Homeಕರ್ನಾಟಕಪ್ರಕರಣ ದಾಖಲಾದ ತಕ್ಷಣ ಬಂಧಿಸಬೇಕೆಂಬ ಯಾವುದೇ ಕಾನೂನಿಲ್ಲ: ಚಿತ್ರದುರ್ಗ ಎಸ್‌ಪಿ

ಪ್ರಕರಣ ದಾಖಲಾದ ತಕ್ಷಣ ಬಂಧಿಸಬೇಕೆಂಬ ಯಾವುದೇ ಕಾನೂನಿಲ್ಲ: ಚಿತ್ರದುರ್ಗ ಎಸ್‌ಪಿ

- Advertisement -
- Advertisement -

“ಪ್ರಕರಣ ದಾಖಲಾದ ತಕ್ಷಣ ಬಂಧಿಸಬೇಕೆಂದು ಯಾವುದೇ ಕಾಯ್ದೆಯಲ್ಲೂ ಇಲ್ಲ. ತನಿಖೆ ಮಾಡಿ, ಸಾಕ್ಷ್ಯಾಧಾರಗಳ ಆಧಾರದಲ್ಲಿ ಮುರುಘಾ ಶರಣರನ್ನು ಬಂಧಿಸುತ್ತೇವೆ” ಎಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ತಿಳಿಸಿದ್ದಾರೆ.

ಮಠದ ವಿದ್ಯಾರ್ಥಿನಿಯರು ನೀಡಿದ ದೂರಿನ ಆಧಾರದಲ್ಲಿ ‘ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ’ (ಪೋಕ್ಸೋ) ಅಡಿಯಲ್ಲಿ ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಡಾ. ಶಿವರಾತ್ರಿ ಮುರುಘಾ ಶರಣರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಇನ್ನೂ ಮುರುಘಾ ಶರಣರ ಬಂಧನವಾಗಿಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮೈಸೂರಿನಲ್ಲಿ ದಾಖಲಾಗಿದ್ದ ಪ್ರಕರಣವನ್ನು ಚಿತ್ರದುರ್ಗದ ಕೋಟೆ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಪ್ರಕರಣ ದಾಖಲಾಗಿ ಮೂರು ದಿನ ಕಳೆದರೂ ಆರೋಪಿಗಳನ್ನು ಬಂಧಿಸಿಲ್ಲ.

“ಇಲ್ಲಿ ಸಾಮಾನ್ಯರಿಗೊಂದು ನ್ಯಾಯ, ಸ್ವಾಮೀಜಿಗೊಂದು ನ್ಯಾಯವಿದೆಯೇ?” ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಈವರೆಗೆ ಎರಡು ಭಾರಿ ‘ನಾನುಗೌರಿ.ಕಾಂ’ ಚಿತ್ರದುರ್ಗದ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಸಂಪರ್ಕಿಸಿದ್ದು ಎರಡು ಭಾರಿಯೂ “ತನಿಖೆ ನಡೆಯುತ್ತಿದೆ. ಸಾಕ್ಷ್ಯಗಳು ಸಿಕ್ಕಾಗ ಬಂಧಿಸುತ್ತೇವೆ” ಎಂದು ತಿಳಿಸಿದ್ದಾರೆ.

“ಸಾಕ್ಷಿಗಳ ನಾಶಪಡಿಸಲು ಪೊಲೀಸರು ಅವಕಾಶ ನೀಡುತ್ತಿದ್ದಾರೆ ಎಂಬ ಆರೋಪಗಳು ಬಂದಿವೆ” ಎಂದು ಕೇಳಿದಾಗ, “ಹಾಗೇನಿಲ್ಲ. ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದೇವೆ” ಎಂದಿದ್ದಾರೆ ಎಸ್‌ಪಿ.

“ಪೋಕ್ಸೋ ಪ್ರಕರಣ ದಾಖಲಾದಾಗ ತಕ್ಷಣವೇ ಆರೋಪಿಗಳನ್ನು ಬಂಧಿಸಬೇಕಾಗುತ್ತದೆ” ಎಂದು ಕಾನೂನು ತಜ್ಞರು ತಾಳುತ್ತಿರುವ ಅಭಿಪ್ರಾಯಗಳನ್ನು ಅವರ ಗಮನಕ್ಕೆ ತಂದಾಗ, “ಪ್ರಕರಣ ದಾಖಲಾದ ತಕ್ಷಣ ಆರೋಪಿಗಳನ್ನು ಬಂಧಿಸಬೇಕೆಂದು ಯಾವುದೇ ಕಾಯ್ದೆ ಇಲ್ಲ. ತನಿಖೆ ನಡೆಸಲಾಗುತ್ತಿದೆ” ಎಂದು ಪುನರಾವರ್ತಿಸಿದರು.

ಕಾನೂನು ತಜ್ಞರು ಏನಂತಾರೆ? ಒಡನಾಡಿ ಸಂಸ್ಥೆ ಹೇಳಿದ್ದೇನು?

“ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಮಕ್ಕಳು ಯಾರ ಬಳಿ ಈ ಬಗ್ಗೆ ಹೇಳುತ್ತಾರೋ, ಅವರೇ ಪೊಲೀಸರಿಗೆ ಮಾಹಿತಿ ನೀಡಬೇಕು. ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಆಗಿರುವುದು ತಿಳಿದಿದ್ದೂ ಸುಮ್ಮನಿದ್ದರೆ, ನಂತರದ ದಿನಗಳಲ್ಲಿ ಆ ಕುರಿತು ಹೇಳಿದರೆ, ಆ ವ್ಯಕ್ತಿಯನ್ನು ಕೂಡ ಬಂಧಿಸಬಹುದು ಎಂದು ಈ ಕಾಯಿದೆ ಹೇಳುತ್ತದೆ. ಪೋಕ್ಸೊ ಕಾಯಿದೆ ಹೇಗಿದೆ ಅಂದರೆ, ಮೊದಲು ಯಾರ ವಿರುದ್ಧ ಆರೋಪ ಕೇಳಿ ಬಂದಿದೆಯೋ ಆ ವ್ಯಕ್ತಿಯ ಬಂಧನ, ನಂತರ ತನಿಖೆ” ಎನ್ನುತ್ತಾರೆ ಅಂಜಲಿ ರಾಮಣ್ಣ.

“ಪೋಕ್ಸೋ ಪ್ರಕಣದಲ್ಲಿ, ಇಬ್ಬರು ಬಾಲಕಿಯರು ನೇರವಾಗಿ ಬಂದು ದೂರು ನೀಡಿದಾಗ ಆರೋಪಿಯನ್ನು ಬಂಧಿಸಲೇಬೇಕು. ಆರೋಪಿ ಎಷ್ಟೇ ಪ್ರಬಾವಿ ಸ್ಥಾನದಲ್ಲಿದ್ದರೂ ಅವರನ್ನು ಬಂಧಿಸಬೇಕು. ಇಂಥ ಪ್ರಕಣಗಳಲ್ಲಿ ಸಾಮಾನ್ಯ ಜನರನ್ನು ಬಂಧಿಸಿದಂತೆ ಪ್ರಭಾವಿ ವ್ಯಕ್ತಿಗಳನ್ನು ಬಂಧಿಸುವ ಪದ್ಧತಿ ನಮ್ಮಲ್ಲಿ ಇಲ್ಲ. ಬದಲಿಗೆ ಆರೋಪ ಮಾಡಿದವರ ಮೇಲೆಯೇ ಅನುಮಾನ ವ್ಯಕ್ತಪಡಿಸುವ ಪ್ರವೃತ್ತಿ ನಡೆದುಕೊಂಡು ಬಂದಿದೆ” ಎಂದು ವಕೀಲರಾದ ರಾಜಲಕ್ಷ್ಮಿ ಅಂಕಲಗಿ ವಿಷಾದಿಸಿದ್ದಾರೆ.

ಪ್ರಕರಣ ದಾಖಲಾಗಲು ಸಹಾಯಹಸ್ತ ಚಾಚಿದ ಮೈಸೂರಿನ ಒಡನಾಡಿ ಸಂಂಸ್ಥೆಯ ಪರಶು ಅವರು ವಿಳಂಬ ನೀತಿಯನ್ನು ಖಂಡಿಸಿದ್ದಾರೆ. “ಮುರುಘಾ ಶ್ರೀ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 164ರ ಅಡಿ ಹೇಳಿಕೆ ದಾಖಲಿಸಬೇಕಿತ್ತು. ಆದರೆ, ಪೊಲೀಸರು ಆ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿದ್ದಾರೆ. ಪೊಲೀಸರ ವಿಳಂಬ ಧೋರಣೆಯನ್ನು ನಾವು ಗಮನಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಈ ವಿಳಂಬ ಪ್ರಶ್ನಿಸಿ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸುತ್ತೇವೆ” ಎಂದಿದ್ದಾರೆ.

ಇದನ್ನೂ ಓದಿರಿ: ಸಂತ್ರಸ್ತ ಮಕ್ಕಳನ್ನು ಹೆದರಿಸುವ ಪ್ರಯತ್ನ ನಡೆಯುತ್ತಿವೆ: ದಲಿತ ಹೋರಾಟಗಾರ ಪ್ರೊ.ಸಿ.ಕೆ.ಮಹೇಶ್ ಆತಂಕ

“ಎಫ್‌ಐಆರ್‌ ದಾಖಲಾಗಿ, ಸಂತ್ರಸ್ತ ಬಾಲಕಿಯರ ಹೇಳಿಕೆ ಪಡೆದು ದಿನ ಉರುಳಿದರೂ ಪೊಲೀಸರು ಕ್ರಮ ಜರುಗಿಸದೇ ಇರುವ ಕುರಿತು ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾಗಿ ಕೆಲಸ ಮಾಡಿದ ಅನುಭವವೂ ಪರಶು ಅವರಿಗಿದೆ.

“ಈಗ ನಮ್ಮ ಮುಂದೆ ಎರಡು ಆಯ್ಕೆಗಳಿವೆ. ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಪೊಲೀಸರು ತಡ ಮಾಡಿದ್ದಕ್ಕೆ ಸಂಬಂಧಿಸಿದಂತೆಯೇ ನಾವು ಮತ್ತೊಂದು ಪ್ರಕರಣ ದಾಖಲಿಸಬಹುದು. ಇದೇ ಆಧಾರದ ಮೇಲೆ ನಾವು ಸಿಬಿಐ ತನಿಖೆಗೂ ಒತ್ತಾಯಿಸಬಹುದು. ಇವೆರಡೂ ಆಯ್ಕೆಗಳೂ ನಮ್ಮ ಮುಂದಿವೆ” ಎಂದು ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

4 COMMENTS

  1. ಸಂಬಂಧಪಟ್ಟ ಕಾಯ್ದೆ ಅಡಿ ದೂರು ದಾಖಲಾಗಿದ್ದರು ವ್ಯಕ್ತಿಯ ಬಂಧನವಾಗದಿದ್ದರೆ ಪೊಲೀಸರ ಮೇಲೆ ಖಾಸಗಿ ದೂರು ಸಲ್ಲಿಸಬಹುದಲ್ಲವೇ ….ಎಸ್ ಪಿ ಮೇಲೆ ಯಾಕೆ ದೂರು ಸಲ್ಲಿಸಬಾರದು….?

  2. ಚಿತ್ರದುರ್ಗದ ಎಸ್‌. ಪಿ., ಆರೋಪಿ ಮುರುಗಾ ಶರಣರ ಪ್ರಭಾವಕ್ಕೆ ಬಲಿಯಾಗಿರುವುದು, ಸ್ಪಷ್ಟವಾಗಿ ಕಾಣುತ್ತಿರುವುದರಿಂದ, ಈಗ ಈ ಎಸ್‌ ಪಿ.ಯನ್ನೂ ಆರೋಪಿಯನ್ನಾಗಿಸಿ, ನ್ಯಾಯಾಲಯಕ್ಕೆ ದೂರು ಸಲ್ಲಿಸಬೇಕು.

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...