ದೆಹಲಿಯ ರಸ್ತೆಯಲ್ಲಿ ಶುಕ್ರವಾರದ ನಮಾಝ್ ಮಾಡುತ್ತಿದ್ದ ಮುಸ್ಲಿಮ್ ಸಮುದಾಯದ ಜನರ ಮೇಲೆ ಒದ್ದು ದುಷ್ಕೃತ್ಯವನ್ನು ಮೆರದ ಪೊಲೀಸರ ವರ್ತನೆಯನ್ನು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಖಂಡಿಸಿದ್ದು, ಮುಸ್ಲಿಮರು ನಮಾಜ್ ಮಾಡುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಘಟನೆಯ ಬಗ್ಗೆ ಜಗತ್ತಿಗೆ ವಿವರಿಸಬೇಕಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಹೇಳಿಕೆಯನ್ನು ನೀಡಿರುವ ಸಂಸದ ಅಸಾದುದ್ದೀನ್ ಓವೈಸಿ, ನೀವು ನಮ್ಮ ಮೇಲೆ ಒದ್ದರೆ ಅಥವಾ ಗುಂಡು ಹಾರಿಸಿದರೆ, ನಾವು ನಮಾಝ್ ನಿಲ್ಲಿಸುವುದಿಲ್ಲ. ಶುಕ್ರವಾರದ ಘಟನೆಯು ಮುಸ್ಲಿಮರ ವಿರುದ್ಧ ಜನರ ಮನಸ್ಸು ಎಷ್ಟು ಭ್ರಷ್ಟಗೊಂಡಿದೆ ಎಂಬುವುದನ್ನು ಎತ್ತಿ ತೋರಿಸುತ್ತಿದೆ ಎಂದು ಹೇಳಿದ್ದಾರೆ.
ಶುಕ್ರವಾರದಂದು ದೆಹಲಿಯ ರಸ್ತೆಗಳಲ್ಲಿ ಜನರು ಸೇರುವುದು ಮತ್ತು ನಮಾಝ್ನಲ್ಲಿ ಪಾಲ್ಗೊಳ್ಳುವುದು ಸಾಮಾನ್ಯವಾಗಿದೆ. ಹಿಂದಿನ ದೆಹಲಿ ಗಲಭೆಗಳಲ್ಲಿ ಮುಸ್ಲಿಮರನ್ನು ಪೊಲೀಸರು ಗುರಿಯಾಗಿಸಿಕೊಂಡ ಬಗೆಗೆ ದೆಹಲಿ ಪೊಲೀಸರು ಕಲಿಯಬೇಕು. ಈ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ, ಮುಸ್ಲಿಮರಿಗೆ ಎಷ್ಟು ಘನತೆ ಮತ್ತು ಗೌರವವಿದೆ ಎಂಬುವುದನ್ನು ಇದು ಹೇಳುತ್ತದೆ. ನಾನು ಪ್ರಧಾನಿ, ಬಿಜೆಪಿಯವರನ್ನು ಕೇಳಲು ಬಯಸುತ್ತೇನೆ ಅವಮಾನಕ್ಕೊಳಗಾದ ವ್ಯಕ್ತಿ ಯಾವ ಕುಟುಂಬಕ್ಕೆ ಸೇರಿದವನು? ಎಂದು ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.
VIDEO | Here's what AIMIM leader Asaduddin Owaisi (@asadowaisi) said on namaz incident that took place in Delhi's Inderlok yesterday.
"The incident has shaken everyone. It tells how much dignity and respect Muslims have. I want to ask the prime minister, BJP people – the man,… pic.twitter.com/z03j9XkIJ4
— Press Trust of India (@PTI_News) March 9, 2024
ಏನಿದು ಘಟನೆ?
ಜನನಿಬಿಡ ರಸ್ತೆಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆ ಸಲ್ಲಿಸುತ್ತಿದ್ದ ಸಣ್ಣ ಗುಂಪಿಗೆ ಪೊಲೀಸ್ ಅಧಿಕಾರಿಯೊಬ್ಬರು ಅಲ್ಲಿಂದ ತೆರಳುವಂತೆ ಕಾಲಿನಿಂದ ಒದೆಯುತ್ತಿರುವ ವಿಡಿಯೋ ನಿನ್ನೆ ವೈರಲ್ ಆಗಿತ್ತು. ಘಟನೆ ಕುರಿತು ವಿರೋಧ ವ್ಯಕ್ತವಾದ ನಂತರ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿತ್ತು.
ಘಟನೆಯ ವೀಡಿಯೋದಲ್ಲಿ ಕಂಡುಬರುವ ಪೊಲೀಸ್ ಪೋಸ್ಟ್ ಇನ್ ಚಾರ್ಜ್ನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಅಗತ್ಯ ಶಿಸ್ತು ಕ್ರಮವನ್ನೂ ತೆಗೆದುಕೊಳ್ಳಲಾಗುತ್ತಿದೆ ಎಂದು ಪೊಲೀಸ್ ಉಪ ಆಯುಕ್ತ ಎಂಕೆ ಮೀನಾ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಕಾಂಗ್ರೆಸ್ನ ದೆಹಲಿ ಘಟಕವು ದೆಹಲಿ ಪೊಲೀಸರನ್ನು ನಿನ್ನೆ ತರಾಟೆಗೆ ತೆಗೆದುಕೊಂಡಿತ್ತು. ಇದು ತುಂಬಾ ನಾಚಿಕೆಗೇಡಿನ ಸಂಗತಿ! ರಸ್ತೆಯಲ್ಲಿ ನಮಾಝ್ ಮಾಡುವವರನ್ನು ಒದೆಯುತ್ತಿರುವ ದಿಲ್ಲಿ ಪೊಲೀಸ್ ಜವಾನ, ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಏನಿದೆ…? ಎಂದು ಪ್ರಶ್ನಿಸಿತ್ತು.
People offering Namaz are being kicked by Police. This is absolutely shameful. What message is @DelhiPolice trying to give. @narendramodi @LtGovDelhipic.twitter.com/2rh2bYhBSi
— Mohammed Zubair (@zoo_bear) March 8, 2024
ಇದನ್ನು ಓದಿ: ವಾಕ್, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಪೊಲೀಸರಿಗೆ ಅರಿವು ಮೂಡಿಸುವ ಅಗತ್ಯವಿದೆ: ಸುಪ್ರೀಂಕೋರ್ಟ್