Homeಅಂಕಣಗಳುಆ ಗುರುತು ಮಾರಿ ನಿಮ್ಮ ಊರು ಕಡೆ ಬಂದದೇನು?

ಆ ಗುರುತು ಮಾರಿ ನಿಮ್ಮ ಊರು ಕಡೆ ಬಂದದೇನು?

- Advertisement -
- Advertisement -

ನಮ್ಮೂರ ಕಡೆ ಹಳ್ಳಿಯೊಳಗ ಒಂದು ಹೆಣ್ಣು ದೇವರು ಇರತದ. ಅದರ ಹೆಸರು ಗುರುತ ಮಾರಿ ಅಥವಾ ತುಪ್ಪದ ಮಾಳವ್ವ . ಇದೇನು ಬನಶಂಕರಿ ಜಾತ್ರಿಯೊಳಗ “ಓಡಿ ಹೋದ ಹುಡುಗಿ ಅರ್ಥಾತ್ ಬೆವರಿನ ಬೆಲೆ ನಿನಗೇನು ಗೊತ್ತೋ ಖೋಡಿ” ಅನ್ನೋ ಕಂಪನಿ ನಾಟಕದ ಹೆಸರು ಇದ್ದಂಗ ಐತೆಲ್ಲಾ ಅಂತ ಅನಬ್ಯಾಡ್ರಿ. ಸಂಸ್ಕೃತದ ಘೃತಮಾರಿ ಅನ್ನೋದು ಹೋಗಿ ಗುರುತು ಮಾರಿ ಅಂತ ಆಗೇತಿ.

ಆದರ ನಾನು ಈಗ ಹೇಳಲಿಕ್ಕೆ ಹೊಂಟಿದ್ದು ಆ ಗುರುತು ಮಾರಿ ಬಗ್ಗೆ ಅಲ್ಲ.

ಕೇಂದ್ರ ಸರಕಾರ ಹಾಗೂ ಕೆಲವು ರಾಜ್ಯ ಸರಕಾರಗಳು ಸೇರಿ ಗುಂಪಿನೊಳಗಿನ ನಮ್ಮ- ನಿಮ್ಮ ಗುರುತು ಹಚ್ಚಲಿಕ್ಕೆ ಏನು ಹೊಸಾ ತಂತ್ರಜ್ಞಾನ ಉಪಯೋಗಿಸಲಿಕ್ಕೆ ಹತ್ಯಾರಲ್ಲಾ ಆ ಗುರುತು ಮಾರಿ ಬಗ್ಗೆ.

ಅದು ಫೇಸಿಯಲ್ ರಿಕಗ್ನಿಷನ್ ಟೆಕ್ನಾಲಜಿ ಅಥವಾ ಅಡ್ವಾನ್ಸಡ ಫೇಸಿಯಲ್ ರಿಕಗ್ನಿಷನ್ ಟೆಕ್ನಾಲಜಿ (ಎಫ್ ಆರ್ ಟಿ ಅಥವಾ ಎ ಎಫ್ ಆರ್ ಟಿ). ಬಲಾಢ್ಯರು ಜನಸಾಮಾನ್ಯರು, ಅಮಾಯಕರು, ಮಾರಿ ಗುರುತು ಹಿಡದು ಇದು ಅವರ ಜೀವ ತೆಗೀಲಿಕ್ಕೆ ಅನುವು ಮಾಡಿಕೊಡೋ ವೈರಿ ಇದು. ಆದ್ದರಿಂದ ಇದನ್ನು ಗುರುತು ಮಾರಿ ಅಂತ ಅನ್ನೋದು.

ಈಗೇನಾದಪಾ ಅಂದರ ಗೋಂಡವಾನಾ ಪ್ರದೇಶದ ತಿಕ್ಕಾಟದಿಂದ ಹುಟ್ಟಿದ ಭರತಖಂಡದಾಗ ಒಂದು ಪ್ರಜಾತಂತ್ರ ವ್ಯವಸ್ಥೆ, ಅದಕ್ಕ ಒಂದು ಸಂವಿಧಾನಾ, ಚುನಾಯಿತ ಸರಕಾರ ಅಂತ ಅದಾವು. ಅದರಾಗ ಒಂದು ಮೂಲ ಮಂತ್ರ ಐತಿ. ಸರಕಾರದ ಯಾವುದೇ ಕೆಲಸದ ಹಿಂದೆ ಕಾನೂನಿಗೆ ಅನುಸಾರ ಆಗಿ ಇರಬೇಕು. ಅಂದರ ಯಾವ ವಿಷಯ ಕಾನೂನಿಗೆ ವಿರುದ್ಧವಾಗಿ ಅದನೋ ಅಥವಾ ಯಾವುದರ ಬಗ್ಗೆ ಕಾಚಿನೂನು ಇಲ್ಲವೋ ಅಂಥಾ ಕೆಲಸ ಸರಕಾರ ಮಾಡಬಾರದು, ಅಂತ.

ಈಗಿನ ನಮ್ಮ ಘನ ಸರಕಾರಗಳು ಥೇಟ್ ಇಂಥಾ ಕೆಲಸ ಮಾಡಲಿಕ್ಕೆ ಹತ್ಯಾವು. ಅದಕ್ಕ ನಮ್ಮೆಲ್ಲಾರೂ ಬುಡಕ್ಕ ಬಂದೇತಿ. ಅಂಥ ಅನೇಕ ವಿಷಯದಾಗ ಮೊದಲನೇದ್ದೂ ಹಾಗೂ ಭಾಳ ಅಪಾಯಕಾರಿಯಾದದ್ದೂ ಅಂದರ ಈ ಎಫ್ ಆರ್ ಟಿ ಗುರುತು ಮಾರಿ. ಅದು ಕೃತಕ ಬುದ್ಧಿಮತ್ತೆ ಉಪಯೋಗಿಸಿ ಗುಂಪಿನಾಗ ಜನರನ್ನ ಪತ್ತೆ ಹಚ್ಚೋ ಸಾಧನ.

ಮೊನ್ನಿನ ದೆಹಲಿ ದಂಗೆಯೊಳಗ ಯಾರ್ಯಾರು ಇದ್ದರೋ ಅವರನ್ನ ನಾವು ಗುರುತು ಮಾರಿಯಿಂದ ಕಂಡು ಹಿಡಿಲಾಕ ಹತ್ತೇವಿ. ಸುಮಾರು ಒಂದು ಸಾವಿರದಾ ಒಂದು ನೂರು ಜನಾ ಸಿಕ್ಕಾರ ಅಂತ ಹೇಳಿ ದೆಹಲಿ ಪೊಲಿಸ ಇಲಾಖೆ ಮುಖ್ಯಸ್ಥರೂ ಆಗಿರುವ ಕೇಂದ್ರ ಗೃಹ ಮಂತ್ರಿ ಅಮಿತಷಾ ಅವರು ಹೇಳ್ಯಾರು. ಹಂಗಂದರ ಏನು? ಒಂದು ಗುಂಪಿನ, ಪ್ರತಿಭಟನೆಯ, ಹೊಡೆದಾಟದ ವಿಡಿಯೋ ನೋಡಿ ಅದರಾಗ ಒಬ್ಬೊಬ್ಬರ ಮುಖ ಪರಿಚಯ ಹಿಡದು ಅವರನ್ನ ದಸ್ತಗಿರಿ ಮಾಡೋದು. ಆಮ್ಯಾಲೆ ಅವರ ವಿರುದ್ಧ ಅದ ವಿಡಿಯೋ ಸಾಕ್ಷಿ ಅಂತ ಕೋರ್ಟಿನ್ಯಾಗ ತೋರಸೋದು. ಅವರಿಗೆ ಶಿಕ್ಷೆ ಆಗೋ ಹಂಗ ಮಾಡೋದು.

ಮ್ಯಾಲ ನೋಟಕ್ಕ ಇದು ಇಷ್ಟು ಸರಳ ಅಂತ ಅನಿಸಿದರೂ ಸ್ವಲ್ಪ ವಿಚಾರ ಮಾಡಿದರೂ ಇದು ಅತಿ ಭಯಂಕರ ಅನ್ನೋದು ಗೊತ್ತಾಗತದ. ಮೊದಲನೇಯದಾಗಿ ಅದು ನೂರಕ್ಕ ನೂರು ಖಚಿತ ಅಲ್ಲ. ಅದರಲ್ಲಿ ಏನಾದರೂ ತಪ್ಪಾಗಿ ರಾಮನ ಬದಲಿಗೆ ರಹೀಮನ ದಸ್ತಗಿರಿ ಆತು ಅಂದರ ಅದನ್ನ ವಿರೋಧ ಮಾಡೋದು ಯಾರು? ಮಾನವರಿಂದ ತಪ್ಪಾಗಿಲ್ಲ, ಕಂಪ್ಯೂಟರಿನಿಂದ ತಪ್ಪಾಗೇದ ಅಂತ ಕೋರ್ಟಿಗೆ ಯಾರು ಹೇಳೋರು?

ಚೈನಾದಾಗ ಒಬ್ಬ ಮನಿಷಾ ಕಳ್ಳತನಾ ಮಾಡಿ ಒಂದು ಒಪೇರಾ ನಾಟಕ ಗೃಹಕ್ಕ ಹೋಗಿ ಕೂತ. ಅಲ್ಲಿ ಸುಮಾರು 35,000 ಜನಾ ಸೇರಿದ್ದರು. ನನ್ನ ಇಲ್ಲಿ ಯಾರು ಗುರುತು ಹಿಡೀತಾರ ಅಂತ. ಆದರ ಸರಕಾರದ ಸೀಸಿಟಿವಿಯೊಳಗಿನ ಗುರುತು ಮಾರಿ ಅವನನ್ನು ಗುರುತು ಹಿಡೀತು. ಆ ನಾಟಕ ಮುಗದ ಕೂಡಲೇ ಪೊಲೀಸರ ನಾಟಕ ಸುರು ಆತು. ಅವನನ್ನು ಹಿಡಕೊಂಡು ಜೈಲಿಗೆ ಹಾಕಿದರು. ಅದು ದೊಡ್ಡ ಸಾಧನೆ, ಮುಂದಿನ ಶತಮಾನದ ತಂತ್ರಜ್ಞಾನವನ್ನ ಇದ ಶತಮಾನದಾಗ ಬಳಸಿದ ದೇಶ ಚೈನಾ ಅಂತ ಅಂತಾರಾಷ್ಟ್ರೀಯ ಪೇಪರು- ಟೀವಿಗಳಲ್ಲೆ ಬಂತು. ಚೈನಾ ಅಧ್ಯಕ್ಷ ಷೀ ಸಾಹೇಬರು ಖುಷಿಯಾದರು. ಆದರ ಅದರಾಗ ಕಾನೂನುಬದ್ಧ ಪ್ರಕ್ರಿಯೆಯನ್ನ ಬಳಸಲಾಗಿತ್ತೇ? ಆ ಒಬ್ಬನನ್ನ ಹಿಡಿಯೋದರಾಗ 34,999 ಜನರ ಗುರುತು- ಚಹರೆ, ವೈಯಕ್ತಿಕ ಮಾಹಿತಿ, ಅಪರಾಧ ಹಿನ್ನೆಲೆ ಎಲ್ಲಾ ಸರಕಾರದ ಕಡೆ ಹೆಂಗ ಬಂತು ಅಂತ ಯಾರೂ ಕೇಳಲಿಲ್ಲ. ಅಮಾಯಕ ಸಾಮಾನ್ಯರ ವೈಯಕ್ತಿಕ ಮಾಹಿತಿ ಇಟಗೊಂಡು ಸರಕಾರ ಏನು ಮಾಡತದ? ಅದನ್ನು ಸರಕಾರ ಹೆಂಗ ಸಂಗ್ರಹ ಮಾಡತದ ಅಂತ ಚರ್ಚೆ ಆಗಲಿಲ್ಲ.

ಆ ಷೀ ಸಾಹೇಬರು ಮಾಡಿದರೂ ಅಂತ ನಮ್ಮ ಷಾ ಸಾಹೇಬರೂ ಅದನ್ನ ಮಾಡಲಿಕ್ಕೆ ಹತ್ಯಾರ.

ಈಗಿನ ಕಾನೂನುಪ್ರಕಾರ, ಇಲೆಕ್ಟ್ರಾನಿಕ ಸಾಕ್ಷಿಗಳನ್ನು ಮುಖ್ಯ ಸಾಕ್ಷಿ ಅಂತ ಕೋರ್ಟಿನಲ್ಲಿ ಪರಿಗಣಿಸೋಹಂಗಿಲ್ಲ . ಆದರ ಪೂರಕ ಸಾಕ್ಷಿ ಅಂತ ಪರಿಗಣಿಸಬಹುದು. ಈ ದೇಶದ ಅರ್ಧಕ್ಕರ್ಧ ಅಪರಾಧಗಳಿಗೆ ಪೂರಕ ಸಾಕ್ಷಿನ ಬಳಸಲಾಗತದ.

ಹಂಗಿದ್ದಾಗ ಇದು ಮಷೀನಿನ ತಪ್ಪು ಇದನ್ನು ಸಾಕ್ಷಿಯಾಗಿ ಒಪ್ಪಬಾರದು ಅಂತ ಸನ್ಮಾನ್ಯ ನ್ಯಾಯಾಲಯಕ್ಕ ಯಾರು ಹೇಳಿಕೊಡೋದು? ಯಾರರ ರಸ್ತೆ ಬಾಜೂ ಕಾಯಿಪಲ್ಲೆ ಮಾರವ ಅಥವಾ ಟೈರ ಪಂಚರ್ ಮಾಡೋ ಸಲೀಮನ್ನ ಹಿಡದು ನೀನು ವಿಡಿಯೋದಾಗ ಇದ್ದೀ, ನಿನ್ನನ್ನ ಗುರುತುಮಾರಿ ಗುರುತು ಹಿಡದದ ಅಂತ ಪೊಲೀಸರ ಒದ್ದು ಎಳಕೊಂಡು ಹೋದರ ಏನು ಹೇಳಬೇಕು? ನಮ್ಮ ಪೊಲೀಸರಿಗೆ – ವಕೀಲರಿಗೆ ಇರಬೇಕಾದ ಬುದ್ಧಿಮತ್ತೆನ ಇರೋದು ಕಮ್ಮಿ ಇನ್ನು ಕೃತಕ ಬುದ್ಧಿಮತ್ತೆಯ ವಿರುದ್ಧ ಅವರು ಸೆಣಸಾಡೋದು- ವಾದ ಮಾಡೋದು ಹೆಂಗ ಸಾಧ್ಯ ಆಕ್ಕೆತಿ?

ಪೊಲೀಸರು ತಮಗ ಆಗಲಾರದವರನ್ನ, ಆಳುವ ಪಕ್ಷದ ವಿರೋಧಿಗಳನ್ನ, ಸರಕಾರವನ್ನ ತೆಗಳಿದವರನ್ನ , ಇತರರು ಆರಾಧಿಸುವ ಸೂಪರ್ ಹೀರೋ ನಾಯಕನನ್ನ ಸಕಾರಣವಾಗಿ ಟೀಕೆ ಮಾಡಿದವರನ್ನ ಸಿಕ್ಕಸಿಕ್ಕಂಗ ಹಿಡಕೊಂಡು ಹೋಗಿ ನಮ್ಮ ವಿಡಿಯೋ ಹೇಳೇತಿ, ಅದಕ್ಕ ಕರಕೊಂಡು ಹೊಂಟೇವಿ ಅಂತ ಅಂದರ ಹೆಂಗ? ಕಾನೂನುಪಾಲಕರು ತಮ್ಮ ತಲಿ ಉಪಯೋಗಿಸಬೇಕೇ ಹೊರತು ವಿಡಿಯೋ ನೋಡುವ ಕಂಪ್ಯೂಟರ್‍ನಲ್ಲ. ಅವರಿಗೆ ಇರಬೇಕಾದ್ದು ಮಾನವೀಯತೆ ಹಾಗೂ ಸಂತಾಪ. ಅದು ಇಲ್ಲದೇ ತಮ್ಮ ಬುದ್ಧಿ ತೊಗೊಂಡು ಹೋಗಿ ಮಷೀನಿಗೆ ಕೊಟ್ಟರ ಏನಾನ ಅನಾಹುತ ಆಗತಾವೋ ಏನೋ?

ಟಾಮ್ ಕ್ರೂಸ್ ಅನ್ನೋ ಹಾಲಿವುಡ್ ಹೀರೋ ಮೈನಾರಿಟಿ ರಿಪೋರ್ಟು ಅನ್ನೋ ಪಿಚ್ಚಿರಿನಾಗ ಮಾಡಿದ್ದ. ಅದರಾಗ ಮೂರು ಜನ ಅಕಶೇರುಕಗಳು ಈ ಊರಿನ್ಯಾಗ ಇನ್ನ ಮುಂದ ಏನ ಅಪರಾಧ ಆಗತದ ಅಂತ ಭವಿಷ್ಯ ಹೇಳತಾವು. ಅದನ್ನು ನೋಡಿ ಪೊಲೀಸರು ಭಾವಿ ಅಪರಾಧಿಗಳನ್ನ ಹಿಡೀತಾರ. ಇದನ್ನ ಭಾರತದ ಮಟ್ಟಿಗೆ ಕಲ್ಪಿಸಿಕೊಳ್ಳಲಿಕ್ಕೂ ಹೆದರಿಕಿ ಆಗತದ. ಆದರ ನಮ್ಮ ಘನ ಕೇಂದ್ರ ಸರಕಾರ ಈಗಾಗಲೇ ಒಂದು ಸಾಫ್ಟವೇರು ಉಪಯೋಗಿಸಲಿಕ್ಕೆ ಹತ್ತೇದ. ಅದು ಪ್ರಿಡಿಕ್ಟಿವ್ ಪೊಲಿಸಿಂಗ್ ಅಂತ. ಇದನ್ನ ಪೊಲೀಸ್ ಕಣಿಗಾರಿಕೆ ಅಂತ ಕರೀಬಹುದು. ಕಣೀ ಹೇಳವರನ್ನ ಕೇಳಿ ಪೊಲೀಸ ಇಲಾಖೆ ನಡೆಸಲಿಕ್ಕೆ ಆಗತದಾ? ಅದರ ಸಾಧ್ಯಾಸಾಧ್ಯತೆಗಳು ಏನು? ಅಪಾಯಗಳೇನು? ಇವನ್ನ ಯಾರು ವಿಚಾರ ಮಾಡ್ಯಾರ? ಕೊಲೆ- ಅತ್ಯಾಚಾರ ಮಾಡ್ಯಾರ ಅಂತ ಸಿದ್ಧ ಆದ ಮ್ಯಾಲೆ ಸಹಿತ ಅಪರಾಧಿಗಳನ್ನ ಗಲ್ಲಿಗೆ ಹಾಕಲಿಕ್ಕೆ – ಜೈಲಿಗೆ ಕಳಸಲಿಕ್ಕೆ ಹಿಂದ- ಮುಂದ ನೋಡೋ ಮಂದಿ ನಾವು. ಇನ್ನ ಇನ್ನ ಮುಂದ ಇವರು ಅಪರಾಧ ಮಾಡತಾರ ಅಂತ ಯಾರನ್ನಾದರೂ ಹಿಡಯೋದು ಹೆಂಗ?

ಗೃಹ ಸಚಿವರು ಈ ತಂತ್ರಜ್ಞಾನದ ಬಳಕೆಯ ಬಗ್ಗೆ ಅತಿ ಅಭಿಮಾನದಿಂದ ಲೋಕಸಭಾದಾಗ ಹೇಳಲಿಕ್ಕೆ ಹತ್ತಿದಾಗ ಅಲ್ಲಿದ್ದ ವಿರೋಧ ಪಕ್ಷದ ಸದಸ್ಯರು ಸುಮ್ಮನೇ ಬಾಯಿ ಮುಚ್ಚಿಕೊಂಡು ಕೂತಾರು. ಯಾಕ ಅಂದರ `ಎಫ್‍ಆರ್ ಟಿ’ ಅಂದರ ಏನಂದರ ಅವರಿಗೆ ಗೊತ್ತಿಲ್ಲ. ಅವರಿಗೆ ಯಾಕ ಗೊತ್ತಿಲ್ಲ ಅಂದರ ನಮಗ ಗೊತ್ತಿಲ್ಲ. ನಾವು ಜವಾಬ್ದಾರಿಯಿಂದ ಅವರನ್ನ ಆರಿಸಂಗಿಲ್ಲ. ನಮಗೆ ಲಾಯಕ್ಕಾದ ನಾಯಕರನ್ನೇ ನಾವು ಲೋಕಸಭೆಗೆ ಕಳಿಸತೇವೆಲ್ಲಾ. ಅವರು ಇಲ್ಲಿಂದ ದಿಲ್ಲಿಗೆ ಹೋಗುವಾಗ ನಾಯಕರ ನಡುವೆ ಒಂದು `ಲಾ’ ಸೇರಿಕೊಂಡು ಬಿಟ್ಟಿರತದ. ಅವರಿಗೆ ‘ಲಾ’ ಗೊತ್ತಿರಲಿ, ಬಿಡಲಿ. ಇಷ್ಟು ಘನಘೋರ ಘಟನೆಗಳು ನಮ್ಮ ಸುತ್ತ ನಡೀತಾ ಇದ್ದಾಗಲೂ ಸಹ ನಮ್ಮ ತಥಾಕಥಿತ ಪ್ರತಿನಿಧಿಗಳು ಸುಮ್ಮನೇ ಕೂತಾರ. ಆದರ ನಮಗ ಏನೂ ಮಾಡಲಿಕ್ಕೆ ಆಗವಲ್ಲದಲ್ಲಾ ಅಂತ ಅನಕೋ ಬ್ಯಾಡರಿ.

ಇಂಟರನೆಟ ಫ್ರೀಡಮ್ ಫೌಂಡೇಶನ್ ಅನ್ನೋ ಸಂಸ್ಥೆ ಇದರ ವಿರುದ್ಧ ಹೋರಾಟ ನಡೆಸೇದ. ಅದರ ವಕೀಲರು ಸರಕಾರದ ವಿರುದ್ಧ ನೋಟಿಸು ಕಳಿಸ್ಯಾರ. ಅದರ ಅಂತರ್ಜಾಲ ತಾಣಕ್ಕೆ (https://internetfreedom.in/) ಭೆಟ್ಟಿ ಕೊಟ್ಟು ಸದಸ್ಯರಾಗಿ, ಅವರಿಗೆ ನೈತಿಕ ಬೆಂಬಲ ಸೂಚಿಸಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...