Homeಮುಖಪುಟಯುದ್ಧ ನೌಕೆ 'INS ವಿಕ್ರಾಂತ್’‌ ಉಪಕರಣಗಳ ಕಳ್ಳತನ; ಪ್ರಕರಣ ಭೇದಿಸಿದ NIA

ಯುದ್ಧ ನೌಕೆ ‘INS ವಿಕ್ರಾಂತ್’‌ ಉಪಕರಣಗಳ ಕಳ್ಳತನ; ಪ್ರಕರಣ ಭೇದಿಸಿದ NIA

- Advertisement -
- Advertisement -

ಭಾರತ ನಿರ್ಮಿತ ಮೊದಲ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್‌ನಿಂದ ಹಾರ್ಡ್ ಡಿಸ್ಕ್, ರಾಮ್‌ಗಳು ಹಾಗೂ ಪ್ರೊಸೆಸರ್‌ಗಳ ಕಳ್ಳತನಕ್ಕೆ ಸಂಬಂಧಿಸಿದ ಪ್ರಕರಣವನ್ನು ಭೇದಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಹೇಳಿಕೊಂಡಿದೆ.

2019 ರ ಸೆಪ್ಟೆಂಬರ್‌ನಲ್ಲಿ ಕೇರಳದ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಹಡಗು ನಿರ್ಮಾಣದ ಸಂದರ್ಭದಲ್ಲಿ  ಕಳ್ಳತನ ವರದಿಯಾಗಿತ್ತು.

ರಾಷ್ಟ್ರೀಯ ತನಿಖಾ ಸಂಸ್ಥೆ ಮಂಗಳವಾರ ಇಬ್ಬರು ವಲಸೆ ಕಾರ್ಮಿಕರನ್ನು ಬಂಧಿಸಿದ್ದು, ಬಂಧಿತರಲ್ಲಿ ಒಬ್ಬ ವ್ಯಕ್ತಿ ಬಿಹಾರ ಮೂಲದವನು ಇನ್ನೊಬ್ಬ ವ್ಯಕ್ತಿ ರಾಜಸ್ಥಾನದ ನಿವಾಸಿಯಾಗಿದ್ದಾರೆ. ಇಬ್ಬರೂ ಹಡಗಿನಲ್ಲಿ ಪೈಂಟಿಂಗ್‌ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಗುತ್ತಿಗೆದಾರನೊಂದಿಗೆ ವಾಗ್ವಾದವಾಗಿದ್ದರಂದ ಅವರನ್ನು ಕೆಲಸದಿಂದ ಅವರನ್ನು ವಜಾಗೊಳಿಸಲಾಗಿತ್ತು. ಕೆಲಸದಿಂದ ವಜಾಗೊಳಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಅವರು ಈ ಉಪಕರಣಗಳನ್ನು ಕದ್ದಿದ್ದಾರೆ ಎಂದು ಎನ್ಐಎ ಮೂಲಗಳು ತಿಳಿಸಿವೆ.

ಹಡಗಿನಿಂದ ಕಳ್ಳತನವಾದ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ ಕೇರಳ ಪೊಲೀಸರ ನೆರವಿನೊಂದಿಗೆ 5,000 ಕ್ಕೂ ಹೆಚ್ಚು ಜನರ ಬೆರಳಚ್ಚುಗಳನ್ನು ಪರೀಕ್ಷಿಸಿತ್ತು.

naanu gauri,ನಾನು ಗೌರಿ,
ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಐಎನ್ಎಸ್ ವಿಕ್ರಾಂತ್ .

ಘಟನೆಯ ನಂತರ ಹೆಚ್ಚುವರಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿಯನ್ನು ನಿಯೋಜಿಸುವುದರೊಂದಿಗೆ ಹಡಗುಕಟ್ಟೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಬಯೋಮೆಟ್ರಿಕ್ ಸ್ಕ್ಯಾನಿಂಗ್ ಮತ್ತು ಬಾಡಿ ಸ್ಕ್ಯಾನಿಂಗ್ ಅನ್ನು ಸಹ ಗೇಟ್‌ಗಳಲ್ಲಿ ಕಡ್ಡಾಯಗೊಳಿಸಲಾಗಿದೆ.

ಕೊಚ್ಚಿನ್ ಶಿಪ್‌ಯಾರ್ಡ್ ಭಾರತದ ಅತಿದೊಡ್ಡ ಹಡಗು ನಿರ್ಮಾಣ ಮತ್ತು ನಿರ್ವಹಣಾ ಕೇಂದ್ರವಾಗಿದೆ.

ಐಎನ್ಎಸ್ ವಿಕ್ರಾಂತ್ ನೌಕೆಯ ವಿನ್ಯಾಸದ ಕೆಲಸವು 1999 ರಲ್ಲಿ ಪ್ರಾರಂಭವಾಗಿ, ನೌಕೆಯನ್ನು ಕಟ್ಟಲು ಫೆಬ್ರವರಿ 2009 ರಲ್ಲಿ ಪ್ರಾರಂಭಿಸಲಾಗಿದೆ. ಈ ಬೃಹತ್ ನೌಕೆಯು ಫೆಬ್ರವರಿ 2021 ರಲ್ಲಿ ಸಮುದ್ರ ಪ್ರಯೋಗಗಳನ್ನು ಪ್ರಾರಂಭಿಸಿ 2023 ರಲ್ಲಿ ಸೇವೆಗೆ ಪ್ರವೇಶಿಸುವ ನಿರೀಕ್ಷೆಯಿದೆ. ಈ ಯೋಜನೆಯ ವೆಚ್ಚವು 20,000 ಕೋಟಿ ರೂ. ಆಗಿದೆ.

ಐಎನ್‌ಎಸ್ ವಿಕ್ರಾಂತ್ ಪೂರ್ಣಗೊಳ್ಳುವುದರೊಂದಿಗೆ, ವಿಮಾನವಾಹಕ ನೌಕೆಗಳ ನಿರ್ಮಾಣದಲ್ಲಿ ಭಾರತವು ಅಮೇರಿಕಾ, ಇಂಗ್ಲೆಂಡ್, ರಷ್ಯಾ, ಫ್ರಾನ್ಸ್ ಮತ್ತು ಚೀನಾ ಶ್ರೇಣಿಯನ್ನು ಸೇರಲಿದೆ.


ಓದಿ: ಗಡಿಯನ್ನು ಸೈನ್ಯಕ್ಕೆ ಬಿಡಿ, ಬಾಹ್ಯಾಕಾಶವನ್ನು ವಿಜ್ಞಾನಿಗಳಿಗೆ ಬಿಡಿ. ಬನ್ನಿ ನಮ್ಮೊಡನೆ ಮಾತನಾಡಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...