Homeಮುಖಪುಟಇಂದು ನೋಯ್ಡಾದಲ್ಲಿ ನೆಲಕ್ಕುರುಳಲಿವೆ 103 ಮೀ. ಎತ್ತರದ ಕಟ್ಟಡಗಳು: ಏನೆಲ್ಲ ಸಿದ್ಧತೆ ನಡೆದಿದೆ?

ಇಂದು ನೋಯ್ಡಾದಲ್ಲಿ ನೆಲಕ್ಕುರುಳಲಿವೆ 103 ಮೀ. ಎತ್ತರದ ಕಟ್ಟಡಗಳು: ಏನೆಲ್ಲ ಸಿದ್ಧತೆ ನಡೆದಿದೆ?

- Advertisement -
- Advertisement -

ಇಂದು ಮಧ್ಯಾಹ್ನ 2.30ಕ್ಕೆ ನೋಯ್ಡಾದಲ್ಲಿ ಬೃಹತ್‌ ಕಟ್ಟಡಗಳನ್ನು ನೆಲಸಮ ಮಾಡಲಾಗುತ್ತಿದೆ. ಸೆಕ್ಟರ್ 93Aನಲ್ಲಿರುವ ಎರಡು ಬೃಹತ್ ಕಟ್ಟಡಗಳು ನಿಯಮಗಳಿಗೆ ವಿರುದ್ಧವಾಗಿ ನಿರ್ಮಿಸಲಾಗಿದೆ ಎಂಬ ಕಾರಣಕ್ಕೆ ನೆಲಸಮ ಮಾಡಲಾಗುತ್ತಿದೆ.

ಈ ಕಟ್ಟಡದ ವಿಶೇಷವೇನು? ನೆಲಸಮಕ್ಕೆ ಏನೆಲ್ಲ ಸಿದ್ಧತೆ ನಡೆದಿದೆ

40 ಮಹಡಿ: ಪ್ರತಿ ಕಟ್ಟಡದಲ್ಲಿ ನಲವತ್ತು ಮಹಡಿಗಳನ್ನು ನಿರ್ಮಿಸಲು ಯೋಜಿಸಲಾಗಿತ್ತು. ನ್ಯಾಯಾಲಯವು ಕಟ್ಟಡ ನಿರ್ಮಾಣವನ್ನು ಸ್ಥಗಿತಗೊಳಿಸಿದ್ದರಿಂದ ಕೆಲವು ಮಹಡಿ ನಿರ್ಮಿಸಲು ಸಾಧ್ಯವಾಗಿಲ್ಲ. ಈ ಟವರ್‌ಗಳಲ್ಲಿ ಈಗ 32 ಮಹಡಿಗಳಿವೆ. 900+ ಫ್ಲಾಟ್‌ಗಳನ್ನು ನಿರ್ಮಿಸಲು ಯೋಜಿಸಲಾಗಿತ್ತು. ಅದರಲ್ಲಿ ಮೂರನೇ ಎರಡರಷ್ಟು ಬುಕ್ ಆಗಿವೆ ಅಥವಾ ಮಾರಾಟ ಮಾಡಲಾಗಿದೆ. ಬಡ್ಡಿ ಸಮೇತ ಮರುಪಾವತಿ ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

103 ಮೀಟರ್‌ಗಳು: ಈ ಕಟ್ಟಡಗಳು 103 ಮೀಟರ್‌ ಎತ್ತರವಿವೆ. ಮೂರು ವರ್ಷಗಳ ಹಿಂದೆ ಜೋಹಾನ್ಸ್‌ಬರ್ಗ್‌ನಲ್ಲಿ ಬ್ಯಾಂಕ್ ಕಟ್ಟಡವನ್ನು ಕೆಡವಲಾಗಿತ್ತು. ಅದು 108 ಮೀಟರ್ ಇತ್ತು. ಕೇರಳದಲ್ಲಿ ಕೆಳಗುರುಳಿಸಲಾದ 68 ಮೀಟರ್‌ ಎತ್ತರದ ಕಟ್ಟಡವು ಭಾರತದ ಮಟ್ಟಿಗೆ ನೆಲಸಮವಾದ ಎತ್ತರದ ಕಟ್ಟಡವಾಗಿತ್ತು. 2020ರಲ್ಲಿ ಕೇರಳದಲ್ಲಿ ಕೆಡವಲಾಗಿತ್ತು. ಅದೇ ವರ್ಷ ಅಬುಧಾಬಿಯಲ್ಲಿ 168 ಮೀಟರ್ ಎತ್ತರದ ಕಟ್ಟಡವನ್ನು ನೆಲಸಮಗೊಳಿಸಿದ್ದು ವಿಶ್ವದಾಖಲೆಗೆ ಸೇರಿತ್ತು.

8 ಮೀಟರ್: ಈಗ ನೆಲಸಮಗೊಳಿಸಲಾಗುವ ಎರಡು ಕಟ್ಟಡಗಳ ಪಕ್ಕದಲ್ಲಿ ಕೆಲವು ಅಪಾರ್ಟ್‌ಮೆಂಟ್‌ಗಳು ಸುಮಾರು ಎಂಟು ಮೀಟರ್‌ ಅಂತರದಲ್ಲಿವೆ. 9-12 ಮೀಟರ್‌ಗಳ ಒಳಗೆ ಹಲವಾರು ಅಪಾರ್ಟ್‌ಮೆಂಟ್‌ಗಳಿವೆ. ಧೂಳು ನುಗ್ಗುವುದನ್ನು ಕಡಿಮೆ ಮಾಡಲು ಅಕ್ಕಪಕ್ಕದ ಕಟ್ಟಡಗಳನ್ನು ವಿಶೇಷ ಬಟ್ಟೆಯಿಂದ ಮುಚ್ಚಲಾಗುತ್ತದೆ.

7,000 ಸ್ಟೋಟಕಗಳು: ಪಿಲ್ಲರ್‌ಗಳ ಸುಮಾರು 7,000 ರಂಧ್ರಗಳಲ್ಲಿ ಸ್ಫೋಟಕಗಳನ್ನು ಅಳವಡಿಸಲಾಗಿದೆ. ಈ ರಂಧ್ರಗಳು ತಲಾ ಎರಡು ಮೀಟರ್ ಅಂತರದಲ್ಲಿವೆ. ಸ್ಪೋಟಿಸಿದಾಗ ಗೋಪುರಗಳು ನೇರವಾಗಿ ಕೆಳಗೆ ಬೇಳುವಂತೆ ಯೋಜನೆ ರೂಪಿಸಲಾಗಿದೆ. ಇದನ್ನು ‘ಜಲಪಾತ ತಂತ್ರ’ ಎಂದು ಕರೆಯಲಾಗಿದೆ.

9 ಸೆಕೆಂಡುಗಳು: 9 ಸೆಕೆಂಡ್‌ಗಳಲ್ಲಿ ಕಟ್ಟಡ ನೆಲಕ್ಕುರಲಿದೆ ಎಂದು ಪ್ರಾಜೆಕ್ಟ್ ಎಂಜಿನಿಯರ್ ಹೇಳುತ್ತಾರೆ. ಎಂಜಿನಿಯರ್‌‌, ಬ್ಲಾಸ್ಟರ್‌ನ ಪಕ್ಕದಲ್ಲಿ ಇರುತ್ತಾರೆ. ನೋಯ್ಡಾ ಆಡಳಿತ ವರ್ಗ, ಜೊತೆಗೆ ಆಫ್ರಿಕಾದ ಮೂವರು ತಜ್ಞರು ಮತ್ತು ಇತರ ಕೆಲವು ಸರ್ಕಾರಿ ಅಧಿಕಾರಿಗಳು (ಒಟ್ಟಾರೆಯಾಗಿ 10 ಜನರಿಗಿಂತ ಹೆಚ್ಚಿಲ್ಲ) ಕನಿಷ್ಠ 100 ಮೀಟರ್ ದೂರದಲ್ಲಿ ನಿಲ್ಲುತ್ತಾರೆ. ಅರ್ಧಗಂಟೆ ಕಾಲ ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇ ಸಂಚಾರವನ್ನು ಈ ಭಾಗದಲ್ಲಿ ಸ್ಥಗಿತಗೊಳಿಸಲಾಗುತ್ತಿದೆ.

12 ನಿಮಿಷಗಳು:  ಕಟ್ಟಡ ಉರುಳಿಸಿದ ಬಳಿಕ ಧೂಳು ಕಡಿಮೆಯಾಗಲು ಸುಮಾರು 12 ನಿಮಿಷಗಳ ಕಾಲ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಗಾಳಿಯ ಏರಿಳಿತದ ಮೇಲೆ ಧೂಳಿನ ಉದುಗುವಿಕೆ ನಿರ್ಧಾರವಾಗುವ ಸಾಧ್ಯತೆಯೂ ಇದೆ.

ಪ್ರತಿ ಸೆಕೆಂಡಿಗೆ 30 ಮಿಮೀ: ಸ್ಫೋಟದ ನಂತರ ಕಂಪನಗಳು 30 ಮೀಟರ್‌ಗಳವರೆಗೆ ಸಂಭವಿಸಬಹುದು. ಆದರೆ ಕೆಲವೇ ಸೆಕೆಂಡ್‌ ಇರಬಹುದು. ಸರಳವಾಗಿ ಹೇಳುವುದಾದರೆ, ಇದು ರಿಕ್ಟರ್ ಮಾಪಕದಲ್ಲಿ 0.4ರ ಭೂಕಂಪಕ್ಕೆ ಸಮಾನವಾಗಿದೆ.

7,000: ಸುಮಾರು 150 ಸಾಕುಪ್ರಾಣಿಗಳು ಮತ್ತು 2,500 ವಾಹನಗಳೊಂದಿಗೆ ಪಕ್ಕದ ಪ್ರದೇಶಗಳ 7000 ನಿವಾಸಿಗಳು ಡೆಮಾಲಿಷನ್ ದಿನದಂದು ಬೆಳಿಗ್ಗೆ 7 ಗಂಟೆಗೆ ಹೊರಹೋಗಬೇಕು ಎಂದು ಸೂಚನೆ ನೀಡಲಾಗಿದೆ. ಗ್ಯಾಸ್‌ ಮತ್ತು ವಿದ್ಯುತ್ ಪೂರೈಕೆಯನ್ನು ಸಂಜೆ 4 ಗಂಟೆಯವರೆಗೆ ಸ್ಥಗಿತಗೊಳಿಸಲಾಗಿದೆ. ಇಲ್ಲಿನ ನಿವಾಸಿಗಳಿಗೆ 5.30ರ ಬಳಿಕ ಹಿಂತಿರುಗಲು ಅನುಮತಿ ನೀಡಲಾಗಿದೆ.

ಇದನ್ನೂ ಓದಿರಿ: ಪ್ಲೇಸ್ಟೋರ್‌ನಿಂದ 2 ಸಾವಿರ ಸಾಲ ನೀಡುವ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದ ಗೂಗಲ್‌!

9 ವರ್ಷಗಳು: ಸೂಪರ್‌ಟೆಕ್ ಎಮರಾಲ್ಡ್ ಕೋರ್ಟ್ ಸೊಸೈಟಿಯ ನಿವಾಸಿಗಳು, ಈ ಕಟ್ಟಡಗಳ ನಿರ್ಮಾಣದ ವಿರುದ್ಧ 2012ರಲ್ಲಿ ನ್ಯಾಯಾಲಯಕ್ಕೆ ಮೊರೆಹೋದರು. ಆಗಸ್ಟ್ 2021ರಲ್ಲಿ ಅಂತಿಮ ತೀರ್ಪು ಬಂದಿತು. ಅಲಹಾಬಾದ್ ಹೈಕೋರ್ಟ್ 2014ರಲ್ಲಿ ಕಟ್ಟಡ ಕೆಡವಲು ಆದೇಶ ನೀಡಿತ್ತು. ಪ್ರಕರಣವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಕಳೆದ ಆಗಸ್ಟ್‌ನಲ್ಲಿ ಕಟ್ಟಡಗಳನ್ನು ಕೆಡವಲು ನ್ಯಾಯಾಲಯ ಮೂರು ತಿಂಗಳ ಕಾಲಾವಕಾಶ ನೀಡಿತ್ತು. ಆದರೆ ತಾಂತ್ರಿಕ ತೊಂದರೆಗಳಿಂದಾಗಿ ಒಂದು ವರ್ಷ ತೆಗೆದುಕೊಂಡಿತು.

100 ಕೋಟಿ ರೂ.: ಇಡೀ ನೆಲಸಮಕ್ಕೆ ನೂರು ಕೋಟಿ ರೂ. ವಿಮೆ ಮಾಡಲಾಗಿದೆ. ಪಕ್ಕದ ಕಟ್ಟಡಗಳಿಗೆ ಹಾನಿಯಾದರೆ ವೆಚ್ಚವನ್ನು ಭರಿಸಬೇಕು, ಒಂದು ವೇಳೆ ವಸ್ತುಗಳು ಪಕ್ಕಕ್ಕೆ ಸಿಡಿದರೆ ನಷ್ಟವನ್ನು ತುಂಬಿಕೊಡಬೇಕು. ನೆಲಸಮ ಯೋಜನೆಗೆ ₹ 20 ಕೋಟಿಗಿಂತ ಹೆಚ್ಚು ವೆಚ್ಚವಾಗಬಹುದು. ಆದರೆ ಕಟ್ಟಡವನ್ನು ಕೆಡವುತ್ತಿರುವುದರಿಂದ ಸುಮಾರು 50 ರೂ. ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...