್ತೂ ಮಹತ್ವದ್ದಾಗಿರಲಿಲ್ಲ. ಆತನ ಕಾಳಜಿ ಕೇವಲ ಮನುಷ್ಯತ್ವ ಮಾತ್ರವಾಗಿತ್ತು. ಈ ಕತೆಯನ್ನು ಬರೆದಾಗ ಮಂಟೋ ಇನ್ನೂ ಭಾರತದಲ್ಲೇ ಇದ್ದ.

ಕೆಲದಿನಗಳ ಹಿಂದಷ್ಟೇ ಓರಗೆಯವರಾಗಿದ್ದವರು, ಗೆಳೆಯರಾಗಿದ್ದವರು ಇಂದು ಪರಸ್ಪರರನ್ನು ಕೊಲ್ಲುವ ಮಟ್ಟಿಗೆ ಅತಿಮಾನುಷ ಕ್ರೌರ್ಯವನ್ನು ಒಪ್ಪಿಕೊಂಡದ್ದಾದರೂ ಹೇಗೆ ಎಂದು ಯೋಚಿಸುತ್ತಲೇ ಆತ ಮಾನಸಿಕವಾಗಿ ಜರ್ಜರಿತನಾಗಿ ಬಿಟ್ಟಿದ್ದ.

ಹಿಂದೂ ಮುಸಲ್ಮಾನ ಸೋದರರ ಯುದ್ಧ ಉಚ್ಚ್ರಾಯ ಸ್ಥಿತಿಗೆ ತಲುಪಿದ್ದ ಆ ದಿನಗಳಲ್ಲಿ ಮಂಟೋ ಮತ್ತು ಆತನ ಆತ್ಮೀಯ ಗೆಳೆಯನಾದ ಅಂದಿನ ಪ್ರಸಿದ್ಧ ಹಿಂದಿ ಸಿನಿಮಾ ನಟ ಶ್ಯಾಮ್‌ ಜೊತೆಗಿದ್ದಾಗ ಪಾಕಿಸ್ತಾನದ ರಾವಲ್ಪಿಂಡಿಯಿಂದ ಜೀವದ ಹಂಗು ತೊರೆದು ಬಂದಿದ್ದ ಸಿಖ್ಖ್ ಪರಿವಾರ ಶ್ಯಾಮ್‌ ಜೊತೆ ಮಾತಿಗೆ ನಿಂತಿತು. ಆ ಪರಿವಾರದ ಮುಖ್ಯಸ್ಥ ತಾನು ಕಂಡಿದ್ದ ಭೀಕರ ಹಿಂಸಾಚಾರದ ಕತೆಗಳನ್ನು ಇವರ ಮುಂದೆ ನಿರೂಪಿಸುತ್ತಿದ್ದಾಗ ಅದನ್ನು ಕೇಳುತ್ತಾ ಶ್ಯಾಮ್ ರೋಷದಿಂದ ಕುದಿಯುತ್ತಿದ್ದ. ಅತ್ಯಂತ ಸೂಕ್ಷ್ಮ ಮನಸ್ಸಿನ ಮಂಟೋ ತನ್ನ ಪ್ರಾಣ ಸ್ನೇಹಿತ ಶ್ಯಾಮ್‌ನ ಮುಖದಲ್ಲಾದ ಏರಿಳಿತಗಳನ್ನೆಲ್ಲಾ ಗಮನಿಸಿದ್ದ. ಅವರು ಅಲ್ಲಿಂದ ಹೊರಟು ಹೋದ ಎಷ್ಟೋ ಹೊತ್ತಿನ ಬಳಿಕ ಮಂಟೋ “ನಾನೂ ಒಬ್ಬ ಮುಸಲ್ಮಾನ, ನಿನಗೆ ನನ್ನನ್ನು ಕೊಲ್ಲಬೇಕೆಂದೆನಿಸುವುದಿಲ್ಲವೇ…?”

ಶ್ಯಾಮ್ ತುಂಬಾ ಗಂಭೀರವಾಗಿ “ಇಲ್ಲ ಈಗ ಕೊಲ್ಲಲಾರೆ, ಆ ಸಿಖ್ಖನ ಬಾಯಿಯಿಂದ ಮುಸಲ್ಮಾನರು ಹಿಂದೂಗಳ ಮೇಲೆ ದೌರ್ಜನ್ಯವೆಸಗುತ್ತಿದ್ದ ಕತೆಯನ್ನು ಕೇಳುತ್ತಿದ್ದಾಗ ನಿನ್ನನ್ನು ನಾನು ಕೊಲ್ಲಬಹುದಿತ್ತು”. ತನ್ನ ಪ್ರಾಣ ಸ್ನೇಹಿತ ಶ್ಯಾಮ್‌ನ ಬಾಯಿಯಿಂದ ಇಂತಹ ಮಾತುಗಳನ್ನು ಕೇಳಿಸಿದ ಮಂಟೋನಿಗೆ ಹೃದಯಾಘಾತವಾದಂತೆನಿಸುತ್ತದೆ. ಮುಂದೆ ಮಂಟೋ ಭಾರತ ತೊರೆಯಲು ಇದೇ ಕಾರಣವಾಗುತ್ತದೆ.

ಒಮ್ಮೆ ಇದ್ದಕ್ಕಿದ್ದಂತೆ ಮಂಟೋ ದೇಶ ತೊರೆಯುವ ವಿಚಾರ ಹೇಳಿದಾಗ ಶ್ಯಾಮ್ ಮತ್ತು ಮಂಟೋನ ಇನ್ನೋರ್ವ ಆತ್ಮೀಯ ಗೆಳೆಯನೂ ಆದ ಇನ್ನೋರ್ವ ಪ್ರಸಿದ್ಧ ನಟನೂ ಆದ ಅಶೋಕ್ ಕುಮಾರ್ ದಂಗಾಗಿಬಿಟ್ಟರು. ಮಂಟೋನ ಈ ದಿಡೀರ್ ತೀರ್ಮಾನಕ್ಕೆ ಕಾರಣವೇನೆಂದು ಅವರು ಕೇಳಿದಾಗ ಮಂಟೋ ತನ್ನ “ಪುರುಷಾರ್ಥ” ಕತೆಯನ್ನು ಓದುವಂತೆ ತಿಳಿಸುತ್ತಾನೆ. ಆತನ ಪುರುಷಾರ್ಥ ಕತೆ ಬೇರೇನೂ ಅಲ್ಲ.. ಅದು ಪಾಕಿಸ್ತಾನದಿಂದ ಜೀವದ ಹಂಗು ತೊರೆದು ಓಡಿ ಬಂದ ಸಿಖ್ ಪರಿವಾರ ಹೇಳಿದ ಕತೆ ಮತ್ತು ಶ್ಯಾಮ್ -ಮಂಟೋನ ನಡುವೆ ನಡೆದ ಮಾತುಕತೆಯೇ ಆಗಿದೆ. ಕಥಾ ನಾಯಕ ಮುಮ್ತಾಝ್ ಮತ್ತು ಆತನ ಸ್ನೇಹಿತ ಜುಗಲ್ ಮಧ್ಯೆ ನಡೆಯುವ ಮಾತುಕತೆಯಲ್ಲಿ “ಮಂಟೋ-ಶ್ಯಾಮ್‌ಗೆ ಕೇಳಿದ ಪ್ರಶ್ನೆಯನ್ನೂ, ಶ್ಯಾಮ್ ನೀಡಿದ ಉತ್ತರವನ್ನೂ” ಮಂಟೋ ಅತ್ಯಂತ ತಂತ್ರಪೂರ್ವಕವಾಗಿ ತಂದು ಕತೆ ಹೆಣೆದಿದ್ದ.

ವಾಸ್ತವದಲ್ಲಿ ಇಂತಹ ಮಾತುಕತೆಯಿಂದಾಗಿ ಮಂಟೋ ದೇಶ ತೊರೆಯಬಹುದೆಂಬ ಸಣ್ಣದೊಂದು ಸುಳಿವು ಸಿಕ್ಕಿದ್ದರೂ ಶ್ಯಾಮ್ ತನ್ನ ಮನದೊಳಗಿನ ರೋಷವನ್ನು ಮಂಟೋನ ಮುಂದೆ ಹೊರಗೆಡಹುತ್ತಿರಲಿಲ್ಲ. ಮಂಟೋ ದೇಶ ತೊರೆದ ಬಳಿಕ ತನ್ನ ಪ್ರೀತಿಯ ತಾಯ್ನಾಡನ್ನು, ಜೀವದ ಗೆಳೆಯರಾದ ಶ್ಯಾಮ್ ಮತ್ತು ಅಶೋಕ್ ಕುಮಾರರನ್ನು ನೆನೆದು ಬಹಳಷ್ಟು ಪರಿತಪಿಸಿದ. ಆತ ಇವರೊಂದಿಗೆ ಪತ್ರ ಸಂಪರ್ಕವಿಟ್ಟುಕೊಂಡಿದ್ದ. ಮಂಟೋ ಭಾರತ ತೊರೆದ ಬಳಿಕ ಆರ್ಥಿಕವಾಗಿ ಮತ್ತಷ್ಟು ಜರ್ಜರಿತನಾದ. ಶ್ಯಾಮ್ ಮತ್ತು ಅಶೋಕ್ ಕುಮಾರ್ ಮಂಟೋನಿಗೆಂದು ಆಗಾಗ ತುಸು ದುಡ್ಡನ್ನೂ ಕಳುಹಿಸುತ್ತಿದ್ದರು.

ಅಂದು ಮಂಟೋನ ಮುಂದೆ ಪಾಕಿಸ್ತಾನವೆಂಬ ಆಯ್ಕೆಯಿತ್ತು… ಇಂದು ನನ್ನ ಮುಂದಿರುವುದು ಡಿಟೆಂಶನ್‌ ಕ್ಯಾಂಪ್‌ ಎಂಬ ಆಯ್ಕೆ ಮಾತ್ರ. ನನಗಾಗಿ ಪಾಕಿಸ್ತಾನದ ಬಾಗಿಲು ಯಾವತ್ತೂ ತೆರೆಯುವುದಿಲ್ಲ.‌ ತೆರೆದರೂ ನನ್ನ ಆಯ್ಕೆ ಖಂಡಿತಾ ಅದಾಗದು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. “ಇಂದು ನನ್ನೆದುರಿಗಿರುವುದು ಡಿಟಿಂಶನ್ ಕ್ಯಾಂಪ್ ಎಂಬ ಆಯ್ಕೆ ಮಾತ್ರ. ನನಗಾಗಿ ಪಾಕಿಸ್ತಾನದ ಬಾಗಿಲು ಯಾವತ್ತೂ ತೆರೆಯುವುದಿಲ್ಲ.” ಇದು ಸಹೃದಯರ ಮನ ಕಲಕುವ ಬರವಣಿಗೆ.

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...