Homeಕರ್ನಾಟಕನಟ ಚೇತನ್‌‌ ಎತ್ತಿರುವ ಮೌಲಿಕ ಪ್ರಶ್ನೆಗಳು ಮತ್ತು ಕನ್ನಡ ಚಿತ್ರರಂಗದ ಮೌನ

ನಟ ಚೇತನ್‌‌ ಎತ್ತಿರುವ ಮೌಲಿಕ ಪ್ರಶ್ನೆಗಳು ಮತ್ತು ಕನ್ನಡ ಚಿತ್ರರಂಗದ ಮೌನ

- Advertisement -
- Advertisement -

“ಚಿತ್ರರಂಗಕ್ಕೇಕೆ ರಾಜಕಾರಣ?” ಎಂಬ ಪ್ರಶ್ನೆ ಕೆಲವು ಬಿಕ್ಕಟ್ಟಿನ ಸಂದರ್ಭಗಳಲ್ಲಿ ಕೇಳಿ ಬರತ್ತಾದರೂ ಇಂದು ಯಾವ ಕ್ಷೇತ್ರವೂ ರಾಜಕಾರಣದಿಂದ ಮುಕ್ತವಾಗಿಲ್ಲ ಎನ್ನುವುದು ದಿಟ. ರಾಜಕಾರಣವೆಂಬುದು ಕೇವಲ ಮತರಾಜಕಾರಣವಲ್ಲ. ಅದು ಸಾಮಾಜಿಕ, ಸಾಂಸ್ಕೃತಿಕ, ಸಮುದಾಯಗಳ ತಿಳಿವಿನ ಪ್ರಶ್ನೆಯೂ ಹೌದು. ಸಾಂಸ್ಕೃತಿಕ ರಾಜಕಾರಣವನ್ನು ಒಳಗೊಳ್ಳದೆ, ಸಂವಾದಕ್ಕೆ ತೆರೆದುಕೊಳ್ಳದ ಕ್ಷೇತ್ರದಿಂದ ಬರುವ ಕೊಡುಗೆಗೆ ಯಥಾಸ್ಥಿತಿಯನ್ನು ಮುಂದುವರಿಸುವ ಇರಾದೆ ಇರುತ್ತದೆ. ಇದು ಸಂವಿಧಾನದ ಆಶಯಗಳನ್ನು ಈಡೇರಿಸದಿರುವ ಅಪಾಯಕ್ಕೆ ಎಡೆಮಾಡಿಕೊಡುತ್ತದೆ.

ಕನ್ನಡ ನಾಡು, ನುಡಿ ಎಂದು ಉದ್ದುದ್ದನೆಯ ಸಂಭಾಷಣೆಗಳು ಕನ್ನಡ ಸಿನಿಮಾಗಳಲ್ಲಿ ಹೇರಳವಾಗಿ ಸಿಗುತ್ತವೆ. ಸಾಮುದಾಯಿಕ ಭಾವುಕತೆಯನ್ನು ಚಿತ್ರರಂಗ ಬಳಸಿಕೊಳ್ಳುವುದು ತಪ್ಪೇನಲ್ಲ. ಆದರೆ ಇದೇ ಚಿತ್ರರಂಗದಲ್ಲಿ ದೀರ್ಘ ಸೇವೆ ಸಲ್ಲಿಸಿದ ವ್ಯಕ್ತಿಯೊಬ್ಬರು ಸಾಮಾಜಿಕ ಕಳಕಳಿಯಿಂದ ಹೇಳಿಯೊಂದನ್ನು ನೀಡಿ, ಟ್ರೋಲ್‌ ಪಡೆಗೆ ಆಹಾರವಾದಾಗ, ಚಿತ್ರರಂಗದ ಇತರರು ನಿರ್ಭಾವುಕವಾಗಿ ನಿಲ್ಲುವುದು ಎಷ್ಟು ಸರಿ? ಈ ಪ್ರಶ್ನೆಯನ್ನೇ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಅವರು ಕೇಳುತ್ತಿರುವುದು.

ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ (ಕರ್ನಾಟಕ) ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ ಮತ್ತು ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಚೇತನ್‌ ಅವರ ಮಾತುಗಳು ಕನ್ನಡ ಚಿತ್ರರಂಗದ ಮುಂದೆ ಹಲವು ಪ್ರಶ್ನೆಗಳನ್ನು ಇಟ್ಟಿವೆ.

ಚೇತನ್‌ ಅವರು ಹೇಳಿದಿಷ್ಟು:

“ನಮ್ಮ ಸಮಾಜದಲ್ಲಿ ಯಾರೂ ಕೂಡ ಪ್ರಶ್ನಾತೀತರಲ್ಲ. ಅದು ಸ್ವಾಮೀಜಿಯಾಗಿರಬಹುದು, ರಾಜಕಾರಣಿಯಾಗಿರಬಹುದು, ಸಿನಿಮಾ ಸ್ಟಾರ್‌ ಆಗಿರಬಹುದು. ಎಲ್ಲ ಸಂಗತಿಗಳನ್ನು ಪ್ರಶ್ನೆ ಮಾಡುವ ಹಕ್ಕಿದೆ. ನಾವು ಹೋರಾಟ ಮಾಡುತ್ತಿರುವುದು ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳ ನಡುವೆ ಘರ್ಷಣೆ ತರಲು ಅಲ್ಲ. ನಮ್ಮನ್ನು ಜೈಲಿಗೆ ಹಾಕಲು ಯತ್ನಿಸುತ್ತಿರುವ ಬ್ರಾಹ್ಮಣ್ಯದ ವಿರುದ್ಧ ನಡೆಯುತ್ತಿರುವ ಹೋರಾಟ.”

“ಬ್ರಾಹ್ಮಣ್ಯ ಎಂದರೆ ಏನು? ಹುಟ್ಟಿದ ತಕ್ಷಣ ಕೆಲವರನ್ನು ಶ್ರೇಷ್ಠರು, ಕೆಲವರನ್ನು ಕನಿಷ್ಠರು ಎಂದು ಹೇಳುತ್ತದೆ. ಇದನ್ನು ನಾವು ಯಾವುದೇ ರೀತಿಯಲ್ಲೂ ಒಪ್ಪಲು ಆಗುವುದಿಲ್ಲ. ಜಾತಿ, ಧರ್ಮ, ಲಿಂಗ, ವರ್ಗ ಎಲ್ಲವನ್ನೂ ಮೀರಿ ನಾವೆಲ್ಲರೂ ಸರಿ ಸಮಾನರು. ವಿಚಾರದ ಶಕ್ತಿ ನಮ್ಮಲ್ಲಿ ಇರಬೇಕು. ಹಂಸಲೇಖ ಅವರು ಮೈಸೂರಿನಲ್ಲಿ ಕೆಲವು ಮಾತುಗಳನ್ನು ಆಡಿದರು. ಕೆಲವು ಪ್ರಶ್ನೆಗಳನ್ನು ಕೇಳಿದರು. ಅವರಿಗೆ ಮಾತನಾಡಲು ಹಕ್ಕಿದೆ. ಮಾತನಾಡಿದ್ದಾರೆ. ಅದರ ಪರ, ವಿರೋಧದ ಚರ್ಚೆಗಳು ಆಗಲಿ. ನಮ್ಮ ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ, ದೇಶಕ್ಕೆ ಚರ್ಚೆ ಒಳ್ಳೆಯದು.”


ಇದನ್ನೂ ಓದಿರಿ: ಇದು ಆಹಾರದ ಪ್ರಶ್ನೆಯಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ: ಹಂಸಲೇಖರ ಪರ ನಿಂತ ನಟ ಚೇತನ್‌


“ಹಂಸಲೇಖ ಅವರು ಕ್ಷಮೆ ಕೇಳಿದರು. ಅವರ ಮಾತಿಗೂ ಬೆಲೆ ಕೊಡೋಣ. ಕ್ಷಮೆ ಕೇಳುವ ಅವಶ್ಯಕತೆ ಇಲ್ಲವಾದರೂ ಕೇಳಿದ್ದಾರೆ, ಅದು ಅವರಿಷ್ಟ. ಆದರೆ ಕ್ಷಮೆ ಕೇಳಿದ ಬಳಿಕವೂ ಅಖಿಲ ಭಾರತ ಬ್ರಾಹ್ಮಣ ಮಹಾಸಭಾದವರು ಬಂದು, ಆರು ತಿಂಗಳ ಹಿಂದೆ ನನ್ನನ್ನು ಜೈಲಿಗೆ ಹಾಕಲು ಹೇಗೆ ಯತ್ನಿಸಿದರೋ ಹಾಗೆಯೇ ಅದೇ ಬಸವನಗುಡಿ ಪೊಲೀಸ್ ಠಾಣೆಯಲ್ಲೇ, ಅದೇ ಸೆಕ್ಷನ್‌‌ 295 ಅಡಿಯಲ್ಲಿ, ಅದೇ ಸಂಘಟನೆ ದೂರು ನೀಡಿತು. ಹಂಸಲೇಖ ಅವರ ಅಭಿಪ್ರಾಯ ಹೇಳಲು ಬಿಡದೆ, ಧಮ್ಕಿ ಹಾಕಿದರು. ನೀವು ಬೃಂದಾವನಕ್ಕೆ ಬಂದು ಬಹಿರಂಗವಾಗಿ ಕ್ಷಮೆ ಕೇಳಿ, ಅಂಗಲಾಚಿ ಎಂದು ಒತ್ತಾಯಿಸಿದರು. ಹಂಸಲೇಖರು ಕ್ಷಮೆ ಕೇಳುವ ಅಗತ್ಯವಿಲ್ಲ. ನೀವು ಸಾವಿರಾರು ವರ್ಷಗಳಿಂದ ದಬ್ಬಾಳಿಕೆ ಮಾಡಿರುವವರು, ಫಲಾನುಭವಿಗಳು, ಬಹುಜನರ ಮೇಲೆ ದಬ್ಬಾಳಿಕೆ ಮಾಡಿದ್ದಕ್ಕೆ ಯಾವ ಕ್ಷಮೆ ಕೇಳುತ್ತೀರಿ?”

“ಬ್ರಾಹ್ಮಣ್ಯದ ವ್ಯವಸ್ಥೆ ಹೋರಾಟದಿಂದ ಗೆದ್ದಿಲ್ಲ. ಅವರು ಕುತಂತ್ರದಿಂದ ಅಧಿಕಾರ ದುರುಪಯೋಗ ಮಾಡಿಕೊಂಡು ಬಂದಿದ್ದಾರೆ. ಇವತ್ತು ಅದೇ ರೀತಿ ಮಾಡಿದ್ದಾರೆ. ಆಧುನಿಕ ಇತಿಹಾಸದಲ್ಲಿ ಮೇಲ್ವರ್ಗದ ಗಂಡಸರು ರಸ್ತೆಗೆ ಬಂದು ಹೋರಾಡಿದ್ದು ಮಂಡಲ್‌ ಕಮಿಷನ್‌ ಬಂದಾಗ ಮಾತ್ರ. ಮಂಡಲ್‌ ಕಮಿಷನ್‌ ಓಬಿಸಿಗಳಿಗೆ ಮೀಸಲಾತಿ ನೀಡಬೇಕು ಎಂದಿತ್ತು. ಆಗ ಬೀದಿಗೆ ಬಂದರು. ಈ ಬ್ರಾಹ್ಮಣ್ಯದ ವ್ಯವಸ್ಥೆ ಸಾಮಾಜಿಕ ನ್ಯಾಯಕ್ಕಾಗಿ ಏನೇ ಮಾಡಿದರೂ ವಿರೋಧಿಸುತ್ತದೆ. ಹಂಸಲೇಖ ಅವರಂಥವರು ಮಾತನಾಡುವುದನ್ನು ಕಸಿದುಕೊಳ್ಳಲು ನೋಡುತ್ತದೆ. ‌ಅವರು ಕುತಂತ್ರ ಮಾಡುತ್ತಾರೆ. ನಾವು ಎಚ್ಚರಿಕೆ ವಹಿಸಬೇಕು.”

“ನನಗೆ ಬಹಳ ಬೇಜಾರಾದ ಸಂಗತಿ ಏನೆಂದರೆ, ಹದಿನಾಲ್ಕು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದೀನಿ. ಚಿತ್ರರಂಗದಲ್ಲಿ ಬದುಕಿರುವ ಹೀರೊ, ಡೈರೆಕ್ಷರ್‌ ಯಾರನ್ನೇ ಪರಿಗಣಿಸಿದರೂ ಎಲ್ಲರಿಗಿಂತ ಹೆಚ್ಚು ಸಾಧನೆ ಮಾಡಿದವರು ಹಂಸಲೇಖರೆಂದರೆ ಸುಳ್ಳಾಗುವುದಿಲ್ಲ. ಆದರೆ ಹಂಸಲೇಖ ಅವರಿಗೆ ಈ ರೀತಿ ಆದಾಗ ಎಲ್ಲಿದ್ದಾರೆ ಇವರು?”

“ನಾವೆಲ್ಲ ಒಂದು ಕುಟುಂಬ ಎಂದು ಕನ್ನಡ ಚಿತ್ರರಂಗ ದೊಡ್ಡದಾಗಿ ಮಾತನಾಡುತ್ತೆ. ಕುಟುಂಬದ ಹಿರಿಯ ಸದಸ್ಯನ ಮೇಲೆ ದಬ್ಬಾಳಿಕೆ ಆಗುತ್ತಿರುವಾಗ, ದಾಳಿ ನಡೆಯುತ್ತಿರುವಾಗ, ಮಾನಸಿಕ ಹಿಂಸೆ, ಕಿರುಕುಳ ಆಗುತ್ತಿರುವಾಗ ಎಲ್ಲಿದೆ ನಿಮ್ಮ ಧ್ವನಿ? ನಿಮಗೆ ಕಾಳಜಿ ಇಲ್ಲವಾ? ನಿಮಗೆ ಧೈರ್ಯ ಇಲ್ಲವಾ? ಹಂಸಲೇಖರ ಬಗ್ಗೆ ನಿಮಗೆ ಗೌರವ ಇಲ್ಲವಾ? ಇಲ್ಲ ಅಂತ ನಮಗೆ ಕಾಣುತ್ತೆ.”

“ಐದಾರು ತಿಂಗಳ ಹಿಂದೆ ಕೊರೊನಾ ಎರಡನೇ ಅಲೆ ಬರುವ ಮುಂಚೆ ಸರ್ಕಾರ ಶೇ.100ರಷ್ಟು ಚಿತ್ರಮಂದಿರ ಭರ್ತಿ ಮಾಡಲು ಆಗದು, ಶೇ. 50ರಷ್ಟು ಭರ್ತಿ ಮಾತ್ರ ಸಾಧ್ಯ ಎಂದು ನಿಯಮ ಮಾಡಿತು. ಆಗ ಈ ಸೋ ಕಾಲ್ಡ್‌ ತಾರೆಗಳು ದೊಡ್ಡದಾಗಿ ಮಾತನಾಡಲು ಶುರುಮಾಡಿದರು. ಅನ್ಯಾಯ, ಅನ್ಯಾಯ ಎಂದರು. ಈ ಸಿನಿಮಾ ತಾರೆಗಳಿಗೆ ಯಾವಾಗ ಅನ್ಯಾಯವಾಗುತ್ತದೆ ಗೊತ್ತಾ? ಅವರ ಬಂಡವಾಳಕ್ಕೆ, ಬ್ಯಾಂಕ್‌ ಬ್ಯಾಲೆನ್ಸ್‌ಗೆ ತೊಂದರೆಯಾದಾಗ ಮಾತ್ರ. ಹಂಸಲೇಖರ ವಾಕ್‌ ಸ್ವಾತಂತ್ರ್ಯ ಕಿತ್ತು ಹಾಕುತ್ತಿರುವುದು ಅನ್ಯಾಯ. ಈ ಅನ್ಯಾಯದಲ್ಲಿ ನಿಮ್ಮ ಧ್ವನಿ ಎಲ್ಲಿದೆ?”

“ಯಾರು ದ್ವೇಷ ಕಾರುತ್ತಾರೋ, ಅಸಮಾನತೆ ವಿರೋಧಿಸುತ್ತಾರೋ, ಸಂವಿಧಾನ ವಿರೋಧಿಸುತ್ತಾರೋ ಅವರು ಸಂಘಟನಾತ್ಮಕವಾಗಿ ಬಲವಾಗುತ್ತಿದ್ದಾರೆ. ಸಮಾನತೆ, ಪ್ರೀತಿ, ಸೌಹಾರ್ದತೆ ಎಂದು ಹೋರಾಡುವ ನಾವು ಹೆಚ್ಚು ಸಂಘಟಿತರಾಗಬೇಕು, ಹೆಚ್ಚು ಕೆಲಸ ಮಾಡಬೇಕು..”


ಇದನ್ನೂ ಓದಿರಿ: ಮನುವಾದಿಗಳಿಂದ ವಿರೋಧ ಇದ್ದೇ ಇರುತ್ತದೆ: ಹಂಸಲೇಖರ ಪರ ನಿಂತ ಪ್ರಿಯಾಂಕ್‌ ಖರ್ಗೆ


“ನನ್ನ ಬಳಿ ಬಹಳ ಜನ ಬಂದು ಹೇಳುತ್ತಾರೆ. ನೀವು ನಮ್ಮವರೇ ಎಂದು. ಅವರು ಯಾವ ರೀತಿ ಹೇಳುತ್ತಾರೆಂದು ಅರ್ಥವಾಗುವುದಿಲ್ಲ. ನಮ್ಮವರೇ ಎಂದರೆ ಹುಟ್ಟಿರುವ ಜಾತಿಯಿಂದ ನಮ್ಮವರಾಗಲ್ಲ. ಒಂದೇ ಧರ್ಮದಲ್ಲಿ ಹುಟ್ಟಿದ್ದರಿಂದ ನಮ್ಮವರಾಗಲ್ಲ. ಒಂದೇ ಊರಿನಿಂದ ನಮ್ಮವರಾಗಲ್ಲ. ಜೊತೆಯಲ್ಲಿ ಹುಟ್ಟಿದ ರಕ್ತಸಂಬಂಧದಿಂದ ನಮ್ಮವರಾಗಲ್ಲ. ನಮ್ಮಂಥ ಸಮಾಜದ ಬಗ್ಗೆ ಕಾಳಜಿ ಇರುವವರು, ಸಮಾನತೆಗಾಗಿ ಹೋರಾಟ ಮಾಡುವವರು ನಮ್ಮವರಾಗುತ್ತಾರೆ. ಈ ಸಿದ್ಧಾಂತವನ್ನು ಉಳಿಸುತ್ತೇವೆ, ಅದನ್ನು ಈ ದೇಶದಲ್ಲಿ ಕಟ್ಟುತ್ತೇವೆ..”

“ನೀವು ಬೇರೆ ದೇಶದವರು ಎಂದು ನನಗೆ ಹೇಳುತ್ತಾರೆ. ನಾನು ಅಪ್ಲಿಕೇಷನ್ ಹಾಕಿಕೊಂಡು ಅಮೆರಿಕದಲ್ಲಿ ಹುಟ್ಟಲಿಲ್ಲ. ಕರ್ನಾಟಕಕ್ಕಾಗಿ ಕೆಲಸ ಮಾಡಬೇಕು ಎಂದು ಇಲ್ಲಿಗೆ ಬಂದಿದ್ದೇನೆ. ನಾವು ಸುಮಾರು 75 ,000 ಸಾವಿರ ವರ್ಷಗಳ ಮೂಲ ನಿವಾಸಿ ಪರಂಪರೆಯವರಾಗಿದ್ದೇವೆ. ನಮ್ಮ ತಂದೆ-ತಾಯಿಗಳು, ನಾನು ಈ ಕರ್ನಾಟದ ಫಲಾನುಭವಿಗಳು. ಅದಕ್ಕೆ ವಾಪಸ್ ಬಂದಿದ್ದೇನೆ. ಆದರೆ ಬ್ರಾಹ್ಮಣ್ಯ ಎಂಬುದು ಈ ನೆಲದ ಸಿದ್ಧಾಂತವಲ್ಲ. ಪರದೇಶದ ಸಿದ್ಧಾಂತ. ಈ ಬ್ರಾಹ್ಮಣ್ಯವನ್ನು ಆಚೆ ಹಾಕುವವರೇ ನಿಜವಾದ ದೇಶಭಕ್ತರು. ಬುದ್ಧ, ಬಸವ, ಅಂಬೇಡ್ಕರ್‌, ಗಾಂಧಿ, ಪೆರಿಯಾರ್‌‌, ಕುವೆಂಪು ಮಾರ್ಗದಲ್ಲಿ ನಡೆಯೋಣ. ವೈಜ್ಞಾನಿಕತೆ ಬೆಳೆಸೋಣ…”

-ಇಷ್ಟು ಚೇತನ್ ಅವರು ಆಡಿದ ಮಾತುಗಳು.

ಚೇತನ್‌ ಅವರು ನಟರಷ್ಟೇ ಅಲ್ಲ, ಸಾಮಾಜಿಕ ಕಾರ್ಯಕರ್ತರೂ ಹೌದು. ಹೀಗಾಗಿ ಇಷ್ಟು ನಿರ್ಭೀತವಾಗಿ ಬ್ರಾಹ್ಮಣ್ಯದ ವಿರುದ್ಧ ಮಾತನಾಡಬಲ್ಲರು. ಎಲ್ಲ ನಟರೂ ಚೇತನ್‌ ರೀತಿ ದಿಟ್ಟವಾಗಿ ಮಾತನಾಡಬೇಕು ಎಂದು ನಿರೀಕ್ಷಿಸಲಾಗದು ಎಂಬುದೂ ವಾಸ್ತವವೇ. ಆದರೆ ಅವರು ಚಿತ್ರರಂಗದ ಕುರಿತು ಎತ್ತಿರುವ ಪ್ರಶ್ನೆಗಳು ಗಮನಾರ್ಹ. ಚೇತನ್‌ ಸೇರಿದಂತೆ ಕೆಲವೇ ಕೆಲವು ಮಂದಿ ಮಾತ್ರ ಹಂಸಲೇಖರ ಪರ ದನಿ ಎತ್ತಿದ್ದಾರೆ. ಹಂಸಲೇಖರ ಪರ ಕೆಲವರು ಸಾರ್ವಜನಿಕವಾಗಿಯಲ್ಲದೆ, ವೈಯಕ್ತಿಕವಾಗಿ ಬೆಂಬಲಿಸಿರಬಹುದು. ಆದರೆ ಎಂದಿಗೂ ಬಹಿರಂಗವಾಗಿ ನೀಡುವ ಬೆಂಬಲಕ್ಕೆ ಹೆಚ್ಚು ಮಹತ್ವವಿರುತ್ತದೆ ಮತ್ತು ಅದಕ್ಕೆ ಟ್ರೋಲ್ ಪಡೆಗಳನ್ನು ಹಿಮ್ಮೆಟ್ಟಿಸಲು ಹೆಚ್ಚು ಶಕ್ತಿ ಇರುತ್ತದೆ.

ಹಂಸಲೇಖರ ಚಿತ್ರಸಾಹಿತ್ಯವನ್ನು ಗಂಭೀರವಾಗಿ ಗಮನಿಸಿದರೆ, ಹಂಸಲೇಖರು ಸಾಧ್ಯವಾದಲೆಲ್ಲ ಸಮ ಸಮಾಜದ ಆಶಯವನ್ನು, ಶೋಷಣೆ ವಿರುದ್ಧದ ದನಿಯನ್ನು ಅಳವಡಿಸಿಕೊಂಡಿದ್ದಾರೆ ಎಂಬುದು ಸುಲಭವಾಗಿ ತಿಳಿಯುತ್ತದೆ. ಹಂಸಲೇಖ ಅವರು ದಶಕಗಳ ಕಾಲ ಕನ್ನಡ ಚಿತ್ರರಂಗ ಬೆಳೆಯಲು ಅಪಾರ ಕೊಡುಗೆ ನೀಡಿದವರು. ತಮ್ಮ ಸಂಗೀತ ಹಾಗೂ ಸಾಹಿತ್ಯದ ಮೂಲಕ ಕನ್ನಡಿಗರ ಮನಗೆದ್ದವರು. ಇಂಥವರು ಇತ್ತೀಚಿನ ದಿನಗಳಲ್ಲಿ ಒಂದು ಸಾಮಾಜಿಕ ನಿಲುವನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಸಾಧ್ಯವಾಗದು ಎಂದರೆ ಏನರ್ಥ? ಅಸ್ಪೃಶ್ಯತೆ ನಿವಾರಣೆಗೆ ಒಂದು ಕಾರ್ಯಸೂಚಿಯನ್ನು, ಸಾಂವಿಧಾನಿಕ‌ ಆಶಯವನ್ನು ವ್ಯಕ್ತಪಡಿಸಿದ ಕೂಡಲೇ ಒತ್ತಡಗಳು, ಟ್ರೋಲ್ ಗಳು ಸೃಷ್ಟಿಯಾಗುತ್ತವೆ, ಮತ್ತೆ ಕ್ಷಮೆಯಾಚಿಸಲು ಮಾನಸಿಕ ಕಿರುಕುಳ ನೀಡಲಾಗುತ್ತದೆ ಎಂದರೂ ಕನ್ನಡ ಚಿತ್ರರಂಗ ಮೌನವಾಗಿರುವುದು ಏಕೆ? ಹಂಸಲೇಖ ಅವರಂತಹ ಹಿರಿಯ ಜೀವದ ಕಥೆಯೇ ಹೀಗಾದರೆ ಕನ್ನಡ ಚಿತ್ರರಂಗದಿಂದ ಏನೋ ಬದಲಾವಣೆಯನ್ನು ತರಲು ಹೊರಟಿರುವವರ ಭವಿಷ್ಯದ ಕಥೆ ಏನು?

ಕನ್ನಡ ಚಿತ್ರರಂಗದಲ್ಲಿ ಕೆಲವು ಪ್ರಜ್ಞಾವಂತರಿದ್ದಾರೆ. ಅಂಥವರೆಲ್ಲ ಹಂಸಲೇಖರ ಪರ ನಿಂತು, ನೀವು ಹೇಳಿದ್ದು ಸರಿ ಇತ್ತು, ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ ಎಂದು ಬಹಿರಂಗವಾಗಿ ಘೋಷಿಸುವ ಅಗತ್ಯ ಇಂದು ಹೆಚ್ಚಿದೆ. ಇನ್ನೂ ಕಾಲ ಮೀರಿಲ್ಲ. ಅಂತಹ ದಿನವನ್ನು ಶೀಘ್ರದಲ್ಲಿಯೇ ನಿರೀಕ್ಷಿಸಬಹುದೇ?


ಇದನ್ನೂ ಓದಿರಿ: ‘ಆಹಾರ ನಮ್ಮ ಹಕ್ಕು, ಬಾಡು ತಿನ್ನಲಿ ಮಠದ ಬೆಕ್ಕು’: ಪ್ರತಿಭಟನಾಕಾರರ ಆಕ್ರೋಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

8 COMMENTS

  1. ಈ ಚೇತನ್ ಒಬ್ಬ ಅಬ್ಬೇಪಾರಿ ಅಯೋಗ್ಯ, ಮುಠ್ಠಾಳ. ಇವನನ್ನು ಯಾರೂ ಇಷ್ಟ ಪಡಲ್ಲ. ತಾನೇ ದೊಡ್ಡ ವಿದ್ವಾಂಸ ಎಂದು ಭಾವಿಸಿದ್ದಾನೆ. ಬ್ರಾಹ್ಮಣ ದ್ವೇಶಿ ಈತ ಬದುಕಲು ಯೋಗ್ಯತೆ ಇಲ್ಲ

  2. ಬ್ರಾಹ್ಮಣ ್ಯ ದ ವಿರೋಧಿ,
    ಹುಟ್ಟಿನಿಂದ ಬ್ರಾಹ್ಮಣ(ಹಾರವ) ರನ್ನು ತೆಗಳಬೇಕಾಗಿಲ್ಲ.

  3. ಬೀದಿಯಲ್ಲಿ ಗಲಾಟೆ ಮಾಡಾದು ತಪ್ಪು , ಆದರೆ ಸಂವಿಧಾನಬದ್ದವಾಗಿ complaint ಕೊಡೋದು ಹೇಗೆ ತಪ್ಪು, ನಾವು ದೇವರಕೋಣೆಯಲ್ಲಿ ಪೂಜಿಸುವ ಯತಿಗಳು , ದೇವರ ಬಗೆಗೆ ಹೀಗೆ ಮಾತಾಡಬಾರದು, ಸ್ವತಃ ನೋವುಂಡಿರುವವರು ಬೇರೆಯವರ ನೋವಿನ ಬಗೆಗೂ ಸೂಕ್ಷವಾಗಬೇಕು ಅಲ್ಲವೇ ?

  4. Cinema illa baduk illa…. yaru kelsa kodthaella…. rajakiya ke… thayaeee….. rajakiya jasti bekalla vote bank ge thayaee….
    En janma evandhu…. America idha oogudhu ache hakidhare…elli bandhu… drama start madidhane

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....