ಹಲವು ದಿನಗಳಿಂದ ಕೋವಿಡ್ ನಂತರದ ಅನಾರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದ ದೇಶದ ಹಿರಿಯ ಪತ್ರ ವಿನೋದ್ ದುವಾ (67)ರವರನ್ನು ಗುರುಗ್ರಾಮದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಅವರ ಪುತ್ರಿ ಮಲ್ಲಿಕಾ ದುವಾ ತಿಳಿಸಿದ್ದಾರೆ.
ಕಳೆದ ಮೇ ತಿಂಗಳಲ್ಲಿ ವಿನೋದ್ ದುವಾ ಮತ್ತು ಅವರ ಪತ್ನಿ ಇಬ್ಬರಿಗೂ ಕೋವಿಡ್ ತಗುಲಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ವಿನೋದ್ ದುವಾ ಚೇತರಿಸಿಕೊಂಡರೆ ಅವರ ಪತ್ನಿ ನಿಧನರಾಗಿದ್ದರು. ಆದರೆ ಕೋವಿಡ್ ನಂತರದ ಹಲವು ಅನಾರೋಗ್ಯದ ಸಮಸ್ಯೆಗಳು ಅವರನ್ನು ಬಾಧಿಸುತ್ತಿದ್ದವು. ಇಂದು ಬೆಳಿಗ್ಗೆ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಪ್ರಸ್ತುತ ಐಸಿಯುನಲ್ಲಿದ್ದಾರೆ.
ದೂರದರ್ಶನ ಮತ್ತು ಎನ್ಡಿಟಿವಿಯಲ್ಲಿ ಹಿಂದಿ ಪತ್ರಕರ್ತರಾಗಿ ವಿನೋದ್ ದುವಾ ಪ್ರಸಿದ್ದರಾದವರು. ತಮ್ಮ ನಿಷ್ಟೆಯ ಮತ್ತು ಬದ್ಧತೆಯ ವರದಿಗಾರಿಕೆಗಾಗಿ ಅವರು ರಾಮನಾಥ್ ಗೋಯೆಂಕಾ ಎಕ್ಸಲೆನ್ಸ್ ಇನ್ ಜರ್ನಲಿಸಂ ಪ್ರಶಸ್ತಿ ಮತ್ತು 2008 ರಲ್ಲಿ ಭಾರತ ಸರ್ಕಾರದಿಂದ ಪತ್ರಿಕೋದ್ಯಮಕ್ಕಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದರು.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ ಸಂಸ್ಥೆಯ ದೇಣಿಗೆಗಾಗಿ ಆಯೋಜಿಸಿದ್ದ ಕಾರ್ಯಕ್ರಮ ರದ್ದುಗೊಳಿಸಿದ ಪೊಲೀಸರು