ಮೇಲ್ಜಾತಿಗಳಿಗೆ 10% ಮೀಸಲಾತಿ (EWS) ನೀಡಿರುವ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿರುವ ಮಧ್ಯೆ, ಆದಿತ್ಯನಾಥ್ ಸರ್ಕಾರವು ಭಾರತದ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಅವರ ಮಗನನ್ನು ಸುಪ್ರೀಂಕೋರ್ಟ್ನಲ್ಲಿ ಯುಪಿ ಸರ್ಕಾರದ ಹಿರಿಯ ವಕೀಲರ ಸಮಿತಿಗೆ ವಕೀಲರನ್ನಾಗಿ ನೇಮಿಸಿದೆ.
ರಾಜ್ಯಪಾಲ ಆನಂದಿ ಬೆನ್ ಪಟೇಲ್ ಅವರು ಶ್ರೀಯಶ್ ಲಲಿತ್ ಅವರ ಸೇರ್ಪಡೆಗೆ ಅನುಮೋದನೆ ನೀಡಿದ್ದಾರೆ ಎಂದು ಉತ್ತರ ಪ್ರದೇಶದ ಕಾನೂನು ವಿಭಾಗದ ವಿಶೇಷ ಕಾರ್ಯದರ್ಶಿ ನಿಕುಂಜ್ ಮಿತ್ತಲ್ ಅವರು ಬುಧವಾರ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇನ್ನು ಮುಂದೆ ಶ್ರೀಯಶ್ ಅವರು ಹಿರಿಯ ನ್ಯಾಯವಾದಿಯಾಗಿ ಉತ್ತರ ಪ್ರದೇಶ ಸರ್ಕಾರ ಪ್ರಕರಣಗಳನ್ನು ಸುಪ್ರೀಂಕೋರ್ಟ್ನಲ್ಲಿ ವಾದಿಸಲಿದ್ದಾರೆ.
ಇದನ್ನೂ ಓದಿ: ನ್ಯಾಯಾಂಗದ ಮೇಲೆ ಕೇಶವ ಕೃಪಾದ ನೆರಳು
ಉತ್ತರಪ್ರದೇಶದ ಕಾನೂನು ವಿಭಾಗದ ವಿಶೇಷ ಕಾರ್ಯದರ್ಶಿ ನಿಕುಂಜ್ ಮಿತ್ತಲ್ ಅವರು ಬುಧವಾರ ಹೊರಡಿಸಿದ ಪ್ರಕಟಣೆಯಲ್ಲಿ, ಸುಪ್ರೀಂ ಕೋರ್ಟ್ನಲ್ಲಿ ಯುಪಿ ಸರ್ಕಾರದ ಹಿರಿಯ ವಕೀಲರ ಸಮಿತಿಗೆ ಶ್ರೀಯಶ್ ಯು ಲಲಿತ್ ಅವರನ್ನು ಸೇರ್ಪಡೆಗೊಳಿಸಲು ರಾಜ್ಯಪಾಲ ಆನಂದಿ ಬೆನ್ ಪಟೇಲ್ ಅನುಮೋದಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ಕೂಡಾ ವ್ಯಕ್ತವಾಗಿದ್ದು, ‘ಜಾತಿಯತೆಯ ಕೊಲೀಜಿಯಂ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಕರ್ತ ಹಂಸರಾಜ್ ಮೀನಾ ಅವರು #casteist_collegium (ಜಾತಿಯತೆಯ ಕೊಲೀಜಿಯಂ) ಎಂಬ ಹ್ಯಾಶ್ ಟ್ಯಾಗ್ನೊಂದಿಗೆ, “ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿರುವ EWS ವಿಚಾರಣೆಯ ಮಧ್ಯೆ, ಯುಪಿ ಸರ್ಕಾರವು ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಅವರ ಮಗನನ್ನು ಯುಪಿ ಸರ್ಕಾರದ ವಕೀಲರನ್ನಾಗಿ ನೇಮಿಸುವ ಮೂಲಕ ಏನನ್ನು ಸೂಚಿಸುತ್ತದೆ?” ಎಂದು ಟ್ವೀಟ್ ಮಾಡಿದ್ದಾರೆ.
सुप्रीम कोर्ट में जारी EWS की सुनवाई के बीच यूपी सरकार द्वारा चीफ जस्टिस यूयू ललित के बेटे को यूपी सरकार का वकील बनाना क्या दर्शाता है? #casteist_collegium pic.twitter.com/qr8TK0fjjx
— Hansraj Meena (@HansrajMeena) September 24, 2022
ಇದನ್ನೂ ಓದಿ: ನ್ಯಾಯಾಂಗವಾದರೂ ಮಕ್ಕಳ ನೋವು ಕೇಳಲಿ, ನ್ಯಾಯ ನೀಡಲಿ: ಒಡನಾಡಿ ಸ್ಟ್ಯಾನ್ಲಿ ಒತ್ತಾಯ
ಪ್ರೋಫೆಸರ್ ದಿಲೀಪ್ ಮೊಂಡಲ್ ಅವರು,“ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಅವರು ಸುಪ್ರೀಂ ಕೋರ್ಟ್ನಲ್ಲಿ ಇಡಬ್ಲ್ಯೂಎಸ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ಏತನ್ಮಧ್ಯೆ, ಯುಪಿ ಸರ್ಕಾರವು ಲಲಿತ್ ಅವರ ಮಗನನ್ನು ಹಿರಿಯ ಸರ್ಕಾರಿ ವಕೀಲರನ್ನಾಗಿ ಮಾಡಿದೆ. ಇದು ಲಂಚ ಮತ್ತು ಹಿತಾಸಕ್ತಿ ಸಂಘರ್ಷದ ಲಜ್ಜೆಗೆಟ್ಟ ವಿಷಯವಾಗಿದೆ. ಲಲಿತ್ ಇಡಬ್ಲ್ಯೂಎಸ್ ಪ್ರಕರಣದಿಂದ ಹಿಂದೆ ಸರಿಯಬೇಕು” ಎಂದು ಆಗ್ರಹಿಸಿದ್ದಾರೆ.
Chief Justice UU Lalit is hearing the EWS case in the Supreme Court. Meanwhile, the UP government has made Lalit’s son a senior government lawyer. This amounts to bribe and a brazen matter of “Conflict of Interest. Lalit should recuse himself from EWS case. #casteist_collegium pic.twitter.com/GsAjrtt58W
— Dilip Mandal (@Profdilipmandal) September 24, 2022
ಇನ್ನು ಕೆಲವರು ಇದು ಪರೋಕ್ಷ ಮೀಸಲಾತಿ ಎಂದು ಅಭಿಪ್ರಾಯಪಟ್ಟಿದ್ದು, ಅದನ್ನು ನಿಲ್ಲಿಸಿ ಎಂದು ಆಗ್ರಹಿಸಿದ್ದಾರೆ.
Stop Indirect reservation. #casteist_collegium pic.twitter.com/Ul2t7TIkas
— Kamlesh Meghwal (@_KamleshMeghwal) September 24, 2022