Homeಅಂಕಣಗಳುಆ ಗುರುತು ಮಾರಿ ನಿಮ್ಮ ಊರು ಕಡೆ ಬಂದದೇನು?

ಆ ಗುರುತು ಮಾರಿ ನಿಮ್ಮ ಊರು ಕಡೆ ಬಂದದೇನು?

- Advertisement -
- Advertisement -

ನಮ್ಮೂರ ಕಡೆ ಹಳ್ಳಿಯೊಳಗ ಒಂದು ಹೆಣ್ಣು ದೇವರು ಇರತದ. ಅದರ ಹೆಸರು ಗುರುತ ಮಾರಿ ಅಥವಾ ತುಪ್ಪದ ಮಾಳವ್ವ . ಇದೇನು ಬನಶಂಕರಿ ಜಾತ್ರಿಯೊಳಗ “ಓಡಿ ಹೋದ ಹುಡುಗಿ ಅರ್ಥಾತ್ ಬೆವರಿನ ಬೆಲೆ ನಿನಗೇನು ಗೊತ್ತೋ ಖೋಡಿ” ಅನ್ನೋ ಕಂಪನಿ ನಾಟಕದ ಹೆಸರು ಇದ್ದಂಗ ಐತೆಲ್ಲಾ ಅಂತ ಅನಬ್ಯಾಡ್ರಿ. ಸಂಸ್ಕೃತದ ಘೃತಮಾರಿ ಅನ್ನೋದು ಹೋಗಿ ಗುರುತು ಮಾರಿ ಅಂತ ಆಗೇತಿ.

ಆದರ ನಾನು ಈಗ ಹೇಳಲಿಕ್ಕೆ ಹೊಂಟಿದ್ದು ಆ ಗುರುತು ಮಾರಿ ಬಗ್ಗೆ ಅಲ್ಲ.

ಕೇಂದ್ರ ಸರಕಾರ ಹಾಗೂ ಕೆಲವು ರಾಜ್ಯ ಸರಕಾರಗಳು ಸೇರಿ ಗುಂಪಿನೊಳಗಿನ ನಮ್ಮ- ನಿಮ್ಮ ಗುರುತು ಹಚ್ಚಲಿಕ್ಕೆ ಏನು ಹೊಸಾ ತಂತ್ರಜ್ಞಾನ ಉಪಯೋಗಿಸಲಿಕ್ಕೆ ಹತ್ಯಾರಲ್ಲಾ ಆ ಗುರುತು ಮಾರಿ ಬಗ್ಗೆ.

ಅದು ಫೇಸಿಯಲ್ ರಿಕಗ್ನಿಷನ್ ಟೆಕ್ನಾಲಜಿ ಅಥವಾ ಅಡ್ವಾನ್ಸಡ ಫೇಸಿಯಲ್ ರಿಕಗ್ನಿಷನ್ ಟೆಕ್ನಾಲಜಿ (ಎಫ್ ಆರ್ ಟಿ ಅಥವಾ ಎ ಎಫ್ ಆರ್ ಟಿ). ಬಲಾಢ್ಯರು ಜನಸಾಮಾನ್ಯರು, ಅಮಾಯಕರು, ಮಾರಿ ಗುರುತು ಹಿಡದು ಇದು ಅವರ ಜೀವ ತೆಗೀಲಿಕ್ಕೆ ಅನುವು ಮಾಡಿಕೊಡೋ ವೈರಿ ಇದು. ಆದ್ದರಿಂದ ಇದನ್ನು ಗುರುತು ಮಾರಿ ಅಂತ ಅನ್ನೋದು.

ಈಗೇನಾದಪಾ ಅಂದರ ಗೋಂಡವಾನಾ ಪ್ರದೇಶದ ತಿಕ್ಕಾಟದಿಂದ ಹುಟ್ಟಿದ ಭರತಖಂಡದಾಗ ಒಂದು ಪ್ರಜಾತಂತ್ರ ವ್ಯವಸ್ಥೆ, ಅದಕ್ಕ ಒಂದು ಸಂವಿಧಾನಾ, ಚುನಾಯಿತ ಸರಕಾರ ಅಂತ ಅದಾವು. ಅದರಾಗ ಒಂದು ಮೂಲ ಮಂತ್ರ ಐತಿ. ಸರಕಾರದ ಯಾವುದೇ ಕೆಲಸದ ಹಿಂದೆ ಕಾನೂನಿಗೆ ಅನುಸಾರ ಆಗಿ ಇರಬೇಕು. ಅಂದರ ಯಾವ ವಿಷಯ ಕಾನೂನಿಗೆ ವಿರುದ್ಧವಾಗಿ ಅದನೋ ಅಥವಾ ಯಾವುದರ ಬಗ್ಗೆ ಕಾಚಿನೂನು ಇಲ್ಲವೋ ಅಂಥಾ ಕೆಲಸ ಸರಕಾರ ಮಾಡಬಾರದು, ಅಂತ.

ಈಗಿನ ನಮ್ಮ ಘನ ಸರಕಾರಗಳು ಥೇಟ್ ಇಂಥಾ ಕೆಲಸ ಮಾಡಲಿಕ್ಕೆ ಹತ್ಯಾವು. ಅದಕ್ಕ ನಮ್ಮೆಲ್ಲಾರೂ ಬುಡಕ್ಕ ಬಂದೇತಿ. ಅಂಥ ಅನೇಕ ವಿಷಯದಾಗ ಮೊದಲನೇದ್ದೂ ಹಾಗೂ ಭಾಳ ಅಪಾಯಕಾರಿಯಾದದ್ದೂ ಅಂದರ ಈ ಎಫ್ ಆರ್ ಟಿ ಗುರುತು ಮಾರಿ. ಅದು ಕೃತಕ ಬುದ್ಧಿಮತ್ತೆ ಉಪಯೋಗಿಸಿ ಗುಂಪಿನಾಗ ಜನರನ್ನ ಪತ್ತೆ ಹಚ್ಚೋ ಸಾಧನ.

ಮೊನ್ನಿನ ದೆಹಲಿ ದಂಗೆಯೊಳಗ ಯಾರ್ಯಾರು ಇದ್ದರೋ ಅವರನ್ನ ನಾವು ಗುರುತು ಮಾರಿಯಿಂದ ಕಂಡು ಹಿಡಿಲಾಕ ಹತ್ತೇವಿ. ಸುಮಾರು ಒಂದು ಸಾವಿರದಾ ಒಂದು ನೂರು ಜನಾ ಸಿಕ್ಕಾರ ಅಂತ ಹೇಳಿ ದೆಹಲಿ ಪೊಲಿಸ ಇಲಾಖೆ ಮುಖ್ಯಸ್ಥರೂ ಆಗಿರುವ ಕೇಂದ್ರ ಗೃಹ ಮಂತ್ರಿ ಅಮಿತಷಾ ಅವರು ಹೇಳ್ಯಾರು. ಹಂಗಂದರ ಏನು? ಒಂದು ಗುಂಪಿನ, ಪ್ರತಿಭಟನೆಯ, ಹೊಡೆದಾಟದ ವಿಡಿಯೋ ನೋಡಿ ಅದರಾಗ ಒಬ್ಬೊಬ್ಬರ ಮುಖ ಪರಿಚಯ ಹಿಡದು ಅವರನ್ನ ದಸ್ತಗಿರಿ ಮಾಡೋದು. ಆಮ್ಯಾಲೆ ಅವರ ವಿರುದ್ಧ ಅದ ವಿಡಿಯೋ ಸಾಕ್ಷಿ ಅಂತ ಕೋರ್ಟಿನ್ಯಾಗ ತೋರಸೋದು. ಅವರಿಗೆ ಶಿಕ್ಷೆ ಆಗೋ ಹಂಗ ಮಾಡೋದು.

ಮ್ಯಾಲ ನೋಟಕ್ಕ ಇದು ಇಷ್ಟು ಸರಳ ಅಂತ ಅನಿಸಿದರೂ ಸ್ವಲ್ಪ ವಿಚಾರ ಮಾಡಿದರೂ ಇದು ಅತಿ ಭಯಂಕರ ಅನ್ನೋದು ಗೊತ್ತಾಗತದ. ಮೊದಲನೇಯದಾಗಿ ಅದು ನೂರಕ್ಕ ನೂರು ಖಚಿತ ಅಲ್ಲ. ಅದರಲ್ಲಿ ಏನಾದರೂ ತಪ್ಪಾಗಿ ರಾಮನ ಬದಲಿಗೆ ರಹೀಮನ ದಸ್ತಗಿರಿ ಆತು ಅಂದರ ಅದನ್ನ ವಿರೋಧ ಮಾಡೋದು ಯಾರು? ಮಾನವರಿಂದ ತಪ್ಪಾಗಿಲ್ಲ, ಕಂಪ್ಯೂಟರಿನಿಂದ ತಪ್ಪಾಗೇದ ಅಂತ ಕೋರ್ಟಿಗೆ ಯಾರು ಹೇಳೋರು?

ಚೈನಾದಾಗ ಒಬ್ಬ ಮನಿಷಾ ಕಳ್ಳತನಾ ಮಾಡಿ ಒಂದು ಒಪೇರಾ ನಾಟಕ ಗೃಹಕ್ಕ ಹೋಗಿ ಕೂತ. ಅಲ್ಲಿ ಸುಮಾರು 35,000 ಜನಾ ಸೇರಿದ್ದರು. ನನ್ನ ಇಲ್ಲಿ ಯಾರು ಗುರುತು ಹಿಡೀತಾರ ಅಂತ. ಆದರ ಸರಕಾರದ ಸೀಸಿಟಿವಿಯೊಳಗಿನ ಗುರುತು ಮಾರಿ ಅವನನ್ನು ಗುರುತು ಹಿಡೀತು. ಆ ನಾಟಕ ಮುಗದ ಕೂಡಲೇ ಪೊಲೀಸರ ನಾಟಕ ಸುರು ಆತು. ಅವನನ್ನು ಹಿಡಕೊಂಡು ಜೈಲಿಗೆ ಹಾಕಿದರು. ಅದು ದೊಡ್ಡ ಸಾಧನೆ, ಮುಂದಿನ ಶತಮಾನದ ತಂತ್ರಜ್ಞಾನವನ್ನ ಇದ ಶತಮಾನದಾಗ ಬಳಸಿದ ದೇಶ ಚೈನಾ ಅಂತ ಅಂತಾರಾಷ್ಟ್ರೀಯ ಪೇಪರು- ಟೀವಿಗಳಲ್ಲೆ ಬಂತು. ಚೈನಾ ಅಧ್ಯಕ್ಷ ಷೀ ಸಾಹೇಬರು ಖುಷಿಯಾದರು. ಆದರ ಅದರಾಗ ಕಾನೂನುಬದ್ಧ ಪ್ರಕ್ರಿಯೆಯನ್ನ ಬಳಸಲಾಗಿತ್ತೇ? ಆ ಒಬ್ಬನನ್ನ ಹಿಡಿಯೋದರಾಗ 34,999 ಜನರ ಗುರುತು- ಚಹರೆ, ವೈಯಕ್ತಿಕ ಮಾಹಿತಿ, ಅಪರಾಧ ಹಿನ್ನೆಲೆ ಎಲ್ಲಾ ಸರಕಾರದ ಕಡೆ ಹೆಂಗ ಬಂತು ಅಂತ ಯಾರೂ ಕೇಳಲಿಲ್ಲ. ಅಮಾಯಕ ಸಾಮಾನ್ಯರ ವೈಯಕ್ತಿಕ ಮಾಹಿತಿ ಇಟಗೊಂಡು ಸರಕಾರ ಏನು ಮಾಡತದ? ಅದನ್ನು ಸರಕಾರ ಹೆಂಗ ಸಂಗ್ರಹ ಮಾಡತದ ಅಂತ ಚರ್ಚೆ ಆಗಲಿಲ್ಲ.

ಆ ಷೀ ಸಾಹೇಬರು ಮಾಡಿದರೂ ಅಂತ ನಮ್ಮ ಷಾ ಸಾಹೇಬರೂ ಅದನ್ನ ಮಾಡಲಿಕ್ಕೆ ಹತ್ಯಾರ.

ಈಗಿನ ಕಾನೂನುಪ್ರಕಾರ, ಇಲೆಕ್ಟ್ರಾನಿಕ ಸಾಕ್ಷಿಗಳನ್ನು ಮುಖ್ಯ ಸಾಕ್ಷಿ ಅಂತ ಕೋರ್ಟಿನಲ್ಲಿ ಪರಿಗಣಿಸೋಹಂಗಿಲ್ಲ . ಆದರ ಪೂರಕ ಸಾಕ್ಷಿ ಅಂತ ಪರಿಗಣಿಸಬಹುದು. ಈ ದೇಶದ ಅರ್ಧಕ್ಕರ್ಧ ಅಪರಾಧಗಳಿಗೆ ಪೂರಕ ಸಾಕ್ಷಿನ ಬಳಸಲಾಗತದ.

ಹಂಗಿದ್ದಾಗ ಇದು ಮಷೀನಿನ ತಪ್ಪು ಇದನ್ನು ಸಾಕ್ಷಿಯಾಗಿ ಒಪ್ಪಬಾರದು ಅಂತ ಸನ್ಮಾನ್ಯ ನ್ಯಾಯಾಲಯಕ್ಕ ಯಾರು ಹೇಳಿಕೊಡೋದು? ಯಾರರ ರಸ್ತೆ ಬಾಜೂ ಕಾಯಿಪಲ್ಲೆ ಮಾರವ ಅಥವಾ ಟೈರ ಪಂಚರ್ ಮಾಡೋ ಸಲೀಮನ್ನ ಹಿಡದು ನೀನು ವಿಡಿಯೋದಾಗ ಇದ್ದೀ, ನಿನ್ನನ್ನ ಗುರುತುಮಾರಿ ಗುರುತು ಹಿಡದದ ಅಂತ ಪೊಲೀಸರ ಒದ್ದು ಎಳಕೊಂಡು ಹೋದರ ಏನು ಹೇಳಬೇಕು? ನಮ್ಮ ಪೊಲೀಸರಿಗೆ – ವಕೀಲರಿಗೆ ಇರಬೇಕಾದ ಬುದ್ಧಿಮತ್ತೆನ ಇರೋದು ಕಮ್ಮಿ ಇನ್ನು ಕೃತಕ ಬುದ್ಧಿಮತ್ತೆಯ ವಿರುದ್ಧ ಅವರು ಸೆಣಸಾಡೋದು- ವಾದ ಮಾಡೋದು ಹೆಂಗ ಸಾಧ್ಯ ಆಕ್ಕೆತಿ?

ಪೊಲೀಸರು ತಮಗ ಆಗಲಾರದವರನ್ನ, ಆಳುವ ಪಕ್ಷದ ವಿರೋಧಿಗಳನ್ನ, ಸರಕಾರವನ್ನ ತೆಗಳಿದವರನ್ನ , ಇತರರು ಆರಾಧಿಸುವ ಸೂಪರ್ ಹೀರೋ ನಾಯಕನನ್ನ ಸಕಾರಣವಾಗಿ ಟೀಕೆ ಮಾಡಿದವರನ್ನ ಸಿಕ್ಕಸಿಕ್ಕಂಗ ಹಿಡಕೊಂಡು ಹೋಗಿ ನಮ್ಮ ವಿಡಿಯೋ ಹೇಳೇತಿ, ಅದಕ್ಕ ಕರಕೊಂಡು ಹೊಂಟೇವಿ ಅಂತ ಅಂದರ ಹೆಂಗ? ಕಾನೂನುಪಾಲಕರು ತಮ್ಮ ತಲಿ ಉಪಯೋಗಿಸಬೇಕೇ ಹೊರತು ವಿಡಿಯೋ ನೋಡುವ ಕಂಪ್ಯೂಟರ್‍ನಲ್ಲ. ಅವರಿಗೆ ಇರಬೇಕಾದ್ದು ಮಾನವೀಯತೆ ಹಾಗೂ ಸಂತಾಪ. ಅದು ಇಲ್ಲದೇ ತಮ್ಮ ಬುದ್ಧಿ ತೊಗೊಂಡು ಹೋಗಿ ಮಷೀನಿಗೆ ಕೊಟ್ಟರ ಏನಾನ ಅನಾಹುತ ಆಗತಾವೋ ಏನೋ?

ಟಾಮ್ ಕ್ರೂಸ್ ಅನ್ನೋ ಹಾಲಿವುಡ್ ಹೀರೋ ಮೈನಾರಿಟಿ ರಿಪೋರ್ಟು ಅನ್ನೋ ಪಿಚ್ಚಿರಿನಾಗ ಮಾಡಿದ್ದ. ಅದರಾಗ ಮೂರು ಜನ ಅಕಶೇರುಕಗಳು ಈ ಊರಿನ್ಯಾಗ ಇನ್ನ ಮುಂದ ಏನ ಅಪರಾಧ ಆಗತದ ಅಂತ ಭವಿಷ್ಯ ಹೇಳತಾವು. ಅದನ್ನು ನೋಡಿ ಪೊಲೀಸರು ಭಾವಿ ಅಪರಾಧಿಗಳನ್ನ ಹಿಡೀತಾರ. ಇದನ್ನ ಭಾರತದ ಮಟ್ಟಿಗೆ ಕಲ್ಪಿಸಿಕೊಳ್ಳಲಿಕ್ಕೂ ಹೆದರಿಕಿ ಆಗತದ. ಆದರ ನಮ್ಮ ಘನ ಕೇಂದ್ರ ಸರಕಾರ ಈಗಾಗಲೇ ಒಂದು ಸಾಫ್ಟವೇರು ಉಪಯೋಗಿಸಲಿಕ್ಕೆ ಹತ್ತೇದ. ಅದು ಪ್ರಿಡಿಕ್ಟಿವ್ ಪೊಲಿಸಿಂಗ್ ಅಂತ. ಇದನ್ನ ಪೊಲೀಸ್ ಕಣಿಗಾರಿಕೆ ಅಂತ ಕರೀಬಹುದು. ಕಣೀ ಹೇಳವರನ್ನ ಕೇಳಿ ಪೊಲೀಸ ಇಲಾಖೆ ನಡೆಸಲಿಕ್ಕೆ ಆಗತದಾ? ಅದರ ಸಾಧ್ಯಾಸಾಧ್ಯತೆಗಳು ಏನು? ಅಪಾಯಗಳೇನು? ಇವನ್ನ ಯಾರು ವಿಚಾರ ಮಾಡ್ಯಾರ? ಕೊಲೆ- ಅತ್ಯಾಚಾರ ಮಾಡ್ಯಾರ ಅಂತ ಸಿದ್ಧ ಆದ ಮ್ಯಾಲೆ ಸಹಿತ ಅಪರಾಧಿಗಳನ್ನ ಗಲ್ಲಿಗೆ ಹಾಕಲಿಕ್ಕೆ – ಜೈಲಿಗೆ ಕಳಸಲಿಕ್ಕೆ ಹಿಂದ- ಮುಂದ ನೋಡೋ ಮಂದಿ ನಾವು. ಇನ್ನ ಇನ್ನ ಮುಂದ ಇವರು ಅಪರಾಧ ಮಾಡತಾರ ಅಂತ ಯಾರನ್ನಾದರೂ ಹಿಡಯೋದು ಹೆಂಗ?

ಗೃಹ ಸಚಿವರು ಈ ತಂತ್ರಜ್ಞಾನದ ಬಳಕೆಯ ಬಗ್ಗೆ ಅತಿ ಅಭಿಮಾನದಿಂದ ಲೋಕಸಭಾದಾಗ ಹೇಳಲಿಕ್ಕೆ ಹತ್ತಿದಾಗ ಅಲ್ಲಿದ್ದ ವಿರೋಧ ಪಕ್ಷದ ಸದಸ್ಯರು ಸುಮ್ಮನೇ ಬಾಯಿ ಮುಚ್ಚಿಕೊಂಡು ಕೂತಾರು. ಯಾಕ ಅಂದರ `ಎಫ್‍ಆರ್ ಟಿ’ ಅಂದರ ಏನಂದರ ಅವರಿಗೆ ಗೊತ್ತಿಲ್ಲ. ಅವರಿಗೆ ಯಾಕ ಗೊತ್ತಿಲ್ಲ ಅಂದರ ನಮಗ ಗೊತ್ತಿಲ್ಲ. ನಾವು ಜವಾಬ್ದಾರಿಯಿಂದ ಅವರನ್ನ ಆರಿಸಂಗಿಲ್ಲ. ನಮಗೆ ಲಾಯಕ್ಕಾದ ನಾಯಕರನ್ನೇ ನಾವು ಲೋಕಸಭೆಗೆ ಕಳಿಸತೇವೆಲ್ಲಾ. ಅವರು ಇಲ್ಲಿಂದ ದಿಲ್ಲಿಗೆ ಹೋಗುವಾಗ ನಾಯಕರ ನಡುವೆ ಒಂದು `ಲಾ’ ಸೇರಿಕೊಂಡು ಬಿಟ್ಟಿರತದ. ಅವರಿಗೆ ‘ಲಾ’ ಗೊತ್ತಿರಲಿ, ಬಿಡಲಿ. ಇಷ್ಟು ಘನಘೋರ ಘಟನೆಗಳು ನಮ್ಮ ಸುತ್ತ ನಡೀತಾ ಇದ್ದಾಗಲೂ ಸಹ ನಮ್ಮ ತಥಾಕಥಿತ ಪ್ರತಿನಿಧಿಗಳು ಸುಮ್ಮನೇ ಕೂತಾರ. ಆದರ ನಮಗ ಏನೂ ಮಾಡಲಿಕ್ಕೆ ಆಗವಲ್ಲದಲ್ಲಾ ಅಂತ ಅನಕೋ ಬ್ಯಾಡರಿ.

ಇಂಟರನೆಟ ಫ್ರೀಡಮ್ ಫೌಂಡೇಶನ್ ಅನ್ನೋ ಸಂಸ್ಥೆ ಇದರ ವಿರುದ್ಧ ಹೋರಾಟ ನಡೆಸೇದ. ಅದರ ವಕೀಲರು ಸರಕಾರದ ವಿರುದ್ಧ ನೋಟಿಸು ಕಳಿಸ್ಯಾರ. ಅದರ ಅಂತರ್ಜಾಲ ತಾಣಕ್ಕೆ (https://internetfreedom.in/) ಭೆಟ್ಟಿ ಕೊಟ್ಟು ಸದಸ್ಯರಾಗಿ, ಅವರಿಗೆ ನೈತಿಕ ಬೆಂಬಲ ಸೂಚಿಸಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ: ಎರಡು ಗಂಟೆಗಳಲ್ಲಿ 40 ಜನರಿಗೆ ಕಚ್ಚಿದ ಬೀದಿ ನಾಯಿ: ಚಿಕಿತ್ಸೆಗಾಗಿ ಆಸ್ಪತ್ರೆ ಎದುರು ಸರತಿ ಸಾಲಿನಲ್ಲಿ ನಿಂತ ಗಾಯಾಳುಗಳು

ಬೀಡ್: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಕೈಜ್ ಪಟ್ಟಣದಲ್ಲಿ ಬೀದಿ ನಾಯಿಯೊಂದು ಎರಡು ಗಂಟೆಗಳಲ್ಲಿ ಕನಿಷ್ಠ 40 ಜನರನ್ನು ಕಚ್ಚಿದ್ದು, ರೇಬೀಸ್ ವಿರುದ್ಧ ಲಸಿಕೆ ಪಡೆಯಲು ಸಂತ್ರಸ್ತರು ಸರ್ಕಾರಿ ಆಸ್ಪತ್ರೆಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುವಂತೆ...

ಇರಾನ್‌ಗೆ ಶಸ್ತ್ರಾಸ್ತ್ರ ಕಳುಹಿಸುವುದಕ್ಕೆ ಚೀನಾ ಅಧ್ಯಕ್ಷ ಜಿನ್‌ಪಿಂಗ್ ನಿರಾಕರಿಸಿದ್ದಾರೆ: ಡೊನಾಲ್ಡ್‌ ಟ್ರಂಪ್

"ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇರಾನ್‌ಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸುವುದನ್ನು ನಿರಾಕರಿಸಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ. ಚೀನಾ ಇರಾನ್‌ಗೆ ಯುದ್ಧಕ್ಕಾಗಿ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ ಎಂಬ ವರದಿಗಳ ನಂತರ ಅಮೆರಿಕದ...

‘ಉದ್ದೇಶಿತ ಮಹಿಳಾ ಮೀಸಲಾತಿಯಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಮಹಿಳೆಯರಿಗೆ ಪ್ರತ್ಯೇಕ ಕೋಟಾ ನಿಗದಿ ಮಾಡಬೇಕು’: ಮಾಯಾವತಿ

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಉದ್ದೇಶಿತ ಶೇಕಡಾ 33ರಷ್ಟು ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆಯರಿಗೆ ಪ್ರತ್ಯೇಕ ಕೋಟಾವನ್ನು ನಿಗದಿಪಡಿಸಬೇಕೆಂದು ಬಹುಜನ ಸಮಾಜ...

ಆತ್ಮಾವಲೋಕನಕ್ಕೆ ಸಿದ್ಧವಿಲ್ಲದ ಕಾಂಗ್ರೆಸ್ಸಿನಿಂದ ಅಲ್ಪಸಂಖ್ಯಾತರ ಭಾವನೆಗಳ ಮೇಲೆ ಹಲ್ಲೆ: ಎದ್ದೇಳು ಕರ್ನಾಟಕ

ಶಾಮನೂರು ಶಿವಶಂಕರಪ್ಪ ನಿಧನದ ಬಳಿಕ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯು ಕಾಂಗ್ರೆಸ್‌ ಪಕ್ಷದಲ್ಲಿ ಗೊಂದಲ ಮತ್ತು ವಿವಾದ ಉಂಟುಮಾಡಿದೆ. ಮತದಾನ ಮುಗಿದ ಬಳಿಕ, ಕಾಂಗ್ರೆಸ್‌ ಪಕ್ಷವು ಮುಸ್ಲಿಂ ನಾಯಕರಾದ...

ಮಹಿಳಾ ಮೀಸಲಾತಿ, ಕ್ಷೇತ್ರ ಮರುವಿಂಗಡಣೆ ಕುರಿತ ಚರ್ಚೆ: ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ಸೇರಿದ ವಿಪಕ್ಷ ನಾಯಕರು

ಸಂಸತ್ತಿನ ಮೂರು ದಿನಗಳ ವಿಶೇಷ ಅಧಿವೇಶನಕ್ಕೂ ಮುನ್ನ, ಮಹಿಳಾ ಮೀಸಲಾತಿ ಕಾನೂನು ಮತ್ತು ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ ತಿದ್ದುಪಡಿ ಕುರಿತು ಕಾರ್ಯತಂತ್ರವನ್ನು ಚರ್ಚಿಸಲು ವಿರೋಧ ಪಕ್ಷಗಳ ಉನ್ನತ ನಾಯಕರು ಬುಧವಾರ ನವದೆಹಲಿಯಲ್ಲಿರುವ ಕಾಂಗ್ರೆಸ್...

ಯೋಗೀಶ್‌ ಗೌಡ ಕೊಲೆ ಪ್ರಕರಣ : ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ದೋಷಿ

ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೀಶ್‌ಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪು ಹೊರಬಿದ್ದಿದ್ದು, ಹಾಲಿ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ವಿನಯ್‌ ಕುಲಕರ್ಣಿ ಸೇರಿ 19 ಮಂದಿ ಆರೋಪಿಗಳು ದೋಷಿಗಳು ಎಂದು ಜನಪ್ರತಿನಿಧಿಗಳ ವಿಶೇಷ...

ಉತ್ತರ ಪ್ರದೇಶ| ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ 17 ವರ್ಷದ ದಲಿತ ಬಾಲಕಿ ಆತ್ಮಹತ್ಯೆಗೆ ಶರಣು

ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ 17 ವರ್ಷದ ದಲಿತ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಹಳ್ಳಿಯಲ್ಲಿ ನಡೆದಿದೆ. ಹೋಳಿ ಹಬ್ಬದಂದು ನಡೆದಿತ್ತು ಎನ್ನಲಾದ ಅತ್ಯಾಚಾರ ಪ್ರಕರಣದಲ್ಲಿ ಸ್ಥಳೀಯ ಮೂವರು ಯುವಕರ...

“ತಲೆ ಮೇಲೆ ತೂಗುತ್ತಿದ್ದ ಕತ್ತಿ ಈಗ ಮೈಮೇಲೆ ಎರಗಿದೆ”: ಕ್ಷೇತ್ರ ಮರುವಿಂಗಡನೆ ವಿರುದ್ಧ ಸಮರ ಸಾರಿದ ಸ್ಟಾಲಿನ್; ರಾಜ್ಯಾದ್ಯಂತ ಕಪ್ಪು ಬಾವುಟ ಪ್ರತಿಭಟನೆಗೆ ಕರೆ

ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡನೆ ಪ್ರಕ್ರಿಯೆಯ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ತಮ್ಮ ಟೀಕೆಯನ್ನು ತೀವ್ರಗೊಳಿಸಿದ್ದು, ಇದನ್ನು ದಕ್ಷಿಣ ರಾಜ್ಯಗಳ ವಿರುದ್ಧದ 'ಐತಿಹಾಸಿಕ ಅನ್ಯಾಯ' ಎಂದು ಕರೆದಿದ್ದಾರೆ ಮತ್ತು ಗುರುವಾರ...

ಶಿಕೋಪುರ ಭೂ ವ್ಯವಹಾರದ ಹಣ ವರ್ಗಾವಣೆ ಪ್ರಕರಣ; ರಾಬರ್ಟ್ ವಾದ್ರಾಗೆ ದೆಹಲಿ ನ್ಯಾಯಾಲಯದಿಂದ ಸಮನ್ಸ್

ಹರಿಯಾಣದ ಶಿಕೋಪುರದಲ್ಲಿ ನಡೆದ ವಿವಾದಾತ್ಮಕ ಭೂ ವ್ಯವಹಾರಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಉದ್ಯಮಿ ರಾಬರ್ಟ್ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಆರೋಪಪಟ್ಟಿಯನ್ನು ಬುಧವಾರ ದೆಹಲಿ ನ್ಯಾಯಾಲಯವು ಪರಿಗಣಿಸಿದೆ....

ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ‌ ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಅಮಾನತು

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಆಂತರಿಕ ಭಿನ್ನತೆ ಸದ್ಯಕ್ಕೆ ಶಮನಗೊಳ್ಳುವ ಸಾಧ್ಯತೆ ಕಾಣುತ್ತಿಲ್ಲ. ಕಾಂಗ್ರೆಸ್‌ನ ರಾಜ್ಯ ಮತ್ತು ಹೈಕಮಾಂಡ್‌ ನಾಯಕರ ನಡೆ ಗಾಯಕ್ಕೆ ಮುಲಾಮು...