Homeಮುಖಪುಟತಮಿಳುನಾಡು ಸ್ಥಳೀಯ ಚುನಾವಣೆ: ಗೋಡ್ಸೆ ಸಮರ್ಥಕಿ, ಬಿಜೆಪಿ ಅಭ್ಯರ್ಥಿ ಚೆನ್ನೈ ಪಾಲಿಕೆಗೆ ಆಯ್ಕೆ

ತಮಿಳುನಾಡು ಸ್ಥಳೀಯ ಚುನಾವಣೆ: ಗೋಡ್ಸೆ ಸಮರ್ಥಕಿ, ಬಿಜೆಪಿ ಅಭ್ಯರ್ಥಿ ಚೆನ್ನೈ ಪಾಲಿಕೆಗೆ ಆಯ್ಕೆ

- Advertisement -
- Advertisement -

ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ನಗರ ಸ್ಥಳೀಯ ಚುನಾವಣೆಯಲ್ಲಿ, ಗ್ರೇಟರ್ ಚೆನ್ನೈ ಕಾರ್ಪೊರೇಶನ್‌ನ 200 ಕೌನ್ಸಿಲರ್ ಸ್ಥಾನಗಳಲ್ಲಿ ಬಿಜೆಪಿಯಿಂದ ಗೆದ್ದ ಏಕೈಕ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ ಉಮಾ ಆನಂದನ್. ಇವರು ತನ್ನ ಚುನಾವಣಾ ಪ್ರಚಾರದ ವೇಳೆ ಮಹಾತ್ಮ ಗಾಂಧಿಯ ಹಂತಕ ನಾಥೂರಾಂ ಗೋಡ್ಸೆಯನ್ನು ಹೊಗಳಿ ವಿವಾದ ಸೃಷ್ಟಿಸಿದ್ದರು.

ಉಮಾ ಅವರು ಚೆನ್ನೈನ ವೆಸ್ಟ್ ಮಾಂಬಲಂನ ವಾರ್ಡ್ 134 ಅನ್ನು ಗೆದ್ದಿದ್ದಾರೆ. ಈ ಪ್ರದೇಶವು ಕಳೆದ ವರ್ಷ ಸಂಭವಿಸಿದ ನೆರೆಯಿಂದಾಗಿ ಸಂಕಷ್ಟ ಅನುಭವಿಸಿತ್ತು. ಇದು ಮಹಾನಗರ ಪಾಲಿಕೆಯ ವಿರುದ್ದ ಜನರು ತಿರುಗಿ ಬೀಳಲು ಕಾರಣ ಎನ್ನಲಾಗಿದೆ.

ದಿ ನ್ಯೂಸ್ ಮಿನಿಟ್‌ ವರದಿ ಮಾಡಿದಂತೆ, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ವೀಡಿಯೊ ಕ್ಲಿಪ್‌ನಲ್ಲಿ ಸಂದರ್ಶಕರೊಬ್ಬರು ಉಮಾ ಅವರನ್ನು ಪ್ರಶ್ನಿಸುತ್ತಾ, “ಚಾಕು ಮತ್ತು ಬಂದೂಕುಗಳನ್ನು ಎತ್ತುವವರಲ್ಲಿ ಹೆಚ್ಚಿನವರು ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ಎಂದು ನೀವು ಹೇಳುತ್ತೀರಾ?” ಎಂದು ಕೇಳುತ್ತಾರೆ. ಅದಕ್ಕೆ ಉಮಾ ಅವರು, “ಹೌದು” ಎಂದು ಉತ್ತರಿಸುತ್ತಾರೆ.

ಇದೇ ವೇಳೆ ಸಂದರ್ಶಕ, ಗೋಡ್ಸೆ ಗಾಂಧಿಯನ್ನು ಗುಂಡಿಕ್ಕಿದ ಬಗ್ಗೆ ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರಿಸಿದ ಉಮಾ, “ಆದರೆ ಗೋಡ್ಸೆ ಗಾಂಧಿಯನ್ನು ಯಾಕೆ ಕೊಂದಿದ್ದು ಗೊತ್ತೆ?” ಎಂದು ಹೇಳುತ್ತಾರೆ. ಅದೇ ಕ್ಲಿಪ್‌ನಲ್ಲಿ ಅವರು, “ಗೋಡ್ಸೆ ಗಾಂಧಿಯನ್ನು ಕೊಂದಿದ್ದಕ್ಕೆ, ಗೋಡ್ಸೆಯದ್ದೇ ಆದ ಸಮರ್ಥನೆಯನ್ನು ಹೊಂದಿದ್ದ. ಗೂಡ್ಸೆ ಹಿಂದೂ ಆಗಿದ್ದ, ಅದಕ್ಕಾಗಿ ತುಂಬಾ ಹೆಮ್ಮೆಯಿದೆ. ಇದರ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ, ನಾನು ಗೋಡ್ಸೆಯ ಬೆಂಬಲಿಗ” ಎಂದು ಹೇಳುತ್ತಾರೆ.

ಉಮಾ ಚುವಾವಣೆಯಲ್ಲಿ ಗೆದ್ದ ನಂತರ ಅವರ ಇತರ ಹಳೆಯ ಸಂದರ್ಶನಗಳ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೊಗಳಲ್ಲಿ ಅವರು ಜಾತಿ ವ್ಯವಸ್ಥೆಯನ್ನು ಸಮರ್ಥಿಸಿಕೊಂಡು, ದಲಿತ ನಾಯಕರ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ.

ಒಂದು ವೀಡಿಯೊದಲ್ಲಿ ಅವರು, “ನಾನು ಬ್ರಾಹ್ಮಣನಾಗಿರುವುದರಲ್ಲಿ ಹೆಮ್ಮೆಯಿದೆ. ನನಗೆ ಜಾತಿಯ ವ್ಯಾಮೋಹವಿಲ್ಲ, ಆದರೆ ನನ್ನ ಪರಂಪರೆಯ ಬಗ್ಗೆ ನನಗೆ ಹೆಮ್ಮೆ ಇದೆ. ಜಾತಿಗಳಿವೆ. ಇದು ನಮ್ಮ ಸಂಸ್ಕೃತಿಯ ಭಾಗವಾಗಿದೆ. ಜಾತಿ ಹೋದರೆ ನಮ್ಮಲ್ಲಿ ಸಂಸ್ಕೃತಿ ಇರುವುದಿಲ್ಲ” ಎಂದು ಹೇಳುತ್ತಾರೆ.

ಬ್ರಾಹ್ಮಣರು ವಾಪಾಸು ಹೊಡೆಯಬೇಕು ಎಂದು ಪ್ರತಿಪಾದಿಸುತ್ತಾ, ದ್ರಾವಿಡ ಕಳಗಂನ ಪ್ರಧಾನ ಕಾರ್ಯದರ್ಶಿ ಕೆ. ವೀರಮಣಿ ಅವರ ಬಗ್ಗೆ ನಿಂದನೀಯ ಭಾಷೆಯನ್ನು ಉಮಾ ಬಳಸಿದ್ದರು.

ಇದನ್ನೂ ಓದಿ: ಗೋಡ್ಸೆ- ಬಿಜೆಪಿ ಪರ, ಜೆಎನ್‌ಯು- ರೈತ ವಿರೋಧಿ ಟ್ವೀಟ್‌ಗಳು ವೈರಲ್‌: ಜೆಎನ್‌ಯು ನೂತನ ಉಪಕುಲಪತಿ ಹೆಸರಿನಲ್ಲಿದ್ದ ಖಾತೆ ಡಿಲೀಟ್ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ ಪರ, ಮೋದಿ ವಿರುದ್ಧದ ಪೋಸ್ಟ್‌ಗೆ ಲೈಕ್‌ ಹಾಕಿದ ಪ್ರಾಂಶುಪಾಲೆಗೆ ರಾಜೀನಾಮೆ ನೀಡುವಂತೆ ಸೂಚನೆ

0
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪ್ಯಾಲೆಸ್ತೀನ್‌ ಪರ ಮತ್ತು ಮೋದಿ ವಿರುದ್ಧದ ಪೋಸ್ಟ್‌ಗೆ ಲೈಕ್‌ ಮಾಡಿದ ಕಾರಣಕ್ಕೆ ಮುಂಬೈನ ಸೋಮಯ್ಯ ಶಾಲೆಯ ಪ್ರಾಂಶುಪಾಲೆ ಪರ್ವೀನ್ ಶೇಖ್ ಅವರಲ್ಲಿ ಶಾಲಾ ಆಡಳಿತ ಮಂಡಳಿ ರಾಜೀನಾಮೆ...