ಬಿಜೆಪಿಯ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ನಂತರ ಗಲ್ಫ್ ದೇಶಗಳು ತೀವ್ರ ಪ್ರತಿಭಟನೆ ದಾಖಲಿಸಿದ್ದು, ಭಾರತದ ರಾಯಭಾರಿಗಳಿಗೆ ಸಮನ್ಸ್ ನೀಡಿದೆ. ಈ ಬಗ್ಗೆ ತೆಲಂಗಾಣ ಸಚಿವ ಕೆ.ಟಿ. ರಾಮರಾವ್ ಅವರು ಮೋದಿ ನೇತೃತ್ವದ ಒಕ್ಕೂಟ ಸರ್ಕಾರವನ್ನು ಗುರಿಯಾಗಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೆಟಿಆರ್ ಅವರು, “ಪ್ರಧಾನಿ ಮೋದಿ ಅವರೇ, ಬಿಜೆಪಿಯ ಮತಾಂಧರ ದ್ವೇಷದ ಭಾಷಣಗಳಿಗೆ ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಭಾರತ ಯಾಕೆ ಕ್ಷಮೆಯಾಚಿಸಬೇಕು. ಬಿಜೆಪಿ ದಿನವಿಡೀ ದ್ವೇಷವನ್ನು ಉಗುಳುವುದು ಮತ್ತು ಹರಡುವುದಕ್ಕಾಗಿ ಪ್ರತಿ ಭಾರತೀಯರಲ್ಲಿ ಕ್ಷಮೆಯಾಚಿಸಬೇಕು. ಕ್ಷಮೆ ಕೇಳಬೇಕಾದ್ದು ಬಿಜೆಪಿಯೇ ಹೊರತು ಇಡೀ ಭಾರತವಲ್ಲ” ಎಂದು ಹೇಳಿದ್ದಾರೆ.
PM @narendramodi Ji, Why should India as a country apologise to international community for the hate speeches of BJP bigots?
It is BJP that should apologise; not India as a Nation
Your party should first apologise to Indians at home for spewing & spreading hatred day in day out
— KTR (@KTRTRS) June 6, 2022
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಅವರು ಮಹಾತ್ಮ ಗಾಂಧಿಯವರ ಹತ್ಯೆಯನ್ನು ಸಮರ್ಥಿಸಿದಾಗ ಪ್ರಧಾನಿಯ ಮೌನವು ಆಘಾತಕಾರಿಯಾಗಿದೆ ಎಂದು ಸಚಿವರು ಹೇಳಿದ್ದಾರೆ.
Modi Ji, Your silence was deafening & shocking when BJP MP Pragya Singh hailed assassination of Mahatma Gandhi
Let me remind you sir; What you permit is what you promote
The tacit support from top is what emboldened the bigotry & hatred that will cause irreparable loss to 🇮🇳 pic.twitter.com/VSgHd6P2Hh
— KTR (@KTRTRS) June 6, 2022
“ನಾನು ನಿಮಗೆ ನೆನಪಿಸುತ್ತೇನೆ ಸರ್; ನೀವು ಏನು ಅನುಮತಿಸುತ್ತೀರೋ ಅದನ್ನೇ ನೀವು ಪ್ರಚಾರ ಮಾಡುತ್ತೀರಿ. ಮೇಲಿನವರ ಮೌನ ಸಮ್ಮತಿ ಧರ್ಮಾಂಧತೆ ಮತ್ತು ದ್ವೇಷವನ್ನು ಉತ್ತೇಜಿಸುತ್ತದೆ” ಎಂದು ಕೆಟಿಆರ್ ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ನಾಯಕರಿಂದ ಪ್ರವಾದಿ ನಿಂದನೆ ಪ್ರಕರಣ: ಕತಾರ್, ಕುವೈತ್, ಇರಾನ್ ದೇಶಗಳಿಂದ ಭಾರತ ರಾಯಭಾರಿಗೆ ಸಮನ್ಸ್
ಬಿಜೆಪಿಯ ವಕ್ತಾರೆಯಾದ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ವಿರುದ್ಧದ ಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ, ಇಂತಹ ಹೇಳಿಕೆಗಳನ್ನು ನೀಡುವವರನ್ನು ಬಿಜೆಪಿ ಜೈಲಿಗೆ ಕಳುಹಿಸಬೇಕು ಎಂದು ಹೇಳಿದ್ದಾರೆ.
“ಯಾವುದೇ ಧರ್ಮದ ವಿರುದ್ಧ ಆಕ್ಷೇಪಾರ್ಹ ಭಾಷೆ ಬಳಸುವುದು ಸೂಕ್ತವಲ್ಲ. ಈ ವಿಷಯದಲ್ಲಿ ಬಿಜೆಪಿಯು ತನ್ನ ಜನರಿಗೆ ಕಟ್ಟುನಿಟ್ಟಿನ ಕುಣಿಕೆ ಬಿಗಿಗೊಳಿಸಬೇಕು. ಅವರನ್ನು ಅಮಾನತುಗೊಳಿಸುವುದು ಮತ್ತು ಹೊರಹಾಕುವುದು ಮಾತ್ರವಲ್ಲ, ಅದರ ಜೊತೆಗೆ ಕಠಿಣ ಕಾನೂನುಗಳ ಅಡಿಯಲ್ಲಿ ಜೈಲಿಗೆ ಕಳುಹಿಸಬೇಕು” ಎಂದು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ವಕ್ತಾರ ಪವನ್ ಖೇರಾ ಕೂಡ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, “ಭಾರತವು ಕ್ಷಮೆ ಕೇಳಬೇಕಾದ ಯಾವುದೇ ತಪ್ಪನ್ನು ಮಾಡಿಲ್ಲ. ತಮ್ಮು ಆಗಿದ್ದು ಬಿಜೆಪಿಯಾಗಿದೆ. ದೇಶವೇಕೆ ಅದನ್ನು ಸರಿದೂಗಿಸಬೇಕು? ಕತಾರ್ ಮತ್ತು ಕುವೈತ್ ಪ್ರಧಾನಿಗೆ ಅವರ ರಾಜಧರ್ಮವನ್ನು ನೆನಪಿಸುತ್ತಿದೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಏನಿದೆ?” ಎಂದು ಅವರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ग़लती करे भारतीय जनता पार्टी और माफ़ी माँगे भारत?
यह बिल्कुल स्वीकार्य नहीं है #Kuwait #Qatar #ShameOnBJP pic.twitter.com/iQVXQOXJ7i— Pawan Khera 🇮🇳 (@Pawankhera) June 5, 2022
“ಪ್ರಧಾನಿ ಮತ್ತು ಅವರ ಪಕ್ಷವು ದೇಶವನ್ನು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದೆ. ಇಲ್ಲಿ ಯಾವುದೇ ಭಾರತೀಯನ ತಪ್ಪನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಭಾರತವು ಯಾವಾಗಲೂ ಸಂವಿಧಾನದಲ್ಲಿ ಪ್ರತಿಪಾದಿಸಿದ ಮೌಲ್ಯಗಳನ್ನು ಗೌರವಿಸುತ್ತದೆ. ಆದರೆ ಬಿಜೆಪಿ ಅದನ್ನು ಮಾಡುವುದಿಲ್ಲ. ಅವರು ಮಾಡಿರುವ ತಪ್ಪಿಗೆ ಅವರೇ ಕ್ಷಮೆಯಾಚಿಸಬೇಕು” ಎಂದು ಅವರು ಹೇಳಿದ್ದಾರೆ.
ಸಮಯಕ್ಕೆ ಸರಿಯಾಗಿ ಮಾತನಾಡಿದರೆ ದೇಶ ಮುಜುಗರಕ್ಕೀಡಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ಪವನ್ ಖೇರಾ ಹೇಳಿದ್ದು, “ನಿಮ್ಮಿಂದಾಗಿ ನಮಗೆ ಮುಜುಗರ ಉಂಟಾಗಿದೆ. ಪ್ರಧಾನಿ ದೇಶದ ಕ್ಷಮೆ ಕೇಳಬೇಕು” ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಪ್ರವಾದಿ ಮುಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ: ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪಕ್ಷದಿಂದ ಅಮಾನತು
ಬಿಜೆಪಿ ವಕ್ತಾರೆಯ ವಿವಾದಾತ್ಮಕ ಹೇಳಿಕೆಗಳಿಂದ ಭಾರತವು ಗಲ್ಫ್ ರಾಷ್ಟ್ರಗಳಿಂದ ಭಾರಿ ಪ್ರತಿಭಟನೆ ಎದುರಿಸುತ್ತಿದೆ. ಇದುವರೆಗೆ ಸೌದಿ ಅರೇಬಿಯಾ, ಕತಾರ್, ಬಹ್ರೇನ್ ಮತ್ತು ಇರಾನ್ ಈ ಟೀಕೆಗಳನ್ನು ತೀವ್ರವಾಗಿ ಖಂಡಿಸಿದ್ದು, ಹೇಳಿಕೆಯನ್ನು “ಇಸ್ಲಾಮೋಫೋಬಿಕ್” ಎಂದು ಆಕ್ರೋಶ ವ್ಯಕ್ತಪಡಿಸಿವೆ.
ಕತಾರ್ ಮತ್ತು ಬಹ್ರೇನ್ ದೇಶಗಳು ಭಾರತೀಯ ರಾಯಭಾರಿಯನ್ನು ಕರೆಸಿದ್ದು, ತಮ್ಮ ವಿರೋಧವನ್ನು ತಿಳಿಸಿವೆ. ಭಾರತ ಸರ್ಕಾರವು ಸಾರ್ವಜನಿಕವಾಗಿ ಈ ಬಗ್ಗೆ ಕ್ಷಮೆಯಾಚನೆ ಮಾಡುವುದನ್ನು ನಿರೀಕ್ಷಿಸುವುದಾಗಿ ಕತಾರ್ ಹೇಳಿದೆ. ಜೊತಗೆ ಪಕ್ಷದ ವಕ್ತಾರೆಯ ವಿರುದ್ಧ ಬಿಜೆಪಿ ಕೈಗೊಂಡಿರುವ ಕ್ರಮವನ್ನು ಬಹ್ರೇನ್ ಮತ್ತು ಸೌದಿ ಅರೇಬಿಯಾ ಸ್ವಾಗತಿಸಿವೆ.
BJP party has got no control over it’s fringe elements. As such whole nation has to pay the price.