Homeಮುಖಪುಟ‘ನಾಲಗೆಯಲ್ಲಿ ನೆಲ ಸ್ವಚ್ಛ ಮಾಡಿಸುತ್ತಿದ್ದರು’: ಬುಡಕಟ್ಟು ಯುವತಿಯನ್ನು 8 ವರ್ಷ ಬಂಧಿಸಿಟ್ಟು ಚಿತ್ರಹಿಂಸೆ ನೀಡುತ್ತಿದ್ದ BJP...

‘ನಾಲಗೆಯಲ್ಲಿ ನೆಲ ಸ್ವಚ್ಛ ಮಾಡಿಸುತ್ತಿದ್ದರು’: ಬುಡಕಟ್ಟು ಯುವತಿಯನ್ನು 8 ವರ್ಷ ಬಂಧಿಸಿಟ್ಟು ಚಿತ್ರಹಿಂಸೆ ನೀಡುತ್ತಿದ್ದ BJP ನಾಯಕಿ

ಕಬ್ಬಿಣದ ರಾಡ್‌ನಿಂದ ಹೊಡೆದು ಯುವತಿಯ ಹಲ್ಲು ಮುರಿದಿದ್ದಾಳೆ ಎಂದು ಆರೋಪಿಸಲಾಗಿದೆ

- Advertisement -
- Advertisement -

ಜಾರ್ಖಂಡ್‌ನ ಬಿಜೆಪಿ ನಾಯಕಿಯೊಬ್ಬಳು ಬುಡಕಟ್ಟು ಸಮುದಾಯದ ಯುವತಿಯನ್ನು 8 ವರ್ಷಗಳ ಕಾಲ ಮನೆಗೆಲಸಕ್ಕಾಗಿ ತಮ್ಮ ಮನೆಯಲ್ಲಿ ಬಂಧಿಸಿಟ್ಟು ಚಿತ್ರ ಹಿಂಸೆ ನೀಡಿರುವ ಘಟನೆ ರಾಜ್ಯದ ರಾಂಚಿಯಲ್ಲಿ ನಡೆದಿದೆ. ಯುವತಿಯೊಂದಿಗೆ ನಾಲಗೆಯಲ್ಲಿ ನೆಲವನ್ನು ಸ್ವಚ್ಛ ಮಾಡಿಸುತ್ತಿದ್ದ ದುಷ್ಕರ್ಮಿ ಮಹಿಳೆ, ಕಬ್ಬಿಣದ ರಾಡ್‌ನಿಂದ ಹೊಡೆದು ಯುವತಿಯ ಹಲ್ಲು ಮುರಿದಿದ್ದಾಳೆ ಎಂದು ಆರೋಪಿಸಲಾಗಿದೆ.

ನಿವೃತ್ತ ಐಎಎಸ್ ಮಹೇಶ್ವರ್ ಪಾತ್ರಾ ಅವರ ಪತ್ನಿ ಆಗಿರುವ ಸೀಮಾ ಪಾತ್ರಾ ಅವರು 29 ವರ್ಷದ ಬುಡಕಟ್ಟು ಯುವತಿ ಸುನೀತಾ ಖಾಖಾ ಅವರನ್ನು 8 ವರ್ಷಗಳ ಕಾಲ ಸೂರ್ಯನನ್ನೂ ನೋಡಲು ಬಿಡದೆ ತಮ್ಮ ಮನೆಯಲ್ಲಿ ಬಂಧಿಸಿಟ್ಟಿದ್ದಾರೆ ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸೀಮಾ ಪಾತ್ರಾ ಮಾತ್ರವಲ್ಲದೆ, ಅವರ ಕುಟುಂಬವು ಕೂಡಾ ಯುವತಿಗೆ ಚಿತ್ರಹಿಂಸೆ ನೀಡುತ್ತಿತ್ತು ಎಂದು ಆರೋಪಿಸಲಾಗಿದೆ. ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿ ಸೀಮಾ ಪಾತ್ರಾ ಕಬ್ಬಿಣದ ರಾಡ್‌ನಿಂದ ಹಲ್ಲು ಮುರಿದಿದ್ದಾಳೆ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾರೆ. ತನ್ನನ್ನು ಬಿಸಿ ಪಾತ್ರೆಗಳಿಂದ ಸುಟ್ಟು ಹಾಕುತ್ತಿದ್ದಿದ್ದು ಮಾತ್ರವಲ್ಲದೆ, ನಿರಂತರವಾಗಿ ಥಳಿಸುತ್ತಿದ್ದಳು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮಾತು ಮರೆತ ಭಾರತ; ಊನಾ ಫೈಲ್: ಆರೆಸ್ಸೆಸ್-ಬಿಜೆಪಿಯ ದನದ ರಾಜಕಾರಣ ಮತ್ತು ದಲಿತರು

ಆದಾಗ್ಯೂ, ಸೀಮಾ ಪಾತ್ರಾ ಅವರ ಮಗ ತನ್ನನ್ನು ರಕ್ಷಿಸಲು ಪ್ರಯತ್ನಿಸಿದ್ದು, ಆತನಿಂದಾಗಿ ತಾನು ಜೀವಂತವಾಗಿದ್ದೇನೆ ಎಂದು ಸುನಿತಾ ಅವರು ಹೇಳಿದ್ದಾರೆ. ಸೀಮಾ ಪಾತ್ರಾ ತನ್ನನ್ನು ಕೋಣೆಯೊಂದರಲ್ಲಿ ಬಂಧಿಸಿ, ಆಹಾರ ಮತ್ತು ನೀರನ್ನು ಕೂಡಾ ನೀಡಿರಲಿಲ್ಲ ಎಂದು ಸುನಿತಾ ಹೇಳಿದ್ದಾರೆ.

ಪೊಲೀಸರ ರಕ್ಷಣೆಯ ನಂತರ ಸುನಿತಾ ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆ ಕ್ಷೀಣ ಸ್ಥಿತಿಯಲ್ಲಿದ್ದು, ಸಾಮಾನ್ಯ ಸ್ಥಿತಿಗೆ ಬರಲು ಕೆಲವು ದಿನಗಳು ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಚಿಕಿತ್ಸೆ ಬಳಿಕ ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋಲ್ಕತ್ತಾ: ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಸಂಸದನ ಮೃತದೇಹ ತುಂಡರಿಸಿದ ಸ್ಥಿತಿಯಲ್ಲಿ ಪತ್ತೆ

0
ಬಾಂಗ್ಲಾದೇಶದ ಸಂಸದ ಅನ್ವರುಲ್ ಅಝೀಂ ಅನಾರ್ ಭಾರತದಲ್ಲಿ ನಾಪತ್ತೆಯಾದ ಎಂಟು ದಿನಗಳ ನಂತರ ಕೋಲ್ಕತ್ತಾ ಪೊಲೀಸರು ಅವರ ತುಂಡರಿಸಿದ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ಕೋಲ್ಕತ್ತಾ ಪೊಲೀಸರು ಹತ್ಯೆಯು ಪೂರ್ವ ನಿಯೋಜಿತ ಎಂದು ಹೇಳಿಕೊಂಡಿದ್ದಾರೆ. ಅನಾರ್...