HomeUncategorizedಭಾರತವೆಂಬ ಗಣರಾಜ್ಯ ಅನುಸರಿಸಬೇಕಾದ ದಾರಿ ಕೇರಳ ರಾಜ್ಯದಲ್ಲಿದೆ

ಭಾರತವೆಂಬ ಗಣರಾಜ್ಯ ಅನುಸರಿಸಬೇಕಾದ ದಾರಿ ಕೇರಳ ರಾಜ್ಯದಲ್ಲಿದೆ

- Advertisement -
- Advertisement -

ಹಾಗೆ ನೋಡಿದರೆ ನಮ್ಮ ದೇಶಕ್ಕೆ ಕೊರೊನಾ ಸೋಂಕು ಈ ಪ್ರಮಾಣದಲ್ಲಿ ವಿಸ್ತರಿಸಲೇಬಾರದಿತ್ತು. ಚೀನಾ ಪಕ್ಕದ ಇತರ ರಾಷ್ಟ್ರಗಳು ಅಂತಹ ಮಾದರಿ ಸೃಷ್ಟಿ ಮಾಡಿದವು. ಸರ್ಕಾರಗಳು ಜವಾಬ್ದಾರಿಯುತವಾಗಿ ವರ್ತಿಸದೇ ಇರುವುದರಿಂದ ದೇಶಕ್ಕೆ ಕೊರೊನಾ ಪ್ರವೇಶ ಮಾಡಿತು. ಇಷ್ಟು ದೊಡ್ಡ ದೇಶವನ್ನು ಅಷ್ಟು ಸುಲಭದಲ್ಲಿ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಕೆಲವರು ಎನ್ನುತ್ತಾರೆ. ಇದು ಎಷ್ಟು ನಿಜವೋ ಸುಳ್ಳೋ ಯಾರಿಗೆ ಗೊತ್ತು. ಆದರೆ ಸಾಂಕ್ರಾಮಿಕ ಹರಡಿದ ಮೇಲೂ ನಮ್ಮ ಪ್ರಭುತ್ವ ಮಾಡಿದ್ದೇನು?. ಚಪ್ಪಾಳೆ ತಟ್ಟಲು, ಬೆಳಕು ಹಚ್ಚಲು ದಿನಗಳ ಮುಂಚೆ ಹೇಳಿದ ಸರ್ಕಾರ ಇಡೀ ದೇಶವನ್ನು ಮುಚ್ಚುತ್ತಿದ್ದೇವೆ ಎಂದು ಹೇಳಿದ್ದು ಕೇವಲ ನಾಲ್ಕೈದು ಗಂಟೆಗಳ ಮುಂಚೆ. ಇದು ಈ ದೇಶದ ಸಂಪತ್ತನ್ನು ಉತ್ಪಾದಿಸುವ ಕಾರ್ಮಿಕವರ್ಗಕ್ಕೆ ಮಾಡಿದ ಅನ್ಯಾಯವಲ್ಲದೆ ಮತ್ತೇನು?. ನಂತರವಾದರೂ ಸರ್ಕಾರ ಎಚ್ಚೆತ್ತಿತೇ ಅದೂ ಇಲ್ಲ. ಲಕ್ಷಾಂತರ ವಲಸೆ ಕಾರ್ಮಿಕರ ಮಹಾವಲಸೆಯ ಕರಳು ಹಿಂಡುವ ಕತೆಗಳಿಗೂ ಸರ್ಕಾರ ಎಚ್ಚರವಾಗಲೇ ಇಲ್ಲ.

ಆದರೆ ದೇಶದ ಇತರ ಕಡೆಗಳಗಲ್ಲಿ ವಲಸೆ ಕಾರ್ಮಿಕರ ಕಣ್ಣೀರಿನ ಕತೆಗಳು ದೇಶದೆಲ್ಲೆಡೆ ಹರಿದಾಡುತ್ತಿರುವಾಗ, ನಮ್ಮದೇ ದೇಶದ ಕಮ್ಯೂನಿಷ್ಟ್ ಸರ್ಕಾರವಿರುವ ಕೇರಳದ್ದು ಬೇರೆಯೆ ಕತೆಯಾಗಿತ್ತು. ಇಲ್ಲಿ ವಲಸೆ ಕಾರ್ಮಿಕರಿಗೆ ದೇಶದ ಇತರ ಕಡೆಗಳಲ್ಲಿ ಆದಂತಹ ಯಾವುದೇ ಕಷ್ಟಗಳೂ ಇರಲಿಲ್ಲ.

ಅಷ್ಟೇ ಅಲ್ಲದೆ ಕೇರಳ ತನ್ನ ಊರನ್ನು ಕಟ್ಟಿದ ಈ ಕಾರ್ಮಿಕರಿಗೆ ವಲಸೆ ಕಾರ್ಮಿಕರು ಎನ್ನುವ ಹೆಸರನ್ನು ಕಿತ್ತೆಸೆದು “ಅತಿಥಿ” ಕಾರ್ಮಿಕರು ಎಂದು ಗೌರವಪೂರ್ವಕವಾಗಿ ಕರೆಯಿತು.

ಕೊರೊನಾ ಪ್ರಕರಣ ಮೊದಲಿಗೆ ವರದಿಯಾಗಿದ್ದು ಕೇರಳದಲ್ಲೇ . ಇದಕ್ಕಾಗಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಕೊರೊನಾ ಪರಿಹಾರವಾಗಿ ಬರೋಬ್ಬರಿ 20 ಸಾವಿರ ಕೋಟಿ ಪ್ಯಾಕೇಜನ್ನು ಘೋಷಿಸಿತು. ಈ ಹೊತ್ತಿಗೆ ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಇಷ್ಟೊಂದು ಮೊತ್ತದ ಪ್ಯಾಕೇಜನ್ನು ಘೋಷಿಸಿರಲಿಲ್ಲ. ಕೇಂದ್ರದ ಆಡಳಿತ ಪಕ್ಷದ ನಾಯಕರು ಕೇರಳದ ಈ ನಡೆಗೆ ತಕರಾರು ಮಾಡಿದರು, ಆದರೆ ಕೇರಳ ತಲೆ ಕೆಡಿಸಿಕೊಳ್ಳಲಿಲ್ಲ.

ವಲಸೆ ಕಾರ್ಮಿಕರನ್ನು ಅತಿಥಿ ಕಾರ್ಮಿಕರು ಎಂದು ಕರೆದ ಕೇರಳ ಅವರಿಗಾಗಿ ಸರ್ಕಾರದ ವತಿಯಿಂದಲೇ 15 ಸಾವಿರಕ್ಕಿಂತಲೂ ಹೆಚ್ಚು ಕೊರೊನಾ ಪರಿಹಾರ ಶಿಬಿರಗಳನ್ನು ತೆರೆದಿತ್ತು. ಇದರೊಂದಿಗೆ ಅಲ್ಲಿನ NGO ಗಳು ಕೂಡಾ 3397 ಪರಿಹಾರ ಶಿಬಿರಗಳನ್ನು ತೆರೆದು ಜನಸೇವೆಯಲ್ಲಿ ತೊಡಗಿದವು. ಎಪ್ರಿಲ್ 17ರಂದು ಕೇಂದ್ರ ಗೃಹ ಸಚಿವಾಲಯ ಸುಪ್ರೀಂಕೋರ್ಟಿಗೆ ನೀಡಿದ ಮಾಹಿತಿಯಂತೆ ದೇಶದಾದ್ಯಂತ ಇರುವ ಒಟ್ಟು ಪರಿಹಾರ ಶಿಬಿರಗಳಲ್ಲಿ 69% ಕ್ಕಿಂತ ಹೆಚ್ಚು ಶಿಬಿರಗಳು ಕೇರಳವೊಂದರಲ್ಲೇ ಇತ್ತು. ಇಲ್ಲಿ ಕೇವಲ ಕಾರ್ಮಿಕರನ್ನು ಕೂಡಿ ಹಾಕದೆ ಅವರಿಗೆ ಮನೋರಂಜನೆಗಾಗಿ ಟಿವಿ, ಕ್ಯಾರಮ್, ಚೆಸ್, ಮೊಬೈಲ್ ರೀಚಾರ್ಜ್ ಇತ್ಯಾದಿಗಳ ವ್ಯವಸ್ಥೆ ಮಾಡಿಕೊಟ್ಟಿತು. ವಿಶ್ವದ ಯಾವುದೇ ಭಾಗಕ್ಕೆ ಹೋದರೂ ಅಲ್ಲಿನ ಭಾಷೆಗಳನ್ನು ತಮ್ಮದೇ ಭಾಷೆಯಲ್ಲಿ ಮಾತನಾಡುವ ಕೇರಳ,  ಈ ಕಾರ್ಮಿಕರೊಂದಿಗಿನ ಸಂವಹನಕ್ಕಾಗಿ ಅಸ್ಸಾಮಿ, ಒಡಿಯಾ, ಹಿಂದಿ, ಬಂಗಾಳಿ ಇತ್ಯಾದಿ ಭಾಷೆಗಳಲ್ಲಿ ಮಾತನಾಡಿತು, ಸಂದೇಶಗಳನ್ನು ಕೊಟ್ಟಿತು, ಪೋಸ್ಟರುಗಳನ್ನು ಹಂಚಿತು. ಇದಲ್ಲವೇ ನಾಡು ಕಟ್ಟಿದವರ ಋಣವನ್ನು ತೀರಿಸುವ ಬಗೆ.

ಕೇರಳದ  ಪರಿಹಾರ ಶಿಬಿರಗಳಲ್ಲಿ ಮೂರು ಲಕ್ಷ ಕಾರ್ಮಿಕ ಆಶ್ರಯ ಪಡೆಯುತ್ತಾರೆ. (ಸುಮ್ಮನೆ ನಿಮ್ಮ ಮಾಹಿತಿಗೆ ಕರ್ನಾಟಕದ ಪರಿಹಾರ ಶಿಬಿರಗಳಲ್ಲಿ ಇದ್ದ ವಲಸೆ ಕಾರ್ಮಿಕರ ಸಂಖ್ಯೆ ಕೇವಲ 16,138). ಕೇರಳದ ಈ ಪರಿಹಾರ ಶಿಬಿರಗಳಲ್ಲಿ ಒಂದುವರೆ ಲಕ್ಷ ಕಾರ್ಮಿಕರು ನೇರವಾಗಿ ವಸತಿ ಹಾಗೂ ಉಚಿತ ಊಟವನ್ನೂ ಪಡೆಯುತ್ತಾರೆ. ಇದಕ್ಕಾಗಿಯೆ ದೇಶದೆಲ್ಲೆಡೆ ವಲಸೆ ಕಾರ್ಮಿಕರು ಹಸಿವಿನ ಬೆಂಕಿಯಿಂದ ಧಗದಗಿಸುತ್ತಿದ್ದರೆ ಕೇರಳದ ’ಅತಿಥಿ ಕಾರ್ಮಿಕರು’ ತಾವು ಲಾಕ್‌ಡೌನ್ ನಂತರ ನಮ್ಮ ಕುಟುಂಬವನ್ನು ಸೇರಿಕೊಳ್ಳುತ್ತೇವೆ ಎಂದು ವಿಶ್ವಾಸದಿಂದು ಹೇಳಿದ್ದು. ಅವರ ವಿಶ್ವಾಸಗಳು, ನಿರೀಕ್ಷೆಗಳನ್ನು ಕೇರಳದ ಎಡಪಂಥೀಯ ಸರ್ಕಾರ ಹುಸಿಗೊಳಿಸಲೂ ಇಲ್ಲ. ತಮ್ಮೂರನ್ನು ಕಟ್ಟಿದ ’ಅತಿಥಿ ಕಾರ್ಮಿಕ’ರನ್ನು ಬಹಳ ಗೌರವಪೂರ್ವಕವಾಗಿ ಕಳುಹಿಸಿಕೊಟ್ಟಿತು. ಕಾರ್ಮಿಕರಿಗೆ ಉಚಿತ ರೈಲು ಪ್ರಯಾಣ, ಊರಿಗೆ ತಲುಪುವವರೆಗಿನ ಆಹಾರ, ರೈಲಿನಲ್ಲಿ ಪೋಲಿಸ್ ಭದ್ರತೆ, ವೈದ್ಯಕೀಯ ಸೌಲಭ್ಯ ಇತ್ಯಾದಿಗಳನ್ನು ನೀಡಿತು. ಕೇರಳದ ಕಾರ್ಯಕ್ಕೆ ಒರಿಸ್ಸಾ ಮುಖ್ಯಮಂತ್ರಿ ಧನ್ಯವಾದವನ್ನೂ ಹೇಳಿದರು.

ಒಂದು ಆಪತ್ತು ಎರಗಿದರೆ ವ್ಯವಸ್ಥೆಯನ್ನು ಹೇಗೆ ನಡೆಸಬೇಕು ಎಂಬುವುದಕ್ಕೆ ಕೇರಳ ಒಂದು ಅತ್ಯುತ್ತಮ ಉದಾಹರಣೆ. ಈ ಹಿಂದೆ ಕೇರಳಕ್ಕೆ ಎರಗಿದ ನಿಫಾ, ಶತಮಾನದ ಪ್ರವಾಹವನ್ನು ಕೇರಳ ಎದುರಿಸಿದ ರೀತಿ ಮಾದರಿ ಯೋಗ್ಯ. ಕೊರೊನಾ ದೇಶಕ್ಕೆ ಎರಗಿದ ಸಂದರ್ಭದಲ್ಲಿ ಅತೀ ಹೆಚ್ಚು ಪ್ರಕರಣಗಳು ವರದಿ ಮಾಡಿದ್ದ  ಕೇರಳದಲ್ಲಿ ಈಗ ಸಕ್ರಿಯವಾಗಿರುವ ಪ್ರಕರಣ ಕೇವಲ ನಲವತ್ತರ ಒಳಗೆ, ಅಲ್ಲಿ ಸೋಂಕಿನಿಂದ ಘಟಿಸಿರುವ ಸಾವು ಕೇವಲ ನಾಲ್ಕು. ವೃದ್ದರಿಗೆ ಅಪಾಯವೆಂದು ಹೇಳುವ ಈ , ಸೋಂಕು ತಗುಲಿಸಿಕೊಂಡ ಭಾರತದ ಅತ್ಯಂತ ಹಿರಿಯ 93 ವರ್ಷದ ವ್ಯಕ್ತಿಯೂ ಗುಣಮುಖರಾಗಿ ತಮ್ಮ ಮನೆಗೆ ಹೋಗುತ್ತಾರೆ.

ಸರ್ಕಾರಗಳು ಜನಪರವಾಗಿರುವುದು ಅಂದರೆ ಹೀಗೆಯೇ ಅಲ್ಲವೆ. ಹಾಗಾಗಿಯೇ ಹೀಗಂತೂ ಹೇಳಬಹುದು, ಕೇರಳ ರಾಜ್ಯ ಭಾರತವೆಂಬ ರಾಜ್ಯಗಳ ಒಕ್ಕೂಟಕ್ಕೆ ಮಾದರಿ. ಭಾರತ ಅನುಸರಿಸಬೇಕಾದ ದಾರಿ ಕೇರಳದಲ್ಲಿದೆ.


ವಿಡಿಯೋ ನೋಡಿ: ಏನಾಯ್ತು ಈ ಸುದ್ದಿಗಳು ? ಸದ್ದು…!!


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...