Homeಮುಖಪುಟಸಾಮಾಜಿಕ ಸಂವೇದನೆಯ ಸೂಕ್ಷ್ಮ ನಟ ವಿಜಯ್ ಸೇತುಪಥಿ

ಸಾಮಾಜಿಕ ಸಂವೇದನೆಯ ಸೂಕ್ಷ್ಮ ನಟ ವಿಜಯ್ ಸೇತುಪಥಿ

ಧರ್ಮದುರೈ, ಇರೈವಿ, ಸೂಡು ಕವ್ವುಮ್, ತೆಣ್ಮೆರ್ಕು ಪರವಾಕುಟ್ರು, ಕಾವನ್ ಅದ್ಭುತ ಎನಿಸುವ ಪ್ರಮುಖ ಚಿತ್ರಗಳು

- Advertisement -
- Advertisement -

| ಮುತ್ತುರಾಜು |

‘ವಿಕ್ರಂವೇದ’ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಸೂಪರ್ ಡೂಪರ್ ಹಿಟ್ ಆದ ಚಿತ್ರ. ಸಸ್ಪೆನ್ಸ್, ಥ್ರಿಲ್ಲರ್, ಆಕ್ಷನ್ ಮೂರನ್ನೂ ಒಳಗೊಂಡ ಈ ಚಿತ್ರ ಪ್ರೊಫೆಶನಲ್ ಎಥಿಕ್ಸ್ ಬಗ್ಗೆಯೂ ಮಾತಾಡುತ್ತದೆ. ಬಾಕ್ಸ್ ಆಫೀಸ್‍ನಲ್ಲಿ ಸಾಕಷ್ಟು ಹಣ ಮಾಡಿದ ಈ ಚಿತ್ರದಲ್ಲಿ ವಿಜಯ್ ಸೇತುಪಥಿಯ ನಟನೆ, ಮ್ಯಾನರಿಸಂ ಎಲ್ಲರ ಗಮನ ಸೆಳೆಯಿತು. ಇತ್ತಿಚೇಗೆ ಬಿಡುಗಡೆಯಾದ ನವಿರು ಪ್ರೇಮಕಥೆಯ ತಮಿಳಿನ ’96 ಸಹ ಎಲ್ಲರ ಮನಗೆದ್ದ ಚಿತ್ರ.

ವಿಕ್ರಂವೇದ ಚಿತ್ರದಲ್ಲಿ
’96 ಚಿತ್ರದ ದೃಶ್ಯ

ಆದರೆ ವಿಜಯ್ ಸೇತುಪಥಿ ಏನು ಎನ್ನುವುದನ್ನು ಈ ಚಿತ್ರಗಳು ಹೇಳುವುದಿಲ್ಲ. ತಮಿಳಿನಲ್ಲಿ ಬಂದಿರುವ ಕಡಿಮೆ ಬಜೆಟ್‍ನ ಹತ್ತಾರು ಸಾಮಾಜಿಕ ತುಡಿತದ ಸಿನೆಮಾಗಳು ಅವರನ್ನು ಸಂಪೂರ್ಣ ಅರ್ಥ ಮಾಡಿಸುತ್ತವೆ. ಒಂದೊಂದು ಸಿನೆಮಾಗಳು ಒಂದೊಂದು ಲೋಕವನ್ನು ನಮ್ಮೆದೆರು ತೆರೆದಿಡುತ್ತವೆ. ಅವುಗಳನ್ನು ನೋಡುತ್ತಿದ್ದಂತೆಯೇ ಅವರ ಬಗ್ಗೆ ನಮ್ಮಲ್ಲಿ ಗೌರವದ ಭಾವನೆ ಮೂಡಿಸುತ್ತವೆ. ಧರ್ಮದುರೈ, ಇರೈವಿ, ಸೂಡು ಕವ್ವುಮ್, ತೆಣ್ಮೆರ್ಕು ಪರವಾಕುಟ್ರು, ಕಾವನ್ ಅಂತಹ ಸಾಲಿಗೆ ಸೇರುವ ಪ್ರಮುಖ ಚಿತ್ರಗಳು.

ಸೇತುಪಥಿ ಅಭಿನಯದ ನಾನು ಮೊದಲು ನೋಡಿದ ಚಿತ್ರ ಧರ್ಮದುರೈ. ಯೂ ಟ್ಯೂಬ್‍ನಲ್ಲಿ ಆಕಸ್ಮಿಕವಾಗಿ ಸಿಕ್ಕಿದ ಈ ಸಿನೆಮಾ ಮೊದಲ 15 ನಿಮಿಷದಲ್ಲೇ ಬೋರ್ ಅನ್ನಿಸಲಿಕ್ಕೆ ಶುರುವಾಯಿತು. 10 ನಿಮಿಷ ಸ್ಕಿಪ್ ಮಾಡಿದೆ. ನಂತರ ಎಷ್ಟು ಇಷ್ಟವಾಯಿತೆಂದರೆ ಪುನಃ ಮೊದಲಿಂದ ನೋಡಲು ಶುರು ಮಾಡಿದೆ. ಸಿನಿಮಾ ಮುಗಿಯುವ ಹೊತ್ತಿಗೆ ನಾನು ಬೇರೊಂದು ಲೋಕದಲ್ಲಿ ಕಳೆದುಹೋಗಿದ್ದೆ. ಮಾನವೀಯತೆಯ ಮಳೆಯನ್ನೇ ಸುರಿಸುವ ಇದರಲ್ಲಿ ನಾವು ತೋಯ್ದು ಹೋಗುತ್ತೇವೆ.

ಮೆಡಿಕಲ್ ಓದುವಾಗ ಧರ್ಮದುರೈಗೆ (ಸೇತುಪಥಿ) ಸ್ಟೆಲ್ಲಾ ಮತ್ತು ಶುಭಾ ಎಂಬ ಇಬ್ಬರು ಒಳ್ಳೆಯ ಸ್ನೇಹಿತರು. ಆ ಇಬ್ಬರಿಗೂ ಇವನ ಮೇಲೆ ಅವ್ಯಕ್ತ ಪ್ರೀತಿ. ಸಮಾಜಮುಖಿ ವೈದ್ಯರುಗಳು ಹೇಗಿರಬೇಕೆಂಬ ಪಾಠವನ್ನು ಅವರ ಗುರುಗಳಾದ ಡಾ.ಕಾಮರಾಜ್‍ರವರಿಂದ ಪಡೆದ ಧರ್ಮದುರೈ ತನ್ನೂರಲ್ಲಿ ಕ್ಲಿನಿಕ್ ಆರಂಭಿಸಿ ತನ್ನ ಕುಗ್ರಾಮ ಗ್ರಾಮದಲ್ಲಿ ವೈದ್ಯನಾಗಿ ಸೇವೆ ಸಲ್ಲಿಸಬೇಕೆಂಬ ಕನಸನ್ನು ನನಸಾಗಿಸಿಕೊಳ್ಳುತ್ತಾನೆ. ಧರ್ಮದುರೈಗೆ ತಾನು ಮೆಚ್ಚಿದ ಹುಡುಗಿಯನ್ನು ಮದುವೆಯಾಗಲು ವರದಕ್ಷಿಣೆಯ ಕಾರಣಕ್ಕೆ ತನ್ನ ಅಣ್ಣತಮ್ಮಂದಿರೇ ಅಡ್ಡಬರುತ್ತಾರೆ. ಆತನ ಪ್ರಿಯೆ ಬಡವರ ಮನೆಯ ಅನ್ಬುಸೆಲ್ವಿ ಮತ್ತು ಆಕೆಯ ತಂದೆ ಅವಮಾನ ತಾಳದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಧರ್ಮದುರೈ ಚಿತ್ರ

ಅಲ್ಲಿಂದ ಆತನದು ನಿರ್ಲಿಪ್ತಭಾವ. ಕುಡಿತ ಬಿಟ್ಟರೆ ತನಗೂ ಸಮಾಜಕ್ಕೂ ಸಂಬಂಧವಿಲ್ಲ. ಚೀಟಿ, ಬಡ್ಡಿ ವ್ಯವಹಾರ ಮಾಡುವ ಕುಟುಂಬವಾದರೂ ಧರ್ಮದುರೈಗೆ ಇದರಲ್ಲಿ ಯಾವುದೇ ಆಸಕ್ತಿ ಇಲ್ಲ. ಮನೆಯವರ ಕಾಟ ತಾಳಲಾರದೇ ತಪ್ಪಿಸಿಕೊಂಡು ಹೋಗುವ ಧರ್ಮದುರೈಗೆ ಸ್ಟೆಲ್ಲಾ ಸಾವಿನ ಸುದ್ದಿ ಅಪ್ಪಳಿಸುತ್ತದೆ. ನಂತರ ಶುಭಾ ಆತನನ್ನು ಕಾಪಿಟ್ಟು ಪೋಷಿಸುತ್ತಾಳೆ. ನಮ್ಮ ಬದುಕಿನ ಗುರಿಯೇನು? ಉದ್ದೇಶಗಳ ಕುರಿತು ಚರ್ಚಿಸುತ್ತಾರೆ. ನಂತರ ಅವರಿಬ್ಬರೂ ಒಟ್ಟು ಸೇರಿ ಬದುಕುವುದಲ್ಲದೇ ಅವರ ಗುರುಗಳ ಹೆಸರಿನಲ್ಲಿ ಆಸ್ಪತ್ರೆ ತೆರೆದು ಪ್ರೀತಿಯಿಂದ ಸೇವೆ ನೀಡುತ್ತಾರೆ. ಅಲ್ಲಿ ಟ್ರಾನ್ಸ್ ಜೆಂಡರ್ ಒಬ್ಬರನ್ನು ಕೆಲಸಕ್ಕೆ ನೇಮಿಸಿಕೊಂಡು ಮಾದರಿಯಾಗುತ್ತಾರೆ.

ಒಟ್ಟಾರೆ ಮನುಷ್ಯನ ಸಣ್ಣತನಗಳು, ಪ್ರೀತಿ, ಮಾದರಿ, ಸಮಾನತೆಯ ಭಾವ, ಮಾನವೀಯತೆಯ ಜೊತೆಗೆ ಸ್ಥಳೀಯ ತಮಿಳಿನ ಸೊಗಡು ಸಿನೆಮಾದಲ್ಲಿ ವ್ಯಕ್ತವಾಗುತ್ತದೆ. ಹಿರೋಗಳೆಂದರೆ ಬೆಳ್ಳಗೆ, ಸಿಕ್ಸ್‍ಪ್ಯಾಕ್ ದೇಹ, ಆಕರ್ಷಕ ಡ್ರೆಸ್ಸುಗಳಿಂದ ಮಿಂಚುವ ಮನೋಭಾವವಿರುವಾಗ ಇಲ್ಲಿ ಅವ್ಯಾವುವು ಇಲ್ಲದೇ ಕಪ್ಪುಬಣ್ಣದ, ದಪ್ಪದೇಹದ ಸೇತುಪಥಿ ನಟನೆಯೇ ನಮ್ಮನ್ನು ಮನಸೋರೆಗೊಳ್ಳುತ್ತದೆ.

ಇರೈವಿ ಚಿತ್ರದ ಪೋಸ್ಟರ್
ಪೆಣ್ಮೆರ್ಕು ಪರುವಾಕಾಟ್ರು ಸಿನಿಮಾದ ದೃಶ್ಯ

ಜೋರಾಗಿ ಮಳೆ ಬರುತ್ತಿರುತ್ತದೆ. ಬಡವರ ಮನೆಯ ಹುಡುಗಿ ತಾನು ಯಾರನ್ನಾದರೂ ಪ್ರೀತಿಸಿದರೆ ನಮ್ಮ ಮನೆಯವರು ಸುಮ್ಮನೇ ಬಿಡುತ್ತಾರಾ ಎಂದು ಸಹಪಾಠಿಗಳೊಂದಿಗೆ ಹೇಳುತ್ತಾಳೆ. ಅದೇ ಮಳೆ, ಇನ್ನೊಂದು ಕಡೆ ಶ್ರೀಮಂತ ಮನೆಯ ಹುಡುಗಿ ತಾನು ಇಷ್ಟಪಟ್ಟ ಪ್ರಖ್ಯಾತ ಸಿನೆಮಾ ನಿರ್ದೇಶಕನ ಜೊತೆ ಮದುವೆಯಾಗುವ ಸಂಭ್ರಮದಲ್ಲಿದ್ದಾಳೆ. ಅದಕ್ಕಾಗಿ ತನ್ನ ತಂದೆಯನ್ನು ಒಪ್ಪಿಸಲು ಪಟ್ಟ ಪರಿಪಾಡಲನ್ನು ಸ್ನೇಹಿತಳೊಂದಿಗೆ ವರ್ಣಿಸುತ್ತಿದ್ದಾಳೆ. ಹೀಗೆ ಆರಂಭವಾಗುವ ಇರೈವಿ ಸಿನೆಮಾ ಅಂತ್ಯದ ವೇಳೆಗೆ ದೀರ್ಘ ವಿಷಾದದೊಂದಿಗೆ ನಮ್ಮನ್ನು ಕಾಡುತ್ತದೆ.

ಅತುಲ್ ಪ್ರಖ್ಯಾತ ಸಿನೆಮಾ ನಿರ್ದೇಶಕ. ಶ್ರೀಮಂತ ಹುಡುಗಿಯನ್ನು ಮದುವೆಯಾಗುವ, ಒಬ್ಬ ಮಗಳಿರುವ ಈತ ಸಂಪೂರ್ಣ ಮದ್ಯವ್ಯಸನಿ. ಮುಂಗೋಪಿ ಮೈಕಲ್ ಪಾತ್ರದಲ್ಲಿ ವಿಜಯ್ ಸೇತುಪಥಿ ಬಡವರ ಮನೆಯ ಹುಡುಗಿಯನ್ನು ಬಲವಂತವಾಗಿ ಮದುವೆಯಾಗುತ್ತಾನೆ. ಈತನಿಗೂ ಒಬ್ಬ ಮಗಳಿರುತ್ತಾಳೆ. ಮೈಕಲ್, ಅತುಲ್ ಮತ್ತು ಆತನ ತಮ್ಮ ಜಗನ್ ಈ ಮೂವರ ನಡುವೆ ಗಾಢಸ್ನೇಹ. ಅತುಲ್ ಮತ್ತು ಮೈಕಲ್ ಅಪ್ಪಟ ಮನುಷ್ಯ ಪ್ರೀತಿಯ ಜೀವಗಳು. ಆದರೆ ಅವರ ಕುಡಿತ ಮತ್ತು ಮುಂಗೋಪ ಗುಣಗಳಿಂದ ಅವರು ಮಾಡುವ ಕೃತ್ಯಗಳು ಅವರನ್ನು ಮೇಲೇಳದಷ್ಟು ಪ್ರಪಾತಕ್ಕೆ ತಳ್ಳುತ್ತವೆ.

ಸೂಡು ಕವ್ವುಮ್ ಚಿತ್ರದಲ್ಲಿ

ಅತುಲ್ ಕುಡಿತದಿಂದ ಬೇಸತ್ತು ಡೈವೋರ್ಸ್ ನೀಡಿ ಬೇರೊಬ್ಬನನ್ನು ಪ್ರೀತಿಸಲು ಆತನ ಹೆಂಡತಿ ಹಲವು ಬಾರಿ ಬಯಸಿರುತ್ತಾಳೆ. ಕೊನೆಗೆ ಅತುಲ್ ತಾನು ಖಂಡಿತ ಬದಲಾಗುವುದಾಗಿಯೂ ಪ್ರತಿ ಸಲ ಒತ್ತಾಯ ಮಾಡಿ ಅದಕ್ಕೆ ಅವಕಾಶ ನೀಡುವುದಿಲ್ಲ. ಇತ್ತ ಅತುಲ್‍ಗಾಗಿ ಕೊಲೆಯೊಂದನ್ನು ಮಾಡಿ ಜೈಲು ಸೇರಿದ ಮೈಕಲ್ ಎರಡು ವರ್ಷದ ನಂತರ ಬಿಡುಗಡೆಯಾಗಿ ತನ್ನ ಹೆಂಡತಿಯೊಂದಿಗೆ ಸಹಜ ಪ್ರೀತಿಯಿಂದ ಹೊಸ ಜೀವನಕ್ಕೆ ಹಾತೊರೆಯುತ್ತಾನೆ. ಈ ಇಬ್ಬರು ಹೆಣ್ಣು ಮಕ್ಕಳು ತಮ್ಮ ಗಂಡಂದೀರು ಬದಲಾಗಲು ಬಹಳ ಅವಕಾಶಗಳನ್ನು ನೀಡುತ್ತಾ, ಹೊಸ ಬದುಕಿನ ಕನಸು ಕಾಣುತ್ತಾ. ಎಲ್ಲಾ ಕಷ್ಟಗಳನ್ನು ಸಹಿಸಿಕೊಳ್ಳುತ್ತಾರೆ.

ಆದರೆ ಅತುಲ್ ತಮ್ಮ ಜಗನ್ ಮಾತ್ರ ದುಷ್ಟತನಗಳ ಕೂಪ. ಕಳ್ಳತನ, ಕಂಡವರ ಹೆಂಡತಿಯ ಮೇಲಿನ ಮೋಹ, ಅಪರಿಮಿತ ಸ್ವಾರ್ಥದ ಕಾರಣಕ್ಕಾಗಿ ಆತ ಮೈಕಲ್ ನಿಂದಲೇ ಕೊಲೆಯಾಗುವ ಪರಿಸ್ಥಿತಿ ಬರುತ್ತದೆ. ಊರು ಬಿಡುವ ಮೈಕಲ್‍ನನ್ನು ತಮ್ಮನ ಸಾವಿನಿಂದ ಸಿಟ್ಟಿಗೇಳುವ ಅತುಲ್ ಕೊಂದು ಜೈಲು ಸೇರುತ್ತಾನೆ. ಮತ್ತೆ ಮಳೆ ಬರುತ್ತದೆ, ಇತ್ತ ಮೈಕಲ್ ಹೆಂಡತಿ ಬೀದಿ ಪಾಲಾಗುತ್ತಾಳೆ. ಅಪ್ಪ ಎಲ್ಲಿ ಎಂದು ಕೇಳುವ ತನ್ನ ಮಗಳಿಗೆ ಮಳೆಯಲ್ಲಿ ಆಡಲು ಹೇಳಿ ಕರೆದೊಯ್ಯುತ್ತಾಳೆ. ಅತ್ತ ಅತುಲ್ ಹೆಂಡತಿ ಸಹ ಮಾನಸಿಕವಾಗಿ ಖಿನ್ನಳಾಗುತ್ತಾಳೆ. ಮಳೆಯಲಿ ಆಡಲು ಬಯಸುವ ತನ್ನ ಮಗಳಿಗೆ ನಮ್ಮಂತವರು ಮಳೆಯಲ್ಲಿ ನೆನಯಬಾರದೆಂದು ದುಃಖದಿಂದ ಹೇಳುತ್ತಾಳೆ. ಅಲ್ಲಿಗೆ ಸಿನಿಮಾ ಮುಕ್ತಾಯವಾಗುತ್ತದೆ. ಅವರಿಬ್ಬರ ನಟನೆಯೇ ಸಿನಿಮಾದ ಜೀವಾಳವಾಗಿದೆ.

ಇದನ್ನು ಓದಿ: ಸತ್ಯಜಿತ್ ರೇ ರವರ ಜನ ಅರಣ್ಯ ಸಿನಿಮಾದ ಕುರಿತು

ಆದರೆ ಈ ಸಿನೆಮಾ ಹಲವು ಪ್ರಶ್ನೆಗಳನ್ನು ಉಳಿಸಿಹೋಗುತ್ತದೆ. ಮನುಷ್ಯನ ಕೋಪ-ತಾಪಗಳು ಎಂತಹ ದುರಂತ ತರುತ್ತವೆ ಎಂಬುದನ್ನು ತೋರಿಸುತ್ತದೆ. ಜೊತೆಗೆ ಎಲ್ಲವನ್ನು ಸಹಿಸುವ, ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವ ಮಹಿಳೆಯರ ಯಾತನೆಯನ್ನು ಸಮರ್ಥವಾಗಿ ಮಂಡಿಸುತ್ತದೆ.

ಕಾವನ್ ಚಿತ್ರದಲ್ಲಿ

ವಿಜಯ್ ಸೇತುಪಥಿ ಸಿನಿಮಾಗಳ ಕಥೆಯ ಆಯ್ಕೆಯೇ ವಿಶಿಷ್ಟವಾದದು. ಭ್ರಷ್ಟಾಚಾರಕ್ಕೆ ಇಂದಿನ ಸಮಾಜ ಒಗ್ಗಿಕೊಂಡಿರವ ಅಪಾಯದ ಕುರಿತು ವ್ಯಂಗ್ಯವಾಗಿ ಬಂದ ಅವರ ‘ಸೂಡುಕವ್ವಮ್’ ಸಿನಿಮಾವನ್ನು ಪಾಕಿಸ್ತಾನದಲ್ಲಿ ರೀಮೇಕ್ ಮಾಡಲಾಗಿದೆ ಅಂದರೆ ನೀವು ನಂಬಲೇಬೇಕು. ತೆಣ್ಮೆರ್ಕು ಪರವಾಕುಟ್ರು ಸಿನಿಮವು ಕುರಿ ಕಾಯುವ ತಾಯಿಯೊಬ್ಬಳ ದಿಟ್ಟ ಕಥೆ ಮತ್ತು ಆಕೆಯ ಮಗನ ಪ್ರೇಮಕಥೆಯಾದರೆ, ಕಾವನ್ ಮಾಧ್ಯಮ ಲೋಕದ ಭ್ರಷ್ಟತೆ ಮತ್ತು ಪರ್ಯಾಯ ಮಾಧ್ಯಮಗಳ ಕುರಿತು ಮಾತನಾಡುತ್ತದೆ. ಕೇವಲ ಸಿನಿಮಾ ಮಾತ್ರವಲ್ಲದೇ ಸಾಮಾಜಿಕ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿರುವ ಸೇತುಪಥಿ ಸಿನಿಮಾಗಳನ್ನೊಮ್ಮೆ ನೋಡಿ. ಜೀವನ ಪ್ರೀತಿಯನ್ನು ಅನುಭವಿಸಿ.

ಸಿನೆಮಾ ಎಂದರೆ ಒಂದು ಕಥೆ ಹೇಳುವ ಮಾಧ್ಯಮ – ಮೈಕೆಲ್ ಹಾನೆಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...