Homeಮುಖಪುಟಅಧಿಕಾರಕ್ಕೆ ಸವಾಲೆಸೆದ ತಮಿಳುನಾಡಿನ ಇಬ್ಬರು ಯುವಪ್ರತಿಭೆಗಳು

ಅಧಿಕಾರಕ್ಕೆ ಸವಾಲೆಸೆದ ತಮಿಳುನಾಡಿನ ಇಬ್ಬರು ಯುವಪ್ರತಿಭೆಗಳು

- Advertisement -
- Advertisement -

ಇತ್ತೀಚೆಗಿನ ದಿನಗಳಲ್ಲಿ ತಮ್ಮ ವೃತ್ತಿ ಕುರಿತಾದ ಅಸಾಧಾರಣ ಬದ್ಧತೆಯ ಮೂಲಕ ಇಡೀ ದೇಶದ ಗಮನ ಸೆಳೆದ ಚಿತ್ರನಟಿ ಸಾಯಿಪಲ್ಲವಿ ಹಾಗೂ ಕರೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಸಂಸದೆಯಾಗಿ ಆಯ್ಕೆಯಾಗಿರುವ ಜ್ಯೋತಿ ಮಣಿ ಎಂಬ ಯುವ ಪ್ರತಿಭೆಗಳು ಇಂದಿನ ಯುವತಲೆಮಾರಿಗೆ ಮಾದರಿಯಾಗುವ ತಮ್ಮ ನಡೆನುಡಿಗಳ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಚಿತ್ರ ನಟಿಯಾಗಿರುವ ಸಾಯಿಪಲ್ಲವಿ ತಮಿಳುನಾಡಿನ ಊಟಿ ಬಳಿ ಇರುವ ಕೋಟಗಿರಿ ಎಂಬ ಸ್ಥಳದ ಬಡಗ ಜನಾಂಗ ಎಂಬ ಬುಡಕಟ್ಟು ಸಮುದಾಯಕ್ಕೆ ಸೇರಿದ ಹೆಣ್ಣು ಮಗಳು. ಜೊತೆಗೆ ವೈದ್ಯಕೀಯ ಪದವಿಯನ್ನು ಪಡೆದಿರುವ ಪ್ರತಿಭಾವಂತೆ. ಆಕೆಯ ತಂದೆ ಮತ್ತು ತಾಯಿ ಇಬ್ಬರೂ (ಸೆಂತಮಾರೈ ಕಣ್ಣನ್ ಮತ್ತು ರಾಧಾ) ಉದ್ಯೋಗದ ನಿಮಿತ್ತ ಕೊಯಮತ್ತೂರಿನಲ್ಲಿದ್ದವರು. 1992ರಲ್ಲಿ ಜನಸಿದ ಸಾಯಿ ಬಾಲ್ಯದ ಶಿಕ್ಷಣವನ್ನೆಲ್ಲಾ ಕೊಯಮತ್ತೂರು ಕಾನ್ವೆಂಟ್ ಶಾಲೆಯಲ್ಲಿ ಪಡೆದವಳು. ನೃತ್ಯದಲ್ಲಿ ಆಸಕ್ತಿ ಇದ್ದ ಕಾರಣದಿಂದಾಗಿ ಉತ್ತಮ ನೃತ್ಯಗಾತಿಯಾಗಿ ರೂಪುಗೊಂಡಿದ್ದ ಸಾಯಿ ಪಲ್ಲವಿ ಅನಿರೀಕ್ಷಿತವಾಗಿ ಕಲಾವಿದೆಯಾಗಿ ಗುರುತಿಸಿಕೊಂಡವಳು. ಜೊತೆಗೆ ತಮಿಳು, ಮಲೆಯಾಳಂ ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿ ಎಲ್ಲಾ ಪ್ರೇಕ್ಷಕರ ಮನಗೆದ್ದವಳು. ಈಗಾಗಲೇ ದಕ್ಷಿಣ ಭಾರತದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಗಳಲ್ಲಿ ಒಂದಾದ ಫಿಲಂಫೇರ್ ಪ್ರಶಸ್ತಿಗೆ ಸಾಯಿಪಲ್ಲವಿ ಪಾತ್ರರಾಗಿದ್ದಾರೆ. ಅಪಾರ ಓದು ಮತ್ತು ವಿದ್ಯಾರ್ಹತೆ ಹಾಗೂ ಈ ಜಗತ್ತನ್ನು ಸೂಕ್ಷ್ಮವಾಗಿ ಗ್ರಹಿಸುವ ಗುಣ ಇವೆಲ್ಲವೂ ಆಕೆಯನ್ನು ಪ್ರಬುದ್ಧ ನಟಿಯನ್ನಾಗಿ ರೂಪಿಸಿವೆ. ಈಗ ಬಿಡುಗಡೆಯಾಗಿರುವ ನಕ್ಸಲ್ ಚಳುವಳಿಯ ಕಥೆಯಾಧಾರಿತ (ವಾರಂಗಲ್‌ನ ಸರಳ ಎಂಬ ತೊಂಬತ್ತರ ದಶಕದ ನಕ್ಸಲ್ ಕಾರ್ಯಕರ್ತೆಯ ಜೀವನಾಧಾರಿತ ಕಥೆ) ’ವಿರಾಟ ಪರ್ವಂ’ ತೆಲುಗು ಸಿನಿಮಾದಲ್ಲಿನ ಸಾಯಿ ಪಲ್ಲವಿಯ ಅಭಿನಯ ಕುರಿತಾಗಿ ಎಲ್ಲರಿಂದ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ.

2015ರಲ್ಲಿ ’ಪ್ರೇಮಂ’ ಎಂಬ ಮಲೆಯಾಳಂ ಸಿನಿಮಾದ ಮಲರ್ ಎಂಬ ಪಾತ್ರದ ಮೂಲಕ ಗಮನ ಸೆಳೆದ ಈಕೆ ಮತ್ತೆ ಹಿಂತಿರುಗಿ ನೋಡಿಲ್ಲ. ಮತ್ತೋರ್ವ ಪ್ರತಿಭಾವಂತೆ ಕೀರ್ತಿ ಸುರೇಶ್ ಎಂಬ ಕಲಾವಿದೆಯ ಜೊತೆಗೆ ಸಾಯಿಪಲ್ಲವಿ ಕುರಿತಾಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಇತ್ತೀಚೆಗೆ ’ವಿರಾಟ ಪರ್ವಂ’ ಸಿನಿಮಾ ಪ್ರಚಾರ ಕುರಿತ ಪತ್ರಿಕಾಗೋಷ್ಠಿಯಲ್ಲಿ ತಾನು ನಂಬಿದ ಸಿದ್ಧಾಂತಗಳ ಕುರಿತು ಮಾತನಾಡುತ್ತಾ, ಧರ್ಮಕ್ಕಿಂತ ಮನುಷ್ಯ ಜೀವ ದೊಡ್ಡದು; ಕಾಶ್ಮೀರದಲ್ಲಿ ಹಿಂದೂ ಪಂಡಿತರ ಹತ್ಯೆಯಾಗುವುದು ಅಮಾನುಷ ಕೃತ್ಯ ನಿಜ; ಅದೇ ರೀತಿ ಗೋವುಗಳನ್ನು ಹಿಡಿದುಕೊಂಡು ಹೋಗುತ್ತಿರುವ ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಿ ಜೈ ಶ್ರೀರಾಂ ಎಂದು ಘೋಷಣೆ ಕೂಗುವುದು ಕೂಡ ಅಮಾನುಷ ಕ್ರಿಯೆ ಎಂದು ಸಾಯಿ ಪ್ರತಿಕ್ರಿಯಿಸಿದ್ದಳು.

ಸಾಯಿಪಲ್ಲವಿಯ ಈ ಪ್ರಬುದ್ಧತೆಯ ಮಾತುಗಳು ಮಾರಿಕೊಂಡ ಮಾಧ್ಯಮಗಳ ಬೃಹಸ್ಪತಿಗಳನ್ನು ಕೆರಳಿಸಿತು. ಈಕೆಯ ಕುರಿತಾಗಿ ಇಲ್ಲಸಲ್ಲದ ಅಪಪ್ರಚಾರ ಮಾಡಿದರು. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಎದುರಿಗೆ
ಮೈಕ್ ಮತ್ತು ಕ್ಯಾಮರಾ ಇದ್ದರೆ ಸಾಕು ಹನುಮಂತನ ಪಾತ್ರಧಾರಿಗಳಂತೆ ಕುಣಿಯುವ ಪತ್ರಕರ್ತರೆಂಬ ಮಂಡೂಕಗಳಿಗೆ ನಾವು ಬದುಕುತ್ತಿರುವ ಗ್ರಾಮೀಣ ಜಗತ್ತಿನ ಪರಿಸ್ಥಿತಿಯ ಅರಿವಿಲ್ಲ. ಇಂದಿಗೂ ಕೂಡ ನಮ್ಮ ಕರ್ನಾಟಕ ಸೇರಿದಂತೆ ಭಾರತದ ಹಲವಾರು ರಾಜ್ಯಗಳಲ್ಲಿ ಕೃಷಿಯನ್ನು ಮೂಲ ವೃತ್ತಿಯಾಗಿಸಿಕೊಂಡ ಮುಸ್ಲಿಮರಿದ್ದಾರೆ, ಜೊತೆಗೆ ಪಶು ಸಾಕಾಣಿಕೆಯ ಮೂಲಕ ಹೈನುಗಾರಿಕೆಯಲ್ಲಿ ಬದುಕು ಕಟ್ಟಿಕೊಂಡ ಅನೇಕ ಬಡ ಮುಸ್ಲಿಂ ಕುಟುಂಬಗಳು ಇವೆ. ಆದರೆ, ಈಗಿನ ’ನವ ದೇಶ ಭಕ್ತ’ರು ಮತ್ತು ’ಹಿಂದೂಭಕ್ತ’ರು ಎಂಬ ಅಸಭ್ಯರ ಕಾರಣದಿಂದಾಗಿ ಯಾವೊಬ್ಬ ಮುಸ್ಲಿಂ ವ್ಯಕ್ತಿ ಸಾರ್ವಜನಿಕವಾಗಿ ಹಸುಗಳನ್ನು ಹಿಡಿದುಕೊಂಡು ಪಶು ವೈದ್ಯಕೀಯ ಕೇಂದ್ರಗಳಿಗೆ ಹೋಗುವುದು ಅಥವಾ ಮಾರಾಟಕ್ಕೆ ಇಲ್ಲವೆ ಕೊಳ್ಳುವುದಕ್ಕೆ ಜಾನುವಾರುಗಳ ಸಂತೆಗೆ ಹೋಗಲು ಅಸಾಧ್ಯವಾಗುತ್ತಿದೆ. ತಮ್ಮ ಪರಿಚಯದ ಹಿಂದೂಧರ್ಮದ ಗೆಳೆಯರನ್ನು ಆಶ್ರಯಿಸಿ ಬದುಕಬೇಕಾದ ಸ್ಥಿತಿ ಅವರದು.

ಹಿಂದುಳಿದ ಸಮುದಾಯದಲ್ಲಿ ಜನಿಸಿ ಗ್ರಾಮೀಣ ಭಾರತದ ಅನುಭವಗಳನ್ನು ದಕ್ಕಿಸಿಕೊಂಡಿರುವ ನಟಿ ಸಾಯಿಪಲ್ಲವಿಗೆ ಇರುವ ಇಂತಹ ಸೂಕ್ಷ್ಮತೆಯನ್ನು ನಮ್ಮ ಮಾಧ್ಯಮಗಳ ಅವಿವೇಕಿಗಳು ದಕ್ಕಿಸಿಕೊಂಡಿದ್ದರೆ ಅವರ ಮಾತು ಮತ್ತು ಬರವಣಿಗೆಗೆ ಅರ್ಥ ಬರುತ್ತಿತ್ತು.

ಇನ್ನು ಎರಡನೆಯದಾಗಿ ಜ್ಯೋತಿ ಮಣಿ ಎಂಬ ತಮಿಳು ಭಾಷೆಯ ಯುವ ಕಥೆಗಾರ್ತಿಯೊಬ್ಬಳು ತನ್ನ ಬದ್ಧತೆಯ ಹೋರಾಟದ ಬದುಕಿನ ಮೂಲಕ ಸತತ ಹದಿನೈದು ವರ್ಷಗಳ ಕಾಲ ತಮಿಳುನಾಡು ಯುವ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡ ಸೂಕ್ಷ್ಮ ಮನಸ್ಸಿನ ಹೆಣ್ಣು ಮಗಳು. 2009 ಮತ್ತು 2014ರ ಎರಡು ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದರೂ ಎದೆಗುಂದದೆ ಹಾಗೂ ಪಕ್ಷ ನಿಷ್ಟೆಯನ್ನು ಬದಲಾಯಿಸದೆ 2019ರಲ್ಲಿ ಕರೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾಳೆ. ಬೆಂಗಳೂರು-ಮಧುರೈ ಮತ್ತು ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇಲಂ ನಂತರ ಸಿಗುವ ಕರೂರು ಮುಂದುವರಿದ ವಾಣಿಜ್ಯ ಹಾಗೂ ಕೈಗಾರಿಕಾ ಜಿಲ್ಲಾ ಕೇಂದ್ರವಾಗಿದೆ. ಜ್ಯೋತಿ ಮಣಿ ಸಂಸದೆಯಾದ ನಂತರವೂ ತನ್ನ ಹಳ್ಳಿಯ ವಾಸಸ್ಥಳವನ್ನು ಬದಲಾಯಿಸಿಲ್ಲ. ಪೆರಿಯತಿರು ಮಂಗಲಂ ಎಂಬ ಹಳ್ಳಿಯಲ್ಲಿ ಜನಸಾಮಾನ್ಯರ ನಡುವೆ ಸಾಮಾನ್ಯಳಂತೆ ಬದುಕುವ ಜ್ಯೋತಿ ಮಣಿಗೆ ಸಾಹಿತ್ಯದ ಓದು ಮತ್ತು ಬರವಣಿಗೆ ಒಬ್ಬ ಜನಪ್ರತಿನಿಧಿ ಹೇಗಿರಬೇಕು ಎಂಬುದನ್ನು ಕಲಿಸಿಕೊಟ್ಟಿದೆ. ಅಣ್ಣಾ ಮಲೈ ವಿ.ವಿ.ಯ ಪದವೀಧರೆಯಾದ ಈಕೆಯ ’ಒಟ್ಟು ವಾಸನೈ’ ಎಂಬ ಕಥಾ ಸಂಕಲನ, ’ಸಿಥಿರಕ್ ಕೂಡು’ ಎಂಬ ಕಾದಂಬರಿಯ ಜೊತೆಗೆ ’ನಾಯಕತ್ವಕ್ಕೆ ಅಡ್ಡದಾರಿಗಳಿಲ್ಲ’ (ನೀರ್ ಪಿರಕ್ಕು ಮನ್) ಎಂಬ ಅನುಭವ ಕಥನ ಪುಸ್ತಕಗಳು ಜ್ಯೋತಿ ಮಣಿಯನ್ನು ತಮಿಳು ಜನತೆ ಪಕ್ಷ ಭೇದವಿಲ್ಲದೆ ಪ್ರೀತಿಸುವಂತೆ ಮಾಡಿದೆ.

ಕಳೆದ ವಾರ ದೆಹಲಿಯ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಜಾರಿ ನಿರ್ದೆಶನಾಲಯದ ವಿರುದ್ಧ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ದೆಹಲಿ ಪೊಲೀಸರ ವಿರುದ್ಧ ಜ್ಯೋತಿ ಮಣಿ ಗುಡುಗಿದ ವೈಖರಿಯು ದೇಶಾದ್ಯಂತ ಮಾಧ್ಯಮಗಳ ಗಮನ ಸೆಳೆಯಿತು. ತಾನೋರ್ವ ಸಂಸದೆ ಎಂಬುದನ್ನು ಕಡೆಗಣಿಸಿ ತೊಟ್ಟಿದ ಬಟ್ಟೆಗಳು ಹರಿದು ಹೋಗುವಂತೆ ಎಳೆದಾಡಿದ ಪೊಲೀಸರ ಅಮಾನವೀಯ ವರ್ತನೆಯ ಬಗ್ಗೆ ಮಾತನಾಡುತ್ತ ಯಾವುದೇ ಸಂಕೋಚವಿಲ್ಲದೆ ಧರಿಸಿದ್ದ ಪೈಜಾಮಿನ ಹರಿದ ಭಾಗವನ್ನು ತೋರಿಸಿ, ಅದಕ್ಕೆ ಕಾರಣಕಾದವರನ್ನು ತರಾಟೆಗೆ ತೆಗೆದುಕೊಂಡ ಬಗೆ ನಿಜಕ್ಕೂ ಮೆಚ್ಚುವಂತಹದ್ದು. ಕುಡಿಯಲು ನೀರು ಕೇಳಿದರೂ ಸಹ ನೀಡದೆ ಸತತ ಮೂರು ಗಂಟೆಗಳ ಕಾಲ ಪೊಲೀಸ್ ವಾಹನದಲ್ಲಿ ಕೂಡಿ ಹಾಕಿದ್ದ ಬಗೆಯನ್ನು ಈ ಹೆಣ್ಣುಮಗಳು ಇಂಗ್ಲಿಷ್ ಭಾಷೆಯಲ್ಲಿ ವಿವರಿಸುವುದರ ಮೂಲಕ ದೆಹಲಿ ಪೊಲೀಸರ ಗೂಂಡಾಗಿರಿಯನ್ನು ಜಗತ್ತಿಗೆ ಪರಿಚಯಿಸಿದಳು.

ಅಧಿಕಾರ, ಸ್ಥಾನಮಾನ ಹಾಗೂ ಹಣಕ್ಕಾಗಿ ನಿಷ್ಠೆ ಬದಲಿಸಿ ಪಕ್ಷದಿಂದ ಪಕ್ಷಕ್ಕೆ ಹಾರುವ ಇಂದಿನ ಎಡಬಿಡಂಗಿ ಜಾಯಮಾನದ ಅವಿವೇಕಿಗಳಿಗೆ ಈ ಹೆಣ್ಣುಮಗಳ ರಾಜಕೀಯ ಜೀವನಗಾಥೆ ಪಾಠವಾಗಬೇಕು. ಜೊತೆಗೆ ಯುವಕ/ ಯುವತಿಯರಿಗೆ ಜ್ಯೋತಿ ಮಣಿಯ ಬದ್ಧತೆ ಆದರ್ಶವಾಗಬೇಕು.

ಡಾ.ಎನ್.ಜಗದೀಶ್ ಕೊಪ್ಪ

ಡಾ.ಎನ್.ಜಗದೀಶ್ ಕೊಪ್ಪ
ಹಿರಿಯ ಪತ್ರಕರ್ತರು, ಬರಹಗಾರರು ಮತ್ತು ಸಾಮಾಜಿಕ ಹೋರಾಟಗಾರರು. ಬಿಳಿ ಸಾಹೇಬನ ಭಾರತ, ಮರುಭೂಮಿಯ ಹೂವು, ಪುತ್ರಶೋಕ ಅವರು ರಚಿಸಿದ ಪುಸ್ತಕಗಳಲ್ಲಿ ಕೆಲವು.


ಇದನ್ನೂ ಓದಿ: ಸಾಯಿ ಪಲ್ಲವಿಯವರಿಂದ ಮಾಧ್ಯಮಗಳು ಕಲಿಯುವುದು ಬಹಳಷ್ಟಿದೆ: ಬೆಂಬಲಕ್ಕೆ ನಿಂತ ನಟ ಕಿಶೋರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...