Homeಚಳವಳಿಇಂದು ನಮ್ಮೀ ನಾಡು…

ಇಂದು ನಮ್ಮೀ ನಾಡು…

ನಮ್ಮ ಈ ನಾಡಿನ ನಮ್ಮಣ್ಣತಮ್ಮಂದಿರಾದ ನಬೀ-ಅಲಿ-ಮುಸ್ತಾಫಾ ಅವರಮೇಲೆ, ಮೆಲ್ವಿನ್-ಆಲ್ವಿನ್-ನಾರ್ಬರ್ಟ್ ಅವರಮೇಲೆ, ನಮ್ಮಕ್ಕತಂಗಿಯರಾದ ಫರೀದಾ-ಫಾತಿಮಾ-ಆಯಿಷಾ ಅವರಮೇಲೆ, ಆನ್ನಾ- ಜಸಿಂಡಾ-ಎಲೀಜಾ಼ ಅವರಮೇಲೆ ಫ್ಯಾಶಿಸ್ಟ್ ದಾಳಿ ನಡೆಯುತ್ತಿರುವಾಗ ಈ ನಮ್ಮವರನ್ನು ತಬ್ಬಿ ನಿಲ್ಲಬೇಕೆ,  ಇಲ್ಲ ನಮ್ಮ ಈ ಮನೆಯ ಮೇಲೆ, ಮನೆಮಂದಿಯ ಮೇಲೆ ದಾಳಿ ಆಗುತ್ತಿರುವುದನ್ನು ಕಂಡೂ ಕಾಣದವರಂತೆ ಮುಖ ತಿರುಗಿಸಿ ಇದ್ದುಬಿಡಬೇಕೆ?

- Advertisement -
- Advertisement -

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ನೆಲ ಶಿವರಾಮ ಕಾರಂತ, ಕೋ. ಲ. ಕಾರಂತ,  ಬಿ. ವಿ. ಕಾರಂತ, ಗೋಪಾಲಕೃಷ್ಣ ಅಡಿಗ, ಸೇಡಿಯಾಪು ಕೃಷ್ಣಭಟ್ಟ ಅವರ ತವರು ನೆಲ; ಪಂಜೆ ಮಂಗೇಶರಾಯರ ತವರು ಆ ನೆಲ; ಗೊಲ್ಗೊಥಾ ಮತ್ತು ವೈಶಾಖಿ ಖಂಡಕಾವ್ಯಗಳನ್ನು ಬರೆದ ಗೋವಿಂದ ಪೈ ಅವರ ನೆಲ; ಲಕ್ಷ್ಮೀಶ ತೋಳ್ಪಾಡಿಯವರ  ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ ಮತ್ತು ಬೆಳಕಿಗೆ ನೆರಳಿತ್ತ ಸಂಗಾತಿ ಪುಸ್ತಕಗಳಿಂದಾಗಿ ನನ್ನಂಥವರ ಮನಮೀಟಿದ ಪುತ್ತೂರಿನ ಅಜ್ಜಂದಿರು ರಾಮಚಂದ್ರ ಭಟ್ಟ ಮತ್ತು ಇಸ್ಮಾಯಿಲ್ ಕುಂಞಪ್ಪ ಅವರ ಕರುಳ ಬೇರಿನ ಬೀಡು.

ರಾಮಚಂದ್ರ ಭಟ್ಟರು ಮತ್ತು ಇಸ್ಮಾಯಿಲ್ ಕುಂಞಪ್ಪ
Photo Courtesy: mysorepoetWordPress.com

ಶಿವಮೊಗ್ಗ ಜಿಲ್ಲೆ ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಪಿ. ಲಂಕೇಶ್, ಯು.ಆರ್. ಅನಂತಮೂರ್ತಿ ಮತ್ತು ಕೆ. ವಿ. ಸುಬ್ಬಣ್ಣ ಅವರು ಹುಟ್ಟಿ, ಬೆಳಗಿದ ನೆಲ. ನಿತ್ಯೋತ್ಸವ ಎಂಬ ಹಾಡನ್ನು ಬರೆದು ಕರ್ನಾಟಕದ ನೆಲವನ್ನು ಕೀರ್ತಿಸಿದ ನಿಸಾರ್ ಅಹಮದ್ ಅವರು ನೆಲೆಸಿ, ಒಲಿದು, ಒಲಿಸಿಕೊಂಡ ನೆಲ ಅದು, ಬೆಣ್ಣೆ ಕದ್ದ ನಮ್ಮ ಕೃಷ್ಣದಂಥ ಮುಪ್ಪಿಲ್ಲದ ಹಾಡುಗಳನ್ನು ಅವರು ಬರೆದ ನೆಲೆವೀಡು. ಪ್ರಭುದೇವ ಅಲ್ಲಮ ಹುಟ್ಟಿ, ಸಿದ್ಧನಾದದ್ದು, ಮಹದೇವಿಯಕ್ಕ ಹುಟ್ಟಿ, ಸಿದ್ಧಳಾದದ್ದು, ಅಲ್ಲಿ.

ಧಾರವಾಡ ಎಂದರೆ ನನ್ನಂಥವರಿಗೆ ಬೇಂದ್ರೆ, ಬೇಂದ್ರೆ, ಬೇಂದ್ರೆಯೇ. ಜೊತೆಗೆ, ಸಾತ್ತ್ವಿಕ ಹರಿಹರಿತ ಸವಾಲಿಗೆ ನಿಂತ ಆ ಘನಘನ ಶಂಬಾ, ಶಂಬಾ ಜೋಷಿ. ಮತ್ತು, ಅಣ್ಣ ಬಸವಣ್ಣನ ಒಕ್ಕಲು ತಾವೆಂಬವರ ವಿದ್ಯಾಕಾಶಿ.

ಕೋಲಾರ ಎಂದರೆ ಮಾಗಿದ ಮಾತು: ಮಾಸ್ತಿಯ ಅಯ್ಯ, ಡಿವಿಜಿ. ಕೋಲಾರ ಎಂದರೆ ಎದೆಮೀಟೊ ಹಾಡು:  ಕೈವಾರ ತಾತಯ್ಯ.

ಇನ್ನು ಮೇಲುಕೋಟೆ ಎಂದರೆ, ಅದೇ… ಅಹಲ್ಯೆ, ಗೋಕುಲನಿರ್ಗಮನ, ಮಲೆದೇಗುಲ, ಯದುಗಿರಿಯ ಮೌನವಿಕಾಸ, ಶರ್ವರೀ ಸುಷಮೆ ಬರೆದ ಆರ್ದ್ರತೆ, ರಸಿಕತೆಯ ಮೂರುತಿ – ಪು. ತಿ. ನ.

 

ಆದರೆ ಈಗ, ಕಡಲ ತೀರದ ಆ ಜಿಲ್ಲೆಗಳಲ್ಲಿ, ಶಿವಮೊಗ್ಗ ಸುತ್ತಿನ ಊರೂರಲ್ಲಿ, ಧಾರವಾಡದ ನುಗ್ಗಿಕೇರಿಯಲ್ಲಿ, ಕೋಲಾರದ ಮುಳಬಾಗಿಲಲ್ಲಿ, ಮೇಲುಕೋಟೆಯ ಚೆಲುವನ ಗುಡಿಯ ಮಂದಿಯಲ್ಲಿ – ಎಲ್ಲೆಲ್ಲೂ, ಎಲ್ಲೆಲ್ಲೋ – ಆಗಿರುವುದು, ಆಗುತ್ತಿರುವುದು, ಮತ್ತು ಆಗಲಿರುವುದನ್ನು ಕಂಡು ಅಲ್ಲಿ, ಯಾವ ದಿವ್ಯಲೋಕದಲ್ಲೋ, ಗೋಷ್ಠಿ ನಡೆಸುತ್ತಿರಬಹುದಾದ ಆ ನಮ್ಮ ಹಿರಿಯರಿಗೆಲ್ಲ ಹೇಗಾಗುತ್ತಿರಬೇಕು, ಕೇಳಿಕೊಳ್ಳುವುದು ಬೇಡ: ಆ ಲೋಕದಲ್ಲೂ ವಿಲಿವಿಲಿ ಒದ್ದಾಡುತ್ತಿರಬೇಕು ಅವರು.

ಆ ಅಂಥವರನ್ನು ಓದಿ, ಮೆಚ್ಚಿಕೊಂಡ ಜನರಿದ್ದೇವಲ್ಲ ನಾವು, ನೀವು… ಮಾತುಮಾತಿಗೆ ಅವರನ್ನು ನೆನೆಯುವ… ಅವರು ಆಡಿದ್ದನ್ನು, ಮಾಡಿದ್ದನ್ನು, ಬರೆದದ್ದನ್ನು ಎತ್ತಿ ಆಡುವ, ನಮ್ಮನಮ್ಮಲ್ಲೇ ಗುನುಗಿಕೊಳ್ಳುವ, ಮೆಲುಕು ಹಾಕುವ, ಭಾಷಣ ಬಿಗಿಯುವ, ಬರೆಯುವ, ಪಾಠಮಾಡುವ, ಪರೀಕ್ಷೆ ಪಾಸುಮಾಡಲು ಓದುವ… ಅವರೆಲ್ಲ ಬೆಳೆಸಿದ ಜನ ನಾವು, ನಾವಿದ್ದೇವಲ್ಲ… ಅವರ ಹೆಸರುಗಳನ್ನು ಹೇಳಿ ಬೀಗುವ ನಾವು, ಈ ನಾನು, ಈ ನೀವು… ನಾವು  ಈಗ ಏನು ಮಾಡಬೇಕು, ಯೋಚಿಸೋಣ ಕನ್ನಡಿಗರೇ, ಕರುನಾಡಿಗರೇ…

ಜನಿವಾರ ಹಾಕಿಕೊಂಡೋ ಹಾಕಿಕೊಳ್ಳದೆಯೋ ಗಾಯತ್ರಿ ಮಂತ್ರವನ್ನು ಬಲುಶ್ರದ್ಧೆಯಿಂದ ಮನನ ಮಾಡುವ, ಮಣಮಣಿಸುವ ನಾವು; ಶಿವದಾರ, ಕರಡಿಗೆ ಹಾಕಿಯೋ ಹಾಕಿಕೊಳ್ಳದೆಯೋ ಬಸವ ಬಳಗ, ಅಕ್ಕನ ಬಳಗ ಎಂದೆಲ್ಲ ಕಟ್ಟಿಕೊಂಡು ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಎಂದೆಲ್ಲ ಗಳಹುವ ನಾವು; ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ, ವಿಚಾರ ಕ್ರಾಂತಿಗೆ ಆಹ್ವಾನ, ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ ಮುಂತಾದ್ದೆಲ್ಲ ಓದಿಕೊಂಡವರು, ಪಾಠ ಮಾಡುವವರು, ಹೇಳಿಸಿಕೊಂಡವರು ಎನ್ನುತ್ತ, ಎಂದುಕೊಳ್ಳುತ್ತ ಉಬ್ಬುವ ನಾವು; ಬಾಳ್ವೆಯೇ ಬೆಳಕು ಎಂದು ಒದರುವ ನಾವು; ವಿಶ್ವಮಾತೆಯ ಗರ್ಭಕಮಲಜಾತ ಪರಾಗ ಪರಮಾಣು ಕೀರ್ತಿ ನಾನು ಎಂದು ನಾಟಕೀಯವಾಗಿ ಹೇಳುವ, ಹೇಳಿಸುವ ನಾವು — ನಮ್ಮ ಈ ನಾಡಿನ ನಮ್ಮಣ್ಣತಮ್ಮಂದಿರಾದ ನಬೀ-ಅಲಿ-ಮುಸ್ತಾಫಾ ಅವರಮೇಲೆ, ಮೆಲ್ವಿನ್-ಆಲ್ವಿನ್-ನಾರ್ಬರ್ಟ್ ಅವರಮೇಲೆ, ನಮ್ಮಕ್ಕತಂಗಿಯರಾದ ಫರೀದಾ-ಫಾತಿಮಾ-ಆಯಿಷಾ ಅವರಮೇಲೆ, ಆನ್ನಾ- ಜಸಿಂಡಾ-ಎಲೀಜಾ಼ ಅವರಮೇಲೆ ಫ್ಯಾಶಿಸ್ಟ್ ದಾಳಿ ನಡೆಯುತ್ತಿರುವಾಗ ಈ ನಮ್ಮವರನ್ನು ತಬ್ಬಿ ನಿಲ್ಲಬೇಕೆ,  ಇಲ್ಲ ನಮ್ಮ ಈ ಮನೆಯ ಮೇಲೆ, ಮನೆಮಂದಿಯ ಮೇಲೆ ದಾಳಿ ಆಗುತ್ತಿರುವುದನ್ನು ಕಂಡೂ ಕಾಣದವರಂತೆ ಮುಖ ತಿರುಗಿಸಿ ಇದ್ದುಬಿಡಬೇಕೆ? ಈ ನಮ್ಮವರ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಬೇಕಾದ ಧೈರ್ಯದ ಮಾತತ್ತಿರಲಿ, ಯೋಗ್ಯತೆಯನ್ನೂ ಕಳೆದುಕೊಳ್ಳುತ್ತಿದ್ದೇವಲ್ಲ ನಾವು…

ಅಡಿಗರ ಇಂದು ನಮ್ಮೀ ನಾಡು ಕವನ ಹೇಳುವಂತೆ, ಇಲ್ಲಿ:

ತೇರ ಹಿಡಿದೆಳೆದ ಕೈ, ಬಾಗಿ ಪೊಡಮಟ್ಟ ಮೈ
ಭಕ್ತಿ ತುಳುಕಾಡಿದ್ದ ಅಂತರಂಗ
ಈಗ ನರಕಕ್ಕೆ ಕೈಮರ, ಕರಡಿಗುಹೆ, ಘೋರ
ರಾಕ್ಷಸತೆ ಭೋರಿಡುವ ನಾಟ್ಯರಂಗ

ಅದು ಬೇಡ, ಬೇಡ. ಒಮ್ಮೆ ನಮ್ಮನಮ್ಮ ಮುಖವನ್ನು  ನಮ್ಮನಮ್ಮ ಒಳಗನ್ನಡಿಯಲ್ಲಿ ನಾವೇ ನೋಡಿಕೊಳ್ಳೋಣಲಂಕೇಶರ ದೇಶಭಕ್ತಗದ್ಯಗೀತೆ ಯನ್ನು ಉಸುರಿಕೊಳ್ಳುತ್ತ ನಮ್ಮನಮ್ಮ ಮುಸುಡಿಗೆ ನಾವೇ ಥೂ ಥೂ ಎನ್ನೋಣಚೊಕ್ಕವಾಗೋಣ. ಆಗಿ, ಮನೆಮಂದಿಯ ತಬ್ಬಿ ನಿಲ್ಲೋಣ.

ಕಡೆಯ ಮಾತು. ಕನ್ನಡಕ್ಕೆ ಎಂಟೆಂಟು ಜ್ಞಾನಪೀಠ ಪ್ರಶಸ್ತಿ ಬಂದಿದೆ, ಕರುನಾಡಿಗೆ ಸಂದ ಗೌರವ ಅದು, ಸವಿಗನ್ನಡಕ್ಕೆ ಸಂದ ಮನ್ನಣೆ ಎಂದೆಲ್ಲ ಹಿಗ್ಗುತ್ತೇವಲ್ಲ ನಾವು. ಯೋಚಿಸೋಣ, ಆ ಪ್ರಶಸ್ತಿ ಪಡೆದ ಮೊದಲ ಏಳು ಜನ ಈಗ ಇಲ್ಲಿ ಇದ್ದಿದ್ದರೆ ಒದ್ದಾಡುತ್ತಿದ್ದರು, ಆದರೆ ಖಂಡಿತಾ ಸುಮ್ಮನಿರುತ್ತಿರಲಿಲ್ಲ: ನಮ್ಮನಿಮ್ಮ ಆ ಮನೆಮಂದಿಯನ್ನು ಅಪ್ಪಿಕೊಂಡು, ಇಂದಿನ ಫ್ಯಾಶಿಸ್ಟರಿಗೆ ಖಂಡಿತಾ ಅಡ್ಡ ನಿಲ್ಲುತ್ತಿದ್ದರು ಅವರು.

ಈಗ ನಮ್ಮ ನಡುವೆ ಇರುವ ಜ್ಞಾನಪೀಠಸ್ಥರು ಒಬ್ಬರು ಮಾತ್ರ. ಆ ಹಿರಿಯರಿಂದ, ಮನೆಮಂದಿಯ ಕಾಯುವ ಸೊಲ್ಲೇ ಇಲ್ಲ, ಏಕೆ?

  • ರಘುನಂದನ

(ಲೇಖಕರು, ಕವಿ, ರಂಗನಿರ್ದೇಶಕರು, ಬೆಂಗಳೂರು)

*******


ಇದನ್ನೂ ಓದಿ: ಅಧ್ಯಾಪನದ ಧರ್ಮ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನೀವು ಹೇಳಿದ ಮಾತುಗಳು ೧೦೦ಕ್ಕೆ ೧೦೦%ಸತ್ಯ ಸರ್ ಇದರ ಬಗ್ಗೆ ನಾವೆಲ್ಲ ಯೋಚಿಸಲೇ ಬೇಕು, ತಡೆಯಬೇಕು

LEAVE A REPLY

Please enter your comment!
Please enter your name here

- Advertisment -

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....