ಈ ಎರಡು ದೃಶ್ಯಗಳು ವಾರಗಳ ನಡುವೆ ರಾಜ್ಯದಲ್ಲಿ ಘಟಿಸಿದವುಗಳಾಗಿವೆ. ಒಂದು ಸಂವಿಧಾನವನ್ನು ಎತ್ತಿ ಹಿಡಿಯುತ್ತಾ ತ್ರಿವರ್ಣ ಧ್ವಜ ಹೊತ್ತು ಸಾಮರಸ್ಯ ನಡಿಗೆ. ಇನ್ನೊಂದು ತ್ರಿಶೂಲ ಹಿಡಿದು, ಏರ್ ಗನ್ ಹಿಡಿದು ಸಶಸ್ತ್ರ ಅಭ್ಯಾಸ!
ಮೊದಲನೆಯ ದೃಶ್ಯ ಉಡುಪಿಯಲ್ಲಿ ನಡೆದಿದ್ದು. ಅಲ್ಲಿ ರಾಜ್ಯದಾದ್ಯಂತ ಮಕ್ಕಳು, ಯುವಜನರು ಹಾಗೂ ಹಿರಿಯರು ಸೇರಿ ಸಾಮರಸ್ಯದ ಹಾಡು ಹಾಡಿದರು. ತ್ರಿವರ್ಣ ಹಿಡಿದು ಜೊತೆಗೆ ನಡೆದರು. ಜೈ ಭೀಮ್ ಎನ್ನುತ್ತಾ, ಸಂವಿಧಾನವನ್ನು ಎತ್ತಿಹಿಡಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಎರಡನೆಯ ದೃಶ್ಯ, ಕೊಡಗಿನ ಪೊನ್ನಂಪೇಟೆಯಲ್ಲಿ ನಡೆದಿದ್ದು. ಬಿಜೆಪಿ ಬೆಂಬಲಿತ ವಿಹೆಚ್ಪಿ ಮತ್ತು ಬಜರಂಗದಳ ಆಯೋಜಿಸಿದ್ದ, ‘ಪ್ರಾಂತ ಪ್ರಶಿಕ್ಷಣ ವರ್ಗ’ ಎಂಬ ಹೆಸರಿನ ಸಶಸ್ತ್ರ ಅಭ್ಯಾಸ ಕಾರ್ಯ. ಅಲ್ಲಿ ಮಕ್ಕಳಿಗೆ ಹಾಗೂ ಯುವಜನರಿಗೆ ತ್ರಿಶೂಲ ದೀಕ್ಷೆ ನೀಡಿ, ಅವರಿಗೆ ಸಶಸ್ತ್ರ ಅಭ್ಯಾಸ ಮಾಡಲಾಯಿತು.
ನಿಮ್ಮ ಮಕ್ಕಳು ಏನಾಗಬೇಕು? ತ್ರಿಶೂಲಧಾರಿಗಳಾಬೇಕೆ ಅಥವಾ ತ್ರಿವರ್ಣ ಹಿಡಿದು ಸಾಮರಸ್ಯ ಹಾಡಬೇಕೆ? ಆಯ್ಕೆ ನಿಮ್ಮದು.
ವ್ಯತ್ಯಾಸ ನೋಡಿ.
ನಿಮ್ಮ ಮಕ್ಕಳು ಏನಾಗಬೇಕು?
ಹಿಂಸೆಯ ತ್ರಿಶೂಲ ಹಿಡಿಯಬೇಕೆ?
ತ್ರಿವರ್ಣ ಧ್ವಜ ಹಿಡಿದು ಸಾಮರಸ್ಯದ ಹಾಡು ಹಾಡಬೇಕೆ?
ಆಯ್ಕೆ ನಿಮ್ಮದು…!#NaanuGauri #SaamarasyaUdupi #Udupi4unity #may14th2022 #Udupi #SayNoToViolence #airguns #PonnamPete #ಬಜರಂಗದಳ pic.twitter.com/7wvOHkgMOr— Naanu Gauri (@naanugauri) May 16, 2022
Eradu beda book pen edidu Dr BR Ambedkar Tara Deshake onduu olle hesaru tarallii saku🙏🙏