Homeಮುಖಪುಟಗ್ರಹಾಂ ಸ್ಟೇನ್ಸ್ ಮತ್ತು ಇಬ್ಬರು ಮಕ್ಕಳ 'ಮಿಡ್‌ನೈಟ್‌' ಮರ್ಡರ್‌ : ಬಲಪಂಥೀಯ ಕ್ರೌರ್ಯಕ್ಕೆ 25...

ಗ್ರಹಾಂ ಸ್ಟೇನ್ಸ್ ಮತ್ತು ಇಬ್ಬರು ಮಕ್ಕಳ ‘ಮಿಡ್‌ನೈಟ್‌’ ಮರ್ಡರ್‌ : ಬಲಪಂಥೀಯ ಕ್ರೌರ್ಯಕ್ಕೆ 25 ವರ್ಷ!

- Advertisement -
- Advertisement -

ಒಡಿಶಾದ ಕಿಯೋಂಜಾರ್ ಜಿಲ್ಲೆಯ ಮನೋಹರಪುರ ಹಳ್ಳಿಯ ನಿವಾಸಿಗಳು ಮಾನವೀಯತೆಯನ್ನು ಅಣಕಿಸಿರುವ ಆಸ್ಟ್ರೇಲಿಯಾದ ಮಿಷನರಿ ‘ಗ್ರಹಾಂ ಸ್ಟೇನ್ಸ್ ಮತ್ತು ಅವರ ಇಬ್ಬರು ಅಪ್ರಾಪ್ತ ಪುತ್ರರ’ ಜೀವಂತ ದಹನದ ನೆನಪಿನಲ್ಲಿ 25ನೇ ಪುಣ್ಯತಿಥಿಯನ್ನು ಆಚರಿಸಿದ್ದಾರೆ.

ಜನವರಿ 22, 1999ರ ರಾತ್ರಿ ಮನೋಹರಪುರದಲ್ಲಿ ಜಂಗಲ್ ಕ್ಯಾಂಪ್‌ನಲ್ಲಿ ಭಾಗವಹಿಸಿದ್ದ ಆಸ್ಟ್ರೇಲಿಯಾದ ಮಿಷನರಿ ಗ್ರಹಾಂ ಸ್ಟೇನ್ಸ್ ಮತ್ತು ಅವರ ಇಬ್ಬರು ಮಕ್ಕಳನ್ನು ಸುಟ್ಟು ದಹನ ಮಾಡಲಾಗಿತ್ತು. ಬಿಜೆಪಿಯ ಸಂಬಂಧ ಹೊಂದಿರುವ ಬಲಪಂಥೀಯ ಬಜರಂಗದಳದ ಕಾರ್ಯಕರ್ತರ ಗುಂಪು ಈ ಕೃತ್ಯವನ್ನು ಎಸಗಿತ್ತು.

ಜಂಗಲ್ ಶಿಬಿರವು ಈ ಪ್ರದೇಶದ ಕ್ರಿಶ್ಚಿಯನ್ನರಿಗೆ ಸಾಮಾಜಿಕ ವೇದಿಕೆಯಾಗಿ ಕಾರ್ಯನಿರ್ವಹಿಸಿತ್ತು. ಭೀಕರ ಘಟನೆಯ ಸಮಯದಲ್ಲಿ ಅವರು ವ್ಯಾನ್‌ನಲ್ಲಿ ಮಲಗಿದ್ದರು. ಬಲಪಂಥೀಯ ಗುಂಪುಗಳು ಸ್ಟೇನ್ಸ್ ಬಲವಂತದ ಮತಾಂತರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿತ್ತು.

ಘಟನೆ ನಡೆದು 25 ವರ್ಷಗಳು ಕಳೆದರೂ ಈ ಘಟನೆಯು ನಮ್ಮ ಸ್ಮರಣೆಯಿಂದ ಎಂದಿಗೂ ಅಳಿಸಿಹೋಗುವುದಿಲ್ಲ. ಆದರೆ ಜನವರಿ 22 ನಮಗೆ ಚಿಂತನಶೀಲ ದಿನವಾಗಿದೆ. ಸ್ಟೇನ್ಸ್ ತನ್ನ ಜೀವಿತಾವಧಿಯಲ್ಲಿ ಅಭ್ಯಾಸ ಮಾಡಿದ ಮಾನವೀಯತೆಯ ತತ್ವಶಾಸ್ತ್ರವನ್ನು ಮುಂದುವರಿಸಲು ನಾವು ನಿರ್ಧರಿಸುತ್ತೇವೆ ಎಂದು 40 ವರ್ಷದ ಜೊಹಾನ್ ಮುರ್ಮು ಹೇಳಿದ್ದಾರೆ.

ಒಡಿಶಾದ ರಾಜಧಾನಿ ಭುವನೇಶ್ವರದಿಂದ 200 ಕಿಮೀ ದೂರದಲ್ಲಿರುವ ಮನೋಹರಪುರದಲ್ಲಿ 260 ಕುಟುಂಬಗಳಿವೆ. ಅದರಲ್ಲಿ 45 ಕುಟುಂಬಗಳು ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿದ್ದಾರೆ. ಜನವರಿ 23ರ ಮಧ್ಯರಾತ್ರಿ ಈ ಕೊಲೆ ನಡೆದಿತ್ತು. ಅದು ರಾತ್ರಿಯ ಸಮಯವಾದ್ದರಿಂದ ಮನೋಹರಪುರವು ಪ್ರತಿ ವರ್ಷ ಜನವರಿ 22ರಂದು ಮರಣ ವಾರ್ಷಿಕೋತ್ಸವವನ್ನು ಆಚರಿಸುತ್ತದೆ ಆದರೆ ಜನವರಿ 23ರಂದು ಮಯೂರ್ಭಂಜ್ ಜಿಲ್ಲೆಯ ಜಿಲ್ಲಾ ಕೇಂದ್ರ ಪಟ್ಟಣವಾದ ಬರಿಪಾಡಾದಲ್ಲಿ ಸ್ಮರಣಾರ್ಥ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಅಲ್ಲಿ ಈ ಮಿಷನರಿಗಳು ಕುಷ್ಠ ರೋಗಿಗಳಿಗೆ ಸೇವೆ ಸಲ್ಲಿಸುತ್ತಿದ್ದರು.

ಬಿಜೆಪಿಯಲ್ಲಿ ಸಕ್ರಿಯನಾಗಿದ್ದ ದಾರಾ ಸಿಂಗ್ ಮತ್ತು ತಂಡ

ಗ್ರಹಾಂ ಸ್ಟೇನ್ಸ್ ಮತ್ತು ಅವರ ಇಬ್ಬರು ಮಕ್ಕಳನ್ನು ಸುಟ್ಟು ದಹನ ಮಾಡಿದ್ದ ತಂಡದಲ್ಲಿದ್ದ ದಾರಾ ಸಿಂಗ್ ಬಿಜೆಪಿಯ ಸದಸ್ಯನಾಗಿದ್ದ. ಆತ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತನಾಗಿದ್ದ, ಗೋ ಸುರಕ್ಷಾ ಸಮಿತಿಯ ಸಕ್ರಿಯ ಸದಸ್ಯನಾಗಿದ್ದ. ಈತ 1998ರ ಚುನಾವಣೆಯ ಸಮಯದಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡಿದ್ದ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ರ್ಯಾಲಿಗಳಲ್ಲಿ ತೊಡಗಿಸಿಕೊಂಡಿದ್ದ. ಇದಲ್ಲದೆ 1991ರ ಚುನಾವಣೆಯ ಸಮಯದಲ್ಲಿ ಪಾಟ್ನಾದಲ್ಲಿ ಬಿಜೆಪಿಗಾಗಿ ಕೆಲಸ ಮಾಡಿದ್ದ. ಹಿಂದುತ್ವದ ಬಲವಾದ ಪ್ರತಿಪಾದಕನಾಗಿದ್ದ.

ದನದ ವ್ಯಾಪಾರಿಗಳನ್ನು ಟಾರ್ಗೆಟ್‌ ಮಾಡಿ ದುಷ್ಕೃತ್ಯ ನಡೆಸುತ್ತಿದ್ದ ಗಂಗಾನದಿ ಬಯಲು ಪ್ರದೇಶದ ಬಜರಂಗದಳದ ಕಾರ್ಯಕರ್ತ ದಾರಾ ಸಿಂಗ್, ಕುಷ್ಠರೋಗದ ಸಂತ್ರಸ್ತರ ಸೇವೆ ಮಾಡುತ್ತಿದ್ದ ಆಸ್ಟ್ರೇಲಿಯಾದ ಕ್ರಿಶ್ಚಿಯನ್ ಮಿಷನರಿ ಗ್ರಹಾಂ ಸ್ಟುವರ್ಟ್ ಸ್ಟೈನ್ಸ್(58) ಮತ್ತು ಅವನ ಇಬ್ಬರು ಮಕ್ಕಳಾದ ಫಿಲಿಪ್ (10) ಮತ್ತು ತಿಮೋತಿ(6) ಅವರನ್ನು ಜೀವಂತ ಸುಟ್ಟು ಹಾಕಿದ್ದ. ಈ ಘಟನೆ 1999ರ ಜನವರಿ 21-22 ರಾತ್ರಿ ವೇಳೆ ನಡೆದಿದೆ. ಘಟನೆ ನಡೆದು ಇಂದಿಗೆ 25 ವರ್ಷವಾಗಿದೆ. ಪ್ರಕರಣದಲ್ಲಿ ದಾರಾ ಸಿಂಗ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ನ್ಯಾಯಾಲಯ ಈ ಪ್ರಕರಣದಲ್ಲಿ ಕೊಲೆಗಾರನ ಸಿದ್ದಾಂತವನ್ನು ಅರ್ಥಮಾಡಿಕೊಂಡಿಲ್ಲ ಎಂದು ಕ್ರಿಶ್ಚಿಯನ್ ಸಮುದಾಯವು ಹೇಳಿಕೊಂಡಿತ್ತು.

ಆಸ್ಟ್ರೇಲಿಯಾದಿಂದ ಒರಿಸ್ಸಾ(ಒಡಿಶಾ)ಗೆ ಬಂದು ನೆಲೆಸಿದ್ದ ಗ್ರಹನ್ ಸ್ಟೇನ್ಸ್ ಸ್ಥಳೀಯ ಭಾಷೆ ಕಲಿತು ಕುಷ್ಠರೋಗಿಗಳ ಸೇವೆ ಮಾಡುತ್ತಿದ್ದರು. ರಾಜ್ಯದ ಮಯೂರ್‌ ಬಂಜ್ ಎಂಬ ಊರಿನಲ್ಲಿ ಕುಷ್ಠರೋಗಿಗಳ ಚಿಕಿತ್ಸೆಗಾಗಿ ಒಂದು ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಇವರು ಎರಡನೇ ಮದರ್ ತೆರೇಸಾ ಎಂದು ಕೂಡ ಕರೆಯಲ್ಪಟ್ಟಿದ್ದರು. ಗ್ರಹನ್ ಸ್ಟೇನ್ಸ್ ಹತ್ಯೆಯನ್ನು ಘಟನೆಯನ್ನು ಅಂದಿನ ಭಾರತದ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ರಾಷ್ಟ್ರಕ್ಕೆ ಕಪ್ಪು ಚುಕ್ಕೆ ಎಂದು ಕರೆದಿದ್ದರು. ಇದಲ್ಲದೆ ಬಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಕೂಡ ಇದೇ ರೀತಿಯ ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ.

ಒರಿಸ್ಸಾ ರಾಜ್ಯದ ಹೊಸ ಹೆಸರಾದ ಒಡಿಶಾದಲ್ಲಿ ಗ್ರಹನ್ ಸ್ಟೇನ್ಸ್ ಪತ್ನಿ ಗ್ಲಾಡಿಸ್ ಸ್ಟೇನ್ಸ್ ಇನ್ನೂ ಇದ್ದಾರೆ. ಆಕೆಯ ಬದುಕುಳಿದ ಮಗು, ಮಗಳು, ಈಗ ಆಸ್ಟ್ರೇಲಿಯಾದಲ್ಲಿ ವೈದ್ಯರಾಗಿದ್ದಾರೆ. ದುಷ್ಕರ್ಮಿಗಳು ಜೀಪಿಗೆ ಬೆಂಕಿ ಹಚ್ಚಿದಾಗ ಗ್ರಹನ್ ಮತ್ತು ಅವರ ಮಕ್ಕಳು ಎಚ್ಚರಗೊಂಡು ಹೊರಬರಲು ಪ್ರಯತ್ನಿಸಿದರೂ ದಾರಾ ಸಿಂಗ್‌ನ ತಂಡ ಅವರನ್ನು ಲಾಠಿ ಬಳಸಿ ಬೆಂಕಿಗೆ ತಳ್ಳಿಹಾಕಿ ಜೀವಂತವಾಗಿ ದಹನ ಮಾಡಿತ್ತು. ತನ್ನ ಕುಟುಂಬದ ಮೇಲೆ ಅನ್ಯಾಯ ನಡೆದರೂ ಗ್ರಹನ್ ಅವರ ಪತ್ನಿ ಗ್ಲ್ಯಾಡಿಸ್ ಅವರು, ನನ್ನ ಗಂಡ ಮತ್ತು ನನ್ನ ಇಬ್ಬರು ಮಕ್ಕಳನ್ನು ಕೊಂದವರನ್ನು ನಾನು ಕ್ಷಮಿಸುತ್ತೇನೆ ಎಂದು ಹೇಳಿದ್ದರು. ತನ್ನ ಪ್ರೀತಿಯ‌ ಗಂಡ ಮತ್ತು ಇಬ್ಬರು ಕಂದಮ್ಮಗಳನ್ನು ಕೊಂದ ಆರೋಪಿಗಳನ್ನು ಕ್ಷಮಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ ಗ್ಲ್ಯಾಡ್ಲಿಸ್ ಧರ್ಮ ಅಂದರೆ ಏನು ಎಂದು ತೋರಿಸಿಕೊಟ್ಟರು. ಆದರೆ ಅಪರಾಧಿಗಳಿಗೆ ಕ್ಷಮೆ ನೀಡುವ ಕಾನೂನು ಭಾರತದಲ್ಲಿ ಇಲ್ಲ.

ಸಂಘ ಪರಿವಾರ ಗುಂಪುಗಳು ಭಾರತದಲ್ಲಿ ಕ್ರಿಶ್ಚಿಯನ್ ಸಮುದಾಯದ ಮೇಲೆ ಹಿಂಸಾಚಾರ ನಡೆಸುತ್ತಿದೆ ಎಂದು ಈ ವೇಳೆ ಪಾಶ್ಚಿಮಾತ್ಯ ಜಗತ್ತು ಕಳವಳ ವ್ಯಕ್ತಪಡಿಸಿತ್ತು. 2007 ಮತ್ತು 2008ರಲ್ಲಿ ಒಡಿಶಾದಲ್ಲಿ ಸಂಘ ಪರಿವಾರವು ಮತ್ತೊಮ್ಮೆ ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡಿತ್ತು. ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಯಿತು, 6,000 ಕ್ಕೂ ಹೆಚ್ಚು ಮನೆಗಳು ಮತ್ತು 300 ಚರ್ಚ್‌ಗಳನ್ನು ಸುಟ್ಟುಹಾಕಲಾಯಿತು ಮತ್ತು 60,000 ಜನರನ್ನು ಸ್ಥಳಾಂತರಿಸಲಾಗಿತ್ತು.

ಇದನ್ನು ಓದಿ: ಭದ್ರತೆ ಹಿಂಪಡೆದ ಬಳಿಕ ಭಯದಿಂದ ಬದುಕುತ್ತಿರುವ ಗುಜರಾತ್‌ ಗಲಭೆ ಸಾಕ್ಷಿಗಳು

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...