Homeಮುಖಪುಟಸಾಮಾಜಿಕ ಸಂವೇದನೆಯ ಸೂಕ್ಷ್ಮ ನಟ ವಿಜಯ್ ಸೇತುಪಥಿ

ಸಾಮಾಜಿಕ ಸಂವೇದನೆಯ ಸೂಕ್ಷ್ಮ ನಟ ವಿಜಯ್ ಸೇತುಪಥಿ

ಧರ್ಮದುರೈ, ಇರೈವಿ, ಸೂಡು ಕವ್ವುಮ್, ತೆಣ್ಮೆರ್ಕು ಪರವಾಕುಟ್ರು, ಕಾವನ್ ಅದ್ಭುತ ಎನಿಸುವ ಪ್ರಮುಖ ಚಿತ್ರಗಳು

- Advertisement -
- Advertisement -

| ಮುತ್ತುರಾಜು |

‘ವಿಕ್ರಂವೇದ’ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಸೂಪರ್ ಡೂಪರ್ ಹಿಟ್ ಆದ ಚಿತ್ರ. ಸಸ್ಪೆನ್ಸ್, ಥ್ರಿಲ್ಲರ್, ಆಕ್ಷನ್ ಮೂರನ್ನೂ ಒಳಗೊಂಡ ಈ ಚಿತ್ರ ಪ್ರೊಫೆಶನಲ್ ಎಥಿಕ್ಸ್ ಬಗ್ಗೆಯೂ ಮಾತಾಡುತ್ತದೆ. ಬಾಕ್ಸ್ ಆಫೀಸ್‍ನಲ್ಲಿ ಸಾಕಷ್ಟು ಹಣ ಮಾಡಿದ ಈ ಚಿತ್ರದಲ್ಲಿ ವಿಜಯ್ ಸೇತುಪಥಿಯ ನಟನೆ, ಮ್ಯಾನರಿಸಂ ಎಲ್ಲರ ಗಮನ ಸೆಳೆಯಿತು. ಇತ್ತಿಚೇಗೆ ಬಿಡುಗಡೆಯಾದ ನವಿರು ಪ್ರೇಮಕಥೆಯ ತಮಿಳಿನ ’96 ಸಹ ಎಲ್ಲರ ಮನಗೆದ್ದ ಚಿತ್ರ.

ವಿಕ್ರಂವೇದ ಚಿತ್ರದಲ್ಲಿ
’96 ಚಿತ್ರದ ದೃಶ್ಯ

ಆದರೆ ವಿಜಯ್ ಸೇತುಪಥಿ ಏನು ಎನ್ನುವುದನ್ನು ಈ ಚಿತ್ರಗಳು ಹೇಳುವುದಿಲ್ಲ. ತಮಿಳಿನಲ್ಲಿ ಬಂದಿರುವ ಕಡಿಮೆ ಬಜೆಟ್‍ನ ಹತ್ತಾರು ಸಾಮಾಜಿಕ ತುಡಿತದ ಸಿನೆಮಾಗಳು ಅವರನ್ನು ಸಂಪೂರ್ಣ ಅರ್ಥ ಮಾಡಿಸುತ್ತವೆ. ಒಂದೊಂದು ಸಿನೆಮಾಗಳು ಒಂದೊಂದು ಲೋಕವನ್ನು ನಮ್ಮೆದೆರು ತೆರೆದಿಡುತ್ತವೆ. ಅವುಗಳನ್ನು ನೋಡುತ್ತಿದ್ದಂತೆಯೇ ಅವರ ಬಗ್ಗೆ ನಮ್ಮಲ್ಲಿ ಗೌರವದ ಭಾವನೆ ಮೂಡಿಸುತ್ತವೆ. ಧರ್ಮದುರೈ, ಇರೈವಿ, ಸೂಡು ಕವ್ವುಮ್, ತೆಣ್ಮೆರ್ಕು ಪರವಾಕುಟ್ರು, ಕಾವನ್ ಅಂತಹ ಸಾಲಿಗೆ ಸೇರುವ ಪ್ರಮುಖ ಚಿತ್ರಗಳು.

ಸೇತುಪಥಿ ಅಭಿನಯದ ನಾನು ಮೊದಲು ನೋಡಿದ ಚಿತ್ರ ಧರ್ಮದುರೈ. ಯೂ ಟ್ಯೂಬ್‍ನಲ್ಲಿ ಆಕಸ್ಮಿಕವಾಗಿ ಸಿಕ್ಕಿದ ಈ ಸಿನೆಮಾ ಮೊದಲ 15 ನಿಮಿಷದಲ್ಲೇ ಬೋರ್ ಅನ್ನಿಸಲಿಕ್ಕೆ ಶುರುವಾಯಿತು. 10 ನಿಮಿಷ ಸ್ಕಿಪ್ ಮಾಡಿದೆ. ನಂತರ ಎಷ್ಟು ಇಷ್ಟವಾಯಿತೆಂದರೆ ಪುನಃ ಮೊದಲಿಂದ ನೋಡಲು ಶುರು ಮಾಡಿದೆ. ಸಿನಿಮಾ ಮುಗಿಯುವ ಹೊತ್ತಿಗೆ ನಾನು ಬೇರೊಂದು ಲೋಕದಲ್ಲಿ ಕಳೆದುಹೋಗಿದ್ದೆ. ಮಾನವೀಯತೆಯ ಮಳೆಯನ್ನೇ ಸುರಿಸುವ ಇದರಲ್ಲಿ ನಾವು ತೋಯ್ದು ಹೋಗುತ್ತೇವೆ.

ಮೆಡಿಕಲ್ ಓದುವಾಗ ಧರ್ಮದುರೈಗೆ (ಸೇತುಪಥಿ) ಸ್ಟೆಲ್ಲಾ ಮತ್ತು ಶುಭಾ ಎಂಬ ಇಬ್ಬರು ಒಳ್ಳೆಯ ಸ್ನೇಹಿತರು. ಆ ಇಬ್ಬರಿಗೂ ಇವನ ಮೇಲೆ ಅವ್ಯಕ್ತ ಪ್ರೀತಿ. ಸಮಾಜಮುಖಿ ವೈದ್ಯರುಗಳು ಹೇಗಿರಬೇಕೆಂಬ ಪಾಠವನ್ನು ಅವರ ಗುರುಗಳಾದ ಡಾ.ಕಾಮರಾಜ್‍ರವರಿಂದ ಪಡೆದ ಧರ್ಮದುರೈ ತನ್ನೂರಲ್ಲಿ ಕ್ಲಿನಿಕ್ ಆರಂಭಿಸಿ ತನ್ನ ಕುಗ್ರಾಮ ಗ್ರಾಮದಲ್ಲಿ ವೈದ್ಯನಾಗಿ ಸೇವೆ ಸಲ್ಲಿಸಬೇಕೆಂಬ ಕನಸನ್ನು ನನಸಾಗಿಸಿಕೊಳ್ಳುತ್ತಾನೆ. ಧರ್ಮದುರೈಗೆ ತಾನು ಮೆಚ್ಚಿದ ಹುಡುಗಿಯನ್ನು ಮದುವೆಯಾಗಲು ವರದಕ್ಷಿಣೆಯ ಕಾರಣಕ್ಕೆ ತನ್ನ ಅಣ್ಣತಮ್ಮಂದಿರೇ ಅಡ್ಡಬರುತ್ತಾರೆ. ಆತನ ಪ್ರಿಯೆ ಬಡವರ ಮನೆಯ ಅನ್ಬುಸೆಲ್ವಿ ಮತ್ತು ಆಕೆಯ ತಂದೆ ಅವಮಾನ ತಾಳದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಧರ್ಮದುರೈ ಚಿತ್ರ

ಅಲ್ಲಿಂದ ಆತನದು ನಿರ್ಲಿಪ್ತಭಾವ. ಕುಡಿತ ಬಿಟ್ಟರೆ ತನಗೂ ಸಮಾಜಕ್ಕೂ ಸಂಬಂಧವಿಲ್ಲ. ಚೀಟಿ, ಬಡ್ಡಿ ವ್ಯವಹಾರ ಮಾಡುವ ಕುಟುಂಬವಾದರೂ ಧರ್ಮದುರೈಗೆ ಇದರಲ್ಲಿ ಯಾವುದೇ ಆಸಕ್ತಿ ಇಲ್ಲ. ಮನೆಯವರ ಕಾಟ ತಾಳಲಾರದೇ ತಪ್ಪಿಸಿಕೊಂಡು ಹೋಗುವ ಧರ್ಮದುರೈಗೆ ಸ್ಟೆಲ್ಲಾ ಸಾವಿನ ಸುದ್ದಿ ಅಪ್ಪಳಿಸುತ್ತದೆ. ನಂತರ ಶುಭಾ ಆತನನ್ನು ಕಾಪಿಟ್ಟು ಪೋಷಿಸುತ್ತಾಳೆ. ನಮ್ಮ ಬದುಕಿನ ಗುರಿಯೇನು? ಉದ್ದೇಶಗಳ ಕುರಿತು ಚರ್ಚಿಸುತ್ತಾರೆ. ನಂತರ ಅವರಿಬ್ಬರೂ ಒಟ್ಟು ಸೇರಿ ಬದುಕುವುದಲ್ಲದೇ ಅವರ ಗುರುಗಳ ಹೆಸರಿನಲ್ಲಿ ಆಸ್ಪತ್ರೆ ತೆರೆದು ಪ್ರೀತಿಯಿಂದ ಸೇವೆ ನೀಡುತ್ತಾರೆ. ಅಲ್ಲಿ ಟ್ರಾನ್ಸ್ ಜೆಂಡರ್ ಒಬ್ಬರನ್ನು ಕೆಲಸಕ್ಕೆ ನೇಮಿಸಿಕೊಂಡು ಮಾದರಿಯಾಗುತ್ತಾರೆ.

ಒಟ್ಟಾರೆ ಮನುಷ್ಯನ ಸಣ್ಣತನಗಳು, ಪ್ರೀತಿ, ಮಾದರಿ, ಸಮಾನತೆಯ ಭಾವ, ಮಾನವೀಯತೆಯ ಜೊತೆಗೆ ಸ್ಥಳೀಯ ತಮಿಳಿನ ಸೊಗಡು ಸಿನೆಮಾದಲ್ಲಿ ವ್ಯಕ್ತವಾಗುತ್ತದೆ. ಹಿರೋಗಳೆಂದರೆ ಬೆಳ್ಳಗೆ, ಸಿಕ್ಸ್‍ಪ್ಯಾಕ್ ದೇಹ, ಆಕರ್ಷಕ ಡ್ರೆಸ್ಸುಗಳಿಂದ ಮಿಂಚುವ ಮನೋಭಾವವಿರುವಾಗ ಇಲ್ಲಿ ಅವ್ಯಾವುವು ಇಲ್ಲದೇ ಕಪ್ಪುಬಣ್ಣದ, ದಪ್ಪದೇಹದ ಸೇತುಪಥಿ ನಟನೆಯೇ ನಮ್ಮನ್ನು ಮನಸೋರೆಗೊಳ್ಳುತ್ತದೆ.

ಇರೈವಿ ಚಿತ್ರದ ಪೋಸ್ಟರ್
ಪೆಣ್ಮೆರ್ಕು ಪರುವಾಕಾಟ್ರು ಸಿನಿಮಾದ ದೃಶ್ಯ

ಜೋರಾಗಿ ಮಳೆ ಬರುತ್ತಿರುತ್ತದೆ. ಬಡವರ ಮನೆಯ ಹುಡುಗಿ ತಾನು ಯಾರನ್ನಾದರೂ ಪ್ರೀತಿಸಿದರೆ ನಮ್ಮ ಮನೆಯವರು ಸುಮ್ಮನೇ ಬಿಡುತ್ತಾರಾ ಎಂದು ಸಹಪಾಠಿಗಳೊಂದಿಗೆ ಹೇಳುತ್ತಾಳೆ. ಅದೇ ಮಳೆ, ಇನ್ನೊಂದು ಕಡೆ ಶ್ರೀಮಂತ ಮನೆಯ ಹುಡುಗಿ ತಾನು ಇಷ್ಟಪಟ್ಟ ಪ್ರಖ್ಯಾತ ಸಿನೆಮಾ ನಿರ್ದೇಶಕನ ಜೊತೆ ಮದುವೆಯಾಗುವ ಸಂಭ್ರಮದಲ್ಲಿದ್ದಾಳೆ. ಅದಕ್ಕಾಗಿ ತನ್ನ ತಂದೆಯನ್ನು ಒಪ್ಪಿಸಲು ಪಟ್ಟ ಪರಿಪಾಡಲನ್ನು ಸ್ನೇಹಿತಳೊಂದಿಗೆ ವರ್ಣಿಸುತ್ತಿದ್ದಾಳೆ. ಹೀಗೆ ಆರಂಭವಾಗುವ ಇರೈವಿ ಸಿನೆಮಾ ಅಂತ್ಯದ ವೇಳೆಗೆ ದೀರ್ಘ ವಿಷಾದದೊಂದಿಗೆ ನಮ್ಮನ್ನು ಕಾಡುತ್ತದೆ.

ಅತುಲ್ ಪ್ರಖ್ಯಾತ ಸಿನೆಮಾ ನಿರ್ದೇಶಕ. ಶ್ರೀಮಂತ ಹುಡುಗಿಯನ್ನು ಮದುವೆಯಾಗುವ, ಒಬ್ಬ ಮಗಳಿರುವ ಈತ ಸಂಪೂರ್ಣ ಮದ್ಯವ್ಯಸನಿ. ಮುಂಗೋಪಿ ಮೈಕಲ್ ಪಾತ್ರದಲ್ಲಿ ವಿಜಯ್ ಸೇತುಪಥಿ ಬಡವರ ಮನೆಯ ಹುಡುಗಿಯನ್ನು ಬಲವಂತವಾಗಿ ಮದುವೆಯಾಗುತ್ತಾನೆ. ಈತನಿಗೂ ಒಬ್ಬ ಮಗಳಿರುತ್ತಾಳೆ. ಮೈಕಲ್, ಅತುಲ್ ಮತ್ತು ಆತನ ತಮ್ಮ ಜಗನ್ ಈ ಮೂವರ ನಡುವೆ ಗಾಢಸ್ನೇಹ. ಅತುಲ್ ಮತ್ತು ಮೈಕಲ್ ಅಪ್ಪಟ ಮನುಷ್ಯ ಪ್ರೀತಿಯ ಜೀವಗಳು. ಆದರೆ ಅವರ ಕುಡಿತ ಮತ್ತು ಮುಂಗೋಪ ಗುಣಗಳಿಂದ ಅವರು ಮಾಡುವ ಕೃತ್ಯಗಳು ಅವರನ್ನು ಮೇಲೇಳದಷ್ಟು ಪ್ರಪಾತಕ್ಕೆ ತಳ್ಳುತ್ತವೆ.

ಸೂಡು ಕವ್ವುಮ್ ಚಿತ್ರದಲ್ಲಿ

ಅತುಲ್ ಕುಡಿತದಿಂದ ಬೇಸತ್ತು ಡೈವೋರ್ಸ್ ನೀಡಿ ಬೇರೊಬ್ಬನನ್ನು ಪ್ರೀತಿಸಲು ಆತನ ಹೆಂಡತಿ ಹಲವು ಬಾರಿ ಬಯಸಿರುತ್ತಾಳೆ. ಕೊನೆಗೆ ಅತುಲ್ ತಾನು ಖಂಡಿತ ಬದಲಾಗುವುದಾಗಿಯೂ ಪ್ರತಿ ಸಲ ಒತ್ತಾಯ ಮಾಡಿ ಅದಕ್ಕೆ ಅವಕಾಶ ನೀಡುವುದಿಲ್ಲ. ಇತ್ತ ಅತುಲ್‍ಗಾಗಿ ಕೊಲೆಯೊಂದನ್ನು ಮಾಡಿ ಜೈಲು ಸೇರಿದ ಮೈಕಲ್ ಎರಡು ವರ್ಷದ ನಂತರ ಬಿಡುಗಡೆಯಾಗಿ ತನ್ನ ಹೆಂಡತಿಯೊಂದಿಗೆ ಸಹಜ ಪ್ರೀತಿಯಿಂದ ಹೊಸ ಜೀವನಕ್ಕೆ ಹಾತೊರೆಯುತ್ತಾನೆ. ಈ ಇಬ್ಬರು ಹೆಣ್ಣು ಮಕ್ಕಳು ತಮ್ಮ ಗಂಡಂದೀರು ಬದಲಾಗಲು ಬಹಳ ಅವಕಾಶಗಳನ್ನು ನೀಡುತ್ತಾ, ಹೊಸ ಬದುಕಿನ ಕನಸು ಕಾಣುತ್ತಾ. ಎಲ್ಲಾ ಕಷ್ಟಗಳನ್ನು ಸಹಿಸಿಕೊಳ್ಳುತ್ತಾರೆ.

ಆದರೆ ಅತುಲ್ ತಮ್ಮ ಜಗನ್ ಮಾತ್ರ ದುಷ್ಟತನಗಳ ಕೂಪ. ಕಳ್ಳತನ, ಕಂಡವರ ಹೆಂಡತಿಯ ಮೇಲಿನ ಮೋಹ, ಅಪರಿಮಿತ ಸ್ವಾರ್ಥದ ಕಾರಣಕ್ಕಾಗಿ ಆತ ಮೈಕಲ್ ನಿಂದಲೇ ಕೊಲೆಯಾಗುವ ಪರಿಸ್ಥಿತಿ ಬರುತ್ತದೆ. ಊರು ಬಿಡುವ ಮೈಕಲ್‍ನನ್ನು ತಮ್ಮನ ಸಾವಿನಿಂದ ಸಿಟ್ಟಿಗೇಳುವ ಅತುಲ್ ಕೊಂದು ಜೈಲು ಸೇರುತ್ತಾನೆ. ಮತ್ತೆ ಮಳೆ ಬರುತ್ತದೆ, ಇತ್ತ ಮೈಕಲ್ ಹೆಂಡತಿ ಬೀದಿ ಪಾಲಾಗುತ್ತಾಳೆ. ಅಪ್ಪ ಎಲ್ಲಿ ಎಂದು ಕೇಳುವ ತನ್ನ ಮಗಳಿಗೆ ಮಳೆಯಲ್ಲಿ ಆಡಲು ಹೇಳಿ ಕರೆದೊಯ್ಯುತ್ತಾಳೆ. ಅತ್ತ ಅತುಲ್ ಹೆಂಡತಿ ಸಹ ಮಾನಸಿಕವಾಗಿ ಖಿನ್ನಳಾಗುತ್ತಾಳೆ. ಮಳೆಯಲಿ ಆಡಲು ಬಯಸುವ ತನ್ನ ಮಗಳಿಗೆ ನಮ್ಮಂತವರು ಮಳೆಯಲ್ಲಿ ನೆನಯಬಾರದೆಂದು ದುಃಖದಿಂದ ಹೇಳುತ್ತಾಳೆ. ಅಲ್ಲಿಗೆ ಸಿನಿಮಾ ಮುಕ್ತಾಯವಾಗುತ್ತದೆ. ಅವರಿಬ್ಬರ ನಟನೆಯೇ ಸಿನಿಮಾದ ಜೀವಾಳವಾಗಿದೆ.

ಇದನ್ನು ಓದಿ: ಸತ್ಯಜಿತ್ ರೇ ರವರ ಜನ ಅರಣ್ಯ ಸಿನಿಮಾದ ಕುರಿತು

ಆದರೆ ಈ ಸಿನೆಮಾ ಹಲವು ಪ್ರಶ್ನೆಗಳನ್ನು ಉಳಿಸಿಹೋಗುತ್ತದೆ. ಮನುಷ್ಯನ ಕೋಪ-ತಾಪಗಳು ಎಂತಹ ದುರಂತ ತರುತ್ತವೆ ಎಂಬುದನ್ನು ತೋರಿಸುತ್ತದೆ. ಜೊತೆಗೆ ಎಲ್ಲವನ್ನು ಸಹಿಸುವ, ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವ ಮಹಿಳೆಯರ ಯಾತನೆಯನ್ನು ಸಮರ್ಥವಾಗಿ ಮಂಡಿಸುತ್ತದೆ.

ಕಾವನ್ ಚಿತ್ರದಲ್ಲಿ

ವಿಜಯ್ ಸೇತುಪಥಿ ಸಿನಿಮಾಗಳ ಕಥೆಯ ಆಯ್ಕೆಯೇ ವಿಶಿಷ್ಟವಾದದು. ಭ್ರಷ್ಟಾಚಾರಕ್ಕೆ ಇಂದಿನ ಸಮಾಜ ಒಗ್ಗಿಕೊಂಡಿರವ ಅಪಾಯದ ಕುರಿತು ವ್ಯಂಗ್ಯವಾಗಿ ಬಂದ ಅವರ ‘ಸೂಡುಕವ್ವಮ್’ ಸಿನಿಮಾವನ್ನು ಪಾಕಿಸ್ತಾನದಲ್ಲಿ ರೀಮೇಕ್ ಮಾಡಲಾಗಿದೆ ಅಂದರೆ ನೀವು ನಂಬಲೇಬೇಕು. ತೆಣ್ಮೆರ್ಕು ಪರವಾಕುಟ್ರು ಸಿನಿಮವು ಕುರಿ ಕಾಯುವ ತಾಯಿಯೊಬ್ಬಳ ದಿಟ್ಟ ಕಥೆ ಮತ್ತು ಆಕೆಯ ಮಗನ ಪ್ರೇಮಕಥೆಯಾದರೆ, ಕಾವನ್ ಮಾಧ್ಯಮ ಲೋಕದ ಭ್ರಷ್ಟತೆ ಮತ್ತು ಪರ್ಯಾಯ ಮಾಧ್ಯಮಗಳ ಕುರಿತು ಮಾತನಾಡುತ್ತದೆ. ಕೇವಲ ಸಿನಿಮಾ ಮಾತ್ರವಲ್ಲದೇ ಸಾಮಾಜಿಕ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿರುವ ಸೇತುಪಥಿ ಸಿನಿಮಾಗಳನ್ನೊಮ್ಮೆ ನೋಡಿ. ಜೀವನ ಪ್ರೀತಿಯನ್ನು ಅನುಭವಿಸಿ.

ಸಿನೆಮಾ ಎಂದರೆ ಒಂದು ಕಥೆ ಹೇಳುವ ಮಾಧ್ಯಮ – ಮೈಕೆಲ್ ಹಾನೆಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...