ನಿನ್ನೆ ತಾನೇ ಆರೋಗ್ಯ ಸಮಸ್ಯೆಯ ಕಾರಣ ಮುಂದಿಟ್ಟು ಜಮ್ಮು ಕಾಶ್ಮೀರದ ಕಾಂಗ್ರೆಸ್ ಪಕ್ಷದ ಜವಾಬ್ದಾರಿಗಳಿಂದ ಹೊರಬಂದಿದ್ದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಪಕ್ಷದ ಎಲ್ಲಾ ಘಟಕಗಳಿಗೆ ರಾಜೀನಾಮೆ ನೀಡಿದ್ದಾರೆ.
5 ಪುಟಗಳ ಸುಧೀರ್ಘ ರಾಜೀನಾಮೆ ಪತ್ರವನ್ನು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಸಲ್ಲಿಸಿರುವ ಅಜಾದ್, ಹಲವು ದಶಕಗಳ ಕಾಲದ ಕಾಂಗ್ರೆಸ್ ಜೊತೆಗಿನ ನಂಟು ಕಡಿದುಕೊಂಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ ಪದೇ ಪದೇ ಮುಂದುಡುತ್ತಿರುವುದನ್ನು ಖಂಡಿಸಿರುವ ಅವರು, “ಯಾವುದೇ ಸಂಘಟನೆಯ ಆಂತರೀಕ ಚುನಾವಣೆ ಈ ರೀತಿ ನಡೆಯುವುದಿಲ್ಲ. ಆದರೆ ಕಾಂಗ್ರೆಸ್ನಲ್ಲಿ ಮಾತ್ರ 24 ಅಕ್ಬರ್ ರಸ್ತೆಯಲ್ಲಿರುವ ಎಐಸಿಸಿ ಕಚೇರಿಯಲ್ಲಿ ಕೂತು ನಾಯಕನನ್ನು ಆರಿಸಲಾಗುತ್ತದೆ ಮತ್ತು ಇತರರಿಂದ ಒಪ್ಪಿಗೆ ಪಡೆಯಲಾಗುತ್ತದೆ” ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
Congress leader Ghulam Nabi Azad severs all ties with Congress Party pic.twitter.com/RuVvRqGSj5
— ANI (@ANI) August 26, 2022
ಕಳೆದ 08 ವರ್ಷಗಳಲ್ಲಿ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಮತ್ತು ರಾಜ್ಯಗಳಲ್ಲಿ ಸ್ಥಳೀಯ ಪಕ್ಷಗಳಿಗೆ ಅಧಿಕಾರ ಕೊಟ್ಟು ಸುಮ್ಮನಾಗಿದೆ. ನಾಯಕತ್ವದ ಸಾಮರ್ಥ್ಯವಿಲ್ಲದ, ಗಂಭೀರತೆಯಿಲ್ಲದೆ ವ್ಯಕ್ತಿ ಕೈಗೆ ಪಕ್ಷದ ಚುಕ್ಕಾಣಿ ನೀಡಿದ್ದೆ ಇದಕ್ಕೆ ಕಾರಣ ಎಂದು ರಾಹುಲ್ ಗಾಂಧಿ ಹೆಸರು ಪ್ರಸ್ತಾಪಿಸಿದೆ ಟೀಕಿಸಿದ್ದಾರೆ.
ಗುಲಾಂ ನಬಿ ಆಜಾದ್ ಕಳೆದ ಎರಡು ವರ್ಷಗಳಿಂದ ಪಕ್ಷದ ನಾಯಕತ್ವದ ವಿರುದ್ಧ ಭಿನ್ನಾಭಿಪ್ರಾಯ ಹೊಂದಿದ್ದರು ಮತ್ತು G-23 ಎನ್ನುವ “ಭಿನ್ನಮತೀಯರ” ಗುಂಪಿನ ಪ್ರಮುಖ ಸದಸ್ಯರಾಗಿದ್ದರು. ಸಂಘಟನೆಯ ಸಂಪೂರ್ಣ ಬದಲಾವಣೆ ಮತ್ತು ಬಲಿಷ್ಟ ನಾಯಕತ್ವ ಬೇಕೆಂದು 2020 ರಲ್ಲಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದರು.
ಇದನ್ನೂ ಓದಿ; ಬಿಲ್ಕಿಸ್ ಬಾನೋ ಅತ್ಯಾಚಾರಿಗಳ ಸಂಭ್ರಮಾಚರಣೆ: ಆತಂಕಗೊಂಡು ಊರು ತೊರೆದ ಮುಸ್ಲಿಮರು
ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ, ಎಲ್ಲಾ ಅಧಿಕಾರಗಳನ್ನು ಅನುಬವಿಸಿ, ಈಗ ಕಾಂಗ್ರೆಸ್ ಕಷ್ಟ ಕಾಲದಲ್ಲಿ ಇರುವಾಗ, ಪಕ್ಷ ತೊರೆಯುವುದು ಯಾವ ನ್ಯಾಯ?
Aap ka ye dicisission barabar nahi ye shab plse Zara sochliye so this time samajnewaleko ishara kafi