Homeಮುಖಪುಟಹೋರಾಟನಿರತ ರೈತರ ದೇಹ, ಮನಸ್ಸಿಗೆ ಶಕ್ತಿ ತುಂಬುತ್ತಿರುವ ವಿಭಿನ್ನ ಲಂಗರ್‌ಗಳು…!

ಹೋರಾಟನಿರತ ರೈತರ ದೇಹ, ಮನಸ್ಸಿಗೆ ಶಕ್ತಿ ತುಂಬುತ್ತಿರುವ ವಿಭಿನ್ನ ಲಂಗರ್‌ಗಳು…!

ಸಿಖ್ ಧರ್ಮದ ಮೂರನೇ ಗುರುಗಳಾದ ಗುರು ಅಮರ್ ದಾಸ್, ಜನರ ಹಸಿವನ್ನು ನೀಗಿಸುವ ಲಂಗರ್‌ಗಳಿಗೆ ಒಂದು ಸಂಘಟಿತ ರೂಪ ನೀಡಿದರು.

- Advertisement -
- Advertisement -

ಲಂಗರ್… ರೈತ ಹೋರಾಟ ಶುರುವಾದಾಗಿನಿಂದ ಎಲ್ಲರ ಬಾಯಲ್ಲಿ ಬರುತ್ತಿರುವ ಮತ್ತು ಹೆಚ್ಚು ಪ್ರಚುರಗೊಳ್ಳುತ್ತಿರುವ ಪದ. ಲಂಗರ್ ಎಂದರೆ ಅಡುಗೆಮನೆ ಎಂಬ ಅರ್ಥ ಇದೆ. ಇದು ಸಿಖ್ ಸಮುದಾಯದ ಜನರು ಒಂದಾಗಿ, ಒಕ್ಕೂಟದ ರೀತಿಯಲ್ಲಿ ಅಡುಗೆ ಮಾಡಿ, ಗುರುದ್ವಾರಗಳಲ್ಲಿ ನೀಡುವ ಉಚಿತ ಊಟದ ಸೇವೆಯಾಗಿದೆ.

ಲಂಗರ್‌ಗಳಲ್ಲಿ ಯಾವುದೇ ಜಾತಿ, ಧರ್ಮ, ಲಿಂಗ, ಸಾಮಾಜಿಕ ಸ್ಥಾನಮಾನ, ಆರ್ಥಿಕ ಸ್ಥಿತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಇಲ್ಲಿ ಎಲ್ಲರು ಸಮಾನರು. ಎಲ್ಲರು ಜೊತೆಯಲ್ಲಿ ಕುಳಿತು ಊಟ ಮಾಡಬೇಕು. ಯಾರೊಬ್ಬರು ಹಸಿವಿನಿಂದ ಬಳಲಬಾರದು ಎಂಬುದು ಲಂಗರ್‌ಗಳ ಆಶಯ. ಲಂಗರ್‌ಗಳು ಸಸ್ಯಹಾರವನ್ನು ಒದಗಿಸುತ್ತವೆ. ಸಿಖ್ ಸಮುದಾಯದ ಸ್ವಯಂ ಸೇವಕರು ಲಂಗರ್‌ಗಳಲ್ಲಿ ಸೇವೆ ಸಲ್ಲಿಸುತ್ತಾರೆ.

ಲಂಗರ್‌ಗಳ ಇತಿಹಾಸ

ಲಂಗರ್‌ಗಳಿಗೆ 1500 ವರ್ಷಗಳ ಇತಿಹಾಸವಿದೆ. ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್ ಅವರ ಕಾಲದಿಂದಲು ಲಂಗರ್‌ಗಳು ಸೇವೆ ನೀಡುತ್ತಿವೆ. ಪಂಜಾಬ್‌ನಲ್ಲಿ ಈ ಲಂಗರ್‌ಗಳ ಆರಂಭವಾಯಿತು ಎಂದು ಪ್ರತಿಭಟನಾ ನಿರತ ಪಂಜಾಬ್‌ನ ರೈತರು ತಿಳಿಸುತ್ತಾರೆ.

ಸಿಖ್ ಧರ್ಮದ ಎರಡನೇ ಗುರುಗಳಾದ ಗುರು ಅಂಗದ್ ಅವರು ಗುರುದ್ವಾರಗಳಲ್ಲಿ ಈ ಲಂಗರ್‌ಗಳಿಗೆ ನಿಯಮಬದ್ಧವಾಗಿ ಚಾಲನೆ ನೀಡಿದವರು. ಸಿಖ್ ಧರ್ಮದ ಮೂರನೇ ಗುರುಗಳಾದ ಗುರು ಅಮರ್ ದಾಸ್, ಜನರ ಹಸಿವನ್ನು ನೀಗಿಸುವ ಲಂಗರ್‌ಗಳಿಗೆ ಒಂದು ಸಂಘಟಿತ ರೂಪ ನೀಡಿದರು. ಗುರುದ್ವಾರಗಳಿಂದ ಹೊರಭಾಗದಲ್ಲೂ ಹಸಿವಿನಿಂದ ಬಳಲುವವರಿಗೆ ಊಟ ಸಿಗಬೇಕು ಎಂದು ಪ್ರತಿಪಾದಿಸಿದರು. ತಮ್ಮನ್ನು ಭೇಟಿಯಾಗಲು ಬರುವವರು ಮೊದಲು ಊಟ ಮಾಡಿ ನಂತರ ಭೇಟಿಯಾಗಬೇಕು ಎಂಬ ಹವ್ಯಾಸವನ್ನು ಬೆಳೆಸಿದರು. ಇದು ಈಗಲೂ ಸಿಖ್ ಸಮುದಾಯದಲ್ಲಿ ಜಾರಿಯಿದೆ.

ಗಡಿಗಳಲ್ಲಿ ಲಂಗ್‌ರ್‌ಗಳು ತಲೆಎತ್ತಿದ ಬಗೆ

ಕಳೆದ 5 ತಿಂಗಳಿನಿಂದ ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ನಡೆಯುತ್ತಿರುವ ರೈತ ಹೋರಾಟದಲ್ಲಿ ಈ ಲಂಗರ್‌ಗಳ ಪಾತ್ರ ಪ್ರಮುಖವಾಗಿದೆ. ವಿಶ್ವದಾದ್ಯಂತ ಹಬ್ಬಿಕೊಂಡಿರುವ ಲಂಗರ್‌ಗಳು ಈ ಹೋರಾಟದಲ್ಲಿ ಚಾರಿತ್ರಿಕ ಕೊಡುಗೆ ನೀಡುತ್ತಿವೆ. ಪ್ರತಿಭಟನೆಗೆ ಬರುವವರಿಗೆ ಮೊದಲು ಲಂಗರ್‌ಗಳ ದಾರಿ ತಿಳಿಸಲಾಗುತ್ತದೆ. ಮೊದ ಮೊದಲು ಸಾಮಾನ್ಯ ಊಟಕ್ಕೆ ಮಾತ್ರ ಸೀಮಿತವಾಗಿದ್ದ ಲಂಗರ್‌ಗಳು ಈಗ ಜನರ ಜೀವನ ಶೈಲಿ ಜೊತೆಗೆ ಸಾಕಾಷ್ಟು ಬದಲಾವಣೆ ಹೊಂದಿವೆ.

ನವೆಂಬರ್ 26 ರಂದು ಪಂಜಾಬ್ ರೈತರು ಆಂಭಿಸಿದ ದೆಹಲಿ ಚಲೋ ಜೊತೆಗೆ ಲಂಗರ್‌ಗಳು ರೈತರ ಬೆನ್ನು ಹತ್ತಿದ್ದವು. ರೈತರು ತಮ್ಮ ಪ್ರತಿಭಟನಾ ಸ್ಥಳಗಳನ್ನು ಗುರುತಿಸಿ ಟ್ರ್ಯಾಲಿಗಳನ್ನು ನಿಲ್ಲಿಸಿದ ಕೂಡಲೇ ಲಂಗರ್‌ಗಳು ಕೂಡ ಕಾರ್ಯನಿರ್ವಹಿಸಲು ಆರಂಭಿಸಿದ್ದವು. ದೆಹಲಿಯ ಗಡಿಭಾಗಗಳಾದ ಸಿಂಘು ಬಾರ್ಡರ್, ಟಿಕ್ರಿ ಬಾರ್ಡರ್, ಶಹಾಜಾನ್ಪುರ, ಗಾಝಿಪುರ್, ಚಿಲ್ಲಾ, ಪಲ್ವಲ್ ಬಾರ್ಡರ್, ಇಂದ್ರಪ್ರಸ್ಥ ಬಾರ್ಡರ್‌ಗಳು ಸೇರಿದಂತೆ ಲಕ್ಷಾಂತರ ಜನ ಪ್ರತಿಭಟನಾಕಾರರು ಇರುವಲ್ಲಿಯೇ ಸಾವಿರಾರು ಲಂಗರ್‌ಗಳು ತಲೆ ಎತ್ತಿದವು.

ಸಿಖ್ ಧರ್ಮ ರೂಪುಗೊಂಡಿರುವುದೆ ಒಂದು ಸಂಘಟನೆಯ ಮಾದರಿಯಲ್ಲಿ. ಇಲ್ಲಿ ಎಲ್ಲರೂ ನಿಯಮಗಳಿಗೆ ಬದ್ಧರಾಗಿರಬೇಕು. ತಾವು ಸಂಪಾದಿಸಿದ ಸಂಪತ್ತಿನಲ್ಲಿ ಶೇಕಡಾ 10 ರಷ್ಟನ್ನು ಲಂಗರ್‌ಗಳಿಗೆ ಪ್ರತಿಯೊಬ್ಬರು ದೇಣಿಗೆ ನೀಡಲೇಬೇಕು. ಇದರಿಂದಲೇ ಲಂಗರ್‌ಗಳಿಗೆ ಬೇಕಾದ ದೇಣಿಗೆ ಸಂಗ್ರಹವಾಗುತ್ತದೆ.

ದಿನವೀಡಿ ಸೇವೆ

ಪ್ರತಿಭಟನಾ ಸ್ಥಳಗಳಲ್ಲಿ ತಲೆ ಎತ್ತಿರುವ ಲಂಗರ್‌ಗಳು 24 ಗಂಟೆಗಳು ಪ್ರತಿಭಟನಾ ನಿರತರ ಹಸಿವನ್ನು ಇಂಗಿಸುತ್ತಿವೆ. ಬೆಳಗ್ಗೆ 4 ಗಂಟೆಯಿಂದ ಕಾರ್ಯ ನಿರ್ವಹಿಸಲು ಆರಂಭಿಸುವ ಇವುಗಳ ಕೆಲಸ ರಾತ್ರಿ 10 ಗಂಟೆಯವರೆಗೂ ಸಾಗುತ್ತಲೇ ಇರುತ್ತದೆ. ನಂತರವೂ ಯಾರಾದರೂ ಊಟಕ್ಕೆ ಬಂದರೇ ಇಲ್ಲ ಎನ್ನುವುದಿಲ್ಲ. ರೈತ ಹೋರಾಟದಲ್ಲಿರುವ ಲಂಗರ್‌ಗಳು ಬೆಳಗ್ಗೆ ಚಹಾ ನೀಡುವ ಮೂಲಕ ಆರಂಭವಾಗುತ್ತವೆ. ರಾತ್ರಿ ಹಾಲು ನೀಡುವ ಮೂಲಕ ಕೊನೆಗೊಳ್ಳುತ್ತವೆ.

ಸಾಮಾನ್ಯ ಊಟ ಉಪಚಾರಕ್ಕೆ ಮೀಸಲಾಗಿದ್ದ ಇವುಗಳಲ್ಲಿ ಈಗ ಹಲವಾರು ಬದಲಾವಣೆಗಳು ಕಂಡು ಬಂದಿವೆ. ಹಲವು ವಿಭಿನ್ನ ಲಂಗರ್‌ಗಳು ಪ್ರತಿಭಟನಾ ಸ್ಥಳಗಳಲ್ಲಿ ತಲೆ ಎತ್ತಿವೆ. ಚಹಾದ ಲಂಗರ್, ಕೀರ್ ಕಿ ಲಂಗರ್, ಬೆಳಗಿನ ತಿಂಡಿ ಲಂಗರ್, ಊಟದ ಲಂಗರ್, ಸಂಜೆ ಸ್ಯಾಕ್ಸ್ ಲಂಗರ್, ಬರ್ಗರ್ ಲಂಗರ್, ಪಿಜ್ಜಾ ಲಂಗರ್, ಪಿಂಡಿ (ಸಿಹಿ ಉಂಡೆಗಳು) ಕಾ ಲಂಗರ್, ಹಲ್ವಾ ಮತ್ತು ಜಿಲೇಬಿ ಲಂಗರ್‌ಗಳೆಂಬ ಹಲವು ರೀತಿಯಲ್ಲಿ ಬದಲಾಗಿವೆ.

ದೇಶ-ವಿದೇಶಗಳ ಹಲವು ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲಂಗರ್‌ಗಳ ಒಂದು ಭಾಗಗಳು ಈ ಪ್ರತಿಭಟನಾ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ದೇಶ ವಿದೇಶಗಳ ಸಾವಿರಾರು ಸ್ವಯಂ ಸೇವಕರು ಲಂಗರ್‌ಗಳಲ್ಲಿ ಅಡುಗೆ ಮಾಡುವುದು, ಸ್ವಚ್ಛತೆ, ಬಡಿಸುವುದು ಸೇರಿದಂತೆ ಎಲ್ಲಾ ಕೆಲಸಗಳನ್ನು ನೋಡಿಕೊಳ್ಳುತ್ತಾರೆ.

ಗುರುದ್ವಾರಗಳ ಲಂಗರ್‌ಗಳ ಜೊತೆಗೆ ಪ್ಯಾಮಿಲಿ ಲಂಗರ್‌ಗಳು ಇಲ್ಲಿವೆ. ಹಳ್ಳಿಯ ಎರಡು ಮೂರು ಮನೆಗಳ ಸದಸ್ಯರು ಸೇರಿಯು ಲಂಗರ್‌ಗಳನ್ನು ನಡೆಸುತ್ತಿದ್ದಾರೆ. ಕುಟುಂಬದ ಲಂಗರ್‌ಗಳಲ್ಲಿ ತಮ್ಮ ಕುಟುಂಬ ಸದಸ್ಯರ ಜೊತೆಗೆ ಹೊರ ಭಾಗಗಳಿಂದ ಬಂದವರಿಗೂ ಆಹಾರ ಒದಗಿಸಲಾಗುತ್ತದೆ. ಇವುಗಳಲ್ಲಿ ಮನೆಯ ಸದಸ್ಯರೇ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಾರೆ.

ರೈತ ಹೋರಾಟದಲ್ಲಿರುವ ಲಂಗರ್‌ಗಳಲ್ಲಿ ಊಟ ಉಪಚಾರದ ಜೊತೆಗೆ ದಿನ ಬಳಕೆಯ ಅಗತ್ಯ ವಸ್ತುಗಳಾದ ಬ್ರಶ್, ಪೇಸ್ಟ್, ಸೋಪ್, ಶೂ, ಚಪ್ಪಲಿ, ಬಟ್ಟೆ, ಚಳಿಗಾಲದ ಕ್ರೀಮ್‌ಗಳು, ಸ್ಯಾನಿಟರಿ ನ್ಯಾಪ್ಕಿನ್ಸ್, ಒಳಉಡುಪುಗಳನ್ನು ಸಹ ನೀಡಲಾಗುತ್ತಿದೆ.

ಲಂಗ್‌ರ್‌ಗಳ ಮಹತ್ವ

70 ದಿನಗಳ ರೈತ ಹೋರಾಟದಲ್ಲಿ ಈ ಲಂಗರ್‌ಗಳ ಪಾತ್ರ ಬಹಳ ಪ್ರಾಮುಖ್ಯತೆ ಪಡೆದಿದೆ. ಹೋರಾಟಗಳು ಹಲವು ಬಾರಿ ಹಣಕಾಸು ಕೊರತೆ, ಊಟದ ವ್ಯವಸ್ಥೆ ಇಲ್ಲದ ಕಾರಣಕ್ಕೆ ಕೊನೆಗೊಂಡ ಉದಾಹರಣೆಗಳಿವೆ. ಲಕ್ಷಾಂತರ ಜನರು ಒಂದೆಡೆ ಇರುವಾಗ ಊಟ-ಉಪಚಾರಗಳು ಸರಿಯಾಗಿ ಇಲ್ಲದಿದ್ದರೇ, ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಹೋರಾಟ ಕೂಡ ಕೊನೆಗೊಳ್ಳಬಹುದು. ಇಂತಹ ಸ್ಥಿತಿಗಳನ್ನು ಈ ಲಂಗರ್‌ಗಳು ಪಾರು ಮಾಡಿವೆ.

ಲಂಗರ್‌ಗಳಲ್ಲಿ ಮೈಕ್‌ಗಳ ಮೂಲಕ ಇಡೀ ದಿನ ಪ್ರತಿಭಟನಾಕಾರರನ್ನು ಊಟಕ್ಕೆ ಕರೆಯಲಾಗುತ್ತಿರುತ್ತದೆ. ಹೋರಾಟಕ್ಕೆ ಶಕ್ತಿ ತುಂಬುವ ವಾಕ್ಯಗಳನ್ನು ಘೋಷಿಸುತ್ತಿರುತ್ತವೆ. ಲಂಗರ್‌ಗಳು ಇಡೀ ದಿನ ಆಹಾರ, ಚಹಾ ನೀಡುವ ಮೂಲಕ ತೀವ್ರ ಚಳಿಯಲ್ಲಿ ಹೋರಾಟ ನಡೆಸುತ್ತಿರುವ ರೈತರಿಗೆ ಬೆಚ್ಚಗಿನ ಭಾವ ಒದಗಿಸುತ್ತಿವೆ. ಉತ್ತಮ ಆಹಾರ ದೇಹಕ್ಕೆ ಶಕ್ತಿ ನೀಡುವ ಜೊತೆಗೆ ಮನಸ್ಸಿಗೂ ಹೋರಾಟದ ಹುಮ್ಮಸ್ಸು ನೀಡುತ್ತಿದೆ.

  • ಮಮತ ಎಂ

ಇದನ್ನೂ ಓದಿ: ರಾಕೇಶ್ ಟಿಕಾಯತ್ (2013-21)ರನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ‘ಹರ್ ಹರ್ ಮಹಾದೇವ್, ಅಲ್ಲಾಹು ಅಕ್ಬರ್’…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...