Homeಮುಖಪುಟಅಧಿಕಾರಕ್ಕೆ ಸವಾಲೆಸೆದ ತಮಿಳುನಾಡಿನ ಇಬ್ಬರು ಯುವಪ್ರತಿಭೆಗಳು

ಅಧಿಕಾರಕ್ಕೆ ಸವಾಲೆಸೆದ ತಮಿಳುನಾಡಿನ ಇಬ್ಬರು ಯುವಪ್ರತಿಭೆಗಳು

- Advertisement -
- Advertisement -

ಇತ್ತೀಚೆಗಿನ ದಿನಗಳಲ್ಲಿ ತಮ್ಮ ವೃತ್ತಿ ಕುರಿತಾದ ಅಸಾಧಾರಣ ಬದ್ಧತೆಯ ಮೂಲಕ ಇಡೀ ದೇಶದ ಗಮನ ಸೆಳೆದ ಚಿತ್ರನಟಿ ಸಾಯಿಪಲ್ಲವಿ ಹಾಗೂ ಕರೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಸಂಸದೆಯಾಗಿ ಆಯ್ಕೆಯಾಗಿರುವ ಜ್ಯೋತಿ ಮಣಿ ಎಂಬ ಯುವ ಪ್ರತಿಭೆಗಳು ಇಂದಿನ ಯುವತಲೆಮಾರಿಗೆ ಮಾದರಿಯಾಗುವ ತಮ್ಮ ನಡೆನುಡಿಗಳ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಚಿತ್ರ ನಟಿಯಾಗಿರುವ ಸಾಯಿಪಲ್ಲವಿ ತಮಿಳುನಾಡಿನ ಊಟಿ ಬಳಿ ಇರುವ ಕೋಟಗಿರಿ ಎಂಬ ಸ್ಥಳದ ಬಡಗ ಜನಾಂಗ ಎಂಬ ಬುಡಕಟ್ಟು ಸಮುದಾಯಕ್ಕೆ ಸೇರಿದ ಹೆಣ್ಣು ಮಗಳು. ಜೊತೆಗೆ ವೈದ್ಯಕೀಯ ಪದವಿಯನ್ನು ಪಡೆದಿರುವ ಪ್ರತಿಭಾವಂತೆ. ಆಕೆಯ ತಂದೆ ಮತ್ತು ತಾಯಿ ಇಬ್ಬರೂ (ಸೆಂತಮಾರೈ ಕಣ್ಣನ್ ಮತ್ತು ರಾಧಾ) ಉದ್ಯೋಗದ ನಿಮಿತ್ತ ಕೊಯಮತ್ತೂರಿನಲ್ಲಿದ್ದವರು. 1992ರಲ್ಲಿ ಜನಸಿದ ಸಾಯಿ ಬಾಲ್ಯದ ಶಿಕ್ಷಣವನ್ನೆಲ್ಲಾ ಕೊಯಮತ್ತೂರು ಕಾನ್ವೆಂಟ್ ಶಾಲೆಯಲ್ಲಿ ಪಡೆದವಳು. ನೃತ್ಯದಲ್ಲಿ ಆಸಕ್ತಿ ಇದ್ದ ಕಾರಣದಿಂದಾಗಿ ಉತ್ತಮ ನೃತ್ಯಗಾತಿಯಾಗಿ ರೂಪುಗೊಂಡಿದ್ದ ಸಾಯಿ ಪಲ್ಲವಿ ಅನಿರೀಕ್ಷಿತವಾಗಿ ಕಲಾವಿದೆಯಾಗಿ ಗುರುತಿಸಿಕೊಂಡವಳು. ಜೊತೆಗೆ ತಮಿಳು, ಮಲೆಯಾಳಂ ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿ ಎಲ್ಲಾ ಪ್ರೇಕ್ಷಕರ ಮನಗೆದ್ದವಳು. ಈಗಾಗಲೇ ದಕ್ಷಿಣ ಭಾರತದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಗಳಲ್ಲಿ ಒಂದಾದ ಫಿಲಂಫೇರ್ ಪ್ರಶಸ್ತಿಗೆ ಸಾಯಿಪಲ್ಲವಿ ಪಾತ್ರರಾಗಿದ್ದಾರೆ. ಅಪಾರ ಓದು ಮತ್ತು ವಿದ್ಯಾರ್ಹತೆ ಹಾಗೂ ಈ ಜಗತ್ತನ್ನು ಸೂಕ್ಷ್ಮವಾಗಿ ಗ್ರಹಿಸುವ ಗುಣ ಇವೆಲ್ಲವೂ ಆಕೆಯನ್ನು ಪ್ರಬುದ್ಧ ನಟಿಯನ್ನಾಗಿ ರೂಪಿಸಿವೆ. ಈಗ ಬಿಡುಗಡೆಯಾಗಿರುವ ನಕ್ಸಲ್ ಚಳುವಳಿಯ ಕಥೆಯಾಧಾರಿತ (ವಾರಂಗಲ್‌ನ ಸರಳ ಎಂಬ ತೊಂಬತ್ತರ ದಶಕದ ನಕ್ಸಲ್ ಕಾರ್ಯಕರ್ತೆಯ ಜೀವನಾಧಾರಿತ ಕಥೆ) ’ವಿರಾಟ ಪರ್ವಂ’ ತೆಲುಗು ಸಿನಿಮಾದಲ್ಲಿನ ಸಾಯಿ ಪಲ್ಲವಿಯ ಅಭಿನಯ ಕುರಿತಾಗಿ ಎಲ್ಲರಿಂದ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ.

2015ರಲ್ಲಿ ’ಪ್ರೇಮಂ’ ಎಂಬ ಮಲೆಯಾಳಂ ಸಿನಿಮಾದ ಮಲರ್ ಎಂಬ ಪಾತ್ರದ ಮೂಲಕ ಗಮನ ಸೆಳೆದ ಈಕೆ ಮತ್ತೆ ಹಿಂತಿರುಗಿ ನೋಡಿಲ್ಲ. ಮತ್ತೋರ್ವ ಪ್ರತಿಭಾವಂತೆ ಕೀರ್ತಿ ಸುರೇಶ್ ಎಂಬ ಕಲಾವಿದೆಯ ಜೊತೆಗೆ ಸಾಯಿಪಲ್ಲವಿ ಕುರಿತಾಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಇತ್ತೀಚೆಗೆ ’ವಿರಾಟ ಪರ್ವಂ’ ಸಿನಿಮಾ ಪ್ರಚಾರ ಕುರಿತ ಪತ್ರಿಕಾಗೋಷ್ಠಿಯಲ್ಲಿ ತಾನು ನಂಬಿದ ಸಿದ್ಧಾಂತಗಳ ಕುರಿತು ಮಾತನಾಡುತ್ತಾ, ಧರ್ಮಕ್ಕಿಂತ ಮನುಷ್ಯ ಜೀವ ದೊಡ್ಡದು; ಕಾಶ್ಮೀರದಲ್ಲಿ ಹಿಂದೂ ಪಂಡಿತರ ಹತ್ಯೆಯಾಗುವುದು ಅಮಾನುಷ ಕೃತ್ಯ ನಿಜ; ಅದೇ ರೀತಿ ಗೋವುಗಳನ್ನು ಹಿಡಿದುಕೊಂಡು ಹೋಗುತ್ತಿರುವ ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಿ ಜೈ ಶ್ರೀರಾಂ ಎಂದು ಘೋಷಣೆ ಕೂಗುವುದು ಕೂಡ ಅಮಾನುಷ ಕ್ರಿಯೆ ಎಂದು ಸಾಯಿ ಪ್ರತಿಕ್ರಿಯಿಸಿದ್ದಳು.

ಸಾಯಿಪಲ್ಲವಿಯ ಈ ಪ್ರಬುದ್ಧತೆಯ ಮಾತುಗಳು ಮಾರಿಕೊಂಡ ಮಾಧ್ಯಮಗಳ ಬೃಹಸ್ಪತಿಗಳನ್ನು ಕೆರಳಿಸಿತು. ಈಕೆಯ ಕುರಿತಾಗಿ ಇಲ್ಲಸಲ್ಲದ ಅಪಪ್ರಚಾರ ಮಾಡಿದರು. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಎದುರಿಗೆ
ಮೈಕ್ ಮತ್ತು ಕ್ಯಾಮರಾ ಇದ್ದರೆ ಸಾಕು ಹನುಮಂತನ ಪಾತ್ರಧಾರಿಗಳಂತೆ ಕುಣಿಯುವ ಪತ್ರಕರ್ತರೆಂಬ ಮಂಡೂಕಗಳಿಗೆ ನಾವು ಬದುಕುತ್ತಿರುವ ಗ್ರಾಮೀಣ ಜಗತ್ತಿನ ಪರಿಸ್ಥಿತಿಯ ಅರಿವಿಲ್ಲ. ಇಂದಿಗೂ ಕೂಡ ನಮ್ಮ ಕರ್ನಾಟಕ ಸೇರಿದಂತೆ ಭಾರತದ ಹಲವಾರು ರಾಜ್ಯಗಳಲ್ಲಿ ಕೃಷಿಯನ್ನು ಮೂಲ ವೃತ್ತಿಯಾಗಿಸಿಕೊಂಡ ಮುಸ್ಲಿಮರಿದ್ದಾರೆ, ಜೊತೆಗೆ ಪಶು ಸಾಕಾಣಿಕೆಯ ಮೂಲಕ ಹೈನುಗಾರಿಕೆಯಲ್ಲಿ ಬದುಕು ಕಟ್ಟಿಕೊಂಡ ಅನೇಕ ಬಡ ಮುಸ್ಲಿಂ ಕುಟುಂಬಗಳು ಇವೆ. ಆದರೆ, ಈಗಿನ ’ನವ ದೇಶ ಭಕ್ತ’ರು ಮತ್ತು ’ಹಿಂದೂಭಕ್ತ’ರು ಎಂಬ ಅಸಭ್ಯರ ಕಾರಣದಿಂದಾಗಿ ಯಾವೊಬ್ಬ ಮುಸ್ಲಿಂ ವ್ಯಕ್ತಿ ಸಾರ್ವಜನಿಕವಾಗಿ ಹಸುಗಳನ್ನು ಹಿಡಿದುಕೊಂಡು ಪಶು ವೈದ್ಯಕೀಯ ಕೇಂದ್ರಗಳಿಗೆ ಹೋಗುವುದು ಅಥವಾ ಮಾರಾಟಕ್ಕೆ ಇಲ್ಲವೆ ಕೊಳ್ಳುವುದಕ್ಕೆ ಜಾನುವಾರುಗಳ ಸಂತೆಗೆ ಹೋಗಲು ಅಸಾಧ್ಯವಾಗುತ್ತಿದೆ. ತಮ್ಮ ಪರಿಚಯದ ಹಿಂದೂಧರ್ಮದ ಗೆಳೆಯರನ್ನು ಆಶ್ರಯಿಸಿ ಬದುಕಬೇಕಾದ ಸ್ಥಿತಿ ಅವರದು.

ಹಿಂದುಳಿದ ಸಮುದಾಯದಲ್ಲಿ ಜನಿಸಿ ಗ್ರಾಮೀಣ ಭಾರತದ ಅನುಭವಗಳನ್ನು ದಕ್ಕಿಸಿಕೊಂಡಿರುವ ನಟಿ ಸಾಯಿಪಲ್ಲವಿಗೆ ಇರುವ ಇಂತಹ ಸೂಕ್ಷ್ಮತೆಯನ್ನು ನಮ್ಮ ಮಾಧ್ಯಮಗಳ ಅವಿವೇಕಿಗಳು ದಕ್ಕಿಸಿಕೊಂಡಿದ್ದರೆ ಅವರ ಮಾತು ಮತ್ತು ಬರವಣಿಗೆಗೆ ಅರ್ಥ ಬರುತ್ತಿತ್ತು.

ಇನ್ನು ಎರಡನೆಯದಾಗಿ ಜ್ಯೋತಿ ಮಣಿ ಎಂಬ ತಮಿಳು ಭಾಷೆಯ ಯುವ ಕಥೆಗಾರ್ತಿಯೊಬ್ಬಳು ತನ್ನ ಬದ್ಧತೆಯ ಹೋರಾಟದ ಬದುಕಿನ ಮೂಲಕ ಸತತ ಹದಿನೈದು ವರ್ಷಗಳ ಕಾಲ ತಮಿಳುನಾಡು ಯುವ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡ ಸೂಕ್ಷ್ಮ ಮನಸ್ಸಿನ ಹೆಣ್ಣು ಮಗಳು. 2009 ಮತ್ತು 2014ರ ಎರಡು ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರೂ ಎದೆಗುಂದದೆ ಹಾಗೂ ಪಕ್ಷ ನಿಷ್ಟೆಯನ್ನು ಬದಲಾಯಿಸದೆ 2019ರಲ್ಲಿ ಕರೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾಳೆ. ಬೆಂಗಳೂರು-ಮಧುರೈ ಮತ್ತು ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇಲಂ ನಂತರ ಸಿಗುವ ಕರೂರು ಮುಂದುವರಿದ ವಾಣಿಜ್ಯ ಹಾಗೂ ಕೈಗಾರಿಕಾ ಜಿಲ್ಲಾ ಕೇಂದ್ರವಾಗಿದೆ. ಜ್ಯೋತಿ ಮಣಿ ಸಂಸದೆಯಾದ ನಂತರವೂ ತನ್ನ ಹಳ್ಳಿಯ ವಾಸಸ್ಥಳವನ್ನು ಬದಲಾಯಿಸಿಲ್ಲ. ಪೆರಿಯತಿರು ಮಂಗಲಂ ಎಂಬ ಹಳ್ಳಿಯಲ್ಲಿ ಜನಸಾಮಾನ್ಯರ ನಡುವೆ ಸಾಮಾನ್ಯಳಂತೆ ಬದುಕುವ ಜ್ಯೋತಿ ಮಣಿಗೆ ಸಾಹಿತ್ಯದ ಓದು ಮತ್ತು ಬರವಣಿಗೆ ಒಬ್ಬ ಜನಪ್ರತಿನಿಧಿ ಹೇಗಿರಬೇಕು ಎಂಬುದನ್ನು ಕಲಿಸಿಕೊಟ್ಟಿದೆ. ಅಣ್ಣಾ ಮಲೈ ವಿ.ವಿ.ಯ ಪದವೀಧರೆಯಾದ ಈಕೆಯ ’ಒಟ್ಟು ವಾಸನೈ’ ಎಂಬ ಕಥಾ ಸಂಕಲನ, ’ಸಿಥಿರಕ್ ಕೂಡು’ ಎಂಬ ಕಾದಂಬರಿಯ ಜೊತೆಗೆ ’ನಾಯಕತ್ವಕ್ಕೆ ಅಡ್ಡದಾರಿಗಳಿಲ್ಲ’ (ನೀರ್ ಪಿರಕ್ಕು ಮನ್) ಎಂಬ ಅನುಭವ ಕಥನ ಪುಸ್ತಕಗಳು ಜ್ಯೋತಿ ಮಣಿಯನ್ನು ತಮಿಳು ಜನತೆ ಪಕ್ಷ ಭೇದವಿಲ್ಲದೆ ಪ್ರೀತಿಸುವಂತೆ ಮಾಡಿದೆ.

ಕಳೆದ ವಾರ ದೆಹಲಿಯ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಜಾರಿ ನಿರ್ದೆಶನಾಲಯದ ವಿರುದ್ಧ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ದೆಹಲಿ ಪೊಲೀಸರ ವಿರುದ್ಧ ಜ್ಯೋತಿ ಮಣಿ ಗುಡುಗಿದ ವೈಖರಿಯು ದೇಶಾದ್ಯಂತ ಮಾಧ್ಯಮಗಳ ಗಮನ ಸೆಳೆಯಿತು. ತಾನೋರ್ವ ಸಂಸದೆ ಎಂಬುದನ್ನು ಕಡೆಗಣಿಸಿ ತೊಟ್ಟಿದ ಬಟ್ಟೆಗಳು ಹರಿದು ಹೋಗುವಂತೆ ಎಳೆದಾಡಿದ ಪೊಲೀಸರ ಅಮಾನವೀಯ ವರ್ತನೆಯ ಬಗ್ಗೆ ಮಾತನಾಡುತ್ತ ಯಾವುದೇ ಸಂಕೋಚವಿಲ್ಲದೆ ಧರಿಸಿದ್ದ ಪೈಜಾಮಿನ ಹರಿದ ಭಾಗವನ್ನು ತೋರಿಸಿ, ಅದಕ್ಕೆ ಕಾರಣಕಾದವರನ್ನು ತರಾಟೆಗೆ ತೆಗೆದುಕೊಂಡ ಬಗೆ ನಿಜಕ್ಕೂ ಮೆಚ್ಚುವಂತಹದ್ದು. ಕುಡಿಯಲು ನೀರು ಕೇಳಿದರೂ ಸಹ ನೀಡದೆ ಸತತ ಮೂರು ಗಂಟೆಗಳ ಕಾಲ ಪೊಲೀಸ್ ವಾಹನದಲ್ಲಿ ಕೂಡಿ ಹಾಕಿದ್ದ ಬಗೆಯನ್ನು ಈ ಹೆಣ್ಣುಮಗಳು ಇಂಗ್ಲಿಷ್ ಭಾಷೆಯಲ್ಲಿ ವಿವರಿಸುವುದರ ಮೂಲಕ ದೆಹಲಿ ಪೊಲೀಸರ ಗೂಂಡಾಗಿರಿಯನ್ನು ಜಗತ್ತಿಗೆ ಪರಿಚಯಿಸಿದಳು.

ಅಧಿಕಾರ, ಸ್ಥಾನಮಾನ ಹಾಗೂ ಹಣಕ್ಕಾಗಿ ನಿಷ್ಠೆ ಬದಲಿಸಿ ಪಕ್ಷದಿಂದ ಪಕ್ಷಕ್ಕೆ ಹಾರುವ ಇಂದಿನ ಎಡಬಿಡಂಗಿ ಜಾಯಮಾನದ ಅವಿವೇಕಿಗಳಿಗೆ ಈ ಹೆಣ್ಣುಮಗಳ ರಾಜಕೀಯ ಜೀವನಗಾಥೆ ಪಾಠವಾಗಬೇಕು. ಜೊತೆಗೆ ಯುವಕ/ ಯುವತಿಯರಿಗೆ ಜ್ಯೋತಿ ಮಣಿಯ ಬದ್ಧತೆ ಆದರ್ಶವಾಗಬೇಕು.

ಡಾ.ಎನ್.ಜಗದೀಶ್ ಕೊಪ್ಪ

ಡಾ.ಎನ್.ಜಗದೀಶ್ ಕೊಪ್ಪ
ಹಿರಿಯ ಪತ್ರಕರ್ತರು, ಬರಹಗಾರರು ಮತ್ತು ಸಾಮಾಜಿಕ ಹೋರಾಟಗಾರರು. ಬಿಳಿ ಸಾಹೇಬನ ಭಾರತ, ಮರುಭೂಮಿಯ ಹೂವು, ಪುತ್ರಶೋಕ ಅವರು ರಚಿಸಿದ ಪುಸ್ತಕಗಳಲ್ಲಿ ಕೆಲವು.


ಇದನ್ನೂ ಓದಿ: ಸಾಯಿ ಪಲ್ಲವಿಯವರಿಂದ ಮಾಧ್ಯಮಗಳು ಕಲಿಯುವುದು ಬಹಳಷ್ಟಿದೆ: ಬೆಂಬಲಕ್ಕೆ ನಿಂತ ನಟ ಕಿಶೋರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...