Homeಅಂತರಾಷ್ಟ್ರೀಯಪಶ್ಚಿಮ ಏಷ್ಯಾ ಸಂಘರ್ಷವು 25 ಲಕ್ಷ ಭಾರತೀಯರನ್ನು ಬಡತನಕ್ಕೆ ತಳ್ಳುವ ಅಪಾಯವಿದೆ : ವಿಶ್ವಸಂಸ್ಥೆ ವರದಿ

ಪಶ್ಚಿಮ ಏಷ್ಯಾ ಸಂಘರ್ಷವು 25 ಲಕ್ಷ ಭಾರತೀಯರನ್ನು ಬಡತನಕ್ಕೆ ತಳ್ಳುವ ಅಪಾಯವಿದೆ : ವಿಶ್ವಸಂಸ್ಥೆ ವರದಿ

- Advertisement -
- Advertisement -

ಪಶ್ಚಿಮ ಏಷ್ಯಾ ಸಂಘರ್ಷವು 25 ಲಕ್ಷ ಭಾರತೀಯರನ್ನು ಬಡತನದ ಕೂಪಕ್ಕೆ ತಳ್ಳಬಹುದು ಮತ್ತು ದೇಶದ ಮಾನವ ಅಭಿವೃದ್ಧಿ ಪ್ರಗತಿಯಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆಯನ್ನುಂಟು ಮಾಡಬಹುದು ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (ಯುಎನ್‌ಡಿಪಿ) ಹೊಸ ವರದಿಯು ಎಚ್ಚರಿಕೆ ನೀಡಿದೆ.

“ಮಧ್ಯಪ್ರಾಚ್ಯದಲ್ಲಿ ಮಿಲಿಟರಿ ಸಂಘರ್ಷ : ಏಷ್ಯಾ ಮತ್ತು ಪೆಸಿಫಿಕ್‌ನಾದ್ಯಂತ ಮಾನವ ಅಭಿವೃದ್ಧಿ ಮೇಲಿನ ಪರಿಣಾಮಗಳು” ಎಂಬ ಶೀರ್ಷಿಕೆಯ ವರದಿಯು, ಈ ಸಂಘರ್ಷವು ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದಾದ್ಯಂತ ಮಾನವ ಅಭಿವೃದ್ಧಿಯ ಒತ್ತಡಗಳನ್ನು ಹೆಚ್ಚಿಸುತ್ತಿದೆ ಎಂದು ಉಲ್ಲೇಖಿಸಿದೆ. ಇಂಧನ ಬೆಲೆ ಏರಿಕೆ, ಸಾರಿಗೆ ವೆಚ್ಚ ಮತ್ತು ಕಚ್ಚಾ ವಸ್ತುಗಳ ಬೆಲೆ ಹೆಚ್ಚಳದಿಂದಾಗಿ ಜನರ ಖರೀದಿ ಸಾಮರ್ಥ್ಯ ಕುಸಿಯುತ್ತಿದೆ. ಇದು ಆಹಾರ ಅಭದ್ರತೆಯನ್ನು ಹೆಚ್ಚಿಸುವುದಲ್ಲದೆ, ಸರ್ಕಾರದ ಬಜೆಟ್ ಮೇಲೆ ಒತ್ತಡ ತರುತ್ತಿದೆ ಮತ್ತು ಜನರ ಜೀವನೋಪಾಯವನ್ನು ದುರ್ಬಲಗೊಳಿಸುತ್ತಿದೆ ಎಂದು ಹೇಳಿದೆ.

ಏಪ್ರಿಲ್ 14, 2026 ರಂದು ಬಿಡುಗಡೆಯಾದ ಈ ಪ್ರಾಥಮಿಕ ವರದಿಯ ಪ್ರಕಾರ, ಜಾಗತಿಕವಾಗಿ ಸುಮಾರು 88 ಲಕ್ಷ (8.8 ಮಿಲಿಯನ್) ಜನರು ಬಡತನಕ್ಕೆ ತಳ್ಳಲ್ಪಡುವ ಭೀತಿಯಲ್ಲಿದ್ದಾರೆ. ಅಲ್ಲದೆ, ಪಶ್ಚಿಮ ಏಷ್ಯಾದ ಈ ಮಿಲಿಟರಿ ಸಂಘರ್ಷದಿಂದ ಏಷ್ಯಾ-ಪೆಸಿಫಿಕ್ ವಲಯಕ್ಕೆ ಸುಮಾರು 299 ಬಿಲಿಯನ್ ಡಾಲರ್‌ನಷ್ಟು ಆರ್ಥಿಕ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ.

ಭಾರತದಲ್ಲಿ, ಬಡತನದ ಪ್ರಮಾಣವು ಸರಿಸುಮಾರು 4 ಲಕ್ಷದಿಂದ 25 ಲಕ್ಷಕ್ಕೆ (2.5 ಮಿಲಿಯನ್) ಏರಿಕೆಯಾಗುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ. ಈ ಸಂಘರ್ಷದ ಪರಿಣಾಮವಾಗಿ ಜಾಗತಿಕವಾಗಿ ಬಡತನಕ್ಕೆ ತಳ್ಳಲ್ಪಡುವ ಜನರ ಸಂಖ್ಯೆಯು ವಿವಿಧ ಸಂದರ್ಭಗಳಲ್ಲಿ ಸುಮಾರು 19 ಲಕ್ಷದಿಂದ ಸುಮಾರು 88 ಲಕ್ಷದವರೆಗೆ ಏರುತ್ತದೆ ಎಂದು ಹೇಳಿದೆ. ಇದರಲ್ಲಿ ದಕ್ಷಿಣ ಏಷ್ಯಾದ ಪಾಲು ಅತಿ ಹೆಚ್ಚಾಗಿದ್ದು (ಸರಿಸುಮಾರು 17 ಲಕ್ಷದಿಂದ 80 ಲಕ್ಷಕ್ಕೂ ಹೆಚ್ಚು), ಈ ಉಪಖಂಡದ ಜನಸಂಖ್ಯೆಯ ಗಾತ್ರ ಮತ್ತು ಆದಾಯ ಹಾಗೂ ಬೆಲೆ ಏರಿಕೆಯ ಹೊಡೆತಕ್ಕೆ ಹೆಚ್ಚು ಒಡ್ಡಿಕೊಂಡಿರುವುದನ್ನು ಇದು ಪ್ರತಿಬಿಂಬಿಸುತ್ತದೆ.

ಚೀನಾದಲ್ಲಿ ಬಡತನಕ್ಕೆ ತಳ್ಳಲ್ಪಡುವ ಭೀತಿಯಲ್ಲಿರುವ ಜನರ ಸಂಖ್ಯೆಯು ಸುಮಾರು 1,15,000 ದಿಂದ 6,20,000 ಕ್ಕಿಂತ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಇದು ಅಲ್ಲಿನ ಬೃಹತ್ ಜನಸಂಖ್ಯೆಗೆ ಹೋಲಿಸಿದರೆ ಅಲ್ಪ ಪ್ರಮಾಣದ ಬದಲಾವಣೆಯಂತೆ ಕಂಡುಬಂದರೂ, ಚೀನಾದ ಮೇಲಾಗುವ ಸಾಧಾರಣ ಪರಿಣಾಮವನ್ನು ಇದು ಪ್ರತಿಬಿಂಬಿಸುತ್ತದೆ ಎಂದು ವರದಿ ತಿಳಿಸಿದೆ.

ಮಧ್ಯಪ್ರಾಚ್ಯದ 28 ದಿನಗಳ ಮಿಲಿಟರಿ ಸಂಘರ್ಷದ ತೀವ್ರ ಸನ್ನಿವೇಶದಲ್ಲಿ, ಭಾರತದ ಬಡತನದ ದರವು ಶೇ. 23.9 ರಿಂದ ಶೇ. 24.2ಕ್ಕೆ ಏರಿ, ಸುಮಾರು 24.6 ಲಕ್ಷ ಜನರು ಹೊಸದಾಗಿ ಬಡತನಕ್ಕೆ ಒಳಗಾಗಬಹುದು. ಬಿಕ್ಕಟ್ಟಿನ ನಂತರ ಒಟ್ಟು 35.4 ಕೋಟಿ ಜನರು ಬಡತನದ ರೇಖೆಯ ಕೆಳಗೆ ವಾಸಿಸುವ ಸಾಧ್ಯತೆಯಿದೆ ಎಂದು ವರದಿ ಅಂದಾಜಿಸಿದೆ.

ಯುಎನ್‌ಡಿಪಿ ನಡೆಸಿದ ಸಿಮ್ಯುಲೇಶನ್ ಅಂದಾಜಿನ ಪ್ರಕಾರ, ಈ ಸಂಘರ್ಷವು ಈ ಪ್ರದೇಶದಾದ್ಯಂತ ಇರುವ ದೇಶಗಳ ಮಾನವ ಅಭಿವೃದ್ಧಿ ಸೂಚ್ಯಂಕದ ಮೇಲೆ ತೀವ್ರ ಪರಿಣಾಮ ಬೀರಲಿದೆ. ವರದಿಯ ಪ್ರಕಾರ, ಇರಾನ್‌ನ ಮಾನವ ಅಭಿವೃದ್ಧಿ ಸೂಚ್ಯಂಕವು ಸರಿಸುಮಾರು ಒಂದರಿಂದ ಒಂದೂವರೆ ವರ್ಷಗಳಷ್ಟು ಹಿಂದಕ್ಕೆ ಹೋಗುವ ಸಾಧ್ಯತೆಯಿದೆ, ಅಂದರೆ ಅಲ್ಲಿನ ಅಭಿವೃದ್ಧಿ ಪ್ರಗತಿಯಲ್ಲಿ ಅಷ್ಟು ಪ್ರಮಾಣದ ಕುಸಿತ ಕಂಡುಬರಬಹುದು.

ಭಾರತವು ಸುಮಾರು 0.03ರಿಂದ 0.12 ವರ್ಷಗಳಷ್ಟು ಮಾನವ ಅಭಿವೃದ್ಧಿ ಸೂಚ್ಯಂಕದ ಪ್ರಗತಿಯಲ್ಲಿ ಹಿನ್ನಡೆಯನ್ನು ಅನುಭವಿಸುವ ಸಾಧ್ಯತೆಯಿದೆ. ಇದರ ನಂತರದ ಸ್ಥಾನಗಳಲ್ಲಿ ನೇಪಾಳವು ಸರಿಸುಮಾರು 0.02 ರಿಂದ 0.09 ವರ್ಷಗಳು ಮತ್ತು ವಿಯೆಟ್ನಾಂ 0.02 ರಿಂದ 0.07 ವರ್ಷಗಳಷ್ಟು ಹಿನ್ನಡೆ ಅನುಭವಿಸಬಹುದು ಎಂದು ಅಂದಾಜಿಸಲಾಗಿದೆ. ಆದರೆ ಚೀನಾದ ಮೇಲೆ ಇದರ ಪರಿಣಾಮವು ಸೀಮಿತವಾಗಿದ್ದು, ಅಲ್ಲಿನ ಎಚ್‌ಡಿಐ ಸುಮಾರು 0.01 ರಿಂದ 0.05 ವರ್ಷಗಳಷ್ಟು ಮಾತ್ರ ಕುಸಿಯಬಹುದು ಎಂದು ವರದಿ ತಿಳಿಸಿದೆ.

ವರದಿಯ ಪ್ರಕಾರ, ಈ ಪ್ರದೇಶದ (ಏಷ್ಯಾ) ದೊಡ್ಡ ಆಮದುದಾರ ರಾಷ್ಟ್ರಗಳಲ್ಲಿ ಒಂದಾದ ಭಾರತವು ತನ್ನ ತೈಲ ಅಗತ್ಯದ ಶೇಕಡಾ 90ಕ್ಕಿಂತ ಹೆಚ್ಚಿನ ಪಾಲನ್ನು ಆಮದಿನ ಮೂಲಕವೇ ಪೂರೈಸಿಕೊಳ್ಳುತ್ತದೆ. ಇದರಲ್ಲಿ ಶೇಕಡ 40ಕ್ಕಿಂತ ಹೆಚ್ಚು ಕಚ್ಚಾ ತೈಲ ಮತ್ತು ಶೇಕಡ 90ರಷ್ಟು ಎಲ್‌ಪಿಜಿ ಆಮದು ಪಶ್ಚಿಮ ಏಷ್ಯಾದಿಂದಲೇ ಬರುತ್ತದೆ. ಇಷ್ಟೇ ಅಲ್ಲದೆ, ಭಾರತದ ಒಟ್ಟು ರಸಗೊಬ್ಬರ ಆಮದಿನಲ್ಲಿ ಶೇಕಡ 45ಕ್ಕಿಂತ ಹೆಚ್ಚು ಪಾಲನ್ನು ಪಶ್ಚಿಮ ಏಷ್ಯಾದ ದೇಶಗಳೇ ಪೂರೈಸುತ್ತವೆ. ಹಾಗೆಯೇ, ದೇಶದ ಶೇಕಡ 85ರಷ್ಟು ಯೂರಿಯಾ ಉತ್ಪಾದನೆಯು ಆಮದು ಮಾಡಿಕೊಂಡ ಅನಿಲದ ಮೇಲೆ ಅವಲಂಬಿತವಾಗಿದೆ.

ಸಂಘರ್ಷವು ಹಲವಾರು ದೇಶಗಳ ಇಂಧನ ಆಯ್ಕೆಗಳ ಮೇಲೆಯೂ ಪ್ರಭಾವ ಬೀರುತ್ತಿದೆ. ಎಲ್‌ಎನ್‌ಜಿ ಬೆಲೆಗಳು ಏರುತ್ತಿರುವುದರಿಂದ, ಭಾರತ, ಥೈಲ್ಯಾಂಡ್, ಫಿಲಿಪೈನ್ಸ್ ಮತ್ತು ವಿಯೆಟ್ನಾಂ ಸೇರಿದಂತೆ ಕೆಲವು ಆರ್ಥಿಕತೆಗಳು ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯ ಮೇಲಿನ ಅವಲಂಬನೆಯನ್ನು ಹೆಚ್ಚಿಸಿವೆ. ಇನ್ನು ವ್ಯಾಪಾರ ಮತ್ತು ಪೂರೈಕೆ ಸರಪಳಿಯ ಅಡೆತಡೆಗಳ ಬಗ್ಗೆ ಹೇಳುವುದಾದರೆ, ಸರಕು ಸಾಗಣೆ ಶುಲ್ಕ ಯುದ್ಧದ ಅಪಾಯದ ವಿಮಾ ಪ್ರೀಮಿಯಂಗಳು, ಮಾರ್ಗ ಬದಲಾವಣೆಗಳು ಮತ್ತು ಮಧ್ಯಂತರ ಹಾಗೂ ಗ್ರಾಹಕ ಸರಕುಗಳ ವಿತರಣೆಯಲ್ಲಿನ ವಿಳಂಬದಿಂದಾಗಿ 36 ದೇಶಗಳಲ್ಲಿ 25 ದೇಶಗಳ ಮೇಲೆ ಗಮನಾರ್ಹ ಪರಿಣಾಮ ಬೀರಿದೆ ಎಂದು ಯುಎನ್‌ಡಿಪಿ ವಿಶ್ಲೇಷಣೆ ತಿಳಿಸಿದೆ.

ಭಾರತದ ವಿಶ್ಲೇಷಣೆಯ ಪ್ರಕಾರ, ಒಟ್ಟು ರಫ್ತಿನಲ್ಲಿ ಶೇ. 14ರಷ್ಟು ಮತ್ತು ಆಮದಿನಲ್ಲಿ ಶೇ. 20.9 ರಷ್ಟು ಪಶ್ಚಿಮ ಏಷ್ಯಾದ ಮಾರುಕಟ್ಟೆಗಳೇ ಹೊಂದಿವೆ. ಇದರಲ್ಲಿ ಸುಮಾರು 48 ಬಿಲಿಯನ್ ಡಾಲರ್ ಮೌಲ್ಯದ ತೈಲೇತರ ರಫ್ತುಗಳಿದ್ದು, ವಿಶೇಷವಾಗಿ ಬಾಸ್ಮತಿ ಅಕ್ಕಿ, ಚಹಾ, ರತ್ನಗಳು ಮತ್ತು ಆಭರಣಗಳು ಹಾಗೂ ಸಿದ್ಧ ಉಡುಪುಗಳು ಪ್ರಮುಖವಾಗಿವೆ. “ಗಲ್ಫ್ ವಿಮಾನಯಾನ ಸಂಸ್ಥೆಗಳು ವಿಮಾನಯಾನವನ್ನು ರದ್ದುಗೊಳಿಸಿದ್ದರಿಂದ ಬಾಂಗ್ಲಾದೇಶ ಮತ್ತು ಭಾರತದ ಸರಕು ಸಾಗಣೆಗಳು ಸ್ಥಗಿತಗೊಂಡು, ಅಲ್ಲಿಯೂ ಕೂಡ ಗಮನಾರ್ಹ ಅಡೆತಡೆಗಳು ಉಂಟಾಗಿವೆ” ಎಂದು ವರದಿ ತಿಳಿಸಿದೆ.

ಸಂಘರ್ಷವು ಆಹಾರ ಭದ್ರತೆಯ ಮೇಲೆ ಬೀರುವ ಪರಿಣಾಮವನ್ನು ಎತ್ತಿ ತೋರಿಸುತ್ತಾ ವರದಿಯು ಹೀಗೆ ಹೇಳಿದೆ, “ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತು ಫಿಲಿಪೈನ್ಸ್ ಸೇರಿದಂತೆ ಹಲವಾರು ದೇಶಗಳಲ್ಲಿ ಆಹಾರ ಭದ್ರತೆಯ ಒತ್ತಡಗಳು ಅನಿವಾಸಿ ಭಾರತೀಯರು ಕಳುಹಿಸುವ ಹಣದ ನಷ್ಟದಿಂದಾಗಿ ಮತ್ತಷ್ಟು ಹೆಚ್ಚಾಗಬಹುದು. ಏಕೆಂದರೆ ಗಲ್ಫ್ ರಾಷ್ಟ್ರಗಳಲ್ಲಿನ ಆರ್ಥಿಕ ಚಟುವಟಿಕೆಗಳು ಕುಸಿಯುವುದರಿಂದ ಅಲ್ಲಿರುವ ಕಾರ್ಮಿಕರ ಆದಾಯ ಕಡಿಮೆಯಾಗಿ, ಅವರ ಕುಟುಂಬಗಳ ಖರೀದಿ ಸಾಮರ್ಥ್ಯವು ದುರ್ಬಲಗೊಳ್ಳುತ್ತದೆ.”

“ಭಾರತದಲ್ಲಿ, ಈ ಸಂಘರ್ಷದ ಸಮಯವು ಅತ್ಯಂತ ಸೂಕ್ಷ್ಮವಾಗಿದೆ: ಜೂನ್‌ನಲ್ಲಿ ಪ್ರಾರಂಭವಾಗುವ ಖಾರಿಫ್ (ಮುಂಗಾರು ಹಂಗಾಮಿನ ಬೆಳೆ) ಸಿದ್ಧತೆಯ ಸಮಯದಲ್ಲಿ ಯಾವುದೇ ದೀರ್ಘಕಾಲದ ಅಡೆತಡೆಗಳು ಉಂಟಾದರೆ ಅದು ನೇರ ಪರಿಣಾಮ ಬೀರಲಿದೆ. ಪ್ರಸ್ತುತ 6.114 ಮಿಲಿಯನ್ ಟನ್‌ಗಳಷ್ಟು ಯೂರಿಯಾ ದಾಸ್ತಾನು ಇರುವುದು ಅಲ್ಪಾವಧಿಗೆ ಆಸರೆಯಾಗಬಹುದು. ಆದರೆ, ಬಿತ್ತನೆಯ ಹಂಗಾಮಿನವರೆಗೂ ಈ ಅಡೆತಡೆಗಳು ಮುಂದುವರಿದರೆ, ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ರಕ್ಷಿಸಲು ಇದು ಸಾಕಾಗುವುದಿಲ್ಲ ಎಂದು ವರದಿ ಹೇಳಿದೆ. ಇದಲ್ಲದೆ, ಈ ಸಂಘರ್ಷವು ಅನಿವಾಸಿ ಭಾರತೀಯರು ಕಳುಹಿಸುವ ಹಣ ಮತ್ತು ವಲಸೆ ಕಾರ್ಮಿಕರ ಮೇಲೂ ಪರಿಣಾಮ ಬೀರುತ್ತದೆ ಎಂದು ವರದಿಯು ಉಲ್ಲೇಖಿಸಿದೆ.”

“ಹಲವು ದೇಶಗಳಿಗೆ ಗಲ್ಫ್ ಕಾರ್ಮಿಕ ಮಾರುಕಟ್ಟೆ ಮತ್ತು ಅಲ್ಲಿಂದ ಬರುವ ಹಣದ ನೇರ ಸಂಪರ್ಕವು ಬಹಳ ದೊಡ್ಡದಾಗಿದೆ ಮತ್ತು ಪರಿಣಾಮಕಾರಿಯಾಗಿದೆ,” ಎಂದು ವರದಿ ತಿಳಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಂ ಕಿಅಂಶಗಳನ್ನು ಉಲ್ಲೇಖಿಸಿರುವ ಈ ವರದಿಯು, “ಭಾರತವು ಈ ವಿಷಯದಲ್ಲಿ ಅತಿ ಹೆಚ್ಚಿನ ಅವಲಂಬನೆಯನ್ನು ಹೊಂದಿದೆ” ಎಂದು ಹೇಳಿದೆ. ಅಕ್ಟೋಬರ್ 2024 ರ ಹೊತ್ತಿಗೆ ಸುಮಾರು 93.7 ಲಕ್ಷ (9.37 ಮಿಲಿಯನ್) ಭಾರತೀಯರು ಜಿಸಿಸಿ ದೇಶಗಳಲ್ಲಿ ವಾಸಿಸುತ್ತಿದ್ದು, ಭಾರತಕ್ಕೆ ವಿದೇಶದಿಂದ ಬರುವ ಒಟ್ಟು ಹಣದಲ್ಲಿ ಶೇ. 38-40 ರಷ್ಟು ಪಾಲು ಈ ದೇಶಗಳಿಂದಲೇ ಬರುತ್ತದೆ ಎಂದಿದೆ.

ಸಂಘರ್ಷವು ಏಷ್ಯಾ-ಪೆಸಿಫಿಕ್ ವಲಯದಾದ್ಯಂತ ಆರ್ಥಿಕ ಚಟುವಟಿಕೆಗಳು, ಜನರ ಓಡಾಟ, ವ್ಯಾಪಾರ ಮತ್ತು ಪೂರೈಕೆ ಸರಪಳಿಗಳಿಗೆ ಅಡ್ಡಿಪಡಿಸುವ ಮೂಲಕ ಉದ್ಯೋಗ ಮತ್ತು ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿದೆ. “ಭಾರತದಲ್ಲಿ, ಆಮದು ಮಾಡಿದ ಇಂಧನ ಮತ್ತು ಕಚ್ಚಾ ವಸ್ತುಗಳ ಮೇಲೆ ಅವಲಂಬಿತವಾಗಿರುವ ಅಥವಾ ಗಲ್ಫ್ ರಾಷ್ಟ್ರಗಳ ವ್ಯಾಪಾರಕ್ಕೆ ಸಂಬಂಧಿಸಿರುವ ಎಂಎಸ್‌ಎಂಇ (ಎಂಎಸ್‌ಎಂಇ – ಸಣ್ಣ ಮತ್ತು ಮಧ್ಯಮ ಕೈಗಾರಿಕೆ) ವಲಯಗಳಲ್ಲಿ ಉದ್ಯೋಗದ ಅಪಾಯಗಳು ಹೆಚ್ಚಾಗುವ ಸಾಧ್ಯತೆಯಿದೆ. ಸುಮಾರು ಶೇ. 90 ರಷ್ಟು ಉದ್ಯೋಗಗಳು ಅನೌಪಚಾರಿಕ ವಲಯದಲ್ಲಿರುವ ಭಾರತದಂತಹ ಕಾರ್ಮಿಕ ಮಾರುಕಟ್ಟೆಯಲ್ಲಿ ಇದು ಅತ್ಯಂತ ಗಂಭೀರವಾದ ವಿಷಯವಾಗಿದೆ” ಎಂದು ವರದಿ ಹೇಳಿದೆ.

ಆತಿಥ್ಯ (Hospitality), ಆಹಾರ ಸಂಸ್ಕರಣೆ, ನಿರ್ಮಾಣ ಸಾಮಗ್ರಿಗಳು, ಉಕ್ಕು ಆಧಾರಿತ ಉತ್ಪಾದನೆ, ಮತ್ತು ರತ್ನ ಹಾಗೂ ವಜ್ರಗಳ ಉದ್ಯಮಗಳಲ್ಲಿನ ಸಣ್ಣ ಸಂಸ್ಥೆಗಳು ಹೆಚ್ಚಿನ ಕಚ್ಚಾ ವಸ್ತುಗಳ ವೆಚ್ಚ, ಪೂರೈಕೆಯ ಕೊರತೆ ಮತ್ತು ವಿಳಂಬವಾದ ಅಥವಾ ರದ್ದಾದ ಆರ್ಡರ್‌ಗಳನ್ನು ಎದುರಿಸಬೇಕಾಗಬಹುದು. ಇದು ಉದ್ಯೋಗಗಳು, ಕೆಲಸದ ಅವಧಿ ಮತ್ತು ವ್ಯವಹಾರದ ನಿರಂತರತೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಈ ಒತ್ತಡಗಳು ಕೆಲಸದ ಅವಧಿಯ ಕಡಿತ, ಉದ್ಯೋಗ ನಷ್ಟ ಮತ್ತು ವ್ಯವಹಾರದ ಅಡೆತಡೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಸೀಮಿತ ಹಣಕಾಸಿನ ಸೌಲಭ್ಯ ಮತ್ತು ಸಾಲದ ಸೌಲಭ್ಯದ ಕೊರತೆ ಇರುವ ಅನೌಪಚಾರಿಕ ವಲಯದ ಕಾರ್ಮಿಕರು, ವಲಸೆ ಕಾರ್ಮಿಕರು ಮತ್ತು ಎಂಎಸ್‌ಎಂಇ ಸಂಸ್ಥೆಗಳ ಮೇಲೆ ಇದು ಹೆಚ್ಚಿನ ಪರಿಣಾಮ ಬೀರಲಿದೆ, ಎಂದು ವರದಿ ತಿಳಿಸಿದೆ.

ಭಾರತದಲ್ಲಿ, ಹಾರ್ಮುಜ್ ಜಲಸಂಧಿಯ ಸುತ್ತಲಿನ ಅಡೆತಡೆಗಳಿಂದಾಗಿ ವೈದ್ಯಕೀಯ ಉಪಕರಣಗಳ ಕಚ್ಚಾ ವಸ್ತುಗಳ ವೆಚ್ಚವು ಸುಮಾರು 50% ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಇದರೊಂದಿಗೆ, ಔಷಧಿಗಳ ಸಗಟು ಬೆಲೆಗಳು ಈಗಾಗಲೇ 10-15% ರಷ್ಟು ಹೆಚ್ಚಾಗಿವೆ ಎಂದು ವರದಿ ಹೇಳಿದೆ.




 









ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಮಿಳುನಾಡು: ಕ್ಷೇತ್ರ ಪುನರ್ವಿಂಗಡೆ ವಿರುದ್ಧ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ: ಕೇಂದ್ರ ಸರ್ಕಾರಕ್ಕೆ ಎಂ.ಕೆ. ಸ್ಟಾಲಿನ್ ಎಚ್ಚರಿಕೆ

ಚೆನ್ನೈ: ಏಪ್ರಿಲ್ 16 ರಂದು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಾಗಿರುವ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ವಿರುದ್ಧ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗಳ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷರು ಮಂಗಳವಾರ ಬಿಜೆಪಿ...

ಗೋ-ರಕ್ಷಕರ ದಾಳಿಯ ನಂತರ ವ್ಯಕ್ತಿ ನಾಪತ್ತೆ: ಜಮ್ಮುವಿನ ರಾಂಬನ್‌ನಲ್ಲಿ ತೀವ್ರ ಪ್ರತಿಭಟನೆ; ಸಾಮಾಜಿಕ ಮಾಧ್ಯಮಗಳಲ್ಲೂ ಆಕ್ರೋಶ

ಗೋರಕ್ಷಕರ ದಾಳಿಗೆ ಸಂಬಂಧಿಸಿ ಸ್ಥಳೀಯ ನಿವಾಸಿ ತನ್ವೀರ್ ಅಹ್ಮದ್ ಚೋಪನ್ ನಾಪತ್ತೆಯಾದ ನಂತರ ಸೋಮವಾರ ರಾಂಬನ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಸಾವಿರಾರು ಜನರು ಸಂಚಾರ ತಡೆದು ಪ್ರತಿಭಟಿಸಿದ್ದಾರೆ. ಪೊಲೀಸರ ಪ್ರಕಾರ,...

ನಿತೀಶ್ ಕುಮಾರ್ ರಾಜೀನಾಮೆ : ಬಿಹಾರದ ಹೊಸ ಸಿಎಂ ಆಗಿ ಬಿಜೆಪಿಯ ಸಾಮ್ರಾಟ್ ಚೌಧರಿ ಆಯ್ಕೆ

ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದು, ಹೊಸ ಮುಖ್ಯಮಂತ್ರಿಯಾಗಿ ಬಿಜೆಪಿಯ ಸಾಮ್ರಾಟ್ ಚೌಧರಿ ಅವರನ್ನು ಆಯ್ಕೆ ಮಾಡಲಾಗಿದೆ. ಪಾಟ್ನಾದ ಲೋಕ ಭವನದಲ್ಲಿ ಮಂಗಳವಾರ (ಏ.14) ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ)...

ಮುಂಬೈ ಸಂಗೀತ ಕಾರ್ಯಕ್ರಮದಲ್ಲಿ ಮಾದಕ ದ್ರವ್ಯ ಸೇವನೆಯಿಂದ ಇಬ್ಬರು ವಿದ್ಯಾರ್ಥಿಗಳು ಸಾವು, ಐವರ ಬಂಧನ; ತನಿಖೆ

ಮಂಗಳವಾರ ಮುಂಬೈನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಮಾದಕ ದ್ರವ್ಯ ಸೇವಿಸಿದ ಆರೋಪದ ಮೇಲೆ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ದಕ್ಷಿಣ ಮುಂಬೈನ ಪ್ರತಿಷ್ಠಿತ ಸಂಸ್ಥೆಯ ವಿದ್ಯಾರ್ಥಿಗಳು ಎಂಬಿಎ ಓದುತ್ತಿದ್ದರು ಎಂದು...

ನಸೀರ್ ಅಹ್ಮದ್‌ರನ್ನು ವಜಾಗೊಳಿಸಿದ್ದೇಕೆ… ಡಿಕೆಶಿ ಹೇಳಿದ್ದೇನು?  

ಮುಖ್ಯಮಂತ್ರಿಗಳು ತಮ್ಮದೇ ಆದ ವಿವಿಧ ಮೂಲಗಳಿಂದ ಮಾಹಿತಿ ಪಡೆದು, ಪಕ್ಷದ ಹಿತದೃಷ್ಟಿಯಿಂದ ನಸೀರ್ ಅಹ್ಮದ್ ವಿಚಾರದಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಮಂಗಳವಾರ (ಏ.14)...

ಆಟೋ ಪರ್ಮಿಟ್‌ಗಳಿಗೆ ಮರಾಠಿ ಭಾಷೆ ಕಡ್ಡಾಯ ನಿಯಮ; ಆರ್‌ಟಿಒ ಅಧಿಕಾರಿಗೆ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ

ಕಳವಳಕಾರಿ ಬೆಳವಣಿಗೆಯಲ್ಲಿ, ಆಟೋ-ರಿಕ್ಷಾ ಪರ್ಮಿಟ್ ಪರಿಶೀಲನೆಗೆ ಮರಾಠಿ ಜ್ಞಾನವನ್ನು ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ಆದೇಶಕ್ಕೆ ವಿರೋಧ ವ್ಯಕ್ತವಾಗಿದ್ದು, ಇದರಲ್ಲಿ ಬಿಷ್ಣೋಯ್ ಗ್ಯಾಂಗ್ ಭಾಗಿಯಾಗಿದೆ ಎಂದು ಆರೋಪಿಸಲಾಗಿದೆ. ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಅಧಿಕಾರಿ...

‘ನಾನು ಪ್ರೀತಿಯಲ್ಲಿ ನಂಬಿಕೆ ಇಡುತ್ತೇನೆ, ಬುಲ್ಡೋಜರ್‌ ರಾಜಕೀಯದಲ್ಲಿ ಅಲ್ಲ’: ಯುಪಿ ಮಾದರಿ ವಿವಾದದ ನಡುವೆ ಯೋಗಿ ವಿರುದ್ಧ ಮಮತಾ ದಾಳಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ದಾಳಿ ನಡೆಸಿದ್ದಾರೆ. ಅವರು ಬುಲ್ಡೋಜರ್ ರಾಜಕೀಯದಲ್ಲಿ ನಂಬಿಕೆ ಇಡುವುದಿಲ್ಲ ಎಂದು ಹೇಳಿದ್ದಾರೆ ಮತ್ತು ಉತ್ತರ ಪ್ರದೇಶದಲ್ಲಿ...

ಬಿಹಾರ| ಸಿಎಂ ಹುದ್ದೆಗೆ ರಾಜೀನಾಮೆ ನೀಡಲು ಅಣಿಯಾದ ನಿತೀಶ್ ಕುಮಾರ್ : ಸಂಪುಟ ವಿಸರ್ಜನೆಗೆ ಶಿಫಾರಸು

ಬಿಹಾರದಲ್ಲಿ ಹೊಸ ಸರ್ಕಾರ ರಚನೆ ಕಸರತ್ತು ತೀವ್ರಗೊಂಡಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಅಣಿಯಾಗಿದ್ದು, ಅದಕ್ಕೂ ಮೊದಲು ಸಚಿವ ಸಂಪುಟ ವಿಸರ್ಜಿಸಲು ಅವರು ಶಿಫಾರಸು ಮಾಡಿದ್ದಾರೆ....

‘ರಾತ್ರೋರಾತ್ರಿ ಒಪ್ಪಂದ ಸಾಧ್ಯವಿಲ್ಲ’: ಪಶ್ಚಿಮ ಏಷ್ಯಾ ಯುದ್ಧದ ಕುರಿತು ನಿರಂತರ ಮಾತುಕತೆಗೆ ವಿಶ್ವಸಂಸ್ಥೆ ಒತ್ತಾಯ

ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಅವರು ಅಮೆರಿಕ ಮತ್ತು ಇರಾನ್ ನಡುವೆ ನಿರಂತರ ರಾಜತಾಂತ್ರಿಕ ಮಾತುಕತೆಗೆ ಕರೆ ನೀಡಿದ್ದಾರೆ. "ಒಂದು ಒಪ್ಪಂದವನ್ನು ರಾತ್ರೋರಾತ್ರಿ ತಲುಪಲು ಸಾಧ್ಯವಿಲ್ಲ" ಎಂದು ಒತ್ತಿ ಹೇಳಿದ ಅವರು ಪಶ್ಚಿಮ...

ಡಿಲಿಮಿಟೇಷನ್ ಮೂಲಕ ದಕ್ಷಿಣ ಭಾರತದ ಪ್ರಭಾವ ಕಸಿದುಕೊಳ್ಳಲು ಬಿಜೆಪಿಯಿಂದ ಪಿತೂರಿ: ರೇವಂತ್ ರೆಡ್ಡಿ

ಜನಸಂಖ್ಯೆ ಅನುಪಾತದ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆಯು ದಕ್ಷಿಣ ರಾಜ್ಯಗಳಿಗೆ ಅನ್ಯಾಯವನ್ನುಂಟು ಮಾಡುತ್ತದೆ ಎಂದು ಎಚ್ಚರಿಸಿದ ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ, ರಾಜಕೀಯ ಪಕ್ಷಗಳು ಮತ್ತು ಇತರರೊಂದಿಗೆ ವ್ಯಾಪಕ ಸಮಾಲೋಚನೆಯ...