Homeಕರ್ನಾಟಕಶ್ರದ್ಧಾಂಜಲಿ; ಬಿಡುಗಡೆಯ ಕನಸುಗಾರ ಪ್ರೊ.ಗಂಗಾಧರಮೂರ್ತಿ

ಶ್ರದ್ಧಾಂಜಲಿ; ಬಿಡುಗಡೆಯ ಕನಸುಗಾರ ಪ್ರೊ.ಗಂಗಾಧರಮೂರ್ತಿ

- Advertisement -
- Advertisement -

70ರ ದಶಕದಲ್ಲಿ ಇಡೀ ಕರ್ನಾಟಕ ರಾಜ್ಯದಲ್ಲಿ ಸಂಚಲನವನ್ನುಂಟುಮಾಡಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮತ್ತೊಬ್ಬ ಹಿರಿಯ ಒಡನಾಡಿ ಪ್ರೊ. ಗಂಗಾಧರ ಮೂರ್ತಿ ಅವರು ಸೆಪ್ಟಂಬರ್ 10ರಂದು ನಮ್ಮನ್ನಗಲಿದ್ದಾರೆ. ನಮಗೆಲ್ಲ ಈ ಸಮಯದಲ್ಲಿ ಅವರು ಇನ್ನಷ್ಟು ಕಾಲ ಇರಬೇಕಿತ್ತು ಎಂದು ಅನಿಸುವುದೊಂದು ಸಹಜ ಭಾವನೆ. ಕನ್ನಡದ ಮಹತ್ವದ ಕವಿಗಳಾದ ಮತ್ತು ಹಿರಿಯ ದಲಿತ ಚಳವಳಿಯ ನೇತಾರರಾಗಿದ್ದ ಡಾ. ಸಿದ್ದಲಿಂಗಯ್ಯ, ಪ್ರೊ. ಕೆ.ಬಿ ಸಿದ್ದಯ್ಯ ನಮ್ಮನ್ನು ಅಗಲಿದಾಗಲೂ ಅನೇಕರಲ್ಲಿ ಈ ರೀತಿಯ ಭಾವನೆ ಮೂಡಿತ್ತು.

ದಲಿತ ಸಂಘರ್ಷ ಸಮಿತಿಯು ಸಾಮಾಜಿಕವಾಗಿ ತುಳಿಯಲ್ಪಟ್ಟ ಅಥವಾ ಬಂಧಿಸಲ್ಪಟ್ಟ ಸಮಾಜದ ಬಿಡುಗಡೆಗಾಗಿ ಹಂಬಲಿಸಿ ಈ ನೆಲದಲ್ಲಿ ರೂಪುಗೊಂಡ ಒಂದು ಮಹತ್ವದ, ಐತಿಹಾಸಿಕ ಚಳವಳಿ. ಸಾಮಾನ್ಯವಾಗಿ ದಲಿತ ಚಳವಳಿಯೆಂದರೆ ತಮ್ಮ ಹಕ್ಕುಗಳಿಗಾಗಿ ದಲಿತರೇ ನಡೆಸಿದ ಹೋರಾಟ ಎಂಬ ಭಾವನೆ ನಮ್ಮ ಸಮಾಜದ ಅನೇಕರಲ್ಲಿದೆ. ಕೆಲವೊಮ್ಮೆ ಈ ಭಾವನೆ ಸಹಜವೂ ಇರಬಹುದು. ಆದರೆ ಕರ್ನಾಟಕದ ದಲಿತ ಚಳವಳಿ ಸ್ವರೂಪ ಈ ನಿಟ್ಟಿನಲ್ಲಿ ಬಹಳ ಭಿನ್ನವಾದುದು. ಕನ್ನಡದ ನೆಲದಲ್ಲಿ ಮೊದಲ ತಲೆಮಾರಿನ ದಲಿತರು ತಮ್ಮ ನೋವು ನಲಿವುಗಳನ್ನ, ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು, ದಬ್ಬಾಳಿಕೆಗಳನ್ನು ಪ್ರಶ್ನೆ ಮಾಡುವಂತಹ, ಅಭಿವ್ಯಕ್ತಿಸುವಂತಹ ಸಾಹಿತ್ಯವನ್ನು ಬರೆದಾಗ ಅದನ್ನು ಬಹಳ ಪ್ರೀತಿಯಿಂದ ಸ್ವಾಗತಿಸಿ, ಸ್ವೀಕರಿಸಿ, ಪ್ರೋತ್ಸಾಹಿಸಿದ ಅನೇಕ ಪ್ರಜ್ಞಾವಂತರು ಈ ನಾಡಿನಲ್ಲಿ ಬದುಕಿ ಹೋಗಿದ್ದಾರೆ ಮತ್ತು ಇನ್ನು ಬದುಕುತ್ತಿದ್ದಾರೆ. ಅದೇ ರೀತಿ ದಲಿತರು ಸಂಘಟಿತರಾಗಿ ಚಳವಳಿಯನ್ನು ರೂಪಿಸಿದಾಗ ದಲಿತ ಸಮುದಾಯಕ್ಕೆ ಅದರ ನೇತೃತ್ವವನ್ನು ಕೊಟ್ಟು ಚಳವಳಿಗೆ ಬೆನ್ನೆಲುಬಾಗಿ ನಿಂತ ಅನೇಕ ದಲಿತೇತರ ಸಂಗಾತಿಗಳು ಈ ನಾಡಿನಲ್ಲಿ ಇದ್ದಾರೆ ಅಂತಹ ಮಹತ್ವದ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿದ್ದವರು ಪ್ರೊ. ಗಂಗಾಧರ ಮೂರ್ತಿಯವರು. ಇಂಗ್ಲಿಷ್ ಸಾಹಿತ್ಯದ ಮೇಷ್ಟ್ರಾಗಿ ಅಧ್ಯಾಪನದ ಜೊತೆಗೆ ಅವಿಭಜಿತ ಕೋಲಾರ ಜಿಲ್ಲೆಯ ಗೌರಿಬಿದನೂರಿನ ಸುತ್ತಮುತ್ತ ದಲಿತ ಚಳವಳಿಯ ಸಂಗಾತಿಗಳ ಜೊತೆಗೂಡಿ ಅದನ್ನು ಕಟ್ಟಿ ಬೆಳೆಸಿದವರು. ಹಾಗೆಯೇ ಈ ಚಳವಳಿಯು ನಡೆಸಿದ ಮಹತ್ವದ ಭೂಮಿ ಹೋರಾಟಗಳಲ್ಲಿ ಒಂದಾದ ನಾಗಸಂದ್ರ ಭೂ ಹೋರಾಟದ ಮುಂಚೂಣಿಯಲ್ಲಿದ್ದವರು.

ಈ ಕುರಿತು ಅವರು ’ನಾಗಸಂದ್ರ ಭೂ ಆಕ್ರಮಣ ಚಳವಳಿ’ ಎಂಬ ಮಹತ್ವದ ಪುಸ್ತಕವನ್ನು ಬರೆದು ದಾಖಲಿಸಿದ್ದಾರೆ.ಇದು ಒಂದು ಭಾಗವಾದರೆ, ಪ್ರೊ ಗಂಗಾಧರಮೂರ್ತಿಯಂತವರ ವ್ಯಕ್ತಿತ್ವ ಈ ದೇಶಕ್ಕೆ, ಈ ಸಮಾಜಕ್ಕೆ ಯಾಕೆ ಬಹಳ ಅವಶ್ಯಕ ಎಂಬುದನ್ನು ಈ ಸಮಯದಲ್ಲಿ ನಾವು ಗಂಭೀರವಾಗಿ ಅವಲೋಕಿಸಬೇಕಾಗಿದೆ. ಅವರು ಬದುಕಿದ್ದಷ್ಟು ಕಾಲ ತಾವು ನಂಬಿದ ವಿಚಾರಗಳಿಗೆ ಬದ್ಧರಾಗಿ ಜನ ಚಳವಳಿಗಳ ಜೊತೆಗೆ ಬದುಕಿ ಮಾದರಿಯಾದರು. ಮೊದಲ ಬಾರಿಗೆ ನಾನು ಅವರನ್ನು ಭೇಟಿಯಾಗಿದ್ದು 2011ರ ಇಸವಿ. ಭಾರತದ ಮೊದಲ ತಲೆಮಾರಿನ ಸ್ತ್ರೀವಾದಿ ಚಿಂತಕಿ ಮತ್ತು ಬರಹಗಾರ್ತಿ ಪ್ರೊ. ಸೂಸಿಥಾರು ಅವರ ಜೊತೆಗೆ ’ದಕ್ಷಿಣ ಭಾರತದ ದಲಿತ ಬರಹಗಳು’ ಎಂಬ ಯೋಜನೆಗೆ ಕಾರ್ಯನಿರ್ವಹಿಸುವಾಗ ಅವರನ್ನು ಸಂದರ್ಶಿಸಲು ಗೌರಿಬಿದನೂರಿನ ಅವರ ಮನೆಗೆ ಭೇಟಿ ನೀಡಿದ್ದೆವು. ಆ ದಿನ ಅವರು ದಲಿತ ಸಂಘರ್ಷ ಸಮಿತಿಯ ಜೊತೆಗಿನ ತಮ್ಮ ಒಡನಾಟ ಹಾಗೂ ಜೀತ ವಿಮುಕ್ತರಿಗೆ ಸರ್ಕಾರದಿಂದ ಪ್ರತ್ಯೇಕ ಜಾಗವನ್ನು ಮಂಜೂರು ಮಾಡಿಸಿ ಶಂಭೂಕ ನಗರ ಎಂಬ ಹೊಸ ಹಳ್ಳಿಯನ್ನೇ ಕಟ್ಟಿದ ಸಂಗತಿಗಳನ್ನು ಹಂಚಿಕೊಂಡಿದ್ದು ಮಾತ್ರವಲ್ಲದೆ ಅಂದು ಶಂಭೂಕ ನಗರ ಎಂಬ ಆ ಕಾಲೋನಿಗೆ ನಮ್ಮನ್ನೆಲ್ಲ ಕರೆದುಕೊಂಡು ಹೋಗಿದ್ದರು.

ಪ್ರೊ.ಗಂಗಾಧರ ಮೂರ್ತಿಯವರು ಅಂದು ಕಾಲೋನಿಗೆ ಭೇಟಿ ನೀಡಿದ ಕೂಡಲೇ ಅಲ್ಲಿದ್ದ ಜನರು ’ಸರ್ ಬಂದಿದ್ದಾರೆ’ ಎಂದು ಒಬ್ಬರಿಗೊಬ್ಬರು ಮಾಹಿತಿಯನ್ನು ನೀಡಿಕೊಂಡು ಅವರ ಜೊತೆಗೆ ಖುಷಿಯಿಂದ ನೆರೆದದ್ದನ್ನು ನಾವು ಕಂಡೆವು. ಕಾಲೋನಿಯ ಜನರ ಕಷ್ಟ ಸುಖಗಳಿಗೆ ನಿರಂತರವಾಗಿ ಸ್ಪಂದಿಸುತ್ತಾ ಅವರ ಕೊನೆಯ ದಿನಗಳವರೆಗೂ ಶಂಭೂಕ ನಗರದ ಜನರ ಸಂಪರ್ಕವನ್ನು ಉಳಿಸಿಕೊಂಡಿದ್ದ ರೀತಿ ಅವರ ಚಳವಳಿಯ ಬದ್ಧತೆಯ ಮಾದರಿ.

1938ರಲ್ಲಿ ಗೌರಿಬಿದನೂರಿನ ವಿದುರಾಶ್ವತ್ಥದಲ್ಲಿ ನಡೆದ ಧ್ವಜ ಸತ್ಯಾಗ್ರಹ ಹತ್ಯಾಕಾಂಡದ (ದಕ್ಷಿಣದ ಜಲಿಯನ ವಾಲಾಬಾಗ್ ಎಂದೇ ಪ್ರಖ್ಯಾತವಾಗಿದೆ) ನೆನಪಿಗಾಗಿ ಸ್ಮಾರಕ ಮತ್ತು ಗ್ರಂಥಾಲಯ ರೂಪಿಸಿ ಅದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು ಪ್ರೊ.ಗಂಗಾಧರ ಮೂರ್ತಿಯವರು. ಜನಪರ ಚಳವಳಿಗಳಲ್ಲಿ ತೊಡಗಿಸಿಕೊಂಡೇ ಜತೆಜತೆಗೆ ಅತ್ಯುತ್ತಮವಾದ ಸಾಹಿತ್ಯ ಕೃತಿಗಳ ಅನುವಾದ ಮತ್ತು ರಚನೆಯಲ್ಲಿ ತೊಡಗಿ ಅಕ್ಷರದ ಮೂಲಕವೂ ಜಾಗೃತಿಯನ್ನು ಬಿತ್ತಿದರು. ಇಂದು ಜಾಗತಿಕ ಹಳ್ಳಿ ಎಂಬ ಹೆಬ್ಬಾವು ಚಳವಳಿಗಳನ್ನು ಸ್ವಲ್ಪಸ್ವಲ್ಪವೇ ನುಂಗಿಕೊಳ್ಳುತ್ತಿರುವ, ಬಂಡವಾಳಶಾಹಿಗಳು ಕೋಮುವಾದಿಗಳೊಂದಿಗೆ ಕೈಜೋಡಿಸಿರುವ ಈ ದುರಿತಕಾಲದಲ್ಲಿ ಪ್ರೊ. ಗಂಗಾಧರ ಮೂರ್ತಿಯವರು ನಮ್ಮೊಟ್ಟಿಗೆ ಇನ್ನಷ್ಟು ಕಾಲ ಇರಬೇಕಿತ್ತು ಎಂಬ ಭಾವನೆ ಮೂಡುವುದು ಈಗ ಸಹಜ. ಆದರೆ ಅವರು ಸದ್ಯ ಸ್ವಲ್ಪ ವಿಶ್ರಾಂತಿಯಲ್ಲಿದ್ದಾರೆಂದು ಭಾವಿಸಿ ನಾವೆಲ್ಲರೂ ಅವರ ಕೆಲಸಗಳನ್ನು ಮುಂದುವರಿಸೋಣ ಎಂಬುದಷ್ಟೇ ಈಗ ನಮಗೆ ನಾವೇ ಮಾಡಿಕೊಳ್ಳುವ ಸಾಂತ್ವನ.


ಇದನ್ನೂ ಓದಿ: ಚಕ್ರತೀರ್ಥನ ರೋಗ ಜೋಷಿಗೂ ಬಡಿಯಿತಂತಲ್ಲಾ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....