Homeಮುಖಪುಟಇಂದು ನೋಯ್ಡಾದಲ್ಲಿ ನೆಲಕ್ಕುರುಳಲಿವೆ 103 ಮೀ. ಎತ್ತರದ ಕಟ್ಟಡಗಳು: ಏನೆಲ್ಲ ಸಿದ್ಧತೆ ನಡೆದಿದೆ?

ಇಂದು ನೋಯ್ಡಾದಲ್ಲಿ ನೆಲಕ್ಕುರುಳಲಿವೆ 103 ಮೀ. ಎತ್ತರದ ಕಟ್ಟಡಗಳು: ಏನೆಲ್ಲ ಸಿದ್ಧತೆ ನಡೆದಿದೆ?

- Advertisement -
- Advertisement -

ಇಂದು ಮಧ್ಯಾಹ್ನ 2.30ಕ್ಕೆ ನೋಯ್ಡಾದಲ್ಲಿ ಬೃಹತ್‌ ಕಟ್ಟಡಗಳನ್ನು ನೆಲಸಮ ಮಾಡಲಾಗುತ್ತಿದೆ. ಸೆಕ್ಟರ್ 93Aನಲ್ಲಿರುವ ಎರಡು ಬೃಹತ್ ಕಟ್ಟಡಗಳು ನಿಯಮಗಳಿಗೆ ವಿರುದ್ಧವಾಗಿ ನಿರ್ಮಿಸಲಾಗಿದೆ ಎಂಬ ಕಾರಣಕ್ಕೆ ನೆಲಸಮ ಮಾಡಲಾಗುತ್ತಿದೆ.

ಈ ಕಟ್ಟಡದ ವಿಶೇಷವೇನು? ನೆಲಸಮಕ್ಕೆ ಏನೆಲ್ಲ ಸಿದ್ಧತೆ ನಡೆದಿದೆ

40 ಮಹಡಿ: ಪ್ರತಿ ಕಟ್ಟಡದಲ್ಲಿ ನಲವತ್ತು ಮಹಡಿಗಳನ್ನು ನಿರ್ಮಿಸಲು ಯೋಜಿಸಲಾಗಿತ್ತು. ನ್ಯಾಯಾಲಯವು ಕಟ್ಟಡ ನಿರ್ಮಾಣವನ್ನು ಸ್ಥಗಿತಗೊಳಿಸಿದ್ದರಿಂದ ಕೆಲವು ಮಹಡಿ ನಿರ್ಮಿಸಲು ಸಾಧ್ಯವಾಗಿಲ್ಲ. ಈ ಟವರ್‌ಗಳಲ್ಲಿ ಈಗ 32 ಮಹಡಿಗಳಿವೆ. 900+ ಫ್ಲಾಟ್‌ಗಳನ್ನು ನಿರ್ಮಿಸಲು ಯೋಜಿಸಲಾಗಿತ್ತು. ಅದರಲ್ಲಿ ಮೂರನೇ ಎರಡರಷ್ಟು ಬುಕ್ ಆಗಿವೆ ಅಥವಾ ಮಾರಾಟ ಮಾಡಲಾಗಿದೆ. ಬಡ್ಡಿ ಸಮೇತ ಮರುಪಾವತಿ ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

103 ಮೀಟರ್‌ಗಳು: ಈ ಕಟ್ಟಡಗಳು 103 ಮೀಟರ್‌ ಎತ್ತರವಿವೆ. ಮೂರು ವರ್ಷಗಳ ಹಿಂದೆ ಜೋಹಾನ್ಸ್‌ಬರ್ಗ್‌ನಲ್ಲಿ ಬ್ಯಾಂಕ್ ಕಟ್ಟಡವನ್ನು ಕೆಡವಲಾಗಿತ್ತು. ಅದು 108 ಮೀಟರ್ ಇತ್ತು. ಕೇರಳದಲ್ಲಿ ಕೆಳಗುರುಳಿಸಲಾದ 68 ಮೀಟರ್‌ ಎತ್ತರದ ಕಟ್ಟಡವು ಭಾರತದ ಮಟ್ಟಿಗೆ ನೆಲಸಮವಾದ ಎತ್ತರದ ಕಟ್ಟಡವಾಗಿತ್ತು. 2020ರಲ್ಲಿ ಕೇರಳದಲ್ಲಿ ಕೆಡವಲಾಗಿತ್ತು. ಅದೇ ವರ್ಷ ಅಬುಧಾಬಿಯಲ್ಲಿ 168 ಮೀಟರ್ ಎತ್ತರದ ಕಟ್ಟಡವನ್ನು ನೆಲಸಮಗೊಳಿಸಿದ್ದು ವಿಶ್ವದಾಖಲೆಗೆ ಸೇರಿತ್ತು.

8 ಮೀಟರ್: ಈಗ ನೆಲಸಮಗೊಳಿಸಲಾಗುವ ಎರಡು ಕಟ್ಟಡಗಳ ಪಕ್ಕದಲ್ಲಿ ಕೆಲವು ಅಪಾರ್ಟ್‌ಮೆಂಟ್‌ಗಳು ಸುಮಾರು ಎಂಟು ಮೀಟರ್‌ ಅಂತರದಲ್ಲಿವೆ. 9-12 ಮೀಟರ್‌ಗಳ ಒಳಗೆ ಹಲವಾರು ಅಪಾರ್ಟ್‌ಮೆಂಟ್‌ಗಳಿವೆ. ಧೂಳು ನುಗ್ಗುವುದನ್ನು ಕಡಿಮೆ ಮಾಡಲು ಅಕ್ಕಪಕ್ಕದ ಕಟ್ಟಡಗಳನ್ನು ವಿಶೇಷ ಬಟ್ಟೆಯಿಂದ ಮುಚ್ಚಲಾಗುತ್ತದೆ.

7,000 ಸ್ಟೋಟಕಗಳು: ಪಿಲ್ಲರ್‌ಗಳ ಸುಮಾರು 7,000 ರಂಧ್ರಗಳಲ್ಲಿ ಸ್ಫೋಟಕಗಳನ್ನು ಅಳವಡಿಸಲಾಗಿದೆ. ಈ ರಂಧ್ರಗಳು ತಲಾ ಎರಡು ಮೀಟರ್ ಅಂತರದಲ್ಲಿವೆ. ಸ್ಪೋಟಿಸಿದಾಗ ಗೋಪುರಗಳು ನೇರವಾಗಿ ಕೆಳಗೆ ಬೇಳುವಂತೆ ಯೋಜನೆ ರೂಪಿಸಲಾಗಿದೆ. ಇದನ್ನು ‘ಜಲಪಾತ ತಂತ್ರ’ ಎಂದು ಕರೆಯಲಾಗಿದೆ.

9 ಸೆಕೆಂಡುಗಳು: 9 ಸೆಕೆಂಡ್‌ಗಳಲ್ಲಿ ಕಟ್ಟಡ ನೆಲಕ್ಕುರಲಿದೆ ಎಂದು ಪ್ರಾಜೆಕ್ಟ್ ಎಂಜಿನಿಯರ್ ಹೇಳುತ್ತಾರೆ. ಎಂಜಿನಿಯರ್‌‌, ಬ್ಲಾಸ್ಟರ್‌ನ ಪಕ್ಕದಲ್ಲಿ ಇರುತ್ತಾರೆ. ನೋಯ್ಡಾ ಆಡಳಿತ ವರ್ಗ, ಜೊತೆಗೆ ಆಫ್ರಿಕಾದ ಮೂವರು ತಜ್ಞರು ಮತ್ತು ಇತರ ಕೆಲವು ಸರ್ಕಾರಿ ಅಧಿಕಾರಿಗಳು (ಒಟ್ಟಾರೆಯಾಗಿ 10 ಜನರಿಗಿಂತ ಹೆಚ್ಚಿಲ್ಲ) ಕನಿಷ್ಠ 100 ಮೀಟರ್ ದೂರದಲ್ಲಿ ನಿಲ್ಲುತ್ತಾರೆ. ಅರ್ಧಗಂಟೆ ಕಾಲ ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇ ಸಂಚಾರವನ್ನು ಈ ಭಾಗದಲ್ಲಿ ಸ್ಥಗಿತಗೊಳಿಸಲಾಗುತ್ತಿದೆ.

12 ನಿಮಿಷಗಳು:  ಕಟ್ಟಡ ಉರುಳಿಸಿದ ಬಳಿಕ ಧೂಳು ಕಡಿಮೆಯಾಗಲು ಸುಮಾರು 12 ನಿಮಿಷಗಳ ಕಾಲ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಗಾಳಿಯ ಏರಿಳಿತದ ಮೇಲೆ ಧೂಳಿನ ಉದುಗುವಿಕೆ ನಿರ್ಧಾರವಾಗುವ ಸಾಧ್ಯತೆಯೂ ಇದೆ.

ಪ್ರತಿ ಸೆಕೆಂಡಿಗೆ 30 ಮಿಮೀ: ಸ್ಫೋಟದ ನಂತರ ಕಂಪನಗಳು 30 ಮೀಟರ್‌ಗಳವರೆಗೆ ಸಂಭವಿಸಬಹುದು. ಆದರೆ ಕೆಲವೇ ಸೆಕೆಂಡ್‌ ಇರಬಹುದು. ಸರಳವಾಗಿ ಹೇಳುವುದಾದರೆ, ಇದು ರಿಕ್ಟರ್ ಮಾಪಕದಲ್ಲಿ 0.4ರ ಭೂಕಂಪಕ್ಕೆ ಸಮಾನವಾಗಿದೆ.

7,000: ಸುಮಾರು 150 ಸಾಕುಪ್ರಾಣಿಗಳು ಮತ್ತು 2,500 ವಾಹನಗಳೊಂದಿಗೆ ಪಕ್ಕದ ಪ್ರದೇಶಗಳ 7000 ನಿವಾಸಿಗಳು ಡೆಮಾಲಿಷನ್ ದಿನದಂದು ಬೆಳಿಗ್ಗೆ 7 ಗಂಟೆಗೆ ಹೊರಹೋಗಬೇಕು ಎಂದು ಸೂಚನೆ ನೀಡಲಾಗಿದೆ. ಗ್ಯಾಸ್‌ ಮತ್ತು ವಿದ್ಯುತ್ ಪೂರೈಕೆಯನ್ನು ಸಂಜೆ 4 ಗಂಟೆಯವರೆಗೆ ಸ್ಥಗಿತಗೊಳಿಸಲಾಗಿದೆ. ಇಲ್ಲಿನ ನಿವಾಸಿಗಳಿಗೆ 5.30ರ ಬಳಿಕ ಹಿಂತಿರುಗಲು ಅನುಮತಿ ನೀಡಲಾಗಿದೆ.

ಇದನ್ನೂ ಓದಿರಿ: ಪ್ಲೇಸ್ಟೋರ್‌ನಿಂದ 2 ಸಾವಿರ ಸಾಲ ನೀಡುವ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದ ಗೂಗಲ್‌!

9 ವರ್ಷಗಳು: ಸೂಪರ್‌ಟೆಕ್ ಎಮರಾಲ್ಡ್ ಕೋರ್ಟ್ ಸೊಸೈಟಿಯ ನಿವಾಸಿಗಳು, ಈ ಕಟ್ಟಡಗಳ ನಿರ್ಮಾಣದ ವಿರುದ್ಧ 2012ರಲ್ಲಿ ನ್ಯಾಯಾಲಯಕ್ಕೆ ಮೊರೆಹೋದರು. ಆಗಸ್ಟ್ 2021ರಲ್ಲಿ ಅಂತಿಮ ತೀರ್ಪು ಬಂದಿತು. ಅಲಹಾಬಾದ್ ಹೈಕೋರ್ಟ್ 2014ರಲ್ಲಿ ಕಟ್ಟಡ ಕೆಡವಲು ಆದೇಶ ನೀಡಿತ್ತು. ಪ್ರಕರಣವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಕಳೆದ ಆಗಸ್ಟ್‌ನಲ್ಲಿ ಕಟ್ಟಡಗಳನ್ನು ಕೆಡವಲು ನ್ಯಾಯಾಲಯ ಮೂರು ತಿಂಗಳ ಕಾಲಾವಕಾಶ ನೀಡಿತ್ತು. ಆದರೆ ತಾಂತ್ರಿಕ ತೊಂದರೆಗಳಿಂದಾಗಿ ಒಂದು ವರ್ಷ ತೆಗೆದುಕೊಂಡಿತು.

100 ಕೋಟಿ ರೂ.: ಇಡೀ ನೆಲಸಮಕ್ಕೆ ನೂರು ಕೋಟಿ ರೂ. ವಿಮೆ ಮಾಡಲಾಗಿದೆ. ಪಕ್ಕದ ಕಟ್ಟಡಗಳಿಗೆ ಹಾನಿಯಾದರೆ ವೆಚ್ಚವನ್ನು ಭರಿಸಬೇಕು, ಒಂದು ವೇಳೆ ವಸ್ತುಗಳು ಪಕ್ಕಕ್ಕೆ ಸಿಡಿದರೆ ನಷ್ಟವನ್ನು ತುಂಬಿಕೊಡಬೇಕು. ನೆಲಸಮ ಯೋಜನೆಗೆ ₹ 20 ಕೋಟಿಗಿಂತ ಹೆಚ್ಚು ವೆಚ್ಚವಾಗಬಹುದು. ಆದರೆ ಕಟ್ಟಡವನ್ನು ಕೆಡವುತ್ತಿರುವುದರಿಂದ ಸುಮಾರು 50 ರೂ. ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...