Homeಪರಿಸರಅರಣ್ಯ ಅತಿಕ್ರಮಣದಾರರ ಜೊತೆ ಯಾವುದೇ ರಾಜಿ ಇಲ್ಲ: 10,000 ಕಟ್ಟಡಗಳ ತೆರವಿಗೆ ಆದೇಶಿಸಿದ ಸುಪ್ರೀಂ ಕೋರ್ಟ್‌

ಅರಣ್ಯ ಅತಿಕ್ರಮಣದಾರರ ಜೊತೆ ಯಾವುದೇ ರಾಜಿ ಇಲ್ಲ: 10,000 ಕಟ್ಟಡಗಳ ತೆರವಿಗೆ ಆದೇಶಿಸಿದ ಸುಪ್ರೀಂ ಕೋರ್ಟ್‌

- Advertisement -
- Advertisement -

ಸುಪ್ರೀಂ ಕೋರ್ಟ್‌ ಹರ್ಯಾಣದ ಅರಾವಳಿ ಭಾಗದಲ್ಲಿ ಅರಣ್ಯ ಭೂಮಿಯನ್ನು ಅತಿಕ್ರಮಿಸಿ ಕಟ್ಟಿದ 10,000 ಕಟ್ಟಡಗಳ ತೆರವಿಗೆ ಆದೇಶಿಸಿದೆ. ಸೋಮವಾರ ಜೂನ್‌ 7 ರಂದು ಪ್ರಕರಣದ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌ ಅರಣ್ಯ ಅತಿಕ್ರಮಣದ ವಿಷಯದಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ ಎಂದು ಹೇಳಿದೆ.

ಹರ್ಯಾಣದ ಲಕ್ಕದ್‌ಪುರ್‌-ಖೋರಿ ಗ್ರಾಮ ವ್ಯಾಪ್ತಿಯಲ್ಲಿ ಅರಾವಳಿ ಅರಣ್ಯ ಭಾಗವನ್ನು ಅತಿಕ್ರಮಿಸಿ ಸುಮಾರು 10,000 ನಿವಾಸದ ಕಟ್ಟಡಗಳನ್ನು ಅನೇಕರು ಕಟ್ಟಿಕೊಂಡಿದ್ದರು. ಅರಣ್ಯ ಅತಿಕ್ರಮಣದ ವಿಷಯದಿಂದ ಕೆಂಡಾಮಂಡಲವಾದ ಸುಪ್ರೀಂ ಕೋರ್ಟ್ ಸ್ಥಳೀಯ ಆಡಳಿತವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.

2020 ರ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್‌ ಅರಣ್ಯ ಒತ್ತುವರಿಯನ್ನು ತೆರವುಗೊಳಿಸುವಂತೆ ಮಧ್ಯಂತರ ಆದೇಶ ನೀಡಿದೆ. ಆದರೆ ನಮ್ಮ ಆದೇಶಕ್ಕೆ ನೀವು ಕನಿಷ್ಠ ಮರ್ಯಾದೆಯನ್ನು ನೀಡಿಲ್ಲ. ಕಳೆದ ಒಂದೂವರೆ ವರ್ಷದಿಂದ ಸ್ಥಳೀಯ ಆಡಳಿತ ಏನು ಮಾಡುತ್ತಿದೆ ಎಂದು ಫರೀದಾ ಬಾದ್‌ ಮುನ್ಸಿಪಲ್‌ ಕಾರ್ಪೊರೇಷನ್‌‌  ನಡೆಯನ್ನು ಸುಪ್ರೀಂ ಕೋರ್ಟ್‌ ತೀವ್ರವಾಗಿ ಖಂಡಿಸಿದೆ. ಜಸ್ಟಿಸ್ ಎ.ಎಮ್‌. ಖಾನ್ವಿಲ್‌ಕರ್‌ ಮತ್ತು ಜಸ್ಟಿಸ್ ದಿನೇಶ್‌ ಮಹೇಶ್ವರಿ ಅವರಿದ್ದ ಸುಪ್ರೀಂ ಕೋರ್ಟ್‌ ಪೀಠ ಕೂಡಲೆ ಒತ್ತುವರಿಯಾಗಿರುವ ಅರಣ್ಯವನ್ನು ತೆರವುಗೊಳಿಸಿ ಕೋರ್ಟ್‌ಗೆ ಮಾಹಿತಿ ನೀಡುವಂತೆ ಆದೇಶಿಸಿತು.

ಇದನ್ನೂ ಓದಿ : ಪರಿಸರ ಪೂರ್ವಾನುಮತಿ ಇಲ್ಲದೆ ಕೈಗಾರಿಕೆ ನಡೆಸುವಂತಿಲ್ಲ: ಹಸಿರು ನ್ಯಾಯಪೀಠ

ಕಟ್ಟಡಗಳ ತೆರವಿಗೆ ತಡೆ ಕೋರಿ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲ ಕೋಲಿನ್‌ ಗೊನ್ಸಾಲ್ವೇಸ್‌ ಮನೆಗಳನ್ನು ಕಟ್ಟಿಕೊಂಡಿರುವವರು ಅತ್ಯಂತ ಬಡವರಿದ್ದಾರೆ. ಕೊರೋನಾ ಸಂದರ್ಭದಲ್ಲಿ ನ್ಯಾಯಾಲಯ ಬಡವರನ್ನು ಇನ್ನಷ್ಟು ಕಷ್ಟಕ್ಕೆ ದೂಡಬಾರದು. ಮನೆಗಳನ್ನು ಖಾಲಿ ಮಾಡಲು ನಿರ್ದಿಷ್ಟ ದಿನಾಂಕವನ್ನಾದರೂ ನೀಡಿ. ಜೊತೆಗೆ ಮನೆ ತೆರವು ಮಾಡಿದ ಕುಟುಂಬಗಳಿಗೆ  ಪುನರ್ವಸತಿ ಕಲ್ಪಿಸುವಂತೆ  ಹರ್ಯಾಣದ  ರಾಜ್ಯ ಸರ್ಕಾರಕ್ಕೆ ಆದೇಶವನ್ನು ನೀಡಿ ಎಂದು ಮನವಿ ಮಾಡಿದರು.

ಗೊನ್ಸಾಲ್ವೇಸ್‌ ಮನವಿಯನ್ನು ಮನ್ನಿಸದ ಸುಪ್ರೀಂ ಕೋರ್ಟ್‌ ಅರಣ್ಯ ಅತಿಕ್ರಮಣದ ವಿಚಾರದಲ್ಲಿ ಯಾವುದೇ ರಾಜಿ ಸಾದ್ಯವಿಲ್ಲ. ಪುನರ್ವಸತಿ ಕಲ್ಪಿಸುವುದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ.  ನಾವು ಆದೇಶ ನೀಡಲು ಸಾಧ್ಯವಿಲ್ಲ. ಬಡವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿರುವುದಕ್ಕೆ ನಾವು ಕೇವಲ ಕ್ಷಮೆಯನ್ನು ಮಾತ್ರ ಕೇಳಲು ಸಾಧ್ಯ ಎಂದು ಗೊನ್ಸಾಲ್ವೇಸ್‌ ಮನವಿಗೆ ಪ್ರತಿಕ್ರಿಯಿಸಿತು.

ಹಾಗೇ ಸುಪ್ರೀಂ ಕೋರ್ಟ್‌ ಯಾವುದೇ ಸಂಘರ್ಷವಿಲ್ಲದೇ ಶಾಂತಿಯುತವಾಗಿ ಅತಿಕ್ರಮಣದಾರರು ಅರಣ್ಯ ಭೂಮಿಯನ್ನು ತೆರವುಗೊಳಿಸಿದರೆ ಎಲ್ಲರಿಗೂ ಒಳ್ಳೆಯದು. ಸ್ಥಳೀಯ ಕಾರ್ಪೊರೇಶನ್‌ ಮೂಲಕ ಬಲವಂತವಾಗಿ ಮನೆ ತೆರವು ಮಾಡುವಂತ ಸನ್ನಿವೇಶ ಸೃಷ್ಟಿಸಬೇಡಿ ಎಂದು ಅರ್ಜಿದಾರರ ಪರ ವಕೀಲ ಗೊನ್ಸಾಲ್ವೇಸ್‌  ಅವರಿಗೆ ಸುಪ್ರೀಂ ಕೋರ್ಟ್‌ ಸೂಚಿಸಿತು.

6 ವಾರದೊಳಗೆ ಅತಿಕ್ರಮ ಕಟ್ಟಡಗಳನ್ನು ತೆರವುಗೊಳಿಸಿದ ವರದಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸುವಂತೆ ಹರ್ಯಾಣ ರಾಜ್ಯ ಅರಣ್ಯ ಇಲಾಖೆಯ ಕಾರ್ಯದರ್ಶಿಗೆ ಸೂಚಿಸಿದ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಜುಲೈ 27 ಕ್ಕೆ ಮುಂದೂಡಿತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಒತ್ತು ವರದಿಯಾದ ನೆಲ,ಕಾಡು,ಗೋಮಾಳ ಮುಂತಾದವುಗಳನ್ನು ಹಲವು ಮಗ್ಗುಲಲ್ಲಿ ಒರೆಹಚ್ಚಿ ನೋಡಬೇಕಾಗಿದೆ.
    ಪಬ್ಲಿಕ್ ಸೊತ್ತಿನ ಒತ್ತುವರಿಯ ಒಂದೊಂದು ಕೇಸಿನ ಉದ್ದ ಅಗಲವನ್ನು ಆಳವನ್ನು ಸದರಿ ಸೊತ್ತಿನಲ್ಲಿ ಇಳೆಹುಟ್ಟಿನ ಸರಕನ್ನು ಬಳಸಿ ಸೊತ್ತಿನ ಬೆಲೆ ಏರಿಕೆಯಾಗಿರುವುದನ್ನು ಕಡೆಗಣಿಸಬಾರದು.
    ಆಳ್ವಿಕೆಗೆ ಸದರಿ ಒತ್ತುವರಿಯಾದ ಜಾಗದ ಬೆಲೆಯನ್ನು ಪಡೆಯಲು ತೆರವುಮಾಡುವುದನ್ನು ಬದಿಗಿಟ್ಟು ಇತರೆ ದಾರಿಯತ್ತ ನೋಡಬೇಕಾಗಿದೆ.

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...