Homeಮುಖಪುಟಯಾರು ಈ ಬಾಬಾ ರಾಮದೇವ್? ಏನು ಈ ಪತಂಜಲಿ?: ಆಧ್ಯಾತ್ಮಿಕ ಬಂಡವಾಳಶಾಹಿಯ ಸಂಪೂರ್ಣ ಡಿಟೇಲ್ಸ್....

ಯಾರು ಈ ಬಾಬಾ ರಾಮದೇವ್? ಏನು ಈ ಪತಂಜಲಿ?: ಆಧ್ಯಾತ್ಮಿಕ ಬಂಡವಾಳಶಾಹಿಯ ಸಂಪೂರ್ಣ ಡಿಟೇಲ್ಸ್….

- Advertisement -
- Advertisement -

‘ಯಾರ‍್ರಿ ಅವ್ನು ನನ್ ಅರೆಸ್ಟ್ ಮಾಡೋನು, ಅವರಪ್ಪನ ಕಡೆಯಿಂದಲೂ ಆಗಲ್ಲ ಬಿಡಿ’ ಹೀಗೆ ಉದ್ಧಟತನದ ಹೇಳಿಕೆ ಕೊಟ್ಟಿದ್ದಾರೆ ಬಾಬಾ ರಾಮದೇವ್. ಈ ಹೊಣಗೇಡಿ ಹೇಳಿಕೆ ವಿರುದ್ಧ ಇಂದು ಡೆಕ್ಕನ್ ಹೆರಾಲ್ಡ್, ಸಾಂಕ್ರಾಮಿಕ ಕಾಯ್ದೆ ಅಡಿ ಈ ಬಾಬಾನ ಮೇಲೆ ಕೂಡಲೇ ಕ್ರಮ ಕೈಗೊಳ್ಳಿ ಎಂದು ಸಂಪಾದಕೀಯವನ್ನೇ ಬರೆದಿದೆ.

ಭಾರತದಲ್ಲಿ ಆಧ್ಯಾತ್ಮಿಕ ಬಂಡವಾಳಶಾಹಿಯ (spiritual capatilism) ಭಾಗವಾಗಿ ಇದನ್ನು ನೋಡಬೇಕು. ಯಾವುದೇ ವೈಜ್ಞಾನಿಕ ಮತ್ತು ವೈದ್ಯಕೀಯ ಆಧಾರವಿಲ್ಲದೇ ಕೋವಿಡ್‌ಗೆ ಪರಿಹಾರ ಎಂದು ಕೊರೋನಿಲ್ ಎಂಬ ಔಷಧಿಯನ್ನು ಹಂಚುವ ಒಬ್ಬ ಬೂದಿ ಬಾಬಾ ಈ ನವ ಬಗೆಯ ಬಂಡವಾಳಶಾಹಿಯ ಒಂದು ಭಾಗ. ಇಂತಹ ಬಂಡವಾಳಶಾಹಿಯ ಹಿಂದೆ ರಕ್ಷಕನಾಗಿ ನಿಂತಿರುವುದು ಸಂಘ ಪರಿವಾರ ಎಂಬುದರಲ್ಲಿ ಎರಡು ಮಾತಿಲ್ಲ. ಈ ಆಧ್ಯಾತ್ಮಿಕ ಬಂಡವಾಳಶಾಹಿ ಲೋಕದಲ್ಲಿ ರಾಮದೇವ್ ಜೊತೆಗೆ ರವಿಶಂಕರ್ ಗುರು, ನಿತ್ಯಾನಂದ ಮತ್ತು ಜಗ್ಗಿ ಸದ್ಗುರುಗಳೆಲ್ಲ ಇದ್ದಾರೆ.

ಕಳೆದ 15 ದಿನಗಳಿಂದ ಸುದ್ದಿಯಲ್ಲಿರುವ ಈ ಬಾಬಾ ರಾಮದೇವ್ ಜೈಲಿನಲ್ಲಿರಬೇಕಿತ್ತು. ಆದರೆ, ಈತನ ಬೆನ್ನಿಗೆ ಆಡಳಿತರೂಢ ಪಕ್ಷವೇ ಇರುವ ಕಾರಣ, ಈತ ದೇಶದ ವೈದ್ಯ ಸಮೂಹವನ್ನೇ ಗೇಲಿ ಮಾಡಿ ದಕ್ಕಿಸಿಕೊಳ್ಳಬಲ್ಲ. ಈಗ ಪೊಲೀಸ್/ಕಾನೂನು ವ್ಯವಸ್ಥೆಯನ್ನು ಚಿಲ್ಲರೆ ಎಂಬಂತೆ ಮಾತಾಡಿದ್ದಾರೆ.

2002ರಲ್ಲಿ ಈ ರಾಮ್ ಕಿಸಾನ್ ಯಾದವ್ ಅಲಿಯಾಸ್ ಬಾಬಾ ರಾಮದೇವ್ ಸಂಸ್ಕಾರ ಟಿವಿಯಲ್ಲಿ ತಮ್ಮ ಹೊಟ್ಟೆಯನ್ನು ತಿರುವುತ್ತ ಜನರ ಎದುರು ಕಾಣಿಸಿಕೊಂಡರು. ಈಗ ಈ ಮಹಾಶಯ ಭಾರತದ ‘ಪ್ರಮುಖ’ ಸಾರ್ವಜನಿಕ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಪ್ರಿಯಾಂಕಾ ಪಾಠಕ್ ನಿಕಟವಾಗಿ ಸಂಶೋಧಿಸಿ ಬರೆದ “ಗಾಡ್‌ಮನ್ ಟು ಟೈಕೂನ್’ ಎಂಬ ಪುಸ್ತಕದಲ್ಲಿ ಗಮನಿಸಿದಂತೆ, ಬಾರ್ಕ್ (Broadcast Audience Research Council) ಪ್ರಕಾರ, ಬಾಬಾ ರಾಮದೇವ್ ಅವರ ಪತಂಜಲಿ 2016ರಲ್ಲಿ ಟಿವಿ ಚಾನೆಲ್‌ಗಳಲ್ಲಿ ತುಂಬ ಪ್ರಸಿದ್ಧಿ ಪಡೆಯಿತು. ಅಂದರೆ ಆ ಪ್ರಮಾಣದಲ್ಲಿ ಅದು ಜಾಹಿರಾತು ನೀಡುತ್ತ ಹೋಗಿತು. “ಜನವರಿ 2016ರ ಮೊದಲ ವಾರದಲ್ಲಿ 11,897 ರಿಂದ ಮಾರ್ಚ್ 25 ರ ವಾರದಲ್ಲಿ 24,050ಕ್ಕೆ ಜಾಹಿರಾತು ಇಮ್ಮಡಿಗೊಳಿಸಿತು. ಅದೇ ಅವಧಿಯಲ್ಲಿ, ಟಿವಿ ಚಾನೆಲ್‌ಗಳಲ್ಲಿ ರಾಮ್‌ದೇವ್ 2,34,934 ಬಾರಿ ಕಾಣಿಸಿಕೊಂಡರು, ಅಂದರೆ ಅವರು ಪ್ರತಿ 30 ಸೆಕೆಂಡಿಗೆ ಒಂದು ಅಥವಾ ಇನ್ನೊಂದು ಚಾನೆಲ್‌ನಲ್ಲಿ ಕಾಣಿಸಿಕೊಂಡಿದ್ದರು! ಪತಂಜಲಿ ಆಯುರ್ವೇದ ಲಿಮಿಟೆಡ್ ಭಾರತದ ಟಾಪ್ ಹತ್ತು ಜಾಹೀರಾತುದಾರರಲ್ಲಿ ಒಂದಾಗಿ ಉಳಿದಿದೆ ಮತ್ತು ರಾಮದೇವ್ ಅವರ ಮುಖವು ಚಾನೆಲ್‌ಗಳಲ್ಲಿ ಈಗ ಸರ್ವತ್ರವಾಗಿದೆ.

ಅಂದರೆ ಈ ಮನುಷ್ಯ ಪ್ರಮುಖ ಟಿವಿ ಚಾನೆಲ್‌ಗಳಿಗೆ ಆದಾಯವನ್ನು ಕೊಡುತ್ತ, ತನ್ನನ್ನು ಬೆಳೆಸಲು ಈ ಟಿವಿ ಚಾನೆಲ್‌ಗಳಿಂದ ಸಹಕಾರ ಪಡೆಯುತ್ತ ಬಂದಿದ್ದಾರೆ.
ಅಣ್ಣಾ ಹಜಾರೆ ಎಂಬ ಅಜ್ಜ 2013-14ರ ಸುಮಾರಿಗೆ ದೆಹಲಿಯಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟ ಮಾಡುವಾಗ ಅಲ್ಲಿ ಈ ರಾಮದೇವ್ ಎಂಟ್ರಿ ಕೊಡುತ್ತಾರೆ. ಅಣ್ಣಾ ತರಹವೇ ಈತನೂ ಬಿಜೆಪಿ ವಲಯ ಹೊರಬಿಟ್ಟ ಒಂದು ಆಯುಧವಾಗಿ ಕೆಲಸ ಮಾಡುತ್ತಾರೆ. ಪೊಲೀಸರು ಬಂಧಿಸಲು ಬಂದಾಗ ಈ ಮನುಷ್ಯ ಚೂಡಿದಾರ್ ತೊಟ್ಟು ಪರಾರಿಯಾಗುತ್ತಾರೆ.

ಹರಿಯಾಣದ ಬಡ ಜಿಲ್ಲೆಗಳಲ್ಲಿ ಒಂದಾದ ಸೈದ್ ಅಲಿಪುರದ ಈ ಮನುಷ್ಯ, 6ನೇ ಕ್ಲಾಸ್‌ವರೆಗೆ ಓದಿದ್ದಾರಂತೆ. ಅಣ್ಣಾ ಹಜಾರೆ 7ನೆ ಕ್ಲಾಸ್. ಈ ಇಬ್ಬರೂ ‘ವಿದ್ಯಾವಂತರು’ ಮಗದೊಬ್ಬ ‘ವಿದ್ಯಾವಂತ’ ಮೋದಿ ಅಧಿಕಾರಕ್ಕೆ ಬರಲು ನೆರವು ನೀಡಿದರು!

ಬಾಬಾನ ಚಟುವಟಿಕೆ ಗಮನಿಸಿ. ಚೀನಾ ತಯಾರಿಸಿದ ಸರಕುಗಳನ್ನು ಬಹಿಷ್ಕರಿಸುವ ಬಗ್ಗೆ ಟ್ವೀಟ್ ಮಾಡುತ್ತ ಇದ್ದ, ತನ್ನ ಚೀನಾ ನಿರ್ಮಿತ ಐಫೋನ್‌ನಿಂದ! ದೆಹಲಿಯಲ್ಲಿ ರಾಷ್ಟ್ರಕ್ಕೆ ಧೈರ್ಯದ ಬಗ್ಗೆ ಬೋಧಿಸುವ ಸಂದರ್ಭದಲ್ಲಿ ಪೊಲೀಸ್ ದಾಳಿಯಿಂದ ತಪ್ಪಿಸಿಕೊಳ್ಳಲು ಮಹಿಳೆಯರ ಬಟ್ಟೆಗಳನ್ನು ಧರಿಸಿ ಪರಾರಿಯಾದ! ನಂಬಿಕೆ ಮತ್ತು ಸ್ವ-ಮೌಲ್ಯದ ಬಗ್ಗೆ ಈ ಮನುಷ್ಯ ಮಾತನಾಡುತ್ತಾರೆ, ಆದರೆ ಅವರ ಜಾಹೀರಾತುಗಳಲ್ಲಿ ಹೆಚ್ಚಿನವು ತಪ್ಪು ದಾರಿಗೆಳೆಯುತ್ತವೆ. ಅವು ನಂಬಿಕೆಗೇ ಯೋಗ್ಯ ಅಲ್ಲ.

ಈ ಎಲ್ಲಾ ಅಸಂಬದ್ಧತೆಗಳ ಹೊರತಾಗಿಯೂ, ರಾಮದೇವ್ ಇವತ್ತು ಬಹಳ ಎತ್ತರಕ್ಕೆ ಬೆಳೆದಿದ್ದಾರೆ. ಅವರ ಹಿಂದೆ ಆಡಳಿತರೂಢ ಬಿಜೆಪಿ ಪಕ್ಷವಿದೆ. ಆರೋಗ್ಯ ಸಚಿವ, ಸಾರಿಗೆ ಸಚಿವ ಅಷ್ಟೇ ಏಕೆ ಮೋದಿ-ಶಾ ಜೋಡಿ ಕೂಡ ಅವರ ಬೆನ್ನಿಗಿದೆ, ಹೀಗಾಗಿ ಅವರು ವೈದ್ಯ ವ್ಯವಸ್ಥೆಯನ್ನು ಮತ್ತು ನಿನ್ನೆ ಪೊಲೀಸ್ ವ್ಯವಸ್ಥೆಯನ್ನು ಹೀಗಳೆದು ಮಾತನಾಡುತ್ತಾರೆ. ಜೈಲಲ್ಲಿ ಇರಬೇಕಾದ ವ್ಯಕ್ತಿ ಇವತ್ತು ಖುಲ್ಲಂಖುಲ್ಲ ಬೀಸು ಹೇಳಿಕೆ ನೀಡುತ್ತಿದ್ದಾರೆ. ಇದು ಮೋದಿ ಸರ್ಕಾರ ಸೃಷ್ಟಿಸಿದ ಅರಾಜಕತೆಯ ಭಾಗದಂತಿದೆ.

ಈ ಬಾಬಾ ರಾಜಕಾರಣಿಗಳೊಂದಿಗೆ ಮಾತನಾಡುತ್ತಾರೆ ಮತ್ತು ಈತ ಹೇಳಿದ್ದನ್ನು ಅವರು ಕೇಳುತ್ತಾರೆ. ಈ ಮನುಷ್ಯ ಸೈನ್ಯಕ್ಕಾಗಿ ಯೋಗ ಶಿಬಿರಗಳನ್ನು ಮಾಡುತ್ತಾರೆ!
ಈ ಮನುಷ್ಯ ಯಾವಾಗ ಜನಿಸಿದನೆಂಬುದರ ಬಗ್ಗೆ ಸ್ಪಷ್ಟವಾದ ದಾಖಲೆಗಳಿಲ್ಲ! ಈತನ ಶಿಕ್ಷಣ ಮತ್ತು ಆರಂಭಿಕ ವೃತ್ತಿಜೀವನವು ಸಂಶಯಾಸ್ಪದವಾಗಿದೆ. ಪ್ರಿಯಾಂಕಾ ಪಾಠಕ್ ಅವರ ಸಂಶೋಧಿತ ಕೃತಿಯಲ್ಲಿ ಬರೆದ ಪ್ರಕಾರ, ಕೊಲೆ, ಭ್ರಷ್ಟಾಚಾರ, ಕಾರ್ಪೊರೇಟ್ ಸ್ವಾಧೀನ ಎಲ್ಲವೂ ಇಲ್ಲಿವೆ.

ಪ್ರಿಯಾಂಕಾ ಪಾಠಕ್ ಹೇಳುವಂತೆ, ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ (ಪತಂಜಲಿಯ ಪ್ರಮುಖ ಅಧಿಕಾರಿ ಮತ್ತು ಬಾಬಾನ ಇನ್ನೊಂದು ಮುಖ) ಇಬ್ಬರಿಗೂ ಶಿಕ್ಷಣದ ಕೊರತೆಯಿದೆ.
ರಾಮದೇವ್ ಅವರನ್ನು ರಾಜಕೀಯ ಶೈಲಿಯಲ್ಲಿ ಪರಿಚಯಿಸಿದ ವ್ಯಕ್ತಿ ಸ್ವದೇಶಿ ಪ್ರಚಾರಕ ರಾಜೀವ್ ದೀಕ್ಷಿತ್. ನಿಗೂಢ ಸಂದರ್ಭಗಳಲ್ಲಿ ಅವರು ಇದ್ದಕ್ಕಿದ್ದಂತೆ ನಿಧನರಾದರು. ಅವರ ಮರಣೋತ್ತರ ಪರೀಕ್ಷೆಯನ್ನು ಏಕೆ ನಡೆಸಲಿಲ್ಲ? ಎಂದು ಲೇಖಕಿ ಪಾಠಕ್ ಪ್ರಶ್ನೆ ಎತ್ತುತ್ತಾರೆ.
ಮರಣೋತ್ತರ ಪರೀಕ್ಷೆಗೆ ಒತ್ತಾಯಿಸಿ ಐವತ್ತು ಜನರು ಅಭಿಯಾನಕ್ಕೆ ಸಹಿ ಹಾಕಿ ಅದನ್ನು ಬಾಬಾ ರಾಮ್‌ದೇವ್ ಅವರಿಗೆ ನೀಡಿದರು. ಇದು ಬಾಬಾ ರಾಮದೇವ್ ಅವರಿಂದ ಮಾತ್ರ ಪರಿಹರಿಸಬಹುದಾದ ಒಂದು ರಹಸ್ಯವಾಗಿದೆ. ಅವರು ಮರಣೋತ್ತರ ಪರೀಕ್ಷೆಗೆ ಹಿಂದೇಟು ಹಾಕಿದ್ದು ಏಕೆ ಎಂದು ಲೇಖಕಿ ಪ್ರಶ್ನೆ ಎತ್ತುತ್ತಾರೆ.

ರಾಮದೇವ್ ಮತ್ತು ಬಾಲಕೃಷ್ಣ ಇಬ್ಬರಿಗೂ ಶಿಕ್ಷಣದ ಕೊರತೆಯಿದೆ. ಸಿಬಿಐ ಬಾಲಕೃಷ್ಣ ವಿರುದ್ಧ ನಕಲಿ ಪದವಿ ಪ್ರಮಾಣ ಪತ್ರ ಹೊಂದಿದ ಪ್ರಕರಣಗಳನ್ನು ದಾಖಲಿಸಿದೆ. ಕರಮ್‌ವೀರ್ ಎಂಬ ಸಾಧು ಸನ್ಯಾಸಿ ರಾಮದೇವ್ ಮತ್ತು ಬಾಲಕೃಷ್ಣರನ್ನು ಒಟ್ಟು ಮಾಡಿದರು. ಅವರಿಗೆ ಮಾರ್ಗದರ್ಶನ ನೀಡಿದರು. ಕರಮವೀರ್ ವಿದ್ಯಾವಂತ, ಪ್ರಬುದ್ಧ ವ್ಯಕ್ತಿ. ಅವರು ಭಾರತದ ಅಗ್ರಗಣ್ಯ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಗುರುಕುಲ್ ಕಾಂಗ್ರಿ ಮಹಾ ವಿಶ್ವವಿದ್ಯಾಲದಿಂದ ಮೂರು ಪದವಿಗಳನ್ನು ಪಡೆದಿದ್ದಾರೆ. ಅವರು ಈಗ ಮಹಾರಾಷ್ಟ್ರ ಮತ್ತು ಉತ್ತರಾಖಂಡದಲ್ಲಿ ಸಣ್ಣ ಆಶ್ರಮಗಳನ್ನು ನಡೆಸುತ್ತಿದ್ದಾರೆ, ತಮ್ಮ ಸಮಯವನ್ನು ಎರಡು ಸ್ಥಳಗಳ ನಡುವೆ ವಿಂಗಡಿಸಿ ಯೋಗ ಶಿಬಿರಗಳನ್ನು ಉಚಿತವಾಗಿ ನಡೆಸುತ್ತಾರೆ.

ಆದರೆ, ಏನೆಲ್ಲ ಅವಘಡ ಸಂಭವಿಸಿದರೂ, ಅವರು ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣರನ್ನು ನೋಡಿಕೊಳ್ಳುವುದನ್ನು ಮುಂದುವರೆಸಿದ್ದರು. ಈ ಜೋಡಿ ತೊಂದರೆಗೆ ಒಳಗಾದಾಗೆಲ್ಲ ಅವರು ತಮ್ಮ ಸಹಾಯಹಸ್ತ ನೀಡಿದ್ದಾರೆ ಎಂದು ಲೇಖಕಿ ಪಾಠಕ್ ಹೇಳುತ್ತಾರೆ.
ಒಂದು ಹಂತದಲ್ಲಿ ಕರಮವೀರ್ ಈ ಜೋಡಿಯನ್ನು ನಿರಾಕರಿಸಿದ ನಂತರ ರಾಮದೇವ್ ಕೃಪಾಲು ಬಾಗ್ ಆಶ್ರಮದಲ್ಲಿ ನೆಲೆಸಿದರು.

ಕೃಪಾಲು ಬಾಗ್ ಆಶ್ರಮದ ಶಂಕರ್ ದೇವ್, ಸೀಮಿತ ಮಹತ್ವಾಕಾಂಕ್ಷೆಯ ಹಳೆಯ, ಶಾಂತ ವ್ಯಕ್ತಿ. ಆತ ತನ್ನ ಗುರುವಿನಿಂದ ಆನುವಂಶಿಕವಾಗಿ ಪಡೆದ ಆಶ್ರಮದಲ್ಲಿ ಹಣ್ಣಿನ ತೋಟವನ್ನು ನಡೆಸುತ್ತಿದ್ದ. ಆದರೆ ಶಂಕರ್‌ದೇವ ಅವರ ಸಾವಿನ ಹಿಂದೆಯೂ ಬಾಬಾನ ನೆರಳಿದೆ ಎಂದು ಲೇಖಕಿ ಆರೋಪಿಸಿದ್ದಾರೆ.

ಉತ್ತರಾಖಂಡದ ಮಾರಾಟ ತೆರಿಗೆ ಅಧಿಕಾರಿ ಜಿತೇಂದರ್ ರಾಣಾ ಅವರು ರಾಮದೇವ್‌ರ ದಿವ್ಯಾ ಫಾರ್ಮಸಿ ಮಾರಾಟ ತೆರಿಗೆ ವಂಚನೆ ಕುರಿತು ತನಿಖೆ ನಡೆಸಿದರು. ಆ ವರ್ಷ, ಬಾಬಾನ ಆಶ್ರಮದಲ್ಲಿ ಕೆಲಸ ಮಾಡುವವರು ಒಂದೇ ದಿನದಲ್ಲಿ 22 ಲಕ್ಷ ರೂ ಎಣಿಸುತ್ತಿದ್ದರು. ದಿವ್ಯಾ ಫಾರ್ಮಸಿ ಕನಿಷ್ಠ 5 ಕೋಟಿ ರೂ.ಗಳ ತೆರಿಗೆಯನ್ನು ತಪ್ಪಿಸಿದೆ ಎಂದು ಸಾಬೀತುಪಡಿಸಲು ತನಿಖಾ ಅಧಿಕಾರಿ ರಾಣಾ ಅವರು 2,000 ಕೆಜಿ ಕಾಗದವನ್ನು ಸಂಗ್ರಹಿಸಿದ್ದಾರೆ ಎಂದು ತೆಹೆಲ್ಕಾ ವರದಿ ಮಾಡಿತ್ತು. ಅವರು ದಾಳಿ ನಡೆಸಿದರು. ಆದರೆ, ಬಾಬಾ ರಾಮದೇವ್ ಅವರ ಸ್ನೇಹಿತರಾದ ಅಂದಿನ ಉತ್ತರಾಖಂಡ ರಾಜ್ಯಪಾಲ ಎನ್.ಡಿ ತಿವಾರಿ ತನಿಖೆಗೆ ಅಡ್ಡಿಪಡಿಸಿದರು. ಪರಿಸ್ಥಿತಿ ತುಂಬಾ ಕಷ್ಟಕರವಾಯಿತು, ರಾಣಾ ನಿವೃತ್ತಿಯನ್ನು ತೆಗೆದುಕೊಳ್ಳಲು ನಿರ್ಧರಿಸಿದರು. ಅಲ್ಲಿಗೆ ಪ್ರಕರಣ ಮುಚ್ಚಿಯೇ ಹೋಗಿತು ಎಂದು ಲೇಖಕಿ ಹೇಳುತ್ತಾರೆ.

ರಾಮದೇವ್ ವಿಎಚ್‌ಪಿ, ಕಾಂಗ್ರೆಸ್, ಬಿಜೆಪಿ ಮತ್ತು ಸಮಾಜವಾದಿ ಪಕ್ಷದಲ್ಲಿ ಸ್ನೇಹಿತರನ್ನು ಹೊಂದಿದ್ದಾರೆ. ಸುಬ್ರತಾ ರಾಯ್ ಅಂತಹ ಆರ್ಥಿಕ ಸಲಹೆಗಾರ ಕೂಡ ರಾಮದೇವ್ ದೋಸ್ತ ಆಗಿದ್ದಾರೆ. ಪತಂಜಲಿ ಮತ್ತು ರಾಮದೇವ್ ತಮ್ಮ ಔಷಧಿಗಳು ಕ್ಯಾನ್ಸರ್, ಎಚ್‌ಐವಿಗಳನ್ನು ಗುಣಪಡಿಸುತ್ತವೆ ಎಂದು ಭರವಸೆ ನೀಡುತ್ತಾರೆ. ಸಲಿಂಗಕಾಮವನ್ನು ಕೂಡ ಗುಣಪಡಿಸುತ್ತೆ ಎಂದೂ ಹೇಳಿದ್ದಾರೆ. ಇವೆಲ್ಲಕ್ಕೂ ಆಧಾರವೇ ಇಲ್ಲ ಎಂದು ಲೇಖಕಿ ಹೇಳುತ್ತಾರೆ.

ಆಧ್ಯಾತ್ಮಿಕ ಬಂಡವಾಳಶಾಹಿ

ಇದು ಭಾರತದಲ್ಲಿನ ಆಧ್ಯಾತ್ಮಿಕ ಬಂಡವಾಳಶಾಹಿಯ (spiritual capatilism) ಒಂದು ಮುಖ. ಇದನ್ನು ಬಗೆಯುತ್ತ ಹೋದರೆ, 70ರ ದಶಕದಲ್ಲಿ ಬ್ರಹ್ಮಚಾರಿ ಎನ್ನುವ ಸ್ವಘೋಷಿತ ದೇವಮಾನವ ಅಂದಿನ ಪ್ರದಾನಿ ಇಂದಿರಾಗಾಂಧಿಯವರಿಗೆ ಹತ್ತಿರನಾದ. ವೃತ್ತಿ ರಾಜಕಾರಣ, ಅಧಿಕಾರ ರಾಜಕಾರಣದೊಂದಿಗೆ ಆಧ್ಯಾತ್ಮವನ್ನು ಬೆಸೆದ ಮೊದಲ ಬಹಿರಂಗ ಪ್ರಕರಣವಿದು. ನಂತರದಲ್ಲಿ ಪುಣೆಯಲ್ಲಿ ಆಶ್ರಮ ಮಾಡಿದ ಓಶೋ ರಜನೀಶ್ ಸೆಕ್ಸ್ ಮತ್ತು ಆಧ್ಯಾತ್ಮವನ್ನು ಬೆಸೆದು ವಿದೇಶಗಳಿಗೆ ತೆಗೆದುಕೊಂಡು ಹೋದರು. ರವಿಶಂಕರ್ ಗುರು, ನಿತ್ಯಾನಂದ ಮತ್ತು ಸದ್ಗುರು ಜಗ್ಗಿ ಕೂಡ ಈ ಆಧ್ಯಾತ್ಮಿಕ ಬಂಡವಾಳಶಾಹಿಯ ಗುಂಪಲ್ಲೆ ಇದ್ದಾರೆ. ಇವರಿಗೆ ಸರ್ಕಾರಗಳು ಮುಖ್ಯವಾಗಿ ಬಿಜೆಪಿ ಸರ್ಕಾರಗಳು ಬೆನ್ನೆಲುಬಾಗಿ ನಿಂತಿವೆ.

ಅಲೋಪಥಿ ವೈದ್ಯ ಕ್ರಮವನ್ನೇ ಜರಿದಿದ್ದಲ್ಲದೇ ಧಮ್ ಇದ್ದರೆ ಬಂಧಿಸಿ ಎಂದು ಬಾಬಾ ರಾಮದೇವ್ ಹೇಳುತ್ತಾರೆ. ಯಾವ ಸಂಶಯವೂ ಬೇಡ, ಅವರು ಅಂಬಾನಿ, ಅದಾನಿಗಳಂತೆ ಬಿಜೆಪಿಗೆ ಸಾಕಷ್ಟು ಫಂಡ್ ನೀಡಿದ್ದಾರೆ ಮತ್ತು ಅಂಬಾನಿ, ಅದಾನಿಗಳಂತೆ ಸರ್ಕಾರದಿಂದ ತೆರಿಗೆ ನೆರವನ್ನೂ ಪಡೆದಿದ್ದಾರೆ.

ಜೈಲಲ್ಲಿ ಇರಬೇಕಾದವನ್ನೊಬ್ಬ ವೈದ್ಯಕೀಯ ಮತ್ತು ಕಾನೂನು ವ್ಯವಸ್ಥೆಯನ್ನೇ ಹಂಗಿಸಿ, ನಿಂದಿಸಿ ಹೇಳಿಕೆ ಕೊಡುತ್ತಲೇ ಇದ್ದಾರೆ. ಆದರೂ ಯಾವ ಕ್ರಮವೂ ಇಲ್ಲ. ಇದೇನಾ ಅಚ್ಛೇ ದಿನ್!

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ; ಬಾಬಾ ರಾಮದೇವ್ ವಿರುದ್ಧ 1,000 ಕೋಟಿ ರೂ. ಮಾನನಷ್ಟ ಮೊಕದ್ದಮೆ ನೋಟಿಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...