HomeUncategorizedಭಾರತವೆಂಬ ಗಣರಾಜ್ಯ ಅನುಸರಿಸಬೇಕಾದ ದಾರಿ ಕೇರಳ ರಾಜ್ಯದಲ್ಲಿದೆ

ಭಾರತವೆಂಬ ಗಣರಾಜ್ಯ ಅನುಸರಿಸಬೇಕಾದ ದಾರಿ ಕೇರಳ ರಾಜ್ಯದಲ್ಲಿದೆ

- Advertisement -
- Advertisement -

ಹಾಗೆ ನೋಡಿದರೆ ನಮ್ಮ ದೇಶಕ್ಕೆ ಕೊರೊನಾ ಸೋಂಕು ಈ ಪ್ರಮಾಣದಲ್ಲಿ ವಿಸ್ತರಿಸಲೇಬಾರದಿತ್ತು. ಚೀನಾ ಪಕ್ಕದ ಇತರ ರಾಷ್ಟ್ರಗಳು ಅಂತಹ ಮಾದರಿ ಸೃಷ್ಟಿ ಮಾಡಿದವು. ಸರ್ಕಾರಗಳು ಜವಾಬ್ದಾರಿಯುತವಾಗಿ ವರ್ತಿಸದೇ ಇರುವುದರಿಂದ ದೇಶಕ್ಕೆ ಕೊರೊನಾ ಪ್ರವೇಶ ಮಾಡಿತು. ಇಷ್ಟು ದೊಡ್ಡ ದೇಶವನ್ನು ಅಷ್ಟು ಸುಲಭದಲ್ಲಿ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಕೆಲವರು ಎನ್ನುತ್ತಾರೆ. ಇದು ಎಷ್ಟು ನಿಜವೋ ಸುಳ್ಳೋ ಯಾರಿಗೆ ಗೊತ್ತು. ಆದರೆ ಸಾಂಕ್ರಾಮಿಕ ಹರಡಿದ ಮೇಲೂ ನಮ್ಮ ಪ್ರಭುತ್ವ ಮಾಡಿದ್ದೇನು?. ಚಪ್ಪಾಳೆ ತಟ್ಟಲು, ಬೆಳಕು ಹಚ್ಚಲು ದಿನಗಳ ಮುಂಚೆ ಹೇಳಿದ ಸರ್ಕಾರ ಇಡೀ ದೇಶವನ್ನು ಮುಚ್ಚುತ್ತಿದ್ದೇವೆ ಎಂದು ಹೇಳಿದ್ದು ಕೇವಲ ನಾಲ್ಕೈದು ಗಂಟೆಗಳ ಮುಂಚೆ. ಇದು ಈ ದೇಶದ ಸಂಪತ್ತನ್ನು ಉತ್ಪಾದಿಸುವ ಕಾರ್ಮಿಕವರ್ಗಕ್ಕೆ ಮಾಡಿದ ಅನ್ಯಾಯವಲ್ಲದೆ ಮತ್ತೇನು?. ನಂತರವಾದರೂ ಸರ್ಕಾರ ಎಚ್ಚೆತ್ತಿತೇ ಅದೂ ಇಲ್ಲ. ಲಕ್ಷಾಂತರ ವಲಸೆ ಕಾರ್ಮಿಕರ ಮಹಾವಲಸೆಯ ಕರಳು ಹಿಂಡುವ ಕತೆಗಳಿಗೂ ಸರ್ಕಾರ ಎಚ್ಚರವಾಗಲೇ ಇಲ್ಲ.

ಆದರೆ ದೇಶದ ಇತರ ಕಡೆಗಳಗಲ್ಲಿ ವಲಸೆ ಕಾರ್ಮಿಕರ ಕಣ್ಣೀರಿನ ಕತೆಗಳು ದೇಶದೆಲ್ಲೆಡೆ ಹರಿದಾಡುತ್ತಿರುವಾಗ, ನಮ್ಮದೇ ದೇಶದ ಕಮ್ಯೂನಿಷ್ಟ್ ಸರ್ಕಾರವಿರುವ ಕೇರಳದ್ದು ಬೇರೆಯೆ ಕತೆಯಾಗಿತ್ತು. ಇಲ್ಲಿ ವಲಸೆ ಕಾರ್ಮಿಕರಿಗೆ ದೇಶದ ಇತರ ಕಡೆಗಳಲ್ಲಿ ಆದಂತಹ ಯಾವುದೇ ಕಷ್ಟಗಳೂ ಇರಲಿಲ್ಲ.

ಅಷ್ಟೇ ಅಲ್ಲದೆ ಕೇರಳ ತನ್ನ ಊರನ್ನು ಕಟ್ಟಿದ ಈ ಕಾರ್ಮಿಕರಿಗೆ ವಲಸೆ ಕಾರ್ಮಿಕರು ಎನ್ನುವ ಹೆಸರನ್ನು ಕಿತ್ತೆಸೆದು “ಅತಿಥಿ” ಕಾರ್ಮಿಕರು ಎಂದು ಗೌರವಪೂರ್ವಕವಾಗಿ ಕರೆಯಿತು.

ಕೊರೊನಾ ಪ್ರಕರಣ ಮೊದಲಿಗೆ ವರದಿಯಾಗಿದ್ದು ಕೇರಳದಲ್ಲೇ . ಇದಕ್ಕಾಗಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಕೊರೊನಾ ಪರಿಹಾರವಾಗಿ ಬರೋಬ್ಬರಿ 20 ಸಾವಿರ ಕೋಟಿ ಪ್ಯಾಕೇಜನ್ನು ಘೋಷಿಸಿತು. ಈ ಹೊತ್ತಿಗೆ ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಇಷ್ಟೊಂದು ಮೊತ್ತದ ಪ್ಯಾಕೇಜನ್ನು ಘೋಷಿಸಿರಲಿಲ್ಲ. ಕೇಂದ್ರದ ಆಡಳಿತ ಪಕ್ಷದ ನಾಯಕರು ಕೇರಳದ ಈ ನಡೆಗೆ ತಕರಾರು ಮಾಡಿದರು, ಆದರೆ ಕೇರಳ ತಲೆ ಕೆಡಿಸಿಕೊಳ್ಳಲಿಲ್ಲ.

ವಲಸೆ ಕಾರ್ಮಿಕರನ್ನು ಅತಿಥಿ ಕಾರ್ಮಿಕರು ಎಂದು ಕರೆದ ಕೇರಳ ಅವರಿಗಾಗಿ ಸರ್ಕಾರದ ವತಿಯಿಂದಲೇ 15 ಸಾವಿರಕ್ಕಿಂತಲೂ ಹೆಚ್ಚು ಕೊರೊನಾ ಪರಿಹಾರ ಶಿಬಿರಗಳನ್ನು ತೆರೆದಿತ್ತು. ಇದರೊಂದಿಗೆ ಅಲ್ಲಿನ NGO ಗಳು ಕೂಡಾ 3397 ಪರಿಹಾರ ಶಿಬಿರಗಳನ್ನು ತೆರೆದು ಜನಸೇವೆಯಲ್ಲಿ ತೊಡಗಿದವು. ಎಪ್ರಿಲ್ 17ರಂದು ಕೇಂದ್ರ ಗೃಹ ಸಚಿವಾಲಯ ಸುಪ್ರೀಂಕೋರ್ಟಿಗೆ ನೀಡಿದ ಮಾಹಿತಿಯಂತೆ ದೇಶದಾದ್ಯಂತ ಇರುವ ಒಟ್ಟು ಪರಿಹಾರ ಶಿಬಿರಗಳಲ್ಲಿ 69% ಕ್ಕಿಂತ ಹೆಚ್ಚು ಶಿಬಿರಗಳು ಕೇರಳವೊಂದರಲ್ಲೇ ಇತ್ತು. ಇಲ್ಲಿ ಕೇವಲ ಕಾರ್ಮಿಕರನ್ನು ಕೂಡಿ ಹಾಕದೆ ಅವರಿಗೆ ಮನೋರಂಜನೆಗಾಗಿ ಟಿವಿ, ಕ್ಯಾರಮ್, ಚೆಸ್, ಮೊಬೈಲ್ ರೀಚಾರ್ಜ್ ಇತ್ಯಾದಿಗಳ ವ್ಯವಸ್ಥೆ ಮಾಡಿಕೊಟ್ಟಿತು. ವಿಶ್ವದ ಯಾವುದೇ ಭಾಗಕ್ಕೆ ಹೋದರೂ ಅಲ್ಲಿನ ಭಾಷೆಗಳನ್ನು ತಮ್ಮದೇ ಭಾಷೆಯಲ್ಲಿ ಮಾತನಾಡುವ ಕೇರಳ,  ಈ ಕಾರ್ಮಿಕರೊಂದಿಗಿನ ಸಂವಹನಕ್ಕಾಗಿ ಅಸ್ಸಾಮಿ, ಒಡಿಯಾ, ಹಿಂದಿ, ಬಂಗಾಳಿ ಇತ್ಯಾದಿ ಭಾಷೆಗಳಲ್ಲಿ ಮಾತನಾಡಿತು, ಸಂದೇಶಗಳನ್ನು ಕೊಟ್ಟಿತು, ಪೋಸ್ಟರುಗಳನ್ನು ಹಂಚಿತು. ಇದಲ್ಲವೇ ನಾಡು ಕಟ್ಟಿದವರ ಋಣವನ್ನು ತೀರಿಸುವ ಬಗೆ.

ಕೇರಳದ  ಪರಿಹಾರ ಶಿಬಿರಗಳಲ್ಲಿ ಮೂರು ಲಕ್ಷ ಕಾರ್ಮಿಕ ಆಶ್ರಯ ಪಡೆಯುತ್ತಾರೆ. (ಸುಮ್ಮನೆ ನಿಮ್ಮ ಮಾಹಿತಿಗೆ ಕರ್ನಾಟಕದ ಪರಿಹಾರ ಶಿಬಿರಗಳಲ್ಲಿ ಇದ್ದ ವಲಸೆ ಕಾರ್ಮಿಕರ ಸಂಖ್ಯೆ ಕೇವಲ 16,138). ಕೇರಳದ ಈ ಪರಿಹಾರ ಶಿಬಿರಗಳಲ್ಲಿ ಒಂದುವರೆ ಲಕ್ಷ ಕಾರ್ಮಿಕರು ನೇರವಾಗಿ ವಸತಿ ಹಾಗೂ ಉಚಿತ ಊಟವನ್ನೂ ಪಡೆಯುತ್ತಾರೆ. ಇದಕ್ಕಾಗಿಯೆ ದೇಶದೆಲ್ಲೆಡೆ ವಲಸೆ ಕಾರ್ಮಿಕರು ಹಸಿವಿನ ಬೆಂಕಿಯಿಂದ ಧಗದಗಿಸುತ್ತಿದ್ದರೆ ಕೇರಳದ ’ಅತಿಥಿ ಕಾರ್ಮಿಕರು’ ತಾವು ಲಾಕ್‌ಡೌನ್ ನಂತರ ನಮ್ಮ ಕುಟುಂಬವನ್ನು ಸೇರಿಕೊಳ್ಳುತ್ತೇವೆ ಎಂದು ವಿಶ್ವಾಸದಿಂದು ಹೇಳಿದ್ದು. ಅವರ ವಿಶ್ವಾಸಗಳು, ನಿರೀಕ್ಷೆಗಳನ್ನು ಕೇರಳದ ಎಡಪಂಥೀಯ ಸರ್ಕಾರ ಹುಸಿಗೊಳಿಸಲೂ ಇಲ್ಲ. ತಮ್ಮೂರನ್ನು ಕಟ್ಟಿದ ’ಅತಿಥಿ ಕಾರ್ಮಿಕ’ರನ್ನು ಬಹಳ ಗೌರವಪೂರ್ವಕವಾಗಿ ಕಳುಹಿಸಿಕೊಟ್ಟಿತು. ಕಾರ್ಮಿಕರಿಗೆ ಉಚಿತ ರೈಲು ಪ್ರಯಾಣ, ಊರಿಗೆ ತಲುಪುವವರೆಗಿನ ಆಹಾರ, ರೈಲಿನಲ್ಲಿ ಪೋಲಿಸ್ ಭದ್ರತೆ, ವೈದ್ಯಕೀಯ ಸೌಲಭ್ಯ ಇತ್ಯಾದಿಗಳನ್ನು ನೀಡಿತು. ಕೇರಳದ ಕಾರ್ಯಕ್ಕೆ ಒರಿಸ್ಸಾ ಮುಖ್ಯಮಂತ್ರಿ ಧನ್ಯವಾದವನ್ನೂ ಹೇಳಿದರು.

ಒಂದು ಆಪತ್ತು ಎರಗಿದರೆ ವ್ಯವಸ್ಥೆಯನ್ನು ಹೇಗೆ ನಡೆಸಬೇಕು ಎಂಬುವುದಕ್ಕೆ ಕೇರಳ ಒಂದು ಅತ್ಯುತ್ತಮ ಉದಾಹರಣೆ. ಈ ಹಿಂದೆ ಕೇರಳಕ್ಕೆ ಎರಗಿದ ನಿಫಾ, ಶತಮಾನದ ಪ್ರವಾಹವನ್ನು ಕೇರಳ ಎದುರಿಸಿದ ರೀತಿ ಮಾದರಿ ಯೋಗ್ಯ. ಕೊರೊನಾ ದೇಶಕ್ಕೆ ಎರಗಿದ ಸಂದರ್ಭದಲ್ಲಿ ಅತೀ ಹೆಚ್ಚು ಪ್ರಕರಣಗಳು ವರದಿ ಮಾಡಿದ್ದ  ಕೇರಳದಲ್ಲಿ ಈಗ ಸಕ್ರಿಯವಾಗಿರುವ ಪ್ರಕರಣ ಕೇವಲ ನಲವತ್ತರ ಒಳಗೆ, ಅಲ್ಲಿ ಸೋಂಕಿನಿಂದ ಘಟಿಸಿರುವ ಸಾವು ಕೇವಲ ನಾಲ್ಕು. ವೃದ್ದರಿಗೆ ಅಪಾಯವೆಂದು ಹೇಳುವ ಈ , ಸೋಂಕು ತಗುಲಿಸಿಕೊಂಡ ಭಾರತದ ಅತ್ಯಂತ ಹಿರಿಯ 93 ವರ್ಷದ ವ್ಯಕ್ತಿಯೂ ಗುಣಮುಖರಾಗಿ ತಮ್ಮ ಮನೆಗೆ ಹೋಗುತ್ತಾರೆ.

ಸರ್ಕಾರಗಳು ಜನಪರವಾಗಿರುವುದು ಅಂದರೆ ಹೀಗೆಯೇ ಅಲ್ಲವೆ. ಹಾಗಾಗಿಯೇ ಹೀಗಂತೂ ಹೇಳಬಹುದು, ಕೇರಳ ರಾಜ್ಯ ಭಾರತವೆಂಬ ರಾಜ್ಯಗಳ ಒಕ್ಕೂಟಕ್ಕೆ ಮಾದರಿ. ಭಾರತ ಅನುಸರಿಸಬೇಕಾದ ದಾರಿ ಕೇರಳದಲ್ಲಿದೆ.


ವಿಡಿಯೋ ನೋಡಿ: ಏನಾಯ್ತು ಈ ಸುದ್ದಿಗಳು ? ಸದ್ದು…!!


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...