Homeಮುಖಪುಟಆತ್ಮನಿರ್ಭರಕ್ಕಾಗಿ ಖಾಸಗಿಯವರನ್ನು ಬೆಂಬಲಿಸಿ: ಮೋದಿ ಹೇಳಿಕೆಗೆ ಕೆಲವು ಪ್ರಶ್ನೆಗಳು

ಆತ್ಮನಿರ್ಭರಕ್ಕಾಗಿ ಖಾಸಗಿಯವರನ್ನು ಬೆಂಬಲಿಸಿ: ಮೋದಿ ಹೇಳಿಕೆಗೆ ಕೆಲವು ಪ್ರಶ್ನೆಗಳು

ರಾಜ್ಯಗಳ ಜಿಎಸ್‌ಟಿ ಪಾಲನ್ನು ಕೇಂದ್ರವೇ ನೀಡುತ್ತಿಲ್ಲ. ಹಾಗಿರುವಾಗ, ಖಾಸಗಿ ಕೃಷಿ-ಉತ್ಪನ್ನ ಖರೀದಿದಾರರು ರೈತರಿಗೆ ಸರಿಯಾಗಿ ಪಾವತಿ ಮಾಡುತ್ತಾರೆ ಎಂದು ನಂಬುವುದು ಹೇಗೆ?

- Advertisement -
- Advertisement -

ನೀತಿ ಆಯೋಗದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ “ನಾವು ಆತ್ಮನಿರ್ಭರ ಭಾರತದ ಧ್ಯೇಯವನ್ನು ಸಾಕಾರಗೊಳಿಸಲು, ಖಾಸಗಿ ವಲಯಕ್ಕೆ ಅವಕಾಶಗಳನ್ನು ನೀಡಬೇಕಾಗಿದೆ” ಎಂದು ಹೇಳಿದ್ದಾರೆ. ಅವರ ಭಾಷಣದ ಕುರಿತು ಒಂದಿಷ್ಟು ಪ್ರಶ್ನೆಗಳು

• ‘ಆತ್ಮನಿರ್ಭರ್’ (ಸ್ವಾವಲಂಬಿ ಭಾರತ) ಸಾಧಿಸಲು ಸರ್ಕಾರಗಳು ಖಾಸಗಿ ವಲಯವನ್ನು ಉತ್ತೇಜಿಸಬೇಕು ಎಂಬುದರ ಅರ್ಥವೇನು?
• ಇಲ್ಲಿ ಖಾಸಗಿ ವಲಯವೆಂದರೆ, ದೇಸಿ ಖಾಸಗಿ ವಲಯವಷ್ಟೇಯೇ? ಅಥವಾ ಅದು ವಿದೇಶಿ ಖಾಸಗಿ ವಲಯವನ್ನೂ ಒಳಗೊಂಡಿದಿಯೇ?
• ದೇಸಿ ಖಾಸಗಿ ವಲಯವೆಂದರೇನು? ಅದು ವಿದೇಶಿ ಬಂಡವಾಳದ ಮೇಲೆಯೇ ನಿಂತಿದೆಯಲ್ಲವೆ? ಬಿಎಸ್‌ಎನ್‌ಎಲ್ ಅನ್ನು ನಾಶ ಮಾಡಿ ಜಿಯೋ ಬೆಳೆಯಲು ನೆರವು ನೀಡುವುದು ಆತ್ಮನಿರ್ಭರ್ ಹೇಗಾಗುತ್ತದೆ? ಅದು ‘ಆತ್ಮನಿರ್ಭರ್’ ಎಂಬ ಸುಂದರ ಪದದೊಂದಿಗೆ ಜನರನ್ನು ಮರುಳು ಮಾಡುವ ಸಾಹಸವೇ?
• ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಹಕಾರವಿರಬೇಕು ಎಂದಿದ್ದಾರಲ್ಲ? ರಾಜ್ಯಗಳ ಜಿಎಸ್‌ಟಿ ಪಾಲನ್ನೇ ಕೊಡದ ಮೇಲೆ ಅದೆಂತಹ ಸಹಕಾರ ನಿರೀಕ್ಷಿಸುವುದು?
• ಮುಖ್ಯ ಪ್ರಶ್ನೆ ಎಂದರೆ, ಪ್ರಧಾನಿ ಭಾಷಣದ ಎರಡು ಮುಖ್ಯ ಅಂಶಗಳು: ಆತ್ಮನಿರ್ಭರಕ್ಕಾಗಿ ಖಾಸಗಿಯವರಿಗೆ ಮಣೆ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಸಹಕಾರ…ಈ ಎರಡೂ ಅಂಶಗಳನ್ನು ಕೃಷಿ ಕಾಯ್ದೆಗಳು ಮತ್ತು ಅವುಗಳ ರದ್ದತಿಗಾಗಿ ನಡೆಯುತ್ತಿರುವ ಪ್ರತಿಭಟನೆ (ಪ್ರಧಾನಿ ಪ್ರಕಾರ ಆಂದೋಲನ್‌ಜೀವಿಗಳ ಪ್ರತಿಭಟನೆ!)ಯ ಹಿನ್ನೆಲೆಯಲ್ಲಿ ನೋಡೋಣ.

ಮೊದಲನೆದಾಗಿ, ಕೃಷಿ ಕಾಯ್ದೆಗಳ ಪ್ರಕಾರ ಖಾಸಗಿಯವರು ಕೃಷಿ ಕ್ಷೇತ್ರ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಇದು ಖಾಸಗಿಯವರಿಗೆ ಮತ್ತು ಅವರನ್ನು ಬೆಂಬಲಿಸುವ ಸರ್ಕಾರಕ್ಕೆ ಆತ್ಮನಿರ್ಭರ್ ಆಗಿರಬಹುದು, ಆದರೆ ಅದು ರೈತಾಪಿಗಳ ಪಾಲಿಗೆ ಆತ್ಮಹತ್ಯೆಯೇ ಆಗಿದೆ.

ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಹಕಾರ! ಕೃಷಿ ಕಾಯ್ದೆಗಳನ್ನು ರಾಜ್ಯಗಳ ಜೊತೆ ಚರ್ಚಿಸದೇ ಜಾರಿ ಮಾಡುವಾಗ ಇದು ನೆನಪಾಗಲಿಲ್ಲವೆ? ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿರುವ ಈ ಕೇಂದ್ರ ಸರ್ಕಾರ ರಾಜ್ಯಗಳಿಂದ ಸಹಕಾರ ಪಡೆಯುತ್ತಿದೆ, ಆದರೆ ಅದೆ ರಾಜ್ಯ ಸರ್ಕಾರಗಳನ್ನು ವಂಚಿಸುತ್ತಿದೆಯಲ್ಲವೆ?

ಕಳೆದ 6-7 ವರ್ಷಗಳಲ್ಲಿ, ನರೇಂದ್ರ ಮೋದಿಯವರ ಅತಿದೊಡ್ಡ ಕಾರ್ಪೊರೇಟ್ ದಾನಿಗಳಾದ ಅಂಬಾನಿಗಳು ಮತ್ತು ಅದಾನಿ ಗುಂಪುಗಳು ತಮ್ಮ ಪ್ರಭಾವವನ್ನು, ಕಾರ್ಪೊರೇಟ್ ಜಗತ್ತಿನ ಎಲ್ಲ ಪ್ರತಿಸ್ಪರ್ಧಿಗಳಿಗಿಂತ ತಮಗೆ ಹೆಚ್ಚಿನ ಲಾಭವನ್ನು ನೀಡುವ ನೀತಿಗಳನ್ನು ರೂಪಿಸಲು ಬಳಸಿಕೊಂಡಿವೆ. ದೇಶೀ ರಾಜಕಾರಣಿಗಳು ತಮ್ಮ ಜೇಬಿನಲ್ಲಿರುವುದರಿಂದ ಎರಡೂ ಗುಂಪುಗಳು ತಮ್ಮನ್ನು ತಾವು ಹೆಚ್ಚಿನ ವಿದೇಶಿ ಬಿಡ್ಡುದಾರರಿಗೆ ಮಾರಾಟ ಮಾಡಲು ಮುಂದಾಗಿವೆ.

ಮುಕೇಶ್ ಅಂಬಾನಿ ರಿಲಯನ್ಸ್ ಎಂಬುದು ದೇಸಿ ಕಂಪನಿ ಅಲ್ಲವೇ ಅಲ್ಲ.
ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಫೇಸ್‌ಬುಕ್ 5.5 ಬಿಲಿಯನ್ ಡಾಲರ್ (43,753 ಕೋಟಿ ರೂ.) ಹೂಡುವ ಮೂಲಕ ಅತಿದೊಡ್ಡ ಹೂಡಿಕೆದಾರರಾಗಿದ್ದರೆ, ಗೂಗಲ್ 4.5 ಬಿಲಿಯನ್ ಡಾಲರ್‌ಗಳನ್ನು ಹೂಡಿದೆ. ಸೌದಿ ಅರೇಬಿಯಾದ ಸಾರ್ವಭೌಮ ಸಂಪತ್ತು ನಿಧಿಯಾಗಿರುವ ಪಬ್ಲಿಕ್ ಇನ್‌ವೆಸ್ಟ್ಮೆಂಟ್ ಫಂಡ್ 1.5 ಬಿಲಿಯನ್ ಡಾಲರ್, ಅಮೆರಿಕಾದ ದೊಡ್ಡ ಹೂಡಿಕೆದಾರ ಕಂಪನಿ ಕೆಕೆಆರ್ 1.5 ಬಿಲಿಯನ್ ಡಾಲರ್, ಅಬುದಾಬಿ ಮೂಲದ ಮುಬಡಾಲಾ ಮತ್ತು ಎಡಿಐಎ ಎಂಬ ಎರಡು ಹೂಡಿಕೆ ನಿಧಿ ಕಂಪನಿಗಳು ಕ್ರಮವಾಗಿ 1.2 ಬಿಲಿಯನ್ ಡಾಲರ್ ಮತ್ತು 750 ಮಿಲಿಯನ್ ಡಾಲರ್ ಮತ್ತು ಜಾಗತಿಕ ಆಸ್ತಿ ನಿರ್ವಹಣಾ ಸಂಸ್ಥೆ ಟಿಪಿಜಿ ಕ್ಯಾಪಿಟಲ್ 600 ಮಿಲಿಯನ್ ಡಾಲರ್ ಹಣವನ್ನು ಅಂಬಾನಿ ಕಂಪನಿಯಲ್ಲಿ ಹೂಡಿಕೆ ಮಾಡಿವೆ. ಪಟ್ಟಿ ಇನ್ನೂ ದೊಡ್ಡದಾಗಬಹುದು.

ಹೀಗಾಗಿ ಅಂಬಾನಿ ಹಿತರಕ್ಷಣೆ ಎಂದರೆ ಮೇಲೆ ತಿಳಿಸಿದ ಕಂಪನಿಗಳ ಬಂಡವಾಳದ ರಕ್ಷಣೆಯೂ ಆಗಿದೆಯಲ್ಲವೆ? ಈ ಕಾರಣಕ್ಕೆ ಆತ್ಮನಿರ್ಭರ‌ಕ್ಕಾಗಿ ಖಾಸಗಿಯವರಿಗೆ ಉತ್ತೇಜನ ಎಂಬ ಮಾತನ್ನು ಅರ್ಥೈಸಿಕೊಳ್ಳಬೇಕಾಗಿದೆ.

ಭಾರೀ ವಿರೋಧದ ನಡುವೆಯೂ ಕೃಷಿ ಕಾನೂನುಗಳನ್ನು ಹೇರಲು ಮೋದಿ ಸರ್ಕಾರ ಮುಂದಾದ್ದರ ಹಿಂದಿನ ಬಹಿರಂಗ ರಹಸ್ಯವಿದು. ಕೇವಲ ಭಾರತೀಯ ಕೃಷಿಯಷ್ಟೇ ಅಲ್ಲ, ನಮ್ಮ ಎಲ್ಲ ವಲಯಗಳಿಗೂ ನಿಮಗೆ ಮುಕ್ತ ಸ್ವಾಗತ ಎಂದು ಎಲ್ಲಾ ವಿದೇಶಿ ಹೂಡಿಕೆದಾರರಿಗೆ ಸೂಚಿಸುವ ಒಂದು ಮಾರ್ಗವಾಗಿದೆ ಇದು. ಕೃಷಿ ಕಾನೂನು ಹಿಂಪಡೆಯುವುದಿಲ್ಲ ಎನ್ನುತ್ತಿರುವ ಭಾರತ ಸರ್ಕಾರವು ದೃಢವಾಗಿ ತಮ್ಮ (ವಿದೇಶಿ ಬಂಡವಾಳಿಗರು) ಕಡೆಗಿದೆ ಮತ್ತು ತಮಗೆ ಲಾಭದ ಖಾತ್ರಿ ನೀಡಲು ತನ್ನದೇ ಜನರನ್ನು ಬಲಿ ಕೊಡಲು ಸಿದ್ಧವಾಗಿದೆ ಎಂದು ವಿದೇಶಿ ಹೂಡಿಕೆದಾರರು, ದೇಸಿ ವಂಚಕ ಉದ್ಯಮಪತಿಗಳು ನಂಬಬೇಕೆಂದರೆ ಮೋದಿ ಕೃಷಿ ಕಾಯ್ದೆಗಳ ಪರ ನಿಲ್ಲಲೇಬೇಕು ಅಲ್ಲವೆ?

ಪಿ.ಕೆ. ಮಲ್ಲನಗೌಡರ್

(ಲೇಖಕರು ಪತ್ರಕರ್ತರು, ಅಭಿಪ್ರಾಯಗಳು ವೈಯಕ್ತಿಕವಾದವು)


ಇದನ್ನೂ ಓದಿ: ಆತ್ಮನಿರ್ಭರ ಭಾರತಕ್ಕಾಗಿ ಖಾಸಗಿ ವಲಯಕ್ಕೆ ಉತ್ತೇಜನ ನೀಡಿ: ಪ್ರಧಾನಿ ಮೋದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...