‘ಹೈದರಾಬಾದ್ ವಿಮೋಚನಾ ದಿನ’ದ ಅಂಗವಾಗಿ ತೆಲಂಗಾಣದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಶನಿವಾರ ಭಾಗವಹಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಅವರನ್ನು ಗುರಿಯಾಗಿಸಿರುವ ಆಡಳಿತರೂಢ ಪಕ್ಷವಾದ ಟಿಆರ್ಎಸ್, ‘40% ಕಮಿಷನ್ ಸಿಎಂಗೆ ಸ್ವಾಗತ’ ಎಂದು ಬರೆದಿರುವ ಬೃಹತ್ ಬ್ಯಾನರ್ ಅನ್ನು ಅಳವಡಿಸಿದೆ ಎಂದು ವರದಿಯಾಗಿದೆ.
ಒಕ್ಕೂಟ ಸರ್ಕಾರದ ವತಿಯಿಂದ ಇದೇ ಮೊದಲ ಬಾರಿ ನಡೆಯುತ್ತಿರುವ ‘ಸೆಪ್ಟೆಂಬರ್ 17’ರ ‘ಹೈದರಾಬಾದ್ ವಿಮೋಚನಾ ದಿನ’ದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ತೆಲಂಗಾಣದ ಸಿಕಂದರಾಬಾದ್ನ ಸೇನಾ ಪರೇಡ್ ಮೈದಾನದಲ್ಲಿ ಭಾಗವಹಿಸಲಿದ್ದಾರೆ. ಇದೇ ಮೈದಾನದ ಪಕ್ಕವೆ ಟಿಆರ್ಎಸ್ ಬೊಮ್ಮಾಯಿ ಅವರನ್ನು ಗುರಿಯಾಗಿಸಿ ಬ್ಯಾನರ್ ಅನ್ನು ಅಳವಡಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಹಳೆಯ ಹೈದರಾಬಾದ್ನಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರವು ಇರುವುದರಿಂದ ಈ ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ ಸೇರಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರಿಗೆ ಕೂಡಾ ಆಹ್ವಾನವಿದ್ದು, ಇಬ್ಬರೂ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ರಾಜ್ಯದ ಹೊಸ ಸಚಿವಾಲಯಕ್ಕೆ ಡಾ. ಅಂಬೇಡ್ಕರ್ ಹೆಸರು: ತೆಲಂಗಾಣ ಸಿಎಂ ಕೆಸಿಆರ್ ಘೋಷಣೆ
‘ಸೆಪ್ಟೆಂಬರ್ 17’ರ ದಿನಾಚರಣೆಯನ್ನು ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಇಬ್ಬರೂ ಶನಿವಾರ ಹೈದರಾಬಾದ್ನಲ್ಲಿ ಪ್ರತ್ಯೇಕ ‘ಸೆಪ್ಟೆಂಬರ್ 17’ರ ಆಚರಣೆಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದು, ರಾಜ್ಯದಲ್ಲಿ ತೀವ್ರ ಮತ್ತು ಸ್ಪರ್ಧಾತ್ಮಕ ರಾಜಕೀಯ ಚಟುವಟಿಕೆಯ ದಿನವಾಗಿ ನಿರ್ಮಾಣವಾಗುತ್ತಿದೆ.
#BREAKING @trspartyonline targets #Karnataka CM by putting up *Welcome to 40% commission CM* banner near parade grounds. Union home minister Amit Shah will be flagging off #HyderabadLiberationDay event at Parade grounds today. #Telangana pic.twitter.com/VbPXY5kHIy
— Imran Khan (@KeypadGuerilla) September 17, 2022
ಒಕ್ಕೂಟ ಸರ್ಕಾರ ಇದೆ ಮೊದಲ ಬಾರಿಗೆ ಸೆಪ್ಟೆಂಬರ್ 17 ಅನ್ನು ‘ಹೈದರಾಬಾದ್ ವಿಮೋಚನಾ ದಿನ’ ಎಂದು ಆಚರಿಸುತ್ತಿದೆ. ಆದರೆ ತೆಲಂಗಾಣ ಸರ್ಕಾರವು ಸೆಪ್ಟೆಂಬರ್ 17ನ್ನು ‘ತೆಲಂಗಾಣ ಏಕೀಕರಣ ದಿನ’ ಎಂದು ಕರೆಯುವ ಯೋಜನೆಯನ್ನು ರೂಪಿಸಿದ್ದು, ಮೂರು ದಿನಗಳ ಹಬ್ಬಗಳನ್ನು ಘೋಷಿಸಿದೆ.
ಇದನ್ನೂ ಓದಿ: ಬಿಹಾರಕ್ಕೆ ಭೇಟಿ ನೀಡಿದ ತೆಲಂಗಾಣ ಸಿಎಂ ಕೆಸಿಆರ್: ‘ಬಿಜೆಪಿ ಮುಕ್ತ ಭಾರತ’ಕ್ಕೆ ಕರೆ
ನಿಜಾಮರ ಆಡಳಿತದ ಅಡಿಯಲ್ಲಿ ಇದ್ದ ಹೈದರಾಬಾದ್ ಭಾರತವು ಸ್ವಾತಂತ್ಯ್ರಗೊಂಡು ಒಂದು ವರ್ಷದ ನಂತರ ಸೆಪ್ಟೆಂಬರ್ 17ರಂದು ಭಾರತೀಯ ಒಕ್ಕೂಟದೊಂದಿಗೆ ವಿಲೀನಗೊಂಡಿತ್ತು.
All nonsense