Homeಮುಖಪುಟಪದಕಗಳನ್ನು ಗಂಗಾ ನದಿಗೆ ಹಾಕಲು ಮುಂದಾದ ಕ್ರೀಡಾಪಟುಗಳ ಮನವೊಲಿಸಿದ ರೈತ ನಾಯಕ ಟಿಕಾಯತ್; ಆರೋಪಿ ಬಂಧನಕ್ಕೆ...

ಪದಕಗಳನ್ನು ಗಂಗಾ ನದಿಗೆ ಹಾಕಲು ಮುಂದಾದ ಕ್ರೀಡಾಪಟುಗಳ ಮನವೊಲಿಸಿದ ರೈತ ನಾಯಕ ಟಿಕಾಯತ್; ಆರೋಪಿ ಬಂಧನಕ್ಕೆ 5 ದಿನಗಳ ಗಡುವು

- Advertisement -
- Advertisement -

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಕಳೆದ ಒಂದು ತಿಂಗಳಿನಿಂದ ಕ್ರೀಡಾಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಬಿಜೆಪಿ ಸರ್ಕಾರ ಪ್ರತಿಭಟನಾಕಾರರತ್ತ ತಿರುಗಿಯೂ ನೋಡುತ್ತಿಲ್ಲ. ಹಾಗಾಗಿ ಹೋರಾಟ ತೀವ್ರಗೊಳಿಸಿರುವ ಕ್ರೀಡಾಪಟುಗಳು, ಪ್ರತಿಭಟನೆಯ ಭಾಗವಾಗಿ ಒಲಿಂಪಿಕ್ ಹಾಗೂ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ತಾವು ಗೆದ್ದಿರುವ ಪದಕಗಳನ್ನು ಗಂಗಾ ನದಿಯಲ್ಲಿ ಹಾಕಲು ಹರಿದ್ವಾರಕ್ಕೆ ಬಂದಿದ್ದರು. ಭಾರತೀಯ ಕಿಸಾನ್ ಯೂನಿಯನ್ ಮುಖಂಡ ನರೇಶ್ ಟಿಕಾಯತ್ ಅವರು ಮನವೊಲಿಸಿದ್ದಾರೆ.

ಖ್ಯಾತ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶಾ ಫೋಗಟ್‌, ಬಜರಂಗ್ ಪೂನಿಯಾ ಹಾಗೂ ಅವರ ನೂರಾರು ಬೆಂಬಲಿಗರು ದೆಹಲಿಯಿಂದ ಹೊರಟು, ಹರಿದ್ವಾರದ ಹರ್ ಕಿ ಪೌರಿ ಘಾಟ್ ತಲುಪಿದರು. ಈ ವೇಳೆ ಸ್ಥಳದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು.

ಕಣ್ಣೀರು ಹಾಕುತ್ತಿದ್ದ ಸಾಕ್ಷಿ ಮಲಿಕ್, ವಿನೇಶಾ ಹಾಗೂ ಅವರ ಸಂಬಂಧಿ ಸಂಗೀತಾ ಅವರನ್ನು ಸಮಾಧಾನಪಡಿಸಲಾಗುತ್ತಿತ್ತು. ಮತ್ತೊಂದೆಡೆ, ಅವರು ಕುಳಿತಿದ್ದ ಸ್ಥಳವನ್ನು ಬೆಂಬಲಿಗರು ಸುತ್ತುವರಿದಿದ್ದಕ್ಕೆ ‘ಹರ್ ಕಿ ಪೌರಿ’ ಘಾಟ್ ಸಾಕ್ಷಿಯಾಗಿತ್ತು. ನಂತರ, ಕುಸ್ತಿಪಟುಗಳು 20 ನಿಮಿಷಗಳಷ್ಟು ಮೌನಕ್ಕೆ ಮೊರೆ ಹೋದರು. ಬಳಿಕ ತಮ್ಮ ಪ್ರಶಸ್ತಿ ಫಲಕಗಳನ್ನು ಹಿಡಿದುಕೊಂಡು ನದಿ ತೀರದಲ್ಲಿ ಕಣ್ಣೀರು ಹಾಕಿದರು.

ಆರೋಪಿ ಬಿಜೆಪಿಯ ಸಂಸದ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಕುಸ್ತಿಪಟುಗಳು ಮಂಗಳವಾರ ಐದು ದಿನಗಳ ಗಡುವು ನೀಡಿದರು.

ಈ ಕುಸ್ತಿಪಟುಗಳು ಕಳೆದ ಒಂದು ತಿಂಗಳಿನಿಂದ ದೆಹಲಿಯ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಭಾನುವಾರ ಸಂಸತ್‌ ಭವನಕ್ಕೆ ತೆರಳಿ ‘ಮಹಿಳಾ ಮಹಾ ಪಂಚಾಯತ್’ ನಡೆಸಲು ಮುಂದಾಗಿದ್ದರು. ಈ ವೇಳೆ ಪೊಲೀಸರು ಪ್ರತಿಭಟನಕಾರರನ್ನು ಮಾರ್ಗ ಮಧ್ಯೆಯೇ ತಡೆದು, ಪದಕ ವಿಜೇತ ಕ್ರೀಡಾಪುಗಳನ್ನು ದಾರಿಯಲ್ಲಿ ಎಳೆದಾಡಿ ಬಹಳ ಕೆಟ್ಟದಾಗಿ ನಡೆಸಿಕೊಂಡರು. ಅಷ್ಟೇ ಅಲ್ಲದೇ ಕ್ರೀಡಾಪಟುಗಳ ವಿರುದ್ಧ ಕೇಸ್‌ಗಳನ್ನು ಹಾಕಿ ಕೆಲ ಕಾಲ ಬಂಧನ ಕೂಡ ಮಾಡಲಾಯಿತು. ಆನಂತರ ಪೊಲೀಸರು ಅವರಿಗೆ ಜಂತ‌ ಮಂತರ್‌ಗೆ ತೆರಳಲು ಅವಕಾಶ ನೀಡಿರಲಿಲ್ಲ.

ಇದನ್ನೂ ಓದಿ: ಮೆಡಲ್‌ಗಳನ್ನು ಗಂಗಾ ನದಿಗೆ ಎಸೆದು, ಆಮರಣಾಂತ ಉಪವಾಸ ಕೂರುತ್ತೇವೆ: ಕುಸ್ತಿಪಟು ಸಾಕ್ಷಿ ಮಲಿಕ್

‘ಬ್ರಿಜ್‌ಭೂಷಣ್ ಸಿಂಗ್ ವಿರುದ್ಧದ ನಮ್ಮ ಹೋರಾಟವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ’ ಎಂದು ಆರೋಪಿಸಿದ್ದ ಪ್ರತಿಭಟನಕಾರರು, ತಮ್ಮ ಸಾಧನೆಗೆ ಸಂದಿರುವ ಪದಕಗಳನ್ನು ಗಂಗಾ ನದಿಯಲ್ಲಿ ಹಾಕುತ್ತೇವೆ. ಬಳಿಕ ಇಂಡಿಯಾ ಗೇಟ್ ಬಳಿ ಆಮರಣ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿದ್ದರು.

2016ರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್ ಈ ಬಗ್ಗೆ ಟ್ವಿಟ್ ಮಾಡಿದ್ದರು. ಇತರ ಕುಸ್ತಿಪಟುಗಳು ಈ ಟ್ವಿಟ್ ಅನ್ನು ಹಂಚಿಕೊಂಡಿದ್ದರು.

”ನಾವು ಗೆದ್ದಿಕೊಂಡಿರುವ ಈ ಪದಕಗಳು ಗಂಗೆಯಷ್ಟೇ ಪವಿತ್ರವಾಗಿವೆ” ಎಂದು ಸಾಕ್ಷಿ ಮಲಿಕ್ ಹೇಳಿದ್ದಾರೆ.

ಸಾಕ್ಷಿ ಮಲಿಕ್ ಟ್ವೀಟ್‌ನಲ್ಲಿ ಏನು ಹೇಳಿದ್ದಾರೆ?

”ಈ ಪದಕಗಳು ಇಡೀ ದೇಶದ ಪಾಲಿಗೂ ಪವಿತ್ರವಾಗಿವೆ. ಆದರೆ, ತಪ್ಪು ಎಸಗಿರುವ ವ್ಯಕ್ತಿಯ ಪರವಾಗಿ ನಿಲ್ಲುತ್ತಿರುವ ವ್ಯವಸ್ಥೆಯೊಂದರ ಮುಖವಾಡವಾದಂತೆ ಈ ಪದಕಗಳನ್ನು ಬಳಸುವ ಬದಲು ಅವುಗಳನ್ನು ಕೊರಳಲ್ಲಿ ಹಾಕುವ ಬದಲು ಪವಿತ್ರವಾದ ಗಂಗಾ ನದಿಯೇ ಹೆಚ್ಚು ಸೂಕ್ತವಾದ ಸ್ಥಳ” ಎಂದು ತಿಳಿಸಿದ್ದಾರೆ.

”ದೇಶಕ್ಕಾಗಿ ಹುತಾತ್ಮರಾದವರ ಸ್ಮರಣೆಗಾಗಿ ಇಂಡಿಯಾ ಗೇಟ್ ನಿರ್ಮಿಸಲಾಗಿದೆ. ಆ ಹುತಾತ್ಮರಷ್ಟು ನಾವು ಪೂಜನೀಯರಲ್ಲ. ಆದರೆ, ಅಂತರರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾಗ, ನಮ್ಮ ಯೋಧರಷ್ಟೇ ನಾವೂ ಭಾವುಕರಾಗಿದ್ದೆವು” ಎಂದಿದ್ದಾರೆ.

”ನಮಗೆ ಕಿರುಕುಳ ನೀಡಿದ ವ್ಯಕ್ತಿಯನ್ನು ಬಂಧಿಸುವ ಬದಲು, ವ್ಯವಸ್ಥೆಯು ಸಂತ್ರಸ್ತರನ್ನೇ ಹೆದರಿಸಲು ಮತ್ತು ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ’ ಎಂದೂ ಹೇಳಿದ್ದಾರೆ.

ಕುಸ್ತಿಪಟುಗಳಿಗೆ ಇಂಡಿಯಾ ಗೇಟ್ ಬಳಿ ಪ್ರತಿಭಟನೆ ನಡೆಸುವ ಅವಕಾಶ ನೀಡಲ್ಲ ಎಂದ ಪೊಲೀಸರು

”ಇಂಡಿಯಾ ಗೇಟ್ ಬಳಿ ಪ್ರತಿಭಟನೆ ನಡೆಸಲು ಕುಸ್ತಿಪಟುಗಳಿಗೆ ಅವಕಾಶ ನೀಡುವುದಿಲ್ಲ. ಪ್ರತಿಭಟನೆ ನಡೆಸಲು ರಾಷ್ಟ್ರೀಯ ಸ್ಮಾರಕವು ಪ್ರತಿಭಟನೆ ನಡೆಸುವಂತಹ ಸ್ಥಳವಲ್ಲ. ಧರಣಿ ನಡೆಸಲು ಬೇರೆ ಸ್ಥಳದ ಬಗ್ಗೆ ಮಾಹಿತಿ ನೀಡಲಾಗುವುದು” ಎಂದು ಪೊಲೀಸ್ ಮೂಲಗಳು ಮಂಗಳವಾರ ಹೇಳಿವೆ.

ಈ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿದ್ದು, ”ಇಂಡಿಯಾ ಗೇಟ್ ಬಳಿ ಧರಣಿ ನಡೆಸುವುದಕ್ಕೆ ಅನುಮತಿ ಕೋರಿ ಅವರು (ಕುಸ್ತಿಪಟುಗಳು) ಈ ವರೆಗೆ ನಮಗೆ ಮನವಿ ಸಲ್ಲಿಸಿಲ್ಲ. ಪ್ರತಿಭಟನೆ ನಡೆಸುವ ಸಂಬಂಧ ಅವರು ಡಿಸಿಪಿಗೆ ಮನವಿ ಸಲ್ಲಿಸಿದ ನಂತರ ನಿರ್ಧಾರ ತಿಳಿಸಲಾಗುವುದು” ಎಂದು ಹೇಳಿದ್ದಾರೆ.

ರಾಮಲೀಲಾ ಮೈದಾನ ಮತ್ತು ಬುರಾರಿಯಲ್ಲಿ ಪ್ರತಿಭಟನೆ ನಡೆಸುವಂತೆ ದೆಹಲಿ ಪೊಲೀಸರು ಸಲಹೆ ನೀಡುವ ಸಾಧ್ಯತೆ ಇದೆ ಎಂದು ಇವೇ ಮೂಲಗಳು ಹೇಳಿವೆ.

ಮಾನವ ಹಕ್ಕುಗಳ ಆಯೋಗಕ್ಕೆ ಟಿಎಂಸಿ ವಕ್ತಾರ ದೂರು:

”ಮಹಿಳಾ ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರು ಹಲ್ಲೆ ನಡೆಸಿದ್ದಾರೆ. ಹಾಗಾಗಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಷ್ಟ್ರೀ ಯ ಮಾನವ ಹಕ್ಕುಗಳ ಆಯೋಗಕ್ಕೆ ಟಿಎಂಸಿ ವಕ್ತಾರ ಸಾಕೇತ್ ಗೋಖಲೆ ದೂರು ನೀಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...