HomeUncategorized"ವಿಷಯಾಂತರ" ಸಣ್ಣ ಕತೆ...

“ವಿಷಯಾಂತರ” ಸಣ್ಣ ಕತೆ…

- Advertisement -
- Advertisement -

ತುಮಕೂರಿನ ಒಂದು ರಸ್ತೆ. ರಸ್ತೆ ಬದಿಯಲ್ಲಿ ದೊಂಬರಾಟ ನಡೆಯುತ್ತಿತ್ತು. ಒಬ್ಬ ವ್ಯಕ್ತಿ ಒಂದು ಉದ್ದದ ಕಟ್ಟಿಗೆಯ ಕಂಬವೊಂದನ್ನು ತನ್ನ ಬಾಯಲ್ಲಿ ಎತ್ತಿಹಿಡಿದಿದ್ದ. ಆ ಕೋಲಿನ ತುದಿಯಲ್ಲಿ ಒಂದು ಪುಟ್ಟ ಮಗು, ಒಂದು ವರ್ಷದ್ದಿರಬಹುದು. ಆ ಮಗುವನ್ನು ಕೋಲಿನ ತುದಿಯಲ್ಲಿ ಇರಿಸಿ ಬ್ಯಾಲೆನ್ಸ್ ಮಾಡಿದ. ಸುತ್ತ ಒಂದು ಹದಿನೈದು ಜನರು ನೋಡುತ್ತಿದ್ದರು. ಆ ಕೋಲನ್ನು ಸಾವಕಾಶವಾಗಿ ಕೆಳಗಿಳಿಸಿ ಮಗುವನ್ನು ಹಿಡಿದುಕೊಂಡ. ಪುಟ್ಟ ಬಾಲಕಿಯೊಬ್ಬಳು ತಂತಿಯ ಮೇಲೆ ನಡೆದು ತನ್ನ ಬ್ಯಾಲೆನ್ಸ್ ಪ್ರದರ್ಶಿಸಿದಳು. ಆ ವ್ಯಕ್ತಿ ಅವಳು ನಡೆದಾಡುತ್ತಿದ್ದಂತೆ ಕೆಳಗಿನಿಂದ ಹಿಂಬಾಲಿಸುತ್ತಿದ್ದ. ತನ್ನ ನಡೆದಾಟವನ್ನು ಯಶಸ್ವಿಯಾಗಿ ಮುಗಿಸಿ ಕೆಳಗಿಳಿದಳು. ಅಷ್ಟರಲ್ಲಿ ಒಬ್ಬ ಮಧ್ಯವಯಸ್ಕ ವ್ಯಕ್ತಿಯೂ ನೋಡುಗರಲ್ಲಿ ಬಂದು ಸೇರಿದ್ದ. ಅವನು ನೋಡುಗರ ಕಡೆ ಒಂದು ಸಲ ಕಣ್ಣಾಡಿಸಿದ. ನೋಡುಗರಲ್ಲಿ ಅಷ್ಟೇನೂ ಉತ್ಸಾಹ ಕಂಡುಬರುತ್ತಿರಲಿಲ್ಲ. ಒಂದೆರಡು ಚಪ್ಪಾಳೆ ಕೇಳಿತೇನೋ ಎನ್ನುವಷ್ಟು ಕಡಿಮೆಯಾಗಿತ್ತು ನೋಡುಗರ ಉತ್ಸಾಹ. ದೊಂಬರಾಟ ಮಾಡುವ ಜನರಿಗೂ ಉತ್ಸಾಹದ ಕೊರತೆ ಕಾಣಿಸಿತ್ತೋ ಇಲ್ಲವೋ, ಅವರು ತಮ್ಮ ಆಟವನ್ನು ಮುಂದುವರೆಸಿದರು. ಇತ್ತ ರಸ್ತೆಯಲ್ಲಿ ಹೆಚ್ಚಿನ ಜನರು ತಮ್ಮ ಸಂಚಾರವನ್ನು ಮುಂದುವರೆಸಿದ್ದರು. ನಡೆದುಕೊಂಡು ಹೋಗುವವರು ಒಂದು ಸಲ ಕಣ್ಣು ಹಾಯಿಸಿ ಮುಂದುಹೋದರೆ, ವಾಹನದಲ್ಲಿರುವವರಿಗೆ ಈ ಆಟ ಕಾಣಲೇ ಇಲ್ಲ.

ಬಾಲಕಿ ಕೆಳಗಿಳಿದ ಮೇಲೆ, ದೊಂಬರಾಟದ ಆ ವ್ಯಕ್ತಿ ಹಣ ಸಂಗ್ರಹಿಸಲು ಆರಂಭಿಸಿದ. ನೋಡುಗರಾರೂ ಸ್ಥಿತಿವಂತರಂತೆ ಕಾಣುತ್ತಿರಲಿಲ್ಲ. ಆದರೂ ಕೆಲವರು ಐದು, ಹತ್ತು ರೂಪಾಯಿಗಳನ್ನು ಆ ವ್ಯಕ್ತಿಯ ಕೈಗಿಟ್ಟರು. ಒಂದು ಬ್ಯಾಗ್ ಅನ್ನು ಹೆಗಲಿಗೆ ಹಾಕಿ ನಿಂತಿದ್ದ ಮಧ್ಯ ವಯಸ್ಕ ವ್ಯಕ್ತಿಯ ಹತ್ತಿರ ದೊಂಬರಾಟದವನು ಬಂದ. ಆಗ ಆ ಮಧ್ಯವಯಸ್ಕ ವ್ಯಕ್ತಿ ನೂರರ ಒಂದು ನೋಟನ್ನು ಇತರರಿಗೆ ಕಾಣದಂತೆ ಕೈಗಿತ್ತ. ದೊಂಬರಾಟದವನು ಒಂದುಕ್ಷಣ ಅನುಮಾನದಿಂದ ನೋಡಿದ. ಈವಯ್ಯ ನೂರರ ನೋಟನ್ನು ಕೊಟ್ಟು ತೊಂಬತ್ತು ರೂಪಾಯಿ ಕೇಳುವನೋ ಎನ್ನುವಂತಿತ್ತು ಅವನ ನೋಟ. ಮಧ್ಯವಯಸ್ಕ ವ್ಯಕ್ತಿ ಒಂದುಕ್ಷಣ ತಡವರಿಸಿ ದೊಂಬರಾಟದವನ ಹತ್ತಿರಕ್ಕೆ ಬಂದು ಅವನನ್ನು ಅಪ್ಪಿಕೊಂಡ. ಅಪ್ಪಿಕೊಳ್ಳಲು ಹೊರಟಾಗ ಕಂಡ ಹಿಂಜರಿಕೆ ಅಪ್ಪಿಕೊಂಡಾಗ ಇರಲಿಲ್ಲ. ದೊಂಬರಾಟದವನೂ ಈ ಅಪರಿಚಿತ ವ್ಯಕ್ತಿಯ ಅಪ್ಪುಗೆಯನ್ನು ಸಹಜವೆಂಬಂತೆ ಸ್ವೀಕರಿಸಿದ.

ದೊಂಬರಾಟದವನ ಹೆಂಗಸು, ಅಪರಿಚಿತ ವ್ಯಕ್ತಿಯ ಕಣ್ಣಲ್ಲಿ ನೀರು ಜಿನುಗಿದ್ದು ಕಂಡಳು. ಇವನು ತಾನು ಭಾವುಕನಾದದ್ದು ಗೊತ್ತಾದೊಡನೇ ಸಾವರಿಸಿಕೊಂಡು ಮುಗುಳ್ನಕ್ಕ. ಹನಿ ಜಿನುಗತೊಡಗಿ ಅಲ್ಲಿಯ ಜನರು ಕಾಲ್ಕೀಳಲು ಶುರು ಮಾಡಿದರು. ಮಧ್ಯವಯಸ್ಕ ವ್ಯಕ್ತಿಯೂ ಹೊರಡಲು ಅಣಿಯಾದ. ‘ಒಂದೀಟು ಚಾ ಕುಡುದು ಹೋಗಣ್ಣ’ ಹೆಣ್ಣಿನ ಧ್ವನಿ ಕೇಳಿತು; ದೊಂಬರಾಟದ ಹೆಂಗಸು. ಹೊರಡಲು ಅಣಿಯಾದ ಮಧ್ಯವಯಸ್ಕ ವ್ಯಕ್ತಿ ನಿಂತ. ಪಕ್ಕದಲ್ಲಿಯ ಚಾದಂಗಡಿಯಲ್ಲಿ ಎಲ್ಲರೂ ಸೇರಿದರು. ‘ಎಲ್ಲರಿಗೂ ಚಾ ಕೊಡು’ ಎಂದು ಆದೇಶಿಸಿದ ಮಧ್ಯವಯಸ್ಕ ವ್ಯಕ್ತಿ. ಅಲ್ಲಿಯೇ ಇದ್ದ ಒಂದು ಕಟ್ಟಿಗೆಯ ಬೆಂಚಿನ ಮೇಲೆ ಕುಳಿತುಕೊಂಡ. ದೊಂಬರಾಟದವನೂ ಆ ಬೆಂಚಿನ ಇನ್ನೊಂದು ತುದಿಯಲ್ಲಿ ಕುಳಿತ. ಹೆಂಗಸು, ಮಗುವನ್ನು ತೊಡೆಯ ಮೇಲಿರಿಸಿ ನೆಲದ ಮೇಲೆ ಕುಳಿತು ಚಾ ಕುಡಿಯತೊಡಗಿದಳು. ಬಾಲಕಿ ಚಾ ಕುಡಿಯುತ್ತ ಈ ಅಪರಿಚಿತ ವ್ಯಕ್ತಿಯನ್ನು ನೋಡುತ್ತಿದ್ದಳು.

ದೊಂಬರಾಟದವ ಮತ್ತು ಮಧ್ಯವಯಸ್ಕ ಇಬ್ಬರೂ ಪರಸ್ಪರ ನೋಡಿದರು. ದೊಂಬರಾಟದವನು ಒಂದು ಮಾಸಿದ ಬನಿಯನ್ನು, ಒಂದು ಹಳೆಯ ಪ್ಯಾಂಟ್ ಹಾಕಿಕೊಂಡಿದ್ದ. ಸುಮಾರು ಮೂವತ್ತು ವಯಸ್ಸಾಗಿರಬಹುದು ಆದರೆ ನಲವತ್ತರ ಅಂಚಿನಲ್ಲಿದ್ದಂತೆ ಕಾಣುತ್ತಿದ್ದ. ಜೀವನವಿಡೀ ದೈಹಿಕ ಶ್ರಮ ಮಾಡಿದ್ದು ಒಂದು ಸಲ ನೋಡಿದರೇ ಗೊತ್ತಾಗುತ್ತಿತ್ತು. ಶುಭ್ರವಾದ ಅಂಗಿ, ಕರಿ ಶೂಸ್, ಕರಿ ಪ್ಯಾಂಟ್ ಹಾಕಿಕೊಂಡಿದ್ದ ಈ ಮಧ್ಯವಯಸ್ಕ ವ್ಯಕ್ತಿ ಚಾ ಬಿಸಿಯಾಗಿದ್ದರೂ ಬೇಗ ಬೇಗ ಕುಡಿಯುತ್ತಿದ್ದ. ಒಂದು ರೀತಿಯ ಮುಜುಗರ ಎದ್ದು ಕಾಣುತ್ತಿತ್ತು. ಈಗತಾನೆ ತಂತಿಯ ಮೇಲೆ ನಡೆದ ಬಾಲಕಿ ತನ್ನ ಕಡೆ ನೋಡುತ್ತಿದ್ದನ್ನು ಗಮನಿಸಿ ಮುಗುಳ್ನಕ್ಕ. ‘ಯಾವೂರು ನಿಮ್ದು?’ ಕೇಳಿದ ದೊಂಬರಾಟದವ. ‘ಮೈಸೂರು’ ಎಂದು ತಡವರಿಸಿ ಉತ್ತರ ಬಂತು. ಚಾ ಗ್ಲಾಸು ಖಾಲಿಯಾದೊಡನೇ ಐವತ್ತು ರೂಪಾಯಿಗಳನ್ನು ಚಾದಂಗಡಿಯವನ ಕೈಗಿತ್ತು, ‘ಬರ್ತೀನಿ’ ಎಂದು ಎದ್ದು ಹೊರಟ. ಮಳೆ ನಿಂತಿತ್ತು. ಚಾ ಕುಡಿದು ದೊಂಬರಾಟದವರೂ ಎದ್ದರು. ಚಾದಂಗಡಿಯನ್ನು ಕಾರಣವಿಲ್ಲದೇ ನಕ್ಕ.

ತನ್ನ ಹುಚ್ಚುತನಕ್ಕೆ ಖುಷಿಪಟ್ಟುಕೊಂಡು ಬಿರಬಿರನೇ ಹೆಜ್ಜೆ ಹಾಕುತ್ತಿದ್ದ ಆ ಮಧ್ಯವಯಸ್ಕ. ಇತ್ತ ದೊಂಬರಾಟದವರು ತಮ್ಮ ಸಾಮಾನುಗಳನ್ನು ಒಂದೆಡೆ ಕಲೆಹಾಕುವಲ್ಲಿ ತೊಡಗಿಸಿಕೊಂಡರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...