Homeಗೌರಿ ಕಣ್ಣೋಟರಾಜಕಾರಣಿಗಳು ಮಾಡಲಾಗದ ಸಹಾಯವನ್ನು ಜನ ಮಾಡಿದ ಗಳಿಗೆ...

ರಾಜಕಾರಣಿಗಳು ಮಾಡಲಾಗದ ಸಹಾಯವನ್ನು ಜನ ಮಾಡಿದ ಗಳಿಗೆ…

ವಿಭಜನೆಯ ಸಮಯದಲ್ಲಿ ಭಾರತಕ್ಕೆ ವಲಸೆ ಬಂದ ಕೈಗಾರಿಕೋದ್ಯಮಿಯೊಬ್ಬರು ಅನಾಮಧೇಯವಾಗಿ ಈ ನಿಧಿಗೆ 12 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ.

- Advertisement -
- Advertisement -

ಭಾರತ-ಪಾಕಿಸ್ತಾನ ಗಡಿಯಲ್ಲಿರುವ ವಾಘಾದಲ್ಲಿ ಪ್ರತಿ ಸಂಜೆ ವಿಚಿತ್ರವಾದ ಒಂದು ಸಾಂಪ್ರದಾಯಿಕ ಆಚರಣೆ ನಡೆಯುತ್ತದೆ. ಸುಮಾರು ಐದಡಿ ಅಂತರದಲ್ಲಿ ಎರಡೂ ದೇಶಗಳ ಪ್ರವೇಶದ್ವಾರ (ಗೇಟ್)ಗಳಿವೆ. ಅದರ ಬಳಿಯೇ ಎರಡೂ ದೇಶಗಳ ಧ್ವಜಗಳು ಹಾರಾಡುತ್ತಿರುತ್ತವೆ. ಎರಡೂ ಕಡೆಯ ಸೈನಿಕರು “ಗುಡ್ ಡೇ, ಹೇಗಿದ್ದೀರಿ?” ಎಂದು ಕೆಲವೊಮ್ಮೆ ಒಬ್ಬರನ್ನೊಬ್ಬರು ವಿಚಾರಿಸಿಕೊಳ್ಳುತ್ತಾರೆ. ನಾನಲ್ಲಿಗೆ ಹೋಗಿದ್ದಾಗ ಭಾರತದ ಹಿರಿಯ ಸೈನ್ಯಾಧಿಕಾರಿಯೊಬ್ಬರು ನನ್ನನ್ನು ಪಾಕಿಸ್ತಾನದ ಸೈನ್ಯಾಧಿಕಾರಿಗೆ ಪರಿಚಯ ಮಾಡಿಕೊಟ್ಟಿದ್ದರು ಎರಡೂ ದೇಶಗಳ ನಡುವಿನ ನೋ ಮ್ಯಾನ್ಸ್ ಲ್ಯಾಂಡ್‍ನಲ್ಲಿ ನಾನೊಂದು ಹೆಜ್ಜೆಯಿಟ್ಟೆ. ಪಾಕಿಸ್ತಾನ ಸೈನ್ಯಾಧಿಕಾರಿಯೂ ಮುಂದೆ ಬಂದರು. ಇಬ್ಬರೂ ಕೈಕುಲುಕಿದೆವು. ಅದೂ ಕಾರ್ಗಿಲ್‍ನಲ್ಲಿ ಎರಡೂ ದೇಶಗಳ ನಡುವೆ ಸಂಘರ್ಷ ನಡೆಯುತ್ತಿದ್ದಾಗ.

ಹೀಗೆ ಸೌಹಾರ್ದತೆಯಿಂದಲೇ ವಾಘಾದಲ್ಲಿ ತಮ್ಮ ದಿನಗಳನ್ನು ಕಳೆಯುವ ಎರಡೂ ಕಡೆಯ ಸೈನಿಕರು ಸಂಜೆಯಾಗುತ್ತಿದ್ದಂತೆ ಒಂದು ರೀತಿಯ ಪೈಪೋಟಿಗೆ ಇಳಿಯುತ್ತಾರೆ. ಎರಡೂ ಗೇಟ್‍ಗಳ ಹತ್ತಿರ ಸಾರ್ವಜನಿಕರು ಸೇರುತ್ತಿದ್ದಂತೆ, ಧ್ವಜ ಕೆಳಗಿಳಿಸುವ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಯಾವ ಕಡೆಯ ಸೈನಿಕರು ಹೆಚ್ಚು ಆಕ್ರಮಣಿಶೀಲತೆಯನ್ನು ಪ್ರದರ್ಶಿಸುತ್ತಾರೆ, ಯಾರು ಹೆಚ್ಚು ರಭಸದಿಂದ ಕಿವಿಗಪ್ಪಳಿಸುವಂತೆ ತಮ್ಮ ಬೂಟುಗಳನ್ನು ನೆಲಕ್ಕೆ ಅಪ್ಪಳಿಸುತ್ತಾರೆ ಎಂದೆಲ್ಲಾ ಗಮನಿಸುವ ಸಾರ್ವಜನಿಕರು ತಮ್ಮ ಕಡೆಯವರನ್ನು ಚಪ್ಪಾಳೆ ತಟ್ಟುತ್ತಾ, ಘೋಷಣೆಗಳನ್ನು ಕೂಗುತ್ತಾ ಹುರಿದುಂಬಿಸುತ್ತಾರೆ. ಎರಡೂ ಕಡೆಯ ಸೈನಿಕರ ನಡುವೆ ಒಂದು ಸಣ್ಣ ಯುದ್ಧ ನಡೆಯುತ್ತಿದೆಯೇನೋ ಎಂಬ ವಾತಾವರಣ ನಿರ್ಮಾಣವಾಗುತ್ತದೆ.

ಆದರೆ ವಿಚಿತ್ರ ಸಂಗತಿಯೇನೆಂದರೆ, ಈ ಧ್ವಜ ಕೆಳಗಿಳಿಸುವ ಆಚರಣೆ ಮುಗಿದ ಮರುಕ್ಷಣವೇ ಎರಡೂ ಕಡೆಯ ಸಾರ್ವಜನಿಕರು ಗೇಟ್‍ಗಳ ಹತ್ತಿರ ಧಾವಿಸುತ್ತಾರೆ. ಒಬ್ಬರನ್ನೊಬ್ಬರು ಕುತೂಹಲದಿಂದ ನೋಡುತ್ತಿರುತ್ತಾರೆ. ಅಲ್ಲಿ ಯಾವುದೇ ರೀತಿಯ ಪೈಪೋಟಿ ಇರುವುದಿಲ್ಲ. ಬದಲಾಗಿ ‘ನಮ್ಮಂತೆಯೇ ಇದ್ದೀರಲ್ಲಾ ನೀವು’ ಎಂಬ ಭಾವನೆ ಮೂಡಿರುತ್ತದೆ. ದೇಶ ವಿಭಜನೆಯ ಸಮಯದಲ್ಲಿ ಬೇರೆಯಾದ ತಮ್ಮ ಬಂಧುಗಳನ್ನು ಮತ್ತೆ ಕಾಣಬಹುದೇನೋ ಎಂಬ ತವಕದಿಂದ ಕೆಲವರು ವಾಘಾ ಗಡಿಗೆ ಪದೇಪದೇ ಬರುತ್ತಿರುತ್ತಾರೆ. ಈ ಕಡೆಯಿಂದ ಇವರು, ಆ ಕಡೆಯಿಂದ ಅವರು ಹೀಗೆ ಮೌನವಾಗಿ ನೋಡುತ್ತಲೇ ನಿಲ್ಲುವ ಜನ ಮತ್ತೆ ತಮ್ಮ ಮನೆಯತ್ತ ಮರುಳುವುದು ಎರಡೂ ಕಡೆಯ ಸೈನಿಕರು ಅವರನ್ನು ಅಲ್ಲಿಂದ ಓಡಿಸಿದಾಗಲೇ!

ಇದೆಲ್ಲವನ್ನು ನೆನಪು ಮಾಡಿಕೊಟ್ಟಿದ್ದು ನೂರ್ ಫಾತಿಮಾ ಎಂಬ ಮುದ್ದು ಮಗು. ಈ ಕೂಸಿನ ಶಸ್ತ್ರಚಿಕಿತ್ಸೆ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಗಳು ಎಲ್ಲ ಕಡೆಯೂ ಪ್ರಕಟವಾಗಿದೆ. ಆದರೆ ನನಗೆ ಇಷ್ಟವಾದದ್ದು ಆಕೆಗೆ ಭಾರತೀಯರು ನೀಡಿದ ಭಾವನಾತ್ಮಕ ಹಾಗೂ ಆರ್ಥಿಕ ಬೆಂಬಲ. ರಾಜಕಾರಣಿಗಳಿಗೆ ಸಾಧ್ಯವಾಗದಂತಹ ಸಹಾಯವನ್ನು ಜನ ನೀಡಿದ್ದಾರೆ. ನೂರ್‍ಳ ತಂದೆತಾಯಿ ಅದನ್ನು ಅಷ್ಟೇ ಸೌಜನ್ಯದಿಂದ ಸ್ವೀಕರಿಸಿದ್ದಾರೆ.

ನೂರ್‍ಳ ತಂದೆ ಬಡ ಮಕ್ಕಳಿಗೆಂದೇ ಶುರು ಮಾಡಿರುವ ‘ದೋಸ್ತಿ ಫಂಡ್’ (ಸ್ನೇಹನಿಧಿ)ಗೆ ಎಷ್ಟೋ ಭಾರತೀಯರು ಹಣ ನೀಡಿದ್ದಾರೆ. ಹಿಂದೆ ಲಾಹೋರ್‌ನಲ್ಲಿ ವಾಸಿಸುತ್ತಿದ್ದ, ಆದರೆ ವಿಭಜನೆಯ ಸಮಯದಲ್ಲಿ ಭಾರತಕ್ಕೆ ವಲಸೆ ಬಂದ ಕೈಗಾರಿಕೋದ್ಯಮಿಯೊಬ್ಬರು ಅನಾಮಧೇಯವಾಗಿ ಈ ನಿಧಿಗೆ 12 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ಪಾಕಿಸ್ತಾನದ ಮುಸ್ಲಿಂ ಒಬ್ಬರು ಶುರುಮಾಡಿರುವ ಈ ನಿಧಿಗೆ ಭಾರತದ ಹಿಂದೂ ಒಬ್ಬರು ಇಂತಹ ದೊಡ್ಡ ಮೊತ್ತದ ದಾನ ನೀಡಿರುವುದು ಎರಡೂ ದೇಶಗಳ ಜನರಿಗೆ ಬೇಕಿರುವುದು ಸ್ನೇಹ ಮತ್ತು ಸೌಹಾರ್ದತೆಯ ಬಾಳು ಎಂಬುದನ್ನು ತೋರಿಸುತ್ತದೆ.

ದೇಶದಲ್ಲಿ ಜಾತಿ, ಧರ್ಮದ ಆಧಾರದ ಮೇಲೆ ಜನರನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿರುವಾಗಲೇ, ಜನಸಾಮಾನ್ಯರು ತಮಗೆ ಧಾರ್ಮಿಕ ಭಿನ್ನತೆ ಮುಖ್ಯ ಅಲ್ಲವೇ ಅಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಪಾಕಿಸ್ತಾನದ ವಿರುದ್ಧ ಭಾರತದ ವೈರತ್ವವಿರುವುದು ನಮ್ಮ ದೇಶದ ಸುಭದ್ರತೆಯ ರಕ್ಷಣೆಗಾಗಿಯೇ ಹೊರತು, ಆ ದೇಶದ ಜನರ ವಿರುದ್ಧವಲ್ಲ, ಅವರ ಧರ್ಮದ ವಿರುದ್ಧವೂ ಅಲ್ಲ ಎಂದು ನೂರ್ ಪ್ರಕರಣ ತೋರಿಸುತ್ತದೆ.

ನೂರ್ ಎಂಬ ಬಾಲಕಿ ಬೇರೆ ದೇಶದವಳು, ಬೇರೆ ಧರ್ಮದವಳು ಎಂಬ ಭೇದಭಾವವನ್ನು ಅಲಕ್ಷಿಸಿದ್ದಾರೆ ಭಾರತೀಯರು. ಗುಜರಾತಿನಲ್ಲಿ ನಡೆದ ಕೋಮುದಳ್ಳುರಿಗೆ ತುತ್ತಾದ ಮುಸ್ಲಿಮರ ನೆರವಿಗೆ ಬಹಿರಂಗವಾಗಿ ಬರಲು ಹಿಂಜರಿದಿದ್ದ ಭಾರತೀಯರು ಪಾಕಿಸ್ತಾನದ ಮುಸ್ಲಿಂ ಬಾಲಕಿಗೆ ನೆರವಾಗಿದ್ದಾರೆ.

ತಮ್ಮ ಎದೆಯಲ್ಲಿ ಬರೀ ದ್ವೇಷವನ್ನೇ ತುಂಬಿಕೊಂಡಿರುವವರಿಲ್ಲದಿದ್ದಾಗ, ಮಾನವನ ಮುಖ್ಯಲಕ್ಷಣವೇ ಮಾನವೀಯತೆ… ಇದು ನೂರ್‌ ನಿಂದಾಗಿ ನಮ್ಮ ಜನರೇ ಅರಿತುಕೊಂಡ ಸತ್ಯ.

– ಗೌರಿ ಲಂಕೇಶ್
ಕಂಡಹಾಗೆ (ಸಂಗ್ರಹ) 1

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ...

ದೆಹಲಿ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರುಗಳ ಡಿಲೀಟ್ ಪ್ರಶ್ನಿಸಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ದೆಹಲಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್...

ಕೇರಳ | ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ : ರಿಪೋರ್ಟರ್ ಟಿವಿ ಎಂಡಿ ಆಂಟೋ ಆಗಸ್ಟಿನ್ ಬಂಧನ

ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ. ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು...

ದೆಹಲಿ: ಜಾಮೀನು ಸಿಕ್ಕ ಬೆನ್ನಲ್ಲೇ ಸ್ವತಂತ್ರ ಭಾರದ್ವಾಜ್ ವಿಡಿಯೋ ವೈರಲ್; ಷರತ್ತು ಉಲ್ಲಂಘನೆ ಆರೋಪ!

ಜಂತರ್ ಮಂತರ್‌ನಲ್ಲಿ ದಲಿತ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಪ್ರಭಾವಿ ಸ್ವತಂತ್ರ ಭಾರದ್ವಾಜ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ...

ಸರ್ಕಾರದ ಹಸ್ತಕ್ಷೇಪದಿಂದ ಕ್ಯಾಂಪಸ್ ನಿರ್ಬಂಧದವರೆಗೆ: ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಕುಸಿತ ಬಯಲಿಗೆಳೆದ ಜಾಗತಿಕ ವರದಿ 

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರವಾಗಿ ನಿರ್ಬಂಧಿತವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹೆಚ್ಚುತ್ತಿರುವ ಹಸ್ತಕ್ಷೇಪ, ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳು...

ಬಿಹಾರ| ದಲಿತ ಯುವಕನ ವಿವಾಹವಾದ ಯುವತಿ; ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಪೋಷಕರು

ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ...

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಂತರ ತನ್ನ ತಂದೆಯೇ ತನಗೆ ಬೆದರಿಕೆ ಹಾಕಿ, ಕಾನೂನುಬಾಹಿರವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದ ಆಯುಷ್ ಮಲಿಕ್ ಎಂಬ 31 ವರ್ಷದ ಯುವಕನನ್ನು...

ಬಿಜ್ನೋರ್‌ನಲ್ಲಿ ಮುಸ್ಲಿಂ ಶಿಕ್ಷಕನ ಗುಂಡಿಕ್ಕಿ ಹತ್ಯೆ: ‘ಲವ್ ಜಿಹಾದ್’ ಆರೋಪ; ವೈಯಕ್ತಿಕ ದ್ವೇಷದ ಬಗ್ಗೆಯೂ ಪೊಲೀಸರಿಂದ ತನಿಖೆ 

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 43 ವರ್ಷದ ಮುಸ್ಲಿಂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬರನ್ನು ರೈತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಕ್ಷಕ ನೌಶಾದ್ ಅಹ್ಮದ್ ಅವರು ‘ಲವ್ ಜಿಹಾದ್’...