ಜಾರ್ಖಂಡ್ನ ಬಿಜೆಪಿ ನಾಯಕಿಯೊಬ್ಬಳು ಬುಡಕಟ್ಟು ಸಮುದಾಯದ ಯುವತಿಯನ್ನು 8 ವರ್ಷಗಳ ಕಾಲ ಮನೆಗೆಲಸಕ್ಕಾಗಿ ತಮ್ಮ ಮನೆಯಲ್ಲಿ ಬಂಧಿಸಿಟ್ಟು ಚಿತ್ರ ಹಿಂಸೆ ನೀಡಿರುವ ಘಟನೆ ರಾಜ್ಯದ ರಾಂಚಿಯಲ್ಲಿ ನಡೆದಿದೆ. ಯುವತಿಯೊಂದಿಗೆ ನಾಲಗೆಯಲ್ಲಿ ನೆಲವನ್ನು ಸ್ವಚ್ಛ ಮಾಡಿಸುತ್ತಿದ್ದ ದುಷ್ಕರ್ಮಿ ಮಹಿಳೆ, ಕಬ್ಬಿಣದ ರಾಡ್ನಿಂದ ಹೊಡೆದು ಯುವತಿಯ ಹಲ್ಲು ಮುರಿದಿದ್ದಾಳೆ ಎಂದು ಆರೋಪಿಸಲಾಗಿದೆ.
ನಿವೃತ್ತ ಐಎಎಸ್ ಮಹೇಶ್ವರ್ ಪಾತ್ರಾ ಅವರ ಪತ್ನಿ ಆಗಿರುವ ಸೀಮಾ ಪಾತ್ರಾ ಅವರು 29 ವರ್ಷದ ಬುಡಕಟ್ಟು ಯುವತಿ ಸುನೀತಾ ಖಾಖಾ ಅವರನ್ನು 8 ವರ್ಷಗಳ ಕಾಲ ಸೂರ್ಯನನ್ನೂ ನೋಡಲು ಬಿಡದೆ ತಮ್ಮ ಮನೆಯಲ್ಲಿ ಬಂಧಿಸಿಟ್ಟಿದ್ದಾರೆ ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸೀಮಾ ಪಾತ್ರಾ ಮಾತ್ರವಲ್ಲದೆ, ಅವರ ಕುಟುಂಬವು ಕೂಡಾ ಯುವತಿಗೆ ಚಿತ್ರಹಿಂಸೆ ನೀಡುತ್ತಿತ್ತು ಎಂದು ಆರೋಪಿಸಲಾಗಿದೆ. ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
रांची में रिटायर्ड IAS महेश्वर पात्रा की पत्नी भाजपा नेता सीमा पात्रा ने आदिवासी महिला सुनीता खाखा को 8 साल तक अपने घर में कैद कर सूरज भी नहीं देखने दिया। सुनीता से जीभ से फर्श साफ करवाया। पेशाब चटाया। रॉड से दांत तोड़ डाले। गर्म तबे से चेहरा जला डाला। शर्मनाक। #ArrestSeemaPatra pic.twitter.com/oTdJXMINJ1
— Hansraj Meena (@HansrajMeena) August 30, 2022
ಆರೋಪಿ ಸೀಮಾ ಪಾತ್ರಾ ಕಬ್ಬಿಣದ ರಾಡ್ನಿಂದ ಹಲ್ಲು ಮುರಿದಿದ್ದಾಳೆ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾರೆ. ತನ್ನನ್ನು ಬಿಸಿ ಪಾತ್ರೆಗಳಿಂದ ಸುಟ್ಟು ಹಾಕುತ್ತಿದ್ದಿದ್ದು ಮಾತ್ರವಲ್ಲದೆ, ನಿರಂತರವಾಗಿ ಥಳಿಸುತ್ತಿದ್ದಳು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮಾತು ಮರೆತ ಭಾರತ; ಊನಾ ಫೈಲ್: ಆರೆಸ್ಸೆಸ್-ಬಿಜೆಪಿಯ ದನದ ರಾಜಕಾರಣ ಮತ್ತು ದಲಿತರು
ಆದಾಗ್ಯೂ, ಸೀಮಾ ಪಾತ್ರಾ ಅವರ ಮಗ ತನ್ನನ್ನು ರಕ್ಷಿಸಲು ಪ್ರಯತ್ನಿಸಿದ್ದು, ಆತನಿಂದಾಗಿ ತಾನು ಜೀವಂತವಾಗಿದ್ದೇನೆ ಎಂದು ಸುನಿತಾ ಅವರು ಹೇಳಿದ್ದಾರೆ. ಸೀಮಾ ಪಾತ್ರಾ ತನ್ನನ್ನು ಕೋಣೆಯೊಂದರಲ್ಲಿ ಬಂಧಿಸಿ, ಆಹಾರ ಮತ್ತು ನೀರನ್ನು ಕೂಡಾ ನೀಡಿರಲಿಲ್ಲ ಎಂದು ಸುನಿತಾ ಹೇಳಿದ್ದಾರೆ.
आदिवासी महिला पर अत्याचार करने वाली भाजपा नेत्री सीमा पात्रा पीएम @narendramodi, अर्जुन मुंडा, मनोज तिवारी जैसे तमाम नेताओं के साथ तस्वीर में दिख रही है। यह भाजपा की प्रदेश सदस्य तथा बेटी बचाओ,बेटी पढ़ाओ अभियान की संयोजक है। क्या भाजपा का यही असली चाल चरित्र है? #ArrestSeemaPatra pic.twitter.com/3FASzU2tqI
— Tribal Army (@TribalArmy) August 30, 2022
ಪೊಲೀಸರ ರಕ್ಷಣೆಯ ನಂತರ ಸುನಿತಾ ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆ ಕ್ಷೀಣ ಸ್ಥಿತಿಯಲ್ಲಿದ್ದು, ಸಾಮಾನ್ಯ ಸ್ಥಿತಿಗೆ ಬರಲು ಕೆಲವು ದಿನಗಳು ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಚಿಕಿತ್ಸೆ ಬಳಿಕ ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.