ಕೊರೊನಾ ವೈರಸ್ ರೋಗಲಕ್ಷಣಗಳಿಲ್ಲದ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರಿಗೆ ತಮ್ಮ ರಾಜ್ಯಗಳಿಗೆ ಮರಳಲು ಅವಕಾಶ ನೀಡಿದ ಎರಡು ದಿನಗಳ ನಂತರ, ದೇಶಾದ್ಯಂತ ಲಾಕ್ ಡೌನ್ ಮಧ್ಯೆ ವಿಶೇಷ ರೈಲುಗಳನ್ನು ಓಡಿಸಲಾಗುವುದು ಎಂದು ಕೇಂದ್ರ ತಿಳಿಸಿದೆ.
ಲಾಕ್ಡೌನ್ನಿಂದ ಸಿಕ್ಕಿಬಿದ್ದಿದ್ದ ವಲಸಿಗ ಕಾರ್ಮಿಕರನ್ನು ಸಾಗಿಸುವ ಮೊದಲ “ವಿಶೇಷ ರೈಲು” ಇಂದು ಬೆಳಿಗ್ಗೆ 4: 30 ರ ಸುಮಾರಿಗೆ ತೆಲಂಗಾಣದಿಂದ ಜಾರ್ಖಂಡ್ಗೆ ತೆರಳಿದೆ. ಈ ರೈಲು ತೆಲಂಗಾಣದ ಲಿಂಗಂಪಲ್ಲಿಯಿಂದ 1,200 ಜನರನ್ನು ಜಾರ್ಖಂಡ್ನ ಹತಿಯಾ ಜಿಲ್ಲೆಗೆ ಕರೆದೊಯ್ಯಿತು.
24 ಕೋಚ್ಗಳ ರೈಲು ಸಾಮಾನ್ಯವಾಗಿ 72 ಜನರನ್ನು ಒಂದು ವಿಭಾಗದಲ್ಲಿ ಕೂರಿಸುತ್ತದೆಯಾದರೂ ಸಾಮಾಜಿಕ ದೂರ ಮಾರ್ಗಸೂಚಿಗಳಿಗೆ ಅನುಸಾರವಾಗಿ ತಲಾ 54 ಜನರನ್ನು ಮಾತ್ರ ಅನುಮತಿಸುತ್ತದೆ. ರೈಲಿಗೆ ಏರುವ ಮೊದಲು ಮೊದಲು ಎಲ್ಲಾ ಪ್ರಯಾಣಿಕರನ್ನು ಸಹ ರೋಗಲಕ್ಷಣಗಳಿಗಾಗಿ ಪರೀಕ್ಷಿಸಲಾಯಿತು.
ಎರಡನೇ ರೈಲು ಕೇರಳದ ಎರ್ನಾಕುಲಂನಿಂದ ಇಂದು ಸಂಜೆ ಒಡಿಶಾದ ಭುವನೇಶ್ವರಕ್ಕೆ ಹೊರಡಲಿದೆ ಎಂದು ಕೇರಳ ಸಚಿವ ವಿ.ಎಸ್.ಸುನೀಲ್ ಕುಮಾರ್ ತಿಳಿಸಿದ್ದಾರೆ. ಸಂಜೆ 6 ಗಂಟೆಗೆ ಹೊರಡಲಿರುವ ಈ ರೈಲು 1,000 ಕ್ಕೂ ಹೆಚ್ಚು ಜನರನ್ನು ಕರೆದೊಯ್ಯುವ ನಿರೀಕ್ಷೆಯಿದೆ. ಈ ರೈಲು ಸಂಪೂರ್ಣ ಸೋಂಕುರಹಿತವಾಗಲಿದ್ದು, ರಾಜ್ಯದಿಂದ ನಿಲ್ದಾಣಕ್ಕೆ ಕರೆತರಲಾಗುವ ಎಲ್ಲ ಪ್ರಯಾಣಿಕರು ಸಾಮಾಜಿಕ ದೂರವನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ರೈಲ್ವೆ ವಲಯ ಕಚೇರಿಗಳಿಗೆ ವಿಶೇಷ ರೈಲುಗಳನ್ನು ಓಡಿಸಲು ರಾಜ್ಯ ಸರ್ಕಾರಗಳಿಂದ ಇಂತಹ ಹೆಚ್ಚಿನ ವಿನಂತಿಗಳು ಬಂದಿವೆ ಎನ್ನಲಾಗಿದೆ.
ಬಿಜೆಪಿ ಪಕ್ಷದಿಂದ ಬಿದ್ದ ಒತ್ತಡದ ನಂತರ ಸಿಕ್ಕಿಬಿದ್ದ ಜನರಿಗೆ ಪ್ರಯಾಣಿಸಲು ಅವಕಾಶ ನೀಡುವ ನಿರ್ಧಾರ ಬಂದಿದೆ ಎಂದು ಮೂಲಗಳು ತಿಳಿಸಿವೆ. ವಲಸೆಗಾರರ ಬಿಕ್ಕಟ್ಟು ಪಕ್ಷವನ್ನು ರಾಜಕೀಯವಾಗಿ ಹಾನಿಗೊಳಿಸಬಹುದು ಎಂಬ ಆತಂಕಗಳು ಪಕ್ಷದೊಳಗೆ ಮೂಡಿಬಂದ ನಂತರ ಪಕ್ಷದ ಮುಖ್ಯಸ್ಥ ಜೆ.ಪಿ.ನಡ್ಡಾ ಅವರಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಲಾಯಿತು.
ಮಾರ್ಚ್ 25 ರಂದು ರಾಷ್ಟ್ರವ್ಯಾಪಿ ಲಾಕ್ ಡೌನ್ ನಂತರ ಲಕ್ಷಾಂತರ ವಲಸೆ ಕಾರ್ಮಿಕರು ಹಾಗೂ ಇತರರು ಇತರ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದಾರೆ. ಕೇಂದ್ರವು ವಲಸಿಗರ ಬಗ್ಗೆ ಕಾಳಜಿ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರೂ ಭಾರತದಾದ್ಯಂತ ಹಸಿವಿನ ಬಗ್ಗೆ ವರದಿಗಳು ಬರತೊಡಗಿವೆ.
ಲಾಕ್ ಡೌನ್ ಸಮಯದಲ್ಲಿ ಆರ್ಥಿಕ ಚಟುವಟಿಕೆಗಳು ಹಠಾತ್ ನಿಲುಗಡೆಗೆ ಬರುತ್ತಿದ್ದಂತೆ, ಸಾವಿರಾರು ಜನರಿಗೆ ಉದ್ಯೋಗ, ಹಣ, ಆಹಾರ ಹಾಗೂ ಆಶ್ರಯವಿಲ್ಲದೆ ಕಷ್ಟಕ್ಕೊಳಗಾಗಿದ್ದರು. ಅಲ್ಲದೆ ಅಂತರರಾಜ್ಯ ಸಾರಿಗೆ ಸ್ಥಗಿತಗೊಂಡಿದ್ದರಿಂದ ಲಕ್ಷಾಂತರ ಜನರು ಸಾವಿರಾರು ಕಿಲೋಮೀಟರ್ ದೂರದ ಮನೆಗೆ ಕಾಲ್ನಡಿಗೆಯಲ್ಲೆ ನಡೆದದ್ದರಿಂದ ಊರು ತಲುಪುವುದಕ್ಕಿಂತಲೂ ಮೊದಲೆ ನೂರಾರು ಜನರು ಸಾವಿಗೀಡಾಗಿದ್ದು ವರದಿಯಾಗಿತ್ತು.
ರಾಷ್ಟ್ರವ್ಯಾಪಿ ಲಾಕ್ಡೌನ್ನ ಎರಡನೇ ಹಂತವು ಮೇ 3 ರಂದು ಕೊನೆಗೊಳ್ಳಲಿದೆ. ಕೇಂದ್ರ ಸರ್ಕಾರವು ಮತ್ತೊಂದು ಬಾರಿಗೆ ಲಾಕ್ಡೌನ್ ಅನ್ನು ವಿಸ್ತರಿಸುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇದನ್ನೂ ಓದಿ: ಕಾರ್ಮಿಕರ ಮಹಾವಲಸೆ – ಬಡಜನತೆಯ ನಡು ಮುರಿದ ಮೋದಿ