Homeಕರ್ನಾಟಕಶಿವಾಜಿನಗರ ಉಪಚುನಾವಣೆ: ಮೈಮರೆತರೆ ಸುಲಭದ ತುತ್ತು 'ಕೈ' ಜಾರಲಿದೆ

ಶಿವಾಜಿನಗರ ಉಪಚುನಾವಣೆ: ಮೈಮರೆತರೆ ಸುಲಭದ ತುತ್ತು ‘ಕೈ’ ಜಾರಲಿದೆ

- Advertisement -
- Advertisement -

ಶಿವಾಜಿನಗರದ ಉಪಚುನಾವಣೆ ಮೇಲ್ನೋಟಕ್ಕೆ ಕಾಣುವಷ್ಟು ಸಲೀಸಾಗಿಲ್ಲ. ರೋಷನ್ ಬೇಗ್ ಪಕ್ಷೇತರ ಅಭ್ಯರ್ಥಿಯಾಗುವ ನಿರ್ಧಾರದಿಂದ ಹಿಂದೆ ಸರಿದಿರೋದ್ರಿಂದ ಕಾಂಗ್ರೆಸ್‍ನ ರಿಜ್ವಾನ್ ಅರ್ಷದ್ ಗೆಲುವು ಸುಲಭವಾಗಿದೆ ಎನ್ನಲಾಗುತ್ತಿದೆ. ಆದರೆ ಕಟ್ಟಾ ಮತ್ತು ನಿರ್ಮಲ್ ಸುರಾನಾರಂತಹ ಟಾಪ್ ಲೆವೆಲ್ ನಾಯಕರನ್ನು ಪಕ್ಕಕ್ಕೆ ಸರಿಸಿ ಮಾಜಿ ಕಾರ್ಪೊರೇಟರ್‍ಗೆ ಬಿಜೆಪಿ ಟಿಕೆಟ್ ನೀಡಿರೋದ್ಯಾಕೆ? ಸ್ವತಃ ರೇವಣ್ಣ ಜೆಡಿಎಸ್ ಸೇರುವಂತೆ ಬಹಿರಂಗ ಆಫರ್ ಕೊಟ್ಟರೂ ರೋಷನ್ ಬೇಗ್ ಮೌನ ವಹಿಸಿದ್ದೇಕೆ? ಎನ್ನುವ ಪ್ರಶ್ನೆಗಳು ಇಲ್ಲಿ ಕುತೂಹಲ ಕೆರಳಿಸುತ್ತವೆ.

ಶಿವಾಜಿನಗರದ ಒಟ್ಟು ಏಳು ಬಿಬಿಎಂಪಿ ವಾರ್ಡುಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಕಾರ್ಪೊರೇಟರುಗಳು ಗೆದ್ದಿದ್ದರೆ, ಒಂದು ಬಿಜೆಪಿ ಮತ್ತೊಂದು ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ. ಹಲಸೂರು ವಾರ್ಡ್‍ನ ಆ ಪಕ್ಷೇತರ ಅಭ್ಯರ್ಥಿ ಮಮತಾರವರ ಪತಿ ಶರವಣನೇ ಈಗ ಬಿಜೆಪಿಯ ಅಭ್ಯರ್ಥಿ. ಅಂದರೆ ಎರಡು ವಾರ್ಡುಗಳಲ್ಲಷ್ಟೇ ಬಿಜೆಪಿ ಪ್ರಾಬಲ್ಯವಿದೆ ಅಂದಹಾಗಾಯ್ತು. ಮುಸ್ಲಿಂ ಪ್ರಾಬಲ್ಯವಿರುವ, ಕ್ರಿಶ್ಚಿಯನ್ನರ ಒಲವು ನಿರ್ಣಾಯಕವೆನಿಸುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಗೆಲುವಿನ ಹಾದಿ ಸಲೀಸು ಎಂಬಂತೆ ಗೋಚರಿಸುತ್ತೆ. ಸಾಲದ್ದಕ್ಕೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ವಿಧಾನಸಭಾಕ್ಷೇತ್ರವನ್ನೂ ಒಳಗೊಳ್ಳುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಹುರಿಯಾಳಾಗಿದ್ದ ಇದೇ ರಿಜ್ವಾನ್ ಅರ್ಷದ್‍ಗೆ, ಬಿಜೆಪಿಯ ವಿಜೇತ ಅಭ್ಯರ್ಥಿ ಪಿ.ಸಿ.ಮೋಹನ್‍ಗಿಂತ ಸುಮಾರು ಹದಿನೈದು ಸಾವಿರ ಮತಗಳ ಲೀಡ್ ಶಿವಾಜಿನಗರದಿಂದ ಸಿಕ್ಕಿತ್ತು. ಪಿ.ಸಿ.ಮೋಹನ್ ಎಪ್ಪತ್ತು ಸಾವಿರ ಮತಗಳ ಅಂತರದಿಂದ ಗೆದ್ದು ಸಂಸದರಾದರೂ ಬಿಜೆಪಿಗೆ ಇಲ್ಲಿ ಸಿಕ್ಕಿದ್ದು ಕೇವಲ 44,424 ಮತಗಳು ಮಾತ್ರ. ರಿಜ್ವಾನ್‍ಗೆ ಶಿವಾಜಿನಗರದಲ್ಲಿ 59,273 ಮತಗಳು ಲಭಿಸಿದ್ದವು. ಅದೂ, ಅಷ್ಟರಲ್ಲಾಗಲೆ ತನಗೆ ಎಂಪಿ ಟಿಕೆಟ್ ಸಿಗಲಿಲ್ಲವೆಂದು ಸಿಟ್ಟುಗೊಂಡಿದ್ದ ರೋಷನ್ ಬೇಗ್ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದಾಗ್ಯೂ ಕಾಂಗ್ರೆಸ್‍ಗೆ ಇಲ್ಲಿ ಮುನ್ನಡೆ ಸಿಕ್ಕಿತ್ತು. ಈ ಅಂಕಿಅಂಶವೂ ಕಾಂಗ್ರೆಸ್‍ನ ಪರವಾಗಿಯೇ ಇದೆ.

ಹಾಗಿರುವಾಗ, ಸರ್ಕಾರದ ಅಳಿವುಉಳಿವು ನಿರ್ಧರಿಸುವ ಈ ಉಪಚುನಾವಣೆಯಲ್ಲಿ ಬಿಜೆಪಿ ಅನುಭವಿ, ಪ್ರಭಾವಿ ಕಟ್ಟಾ ಮತ್ತು ಸುರಾನಾಗೆ ಟಿಕೇಟ್ ನೀಡದೆ ಹೊಸಮುಖ ಶರವಣಗೆ ಮಣೆ ಹಾಕಿದ್ದೇಕೆ? 1999 ಮತ್ತು 2004ರಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸತತವಾಗಿ ಇಲ್ಲಿಂದ ಗೆದ್ದು ಶಾಸಕರಾಗಿದ್ದಂತವರು. ಅವರು ಹೆಬ್ಬಾಳದತ್ತ ವಲಸೆ ಹೋದ ಮೇಲೆ ಸುರಾನಾ 2008 ಮತ್ತು 2013ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತರೂ ರಾಜ್ಯ ಬಿಜೆಪಿಯೊಳಗೆ ಪ್ರಭಾವಿ ವ್ಯಕ್ತಿ. ಸುರಾನಾ ಯಡ್ಯೂರಪ್ಪನವರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವವರು. ಹಾಗಾಗಿ ಅವರಿಗೆ ಟಿಕೆಟ್ ತಪ್ಪಿರಬಹುದು. ಆದರೆ ಕಟ್ಟಾ ನಾಯ್ಡುಗೆ ಆ ಪ್ರತಿಕೂಲ ವಾತಾವರಣ ಇರಲಿಲ್ಲ. ಹಾಗೆ ನೋಡಿದರೆ ಕಳೆದ 2018ರ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಕಾಂಗ್ರೆಸ್‍ನ ರೋಷನ್ ಬೇಗ್ ವಿರುದ್ಧ ಅಖಾಡಕ್ಕಿಳಿದಿದ್ದ ಕಟ್ಟಾ ಭರ್ಜರಿ ಪೈಪೋಟಿಯನ್ನೇ ಕೊಟ್ಟಿದ್ದರು. 2013ರಲ್ಲಿ ಸುರಾನಾ ಸ್ಪರ್ಧಿಸಿದ್ದಾಗ ಕೇವಲ 31.68%ಗೆ ಸೀಮಿತವಾಗಿದ್ದ ಬಿಜೆಪಿ ಮತಗಳಿಕೆಯನ್ನು ಕಟ್ಟಾ ವರ್ಚಸ್ಸು 2018ರಲ್ಲಿ 41.20%ಗೆ ಏರಿಸಿತ್ತು. ಆದಾಗ್ಯೂ ಕಟ್ಟಾಗೆ ಟಿಕೆಟ್ ಕೈತಪ್ಪಿದೆ.

ಇದರ ಹಿಂದೆ ಬಿಜೆಪಿಯ ಒಂದಷ್ಟು ಲೆಕ್ಕಾಚಾರಗಳಿವೆ. ಯಡ್ಯೂರಪ್ಪನವರ ಹಠಕ್ಕೆ ಕಟ್ಟುಬಿದ್ದು ಅನರ್ಹ ಶಾಸಕರಿಗೆಲ್ಲ ಟಿಕೆಟ್ ಖಾತ್ರಿ ಮಾಡಿದಂತೆ, ರೋಷನ್ ಬೇಗ್‍ಗೂ ಅಭಯ ನೀಡಲು ಬಿಜೆಪಿಗೆ ಎರಡು ತೊಡಕುಗಳಿದ್ದವು. ಮೊದಲನೆಯದು ಆತ ಮುಸ್ಲಿಂ ವ್ಯಕ್ತಿ. ಎರಡನೆಯದು, ರೋಷನ್ ಬೇಗ್ ಹೆಸರು ಐಎಂಎ ಬಹುಕೋಟಿ ಹಗರಣದಲ್ಲಿ ತಳುಕು ಹಾಕಿಕೊಂಡದ್ದು. ಧರ್ಮದ ಹೆಸರಲ್ಲಿ ಮುಸ್ಲಿಮರನ್ನೇ ಗುರಿಯಾಗಿಸಿಕೊಂಡು ಮನ್ಸೂರ್ ಖಾನ್ ಮುಂಡಾಯಿಸಿದ ಈ ಹಗರಣದಿಂದ ಬಚಾವಾಗುವ ಸಲುವಾಗಿಯೇ ರೋಷನ್ ಬೇಗ್ ರಾಜೀನಾಮೆ ನೀಡಿ ಬಿಜೆಪಿಯತ್ತ ಸರಿದದ್ದು ಎಂಬ ಆಪಾದನೆ ಇದೆ. ಇದೇ ಕಾರಣಕ್ಕೆ ಸಂತ್ರಸ್ತ ಮುಸ್ಲಿಮರ ಸಿಟ್ಟಿಗೂ ಬೇಗ್ ಗುರಿಯಾಗಬೇಕಾಗಿ ಬಂದಿದೆ. ಅವರನ್ನು ಕಣಕ್ಕಿಳಿಸಿದರೂ ಗೆಲ್ಲುವ ಛಾನ್ಸು ತೀರಾ ಕಮ್ಮಿ ಅನ್ನೋದು ಬಿಜೆಪಿಗೆ ಮನದಟ್ಟಾಗಿತ್ತು.

ಶಿವಾಜಿನಗರ ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರ ಅನ್ನೋದು ಎಷ್ಟು ಸತ್ಯವೋ, ಇಲ್ಲಿ ತಮಿಳಿಗರ ಮತಗಳೂ ಗಣನೀಯ ಸಂಖ್ಯೆಯಲ್ಲಿವೆ ಅನ್ನೋದೂ ಅಷ್ಟೇ ಸತ್ಯ. ಶಿವಾಜಿನಗರ, ಭಾರತಿನಗರ, ರಾಮಸ್ವಾಮಿ ಪಾಳ್ಯ, ಹಲಸೂರು, ಸಂಪಂಗಿರಾಮನಗರದಲ್ಲಿ ತಮಿಳರ ಮತಗಳೂ ಸಾಕಷ್ಟಿವೆ. ರೋಷನ್ ಬೇಗ್ ಗೆದ್ದು ಬರುತ್ತಿದ್ದುದು ಮುಸ್ಲಿಂ ಮತಗಳ ಜೊತೆಗೆ ತಮಿಳು ಮತಗಳೂ ಸೇರಿಕೊಳ್ಳುತ್ತಿದ್ದುದರಿಂದ. ಕಟ್ಟಾ ಕ್ಷೇತ್ರ ತೊರೆದ ನಂತರ ಅವೂ ಒಂದು ರೀತಿಯಲ್ಲಿ ಕಾಂಗ್ರೆಸ್‍ನ ಪಾರಂಪರಿಕ ಮತಗಳಂತಾಗಿವೆ. ಅವುಗಳನ್ನು ಕಾಂಗ್ರೆಸ್‍ನಿಂದ ವಿಮುಖಗೊಳಿಸದ ಹೊರತು ಇಲ್ಲಿ ಗೆಲ್ಲೋದು ಕಷ್ಟ ಅನ್ನೋದನ್ನು 2018ರ ವಿಧಾನಸಭೆ ಮತ್ತು 2019ರ ಲೋಕಸಭೆ ಫಲಿತಾಂಶಗಳು ಬಿಜೆಪಿಗೆ ಮನವರಿಕೆ ಮಾಡಿಕೊಟ್ಟಿದ್ದವು. ಆರೆಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯನ್ನು ಮುಂದಿಟ್ಟುಕೊಂಡು ದೊಡ್ಡ ಕೋಮು ಧ್ರುವೀಕರಣ ಸೃಷ್ಟಿಸಿದರೂ 2018ರಲ್ಲಿ ಬಿಜೆಪಿ ಗೆಲ್ಲಲಾಗದಿದ್ದಕ್ಕೆ ತಮಿಳು ಮತಗಳು ಕಾಂಗ್ರೆಸ್‍ಗೆ ಗಟ್ಟಿಯಾಗಿ ಕಚ್ಚಿಕೊಂಡಿದ್ದೇ ಕಾರಣ. ಆ ತಮಿಳು ಓಟುಗಳ ಮೇಲೆ ಕಣ್ಣಿಟ್ಟೇ ತಮಿಳಿಗ ಎಂ.ಶರವಣನನ್ನು ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿಸಿದೆ.

ಜೆಡಿಎಸ್ ಕೂಡಾ ಮುಸ್ಲಿಂ ಅಭ್ಯರ್ಥಿ ತನ್ವೀರ್ ಅಹ್ಮದ್‍ರನ್ನು ಕಣಕ್ಕಿಳಿಸಿರೋದ್ರಿಂದ ಮುಸ್ಲಿಂ ಮತಗಳು ಸಹಜವಾಗಿಯೇ ಛಿದ್ರವಾಗುತ್ತವೆ. ಐಎಂಎ ವಂಚನೆಯ ಕಾರಣಕ್ಕೆ ಒಂದಷ್ಟು ಮುಸ್ಲಿಮರು ಬೇಗ್ ಜೊತೆಗೆ ಇಡಿಯಾಗಿ ಕಾಂಗ್ರೆಸಿನ ವಿರುದ್ಧವೂ ಸಿಟ್ಟಾಗಿದ್ದಾರೆ. ಅವರು ಜೆಡಿಎಸ್‍ಗೆ ಮತ ಹಾಕಬಹುದು. ಆಗ ಸಹಜವಾಗಿಯೇ ಕಾಂಗ್ರೆಸಿನ ಮತಗಳಿಕೆ ಕುಸಿಯುತ್ತೆ. ಇಪ್ಪತ್ತೈದರಿಂದ ಮೂವತ್ತು ಸಾವಿರಗಳಷ್ಟಿರುವ ತಮ್ಮ ಸಾಂಪ್ರದಾಯಿಕ ಬಿಜೆಪಿ ಮತಗಳ ಜೊತೆಗೆ ತಮಿಳು ಮತಗಳು ಒಲಿದರೆ ಗೆಲುವು ಗ್ಯಾರಂಟಿ ಅನ್ನೋದು ಬಿಜೆಪಿಯ ಲೆಕ್ಕಾಚಾರ.
ಒಂದು ಮೂಲದ ಪ್ರಕಾರ, ಯಡ್ಯೂರಪ್ಪನ ಮೂಲಕ ಟಿಕೆಟು ಪಡೆಯಲು ಕೊನೇವರೆಗೂ ಯತ್ನಿಸಿದ ರೋಷನ್ ಬೇಗ್, ತನಗೆ ಸಿಗದಿದ್ದರು ತನ್ನ ಪ್ರತಿಸ್ಪರ್ಧಿಗಳಾದ ಕಟ್ಟಾ ಅಥವಾ ಸುರಾನಾ ಪಾಲಾಗಲಿದ್ದ ಟಿಕೆಟ್ ತಪ್ಪಿಸಲು, ತನ್ನ ಆಪ್ತ ಶರವಣ್‍ಗೆ ಟಿಕೆಟ್ ಕೊಡಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. 2015ರ ಬಿಬಿಎಂಪಿ ಚುನಾವಣೆಯಲ್ಲಿ ಹಲಸೂರು ವಾರ್ಡ್‍ನಿಂದ ತನ್ನ ಹೆಂಡತಿಗೆ ಶರವಣ ಬಿಜೆಪಿ ಟಿಕೇಟ್ ಕೇಳಿದ್ದರು. ಆದರೆ ಬಿಜೆಪಿ ಬೇರೊಬ್ಬರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತು. ಇದರಿಂದ ಸಿಟ್ಟಿಗೆದ್ದ ಶರವಣ ಮಡದಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿಸಿ ಗೆಲ್ಲಿಸಿಕೊಂಡಿದ್ದರು. ಈ ಅವಧಿಯಲ್ಲಿ ಬಿಜೆಪಿ ಜೊತೆ ಕೊಂಚ ಮುನಿಸಿಕೊಂಡಿದ್ದ ಶರವಣ, ಬೇಗ್ ಜೊತೆ ಒಡನಾಟ ಸಾಧಿಸಿಕೊಂಡದ್ದು ದಿಟ.

ಟಿಕೇಟ್, ಶಾಸಕ ಸ್ಥಾನ, ಮಂತ್ರಿಗಿರಿಗಿಂತ ಹೆಚ್ಚಾಗಿ ಐಎಂಎ ಕುಣಿಕೆಯಿಂದ ತನ್ನ ತಲೆ ಉಳಿದರೆ ಸಾಕು ಎಂಬಂತಿರುವ ರೋಷನ್‍ಗೆ ಮೊದಲಿಂದಲೂ ರಿಜ್ವಾನ್ ಕಂಡರೆ ಅಷ್ಟಕ್ಕಷ್ಟೇ. ಮುಂದೊಂದು ದಿನ ತನ್ನ ಮುಸ್ಲಿಂ ಲೀಡರಿಕೆಗೆ ಈ ಹುಡುಗ ಕಂಟಕವಾಗುತ್ತಾನೆಂಬ ಅಳುಕು ಬೇಗ್‍ರದ್ದು. ಹಾಗಾಗಿ ಅಭ್ಯರ್ಥಿಯಾಗದೆ ಹೋದರು ಬೇಗ್, ಬಿಜೆಪಿಯ ಶರವಣಗೆ ನೆರವಾಗುವ ಸಾಧ್ಯತೆ ದಟ್ಟವಾಗಿದೆ. ನಾಮಪತ್ರ ಸಲ್ಲಿಕೆಯ ನಂತರ ಬೇಗ್ ಹೋಗಿ ಯಡ್ಯೂರಪ್ಪರನ್ನು ಭೇಟಿಯಾಗಿ ಬಂದಿರೋದೆ ಇದಕ್ಕೆ ಸಾಕ್ಷಿ. ಗುಪ್ತವಾಗಿ ಬಿಜೆಪಿ ಪರ ಕೆಲಸ ಮಾಡುವುದಕ್ಕೆಂದೇ ಜೆಡಿಎಸ್ ಸ್ಪರ್ಧಿಸುವ ಆಫರ್ ಕೊಟ್ಟರೂ ರೋಷನ್ ಬೇಗ್ ಗಪ್‍ಚುಪ್ ಆದರಾ……?

ಮೇಲ್ನೋಟಕ್ಕೆ ಡಮ್ಮಿ ಕ್ಯಾಂಡಿಡೇಟಿನಂತೆ ಕಾಣುವ ಬಿಜೆಪಿಯ ಶರವಣ ಸ್ಪರ್ಧೆಯನ್ನು ಲಘುವಾಗಿ ಪರಿಗಣಿಸಿ ಕಾಂಗ್ರೆಸ್ ಮೈಮರೆಯದಿದ್ದರೆ ರಿಜ್ವಾನ್ ಇಲ್ಲಿ ಗೆಲುವಿನ ನಗೆ ಬೀರಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...