Homeಕರ್ನಾಟಕಶಿವಾಜಿನಗರ ಉಪಚುನಾವಣೆ: ಮೈಮರೆತರೆ ಸುಲಭದ ತುತ್ತು 'ಕೈ' ಜಾರಲಿದೆ

ಶಿವಾಜಿನಗರ ಉಪಚುನಾವಣೆ: ಮೈಮರೆತರೆ ಸುಲಭದ ತುತ್ತು ‘ಕೈ’ ಜಾರಲಿದೆ

- Advertisement -
- Advertisement -

ಶಿವಾಜಿನಗರದ ಉಪಚುನಾವಣೆ ಮೇಲ್ನೋಟಕ್ಕೆ ಕಾಣುವಷ್ಟು ಸಲೀಸಾಗಿಲ್ಲ. ರೋಷನ್ ಬೇಗ್ ಪಕ್ಷೇತರ ಅಭ್ಯರ್ಥಿಯಾಗುವ ನಿರ್ಧಾರದಿಂದ ಹಿಂದೆ ಸರಿದಿರೋದ್ರಿಂದ ಕಾಂಗ್ರೆಸ್‍ನ ರಿಜ್ವಾನ್ ಅರ್ಷದ್ ಗೆಲುವು ಸುಲಭವಾಗಿದೆ ಎನ್ನಲಾಗುತ್ತಿದೆ. ಆದರೆ ಕಟ್ಟಾ ಮತ್ತು ನಿರ್ಮಲ್ ಸುರಾನಾರಂತಹ ಟಾಪ್ ಲೆವೆಲ್ ನಾಯಕರನ್ನು ಪಕ್ಕಕ್ಕೆ ಸರಿಸಿ ಮಾಜಿ ಕಾರ್ಪೊರೇಟರ್‍ಗೆ ಬಿಜೆಪಿ ಟಿಕೆಟ್ ನೀಡಿರೋದ್ಯಾಕೆ? ಸ್ವತಃ ರೇವಣ್ಣ ಜೆಡಿಎಸ್ ಸೇರುವಂತೆ ಬಹಿರಂಗ ಆಫರ್ ಕೊಟ್ಟರೂ ರೋಷನ್ ಬೇಗ್ ಮೌನ ವಹಿಸಿದ್ದೇಕೆ? ಎನ್ನುವ ಪ್ರಶ್ನೆಗಳು ಇಲ್ಲಿ ಕುತೂಹಲ ಕೆರಳಿಸುತ್ತವೆ.

ಶಿವಾಜಿನಗರದ ಒಟ್ಟು ಏಳು ಬಿಬಿಎಂಪಿ ವಾರ್ಡುಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಕಾರ್ಪೊರೇಟರುಗಳು ಗೆದ್ದಿದ್ದರೆ, ಒಂದು ಬಿಜೆಪಿ ಮತ್ತೊಂದು ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ. ಹಲಸೂರು ವಾರ್ಡ್‍ನ ಆ ಪಕ್ಷೇತರ ಅಭ್ಯರ್ಥಿ ಮಮತಾರವರ ಪತಿ ಶರವಣನೇ ಈಗ ಬಿಜೆಪಿಯ ಅಭ್ಯರ್ಥಿ. ಅಂದರೆ ಎರಡು ವಾರ್ಡುಗಳಲ್ಲಷ್ಟೇ ಬಿಜೆಪಿ ಪ್ರಾಬಲ್ಯವಿದೆ ಅಂದಹಾಗಾಯ್ತು. ಮುಸ್ಲಿಂ ಪ್ರಾಬಲ್ಯವಿರುವ, ಕ್ರಿಶ್ಚಿಯನ್ನರ ಒಲವು ನಿರ್ಣಾಯಕವೆನಿಸುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಗೆಲುವಿನ ಹಾದಿ ಸಲೀಸು ಎಂಬಂತೆ ಗೋಚರಿಸುತ್ತೆ. ಸಾಲದ್ದಕ್ಕೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ವಿಧಾನಸಭಾಕ್ಷೇತ್ರವನ್ನೂ ಒಳಗೊಳ್ಳುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಹುರಿಯಾಳಾಗಿದ್ದ ಇದೇ ರಿಜ್ವಾನ್ ಅರ್ಷದ್‍ಗೆ, ಬಿಜೆಪಿಯ ವಿಜೇತ ಅಭ್ಯರ್ಥಿ ಪಿ.ಸಿ.ಮೋಹನ್‍ಗಿಂತ ಸುಮಾರು ಹದಿನೈದು ಸಾವಿರ ಮತಗಳ ಲೀಡ್ ಶಿವಾಜಿನಗರದಿಂದ ಸಿಕ್ಕಿತ್ತು. ಪಿ.ಸಿ.ಮೋಹನ್ ಎಪ್ಪತ್ತು ಸಾವಿರ ಮತಗಳ ಅಂತರದಿಂದ ಗೆದ್ದು ಸಂಸದರಾದರೂ ಬಿಜೆಪಿಗೆ ಇಲ್ಲಿ ಸಿಕ್ಕಿದ್ದು ಕೇವಲ 44,424 ಮತಗಳು ಮಾತ್ರ. ರಿಜ್ವಾನ್‍ಗೆ ಶಿವಾಜಿನಗರದಲ್ಲಿ 59,273 ಮತಗಳು ಲಭಿಸಿದ್ದವು. ಅದೂ, ಅಷ್ಟರಲ್ಲಾಗಲೆ ತನಗೆ ಎಂಪಿ ಟಿಕೆಟ್ ಸಿಗಲಿಲ್ಲವೆಂದು ಸಿಟ್ಟುಗೊಂಡಿದ್ದ ರೋಷನ್ ಬೇಗ್ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದಾಗ್ಯೂ ಕಾಂಗ್ರೆಸ್‍ಗೆ ಇಲ್ಲಿ ಮುನ್ನಡೆ ಸಿಕ್ಕಿತ್ತು. ಈ ಅಂಕಿಅಂಶವೂ ಕಾಂಗ್ರೆಸ್‍ನ ಪರವಾಗಿಯೇ ಇದೆ.

ಹಾಗಿರುವಾಗ, ಸರ್ಕಾರದ ಅಳಿವುಉಳಿವು ನಿರ್ಧರಿಸುವ ಈ ಉಪಚುನಾವಣೆಯಲ್ಲಿ ಬಿಜೆಪಿ ಅನುಭವಿ, ಪ್ರಭಾವಿ ಕಟ್ಟಾ ಮತ್ತು ಸುರಾನಾಗೆ ಟಿಕೇಟ್ ನೀಡದೆ ಹೊಸಮುಖ ಶರವಣಗೆ ಮಣೆ ಹಾಕಿದ್ದೇಕೆ? 1999 ಮತ್ತು 2004ರಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸತತವಾಗಿ ಇಲ್ಲಿಂದ ಗೆದ್ದು ಶಾಸಕರಾಗಿದ್ದಂತವರು. ಅವರು ಹೆಬ್ಬಾಳದತ್ತ ವಲಸೆ ಹೋದ ಮೇಲೆ ಸುರಾನಾ 2008 ಮತ್ತು 2013ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತರೂ ರಾಜ್ಯ ಬಿಜೆಪಿಯೊಳಗೆ ಪ್ರಭಾವಿ ವ್ಯಕ್ತಿ. ಸುರಾನಾ ಯಡ್ಯೂರಪ್ಪನವರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವವರು. ಹಾಗಾಗಿ ಅವರಿಗೆ ಟಿಕೆಟ್ ತಪ್ಪಿರಬಹುದು. ಆದರೆ ಕಟ್ಟಾ ನಾಯ್ಡುಗೆ ಆ ಪ್ರತಿಕೂಲ ವಾತಾವರಣ ಇರಲಿಲ್ಲ. ಹಾಗೆ ನೋಡಿದರೆ ಕಳೆದ 2018ರ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಕಾಂಗ್ರೆಸ್‍ನ ರೋಷನ್ ಬೇಗ್ ವಿರುದ್ಧ ಅಖಾಡಕ್ಕಿಳಿದಿದ್ದ ಕಟ್ಟಾ ಭರ್ಜರಿ ಪೈಪೋಟಿಯನ್ನೇ ಕೊಟ್ಟಿದ್ದರು. 2013ರಲ್ಲಿ ಸುರಾನಾ ಸ್ಪರ್ಧಿಸಿದ್ದಾಗ ಕೇವಲ 31.68%ಗೆ ಸೀಮಿತವಾಗಿದ್ದ ಬಿಜೆಪಿ ಮತಗಳಿಕೆಯನ್ನು ಕಟ್ಟಾ ವರ್ಚಸ್ಸು 2018ರಲ್ಲಿ 41.20%ಗೆ ಏರಿಸಿತ್ತು. ಆದಾಗ್ಯೂ ಕಟ್ಟಾಗೆ ಟಿಕೆಟ್ ಕೈತಪ್ಪಿದೆ.

ಇದರ ಹಿಂದೆ ಬಿಜೆಪಿಯ ಒಂದಷ್ಟು ಲೆಕ್ಕಾಚಾರಗಳಿವೆ. ಯಡ್ಯೂರಪ್ಪನವರ ಹಠಕ್ಕೆ ಕಟ್ಟುಬಿದ್ದು ಅನರ್ಹ ಶಾಸಕರಿಗೆಲ್ಲ ಟಿಕೆಟ್ ಖಾತ್ರಿ ಮಾಡಿದಂತೆ, ರೋಷನ್ ಬೇಗ್‍ಗೂ ಅಭಯ ನೀಡಲು ಬಿಜೆಪಿಗೆ ಎರಡು ತೊಡಕುಗಳಿದ್ದವು. ಮೊದಲನೆಯದು ಆತ ಮುಸ್ಲಿಂ ವ್ಯಕ್ತಿ. ಎರಡನೆಯದು, ರೋಷನ್ ಬೇಗ್ ಹೆಸರು ಐಎಂಎ ಬಹುಕೋಟಿ ಹಗರಣದಲ್ಲಿ ತಳುಕು ಹಾಕಿಕೊಂಡದ್ದು. ಧರ್ಮದ ಹೆಸರಲ್ಲಿ ಮುಸ್ಲಿಮರನ್ನೇ ಗುರಿಯಾಗಿಸಿಕೊಂಡು ಮನ್ಸೂರ್ ಖಾನ್ ಮುಂಡಾಯಿಸಿದ ಈ ಹಗರಣದಿಂದ ಬಚಾವಾಗುವ ಸಲುವಾಗಿಯೇ ರೋಷನ್ ಬೇಗ್ ರಾಜೀನಾಮೆ ನೀಡಿ ಬಿಜೆಪಿಯತ್ತ ಸರಿದದ್ದು ಎಂಬ ಆಪಾದನೆ ಇದೆ. ಇದೇ ಕಾರಣಕ್ಕೆ ಸಂತ್ರಸ್ತ ಮುಸ್ಲಿಮರ ಸಿಟ್ಟಿಗೂ ಬೇಗ್ ಗುರಿಯಾಗಬೇಕಾಗಿ ಬಂದಿದೆ. ಅವರನ್ನು ಕಣಕ್ಕಿಳಿಸಿದರೂ ಗೆಲ್ಲುವ ಛಾನ್ಸು ತೀರಾ ಕಮ್ಮಿ ಅನ್ನೋದು ಬಿಜೆಪಿಗೆ ಮನದಟ್ಟಾಗಿತ್ತು.

ಶಿವಾಜಿನಗರ ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರ ಅನ್ನೋದು ಎಷ್ಟು ಸತ್ಯವೋ, ಇಲ್ಲಿ ತಮಿಳಿಗರ ಮತಗಳೂ ಗಣನೀಯ ಸಂಖ್ಯೆಯಲ್ಲಿವೆ ಅನ್ನೋದೂ ಅಷ್ಟೇ ಸತ್ಯ. ಶಿವಾಜಿನಗರ, ಭಾರತಿನಗರ, ರಾಮಸ್ವಾಮಿ ಪಾಳ್ಯ, ಹಲಸೂರು, ಸಂಪಂಗಿರಾಮನಗರದಲ್ಲಿ ತಮಿಳರ ಮತಗಳೂ ಸಾಕಷ್ಟಿವೆ. ರೋಷನ್ ಬೇಗ್ ಗೆದ್ದು ಬರುತ್ತಿದ್ದುದು ಮುಸ್ಲಿಂ ಮತಗಳ ಜೊತೆಗೆ ತಮಿಳು ಮತಗಳೂ ಸೇರಿಕೊಳ್ಳುತ್ತಿದ್ದುದರಿಂದ. ಕಟ್ಟಾ ಕ್ಷೇತ್ರ ತೊರೆದ ನಂತರ ಅವೂ ಒಂದು ರೀತಿಯಲ್ಲಿ ಕಾಂಗ್ರೆಸ್‍ನ ಪಾರಂಪರಿಕ ಮತಗಳಂತಾಗಿವೆ. ಅವುಗಳನ್ನು ಕಾಂಗ್ರೆಸ್‍ನಿಂದ ವಿಮುಖಗೊಳಿಸದ ಹೊರತು ಇಲ್ಲಿ ಗೆಲ್ಲೋದು ಕಷ್ಟ ಅನ್ನೋದನ್ನು 2018ರ ವಿಧಾನಸಭೆ ಮತ್ತು 2019ರ ಲೋಕಸಭೆ ಫಲಿತಾಂಶಗಳು ಬಿಜೆಪಿಗೆ ಮನವರಿಕೆ ಮಾಡಿಕೊಟ್ಟಿದ್ದವು. ಆರೆಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯನ್ನು ಮುಂದಿಟ್ಟುಕೊಂಡು ದೊಡ್ಡ ಕೋಮು ಧ್ರುವೀಕರಣ ಸೃಷ್ಟಿಸಿದರೂ 2018ರಲ್ಲಿ ಬಿಜೆಪಿ ಗೆಲ್ಲಲಾಗದಿದ್ದಕ್ಕೆ ತಮಿಳು ಮತಗಳು ಕಾಂಗ್ರೆಸ್‍ಗೆ ಗಟ್ಟಿಯಾಗಿ ಕಚ್ಚಿಕೊಂಡಿದ್ದೇ ಕಾರಣ. ಆ ತಮಿಳು ಓಟುಗಳ ಮೇಲೆ ಕಣ್ಣಿಟ್ಟೇ ತಮಿಳಿಗ ಎಂ.ಶರವಣನನ್ನು ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿಸಿದೆ.

ಜೆಡಿಎಸ್ ಕೂಡಾ ಮುಸ್ಲಿಂ ಅಭ್ಯರ್ಥಿ ತನ್ವೀರ್ ಅಹ್ಮದ್‍ರನ್ನು ಕಣಕ್ಕಿಳಿಸಿರೋದ್ರಿಂದ ಮುಸ್ಲಿಂ ಮತಗಳು ಸಹಜವಾಗಿಯೇ ಛಿದ್ರವಾಗುತ್ತವೆ. ಐಎಂಎ ವಂಚನೆಯ ಕಾರಣಕ್ಕೆ ಒಂದಷ್ಟು ಮುಸ್ಲಿಮರು ಬೇಗ್ ಜೊತೆಗೆ ಇಡಿಯಾಗಿ ಕಾಂಗ್ರೆಸಿನ ವಿರುದ್ಧವೂ ಸಿಟ್ಟಾಗಿದ್ದಾರೆ. ಅವರು ಜೆಡಿಎಸ್‍ಗೆ ಮತ ಹಾಕಬಹುದು. ಆಗ ಸಹಜವಾಗಿಯೇ ಕಾಂಗ್ರೆಸಿನ ಮತಗಳಿಕೆ ಕುಸಿಯುತ್ತೆ. ಇಪ್ಪತ್ತೈದರಿಂದ ಮೂವತ್ತು ಸಾವಿರಗಳಷ್ಟಿರುವ ತಮ್ಮ ಸಾಂಪ್ರದಾಯಿಕ ಬಿಜೆಪಿ ಮತಗಳ ಜೊತೆಗೆ ತಮಿಳು ಮತಗಳು ಒಲಿದರೆ ಗೆಲುವು ಗ್ಯಾರಂಟಿ ಅನ್ನೋದು ಬಿಜೆಪಿಯ ಲೆಕ್ಕಾಚಾರ.
ಒಂದು ಮೂಲದ ಪ್ರಕಾರ, ಯಡ್ಯೂರಪ್ಪನ ಮೂಲಕ ಟಿಕೆಟು ಪಡೆಯಲು ಕೊನೇವರೆಗೂ ಯತ್ನಿಸಿದ ರೋಷನ್ ಬೇಗ್, ತನಗೆ ಸಿಗದಿದ್ದರು ತನ್ನ ಪ್ರತಿಸ್ಪರ್ಧಿಗಳಾದ ಕಟ್ಟಾ ಅಥವಾ ಸುರಾನಾ ಪಾಲಾಗಲಿದ್ದ ಟಿಕೆಟ್ ತಪ್ಪಿಸಲು, ತನ್ನ ಆಪ್ತ ಶರವಣ್‍ಗೆ ಟಿಕೆಟ್ ಕೊಡಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. 2015ರ ಬಿಬಿಎಂಪಿ ಚುನಾವಣೆಯಲ್ಲಿ ಹಲಸೂರು ವಾರ್ಡ್‍ನಿಂದ ತನ್ನ ಹೆಂಡತಿಗೆ ಶರವಣ ಬಿಜೆಪಿ ಟಿಕೇಟ್ ಕೇಳಿದ್ದರು. ಆದರೆ ಬಿಜೆಪಿ ಬೇರೊಬ್ಬರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತು. ಇದರಿಂದ ಸಿಟ್ಟಿಗೆದ್ದ ಶರವಣ ಮಡದಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿಸಿ ಗೆಲ್ಲಿಸಿಕೊಂಡಿದ್ದರು. ಈ ಅವಧಿಯಲ್ಲಿ ಬಿಜೆಪಿ ಜೊತೆ ಕೊಂಚ ಮುನಿಸಿಕೊಂಡಿದ್ದ ಶರವಣ, ಬೇಗ್ ಜೊತೆ ಒಡನಾಟ ಸಾಧಿಸಿಕೊಂಡದ್ದು ದಿಟ.

ಟಿಕೇಟ್, ಶಾಸಕ ಸ್ಥಾನ, ಮಂತ್ರಿಗಿರಿಗಿಂತ ಹೆಚ್ಚಾಗಿ ಐಎಂಎ ಕುಣಿಕೆಯಿಂದ ತನ್ನ ತಲೆ ಉಳಿದರೆ ಸಾಕು ಎಂಬಂತಿರುವ ರೋಷನ್‍ಗೆ ಮೊದಲಿಂದಲೂ ರಿಜ್ವಾನ್ ಕಂಡರೆ ಅಷ್ಟಕ್ಕಷ್ಟೇ. ಮುಂದೊಂದು ದಿನ ತನ್ನ ಮುಸ್ಲಿಂ ಲೀಡರಿಕೆಗೆ ಈ ಹುಡುಗ ಕಂಟಕವಾಗುತ್ತಾನೆಂಬ ಅಳುಕು ಬೇಗ್‍ರದ್ದು. ಹಾಗಾಗಿ ಅಭ್ಯರ್ಥಿಯಾಗದೆ ಹೋದರು ಬೇಗ್, ಬಿಜೆಪಿಯ ಶರವಣಗೆ ನೆರವಾಗುವ ಸಾಧ್ಯತೆ ದಟ್ಟವಾಗಿದೆ. ನಾಮಪತ್ರ ಸಲ್ಲಿಕೆಯ ನಂತರ ಬೇಗ್ ಹೋಗಿ ಯಡ್ಯೂರಪ್ಪರನ್ನು ಭೇಟಿಯಾಗಿ ಬಂದಿರೋದೆ ಇದಕ್ಕೆ ಸಾಕ್ಷಿ. ಗುಪ್ತವಾಗಿ ಬಿಜೆಪಿ ಪರ ಕೆಲಸ ಮಾಡುವುದಕ್ಕೆಂದೇ ಜೆಡಿಎಸ್ ಸ್ಪರ್ಧಿಸುವ ಆಫರ್ ಕೊಟ್ಟರೂ ರೋಷನ್ ಬೇಗ್ ಗಪ್‍ಚುಪ್ ಆದರಾ……?

ಮೇಲ್ನೋಟಕ್ಕೆ ಡಮ್ಮಿ ಕ್ಯಾಂಡಿಡೇಟಿನಂತೆ ಕಾಣುವ ಬಿಜೆಪಿಯ ಶರವಣ ಸ್ಪರ್ಧೆಯನ್ನು ಲಘುವಾಗಿ ಪರಿಗಣಿಸಿ ಕಾಂಗ್ರೆಸ್ ಮೈಮರೆಯದಿದ್ದರೆ ರಿಜ್ವಾನ್ ಇಲ್ಲಿ ಗೆಲುವಿನ ನಗೆ ಬೀರಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ "ದ್ವಿಪಕ್ಷೀಯ" ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ...

‘ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುತ್ತಿರುವ ಎಸ್ಐಆರ್’: ಬಿಜೆಪಿಯ (ಕು)ತಂತ್ರ ಫಲಿಸಿದರೇ ಭಾರತವೇ ಇರುವುದಿಲ್ಲ..!

ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ...