ಭಾರತದಲ್ಲಿ ಯಾವುದೇ ಬಂಧನ ಕೇಂದ್ರಗಳಿಲ್ಲ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಯನ್ನು ರಾಷ್ಟ್ರವ್ಯಾಪಿ ಜಾರಿ ಮಾಡುತ್ತಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗಳನ್ನು ಖಂಡಿಸಿ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಆರ್ಎಸ್ಎಸ್ನ ಪ್ರಧಾನ ಮಂತ್ರಿ ಭಾರತಮಾತೆಗೆ ಸುಳ್ಳು ಹೇಳುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ #JhootJhootJhoot (ಸುಳ್ಳು, ಸುಳ್ಳು, ಸುಳ್ಳು) ಎಂಬ ಹ್ಯಾಶ್ಟ್ಯಾಗ್ ಕೂಡ ಸೇರಿಸಿದ್ದಾರೆ.
ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ಭಾನುವಾರ ಪ್ರಧಾನಿ ಮೋದಿಯವರ ಭಾಷಣದ ವಿಡಿಯೋ ಕ್ಲಿಪ್ ಮತ್ತು ಅಸ್ಸಾಂನಲ್ಲಿ ಕಟ್ಟಲ್ಪಡುತ್ತಿರುವ ಬಂಧನ ಕೇಂದ್ರದ ವಿಡಿಯೋವನ್ನು ರಾಹುಲ್ ಗಾಂಧಿ ಟ್ವೀಟ್ನೊಂದಿಗೆ ಹಂಚಿಕೊಂಡಿದ್ದಾರೆ. ಆ ಮೂಲಕ ಒಂದು ಕಡೆ ಬಂಧನ ಕೇಂದ್ರ ಕಟ್ಟುತ್ತಿದ್ದರೂ ನರೇಂದ್ರ ಮೋದಿಯವರು ಇಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
RSS का प्रधानमंत्री भारत माता से झूठ बोलता हैं ।#JhootJhootJhoot pic.twitter.com/XLne46INzH
— Rahul Gandhi (@RahulGandhi) December 26, 2019
ಸಿಎಎ ಮತ್ತು ಎನ್ಆರ್ಸಿ ಕುರಿತ ಪ್ರಧಾನಮಂತ್ರಿಯವರ ಹೇಳಿಕೆಯನ್ನು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿವೆ. ಅವರ ನಡೆಯನ್ನು ಪ್ರತಿಪಕ್ಷಗಳು ತೀವ್ರವಾಗಿ ಪ್ರಶ್ನಿಸಿವೆ.
ಕಾಂಗ್ರೆಸ್ ಮತ್ತು ನಗರ ನಕ್ಸಲರು ಈ ವಿಷಯದ ಬಗ್ಗೆ ವದಂತಿಗಳನ್ನು ಹಬ್ಬಿಸಿದ್ದಾರೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದರು. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು, ಕೆಲವು ನಗರ ನಕ್ಸಲರು ಎಲ್ಲಾ ಮುಸ್ಲಿಮರನ್ನು ಬಂಧನ ಕೇಂದ್ರಗಳಿಗೆ ಕಳುಹಿಸಲಾಗುವುದು ಎಂಬ ವದಂತಿಗಳನ್ನು ಹರಡುತ್ತಿದ್ದಾರೆ. ದೇಶದ ಮುಸ್ಲಿಮರನ್ನು ಬಂಧನ ಕೇಂದ್ರಗಳಿಗೆ ಕಳುಹಿಸುವುದಿಲ್ಲ. ಭಾರತದಲ್ಲಿ ಯಾವುದೇ ಬಂಧನ ಕೇಂದ್ರಗಳಿಲ್ಲ. ಭಾರತದ ಮುಸ್ಲಿಮರು ಚಿಂತಿಸಬೇಕಾಗಿಲ್ಲ. ಸಿಎಬಿ ಮತ್ತು ಎನ್ಆರ್ಸಿ ದೇಶದ ಮುಸ್ಲಿಮರಿಗೆ ಅನ್ವಯಿಸುವುದಿಲ್ಲ” ಎಂದು ಪ್ರಧಾನಿ ಮೋದಿ ಭಾನುವಾರ ರಾಮ್ಲೀಲಾ ಮೈದಾನದಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ ತಿಳಿಸಿದ್ದರು.
“ನನ್ನ ಸರ್ಕಾರ 2014 ರಿಂದ ಅಧಿಕಾರಕ್ಕೆ ಬಂದಾಗಿನಿಂದ, ಎನ್ಆರ್ಸಿ ಬಗ್ಗೆ ಎಲ್ಲಿಯೂ ಯಾವುದೇ ಚರ್ಚೆ ನಡೆದಿಲ್ಲ ಎಂದು ಭಾರತದ 130 ಕೋಟಿ ನಾಗರಿಕರಿಗೆ ಹೇಳಲು ನಾನು ಬಯಸುತ್ತೇನೆ. ಸುಪ್ರೀಂ ಕೋರ್ಟ್ನ ಆದೇಶದ ನಂತರವೇ ಈ ಎನ್ಆರ್ಸಿಯನ್ನು ಅಸ್ಸಾಂನಲ್ಲಿ ಮಾಡಲಾಗಿದೆ” ಎಂದು ಅವರು ಹೇಳಿದ್ದರು. ಅವರ 97 ನಿಮಿಷಗಳ ಭಾಷಣದಲ್ಲಿ ಹೆಚ್ಚಿನ ಸಮಯವನ್ನು ಎನ್ಆರ್ಸಿ ಮತ್ತು ಹೊಸ ಪೌರತ್ವ ಕಾನೂನಿಗೆ ಮೀಸಲಿಟ್ಟಿದ್ದರು.
ಧರ್ಮವನ್ನು ಪೌರತ್ವಕ್ಕೆ ಮಾನದಂಡವನ್ನಾಗಿ ಮಾಡಿದ ಮೊದಲ ಕಾನೂನು ಎಂಬುದಾಗಿ ಪೌರತ್ವ ಕಾಯ್ದೆಯ ವಿರುದ್ಧ ದೇಶದ ಹಲವಾರು ಭಾಗಗಳಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿವೆ. ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು, ವಿರೋಧ ಪಕ್ಷಗಳು ಮತ್ತು ಇತರ ಪ್ರತಿಭಟನಾಕಾರರು ಕಾನೂನು ಮುಸ್ಲಿಮರ ವಿರುದ್ಧ ತಾರತಮ್ಯ ಮಾಡುತ್ತದೆ ಎಂದು ಹೇಳುತ್ತಾರೆ ಮತ್ತು ಇದು ಸಂವಿಧಾನದ ಜಾತ್ಯತೀತ ಸಿದ್ಧಾಂತಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲಯಲ್ಲಿ ರಾಹುಲ್ ಗಾಂಧಿ ಮಾಡಿದ ಟ್ವೀಟ್ ವೈರಲ್ ಆಗಿದೆ.
ಕಾಂಗ್ರೆಸ್ , ಇತರೆ ಪಕ್ಷಗಳಿಗಾಗಿ ಗುರಿ ಇಟ್ಟಿದ್ದೀರಾ ಮೋದಿಯವರೇ, ಜನರ ಪರಿಸ್ಥಿತಿ ಬಗ್ಗೆ ಯೋಚಿಸಿ. ಒಂದು ಉಪಯೋಗ ನಿಮ್ಮಿಂದ ಆಗಿಲ್ಲ
ಪ್ರಪಂಚದಲ್ಲೇ ಅತೀ ದೊಡ್ಡ ಸುಳ್ಳುಗಾರ
ಎರಡು ಸಾವಿರದ 14ನೇ ಚುನಾವಣೆಯಲ್ಲಿ ಕೊಟ್ಟ ಪ್ರಣಾಳಿಕೆ ಗಳೆಲ್ಲವೂ ಬರೀ ಸುಳ್ಳು ಬ್ಲಾಕ್ ಮನಿ ಬೇನಾಮಿ ಆಸ್ತಿ ಮಾಡಿದವರಿಗೆ ಭಯವಿರಬೇಕು ನಮ್ಮ ಅಧಿಕಾರ ಅಂತ ಹೇಳಿದ ಮೋದಿ
ಕೂದಲೆಳೆಯಷ್ಟು ಬದಲಾವಣೆ ತರಲಿಲ್ಲ ಮೇಕ್ ಇನ್ ಇಂಡಿಯಾ
ಸ್ವಚ್ಛ ಭಾರತ
ಸಂವಿಧಾನ ವಿರೋಧಿಯಾಗಿ ಮುಂದುವರಿಯುತ್ತಾ ಸಮಾಜದ ನಾಗರಿಕರು ಎಲ್ಲರಿಗೂ ದ್ರೋಹ ಮಾಡುತ್ತಾ ಹಿಟ್ಲರ್ ಭಾಷಣ ಬಿಟ್ರೆ ಬೇರೆ ಏನು
ಹೊಸ ಯೋಜನೆಗಳು ಕೈಗಾರಿಕಾ ಸಂಸ್ಥೆ ಉದ್ಯೋಗ ಸೃಷ್ಟಿ ಕೃಷಿ ಇಲಾಖೆಗೆ ಸಂಬಂಧಪಟ್ಟ ಯಾವ ಯೋಜನೆಗಳನ್ನು ರೂಪಿಸಲಿಲ್ಲ
ಕಾಂಗ್ರೆಸ್ನ ಮನಮೋಹನ್ ಸಿಂಗ್ ಹೋಲಿಸಿಕೊಂಡರೆ
ನರೇಂದ್ರ ಮೋದಿ ಝೀರೋ ವ್ಯಾಲ್ಯೂ ನು ಕಡಿಮೇನೆ
ದೇಶದೆಲ್ಲೆಡೆ ಶಾಂತಿಯನ್ನು ಸಾರುತ್ತಾರೆ ಎನ್ನಬೇಕು ಜನಸಾಮಾನ್ಯರು
ಹೇಳುವುದು ಮಾತ್ರ ಲಾರ್ಡ ಬುದ್ಧ ನೋ ಯುದ್ಧ ಅನ್ನುತ್ತಾರೆ ಇವು ಭಾಷಣಕ್ಕೆ ಮಾತ್ರ ಸೀಮಿತ
ಮಾಡುತ್ತಿರುವ ಕೆಲಸಗಳು ಮಾತ್ರ ಕೋಮುಗಲಭೆಗಳಿಗೆ ಹೇಳಿ ಕೊಟ್ಟಂತಹ ಮಾರ್ಗದರ್ಶಕರಾಗಿದ್ದಾರೆ ಜೈ ಭೀಮ್
ಶಾಂತಿ ಸೌಹಾರ್ದತೆಯಿಂದ ಕೂಡಿದ ಈ ಭಾರತದಲ್ಲಿ, ಕೋಮುವಾದವನ್ನು ಹುಟ್ಟುಹಾಕುತ್ತಿರುವ, ಸಂವಿಧಾನದ ಆಶಯಕ್ಕೆ ಧಕ್ಕೆ ತರುತ್ತಿರುವ, ಪ್ರಧಾನಮಂತ್ರಿ ಅಂದರೆ ಅದು ನೀವೇ. ಇನ್ನು ಹೆಚ್ಚು ಹೇಳುವುದಕ್ಕೆ ಆಗುವುದಿಲ್ಲ, ದೇಶದ ಪ್ರತಿಯೊಬ್ಬ ಜನರು ನಿಮ್ಮ ನಡೆಯನ್ನು ವೀಕ್ಷಿಸುತ್ತಿದ್ದಾರೆ, ಎಚ್ಚರವಿರಲಿ ಎಲ್ಲಕ್ಕಿಂತ ದೊಡ್ಡದು ದೇಶ, ನಿಮ್ಮ ನಿರ್ಧಾರ ಎಲ್ಲ ಧರ್ಮವನ್ನು ಸಮಾನವಾಗಿ ನೋಡಬೇಕೆ ಹೊರತು, ಕೋಮುವಾದವನ್ನು ಸೃಷ್ಟಿಸಬಾರದು.