Homeಮುಖಪುಟನಿಮ್ಮ ಟಿಕೆಟ್‌ ಶುಲ್ಕವನ್ನು ಸೋನಿಯಾಗಾಂಧಿ ಪಾವತಿಸಿದ್ದಾರೆ ; ರೈಲಿನಲ್ಲಿ ಕರಪತ್ರ ಹಂಚಿದ ಕಾಂಗ್ರೆಸ್‌ ಶಾಸಕ

ನಿಮ್ಮ ಟಿಕೆಟ್‌ ಶುಲ್ಕವನ್ನು ಸೋನಿಯಾಗಾಂಧಿ ಪಾವತಿಸಿದ್ದಾರೆ ; ರೈಲಿನಲ್ಲಿ ಕರಪತ್ರ ಹಂಚಿದ ಕಾಂಗ್ರೆಸ್‌ ಶಾಸಕ

- Advertisement -
- Advertisement -

ನಿಮ್ಮ ಟಿಕೆಟ್ ಶುಲ್ಕವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪಾವತಿಸಿದ್ದಾರೆ. ಕಾಂಗ್ರೆಸ್ ಪಕ್ಷ, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಸುನಿಲ್ ಜಖರ್ ಅವರು ನಿಮ್ಮನ್ನು ಕಳುಹಿಸುತ್ತಿದ್ದಾರೆ. ಎಲ್ಲವನ್ನೂ ಈ ಕರಪತ್ರದಲ್ಲಿ ಬರೆಯಲಾಗಿದೆ, ನಿಮ್ಮ ಪ್ರಯಾಣದ ಬಿಡುವಿನ ವೇಳೆಯಲ್ಲಿ ನೀವು ಇದನ್ನು ಓದಬಹುದು ಎಂದು ಪಂಜಾಬ್‌ನ ಕಾಂಗ್ರೆಸ್ ಶಾಸಕರು ಭಾಷಣ ಮಾಡಿರುವ ವಿಶೇಷ ಘಟನೆ ಜರುಗಿದೆ.

ಕಾಂಗ್ರೆಸ್‌ ಶಾಸಕರಾದ ಅಮರಿಂದರ್ ರಾಜಾ ವಾರಿಂಗ್ ಅವರು ಇಂದು ಪಂಜಾಬ್‌ನಿಂದ ರೈಲಿನಲ್ಲಿ ಬಿಹಾರದ ಮುಜಾಫರ್‌ಪುರಕ್ಕೆ ತೆರಳುತ್ತಿರುವ ವಲಸಿಗರನ್ನು ನೋಡಲು ಮತ್ತು ಅದಕ್ಕೆ ಹಣ ಪಾವತಿಸಿದವರು ಯಾರೆಂದು ಅವರಿಗೆ ತಿಳಿದಿದೆಯೆ ಎಂದು ಖಚಿತಪಡಿಸಿಕೊಳ್ಳಲು ಕಾಂಗ್ರೆಸ್ ಕಾರ್ಯಕರ್ತರ ತಂಡದೊಂದಿಗೆ ರೈಲು ನಿಲ್ದಾಣಕ್ಕೆ ಧಾವಿಸಿದ್ದಾರೆ.

ನಿಮ್ಮ ಟಿಕೆಟ್‌ ಶುಲ್ಕವನ್ನು ಸೋನಿಯಾಗಾಂಧಿ ಪಾವತಿಸಿದ್ದಾರೆ

ನಿಮ್ಮ ಟಿಕೆಟ್‌ ಶುಲ್ಕವನ್ನು ಸೋನಿಯಾಗಾಂಧಿ ಪಾವತಿಸಿದ್ದಾರೆ ; ರೈಲಿನಲ್ಲಿ ಕರಪತ್ರ ಹಂಚಿದ ಕಾಂಗ್ರೆಸ್‌ ಶಾಸಕ

Posted by Naanu Gauri on Monday, May 11, 2020

ಕಾಂಗ್ರೆಸ್ ಆಡಳಿತದ ಪಂಜಾಬ್‌ನಲ್ಲಿ ವಲಸಿಗರಿಗೆ ವಿಶೇಷ ರೈಲು ಭಾನುವಾರ ಆರಂಭವಾಗುತ್ತಿದ್ದಂತೆಯೇ ಪ್ರತಿ ಪ್ರಯಾಣಿಕರಿಗೆ “ನಿಮ್ಮ ಅಗತ್ಯದ ಸಮಯದಲ್ಲಿ ಕಾಂಗ್ರೆಸ್ ಜೊತೆಗಿರುತ್ತದೆ” ಎಂದು ಶೀರ್ಷಿಕೆಯುಳ್ಳ ಕರಪತ್ರವನ್ನು ಹಂಚಲಾಯಿತು. “ನಿಮ್ಮ ಟಿಕೆಟ್ ದರವನ್ನು ಸೋನಿಯಾ ಗಾಂಧಿ ಪಾವತಿಸಿದ್ದಾರೆ” ವಲಸೆ ಕಾರ್ಮಿಕರಿಗೆ ಸಹಾಯ ಮಾಡಲೆಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಕಳೆದ ವಾರ ಘೋಷಿಸಿದ್ದ ಒಂದು ಕ್ರಮದಿಂದ ಇದು ಸಾಧ್ಯವಾಗಿದೆ ಎಂದು ಆ ಶಾಸಕರು ಭಟಿಂಡಾ ನಿಲ್ದಾಣದಲ್ಲಿ ಭಾಷಣ ಮಾಡಿದ್ದಾರೆ.

ವೈರಲ್‌ ವಿಡಯೋದ ದೃಶ್ಯಗಳಲ್ಲಿ ಗಿಡ್ಡರ್‌ಬಾಹಾದ ಶಾಸಕರು ಕಿಟಕಿಗಳ ಮೂಲಕ ರೈಲಿನಲ್ಲಿ ಕುಳಿತ ಪ್ರಯಾಣಿಕರಿಗೆ ಕರಪತ್ರಗಳನ್ನು ಹಂಚುವುದನ್ನು ಕಾಣಬಹುದು.

ಮೇ 1 ರಿಂದ ವಲಸೆ ಕಾರ್ಮಿಕರಿಗಾಗಿ ಶ್ರಮಿಕ್‌ ರೈಲುಗಳಿಗೆ ಅವಕಾಶ ನೀಡಿದ್ದ ಕೇಂದ್ರ ಸರ್ಕಾರ ಅದರ ಟಿಕೆಟ್ ಹಣವನ್ನು ಕಾರ್ಮಿಕರಿಂದಲೇ ಪಡೆಯಲು ನಿರ್ಧರಿಸಿತ್ತು. ಲಾಕ್‌ಡೌನ್‌ನಿಂದ ತೊಂದರೆಗೊಳಗಾದ ಕಾರ್ಮಿಕರು ರೈಲು ಪ್ರಯಾಣದರವನ್ನು ಭರಿಸಲು ಸಾಧ್ಯವಾಗದ ಹಲವು ದೃಶ್ಯಗಳು ಕಂಡುಬಂದಿದ್ದವು. ನಂತರ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರು ದೇಶದ ಎಲ್ಲಾ ಕಾರ್ಮಿಕರ ರೈಲು ಪ್ರಯಣದರವನ್ನು ಕಾಂಗ್ರೆಸ್‌ ಪಕ್ಷ ಭರಿಸುತ್ತದೆ ಎಂದು ಘೋಷಿಸಿದ್ದರು.


ಇದನ್ನೂ ಓದಿ: ದೇಶದಾದ್ಯಂತ ಕಾರ್ಮಿಕರ ರೈಲು ಪ್ರಯಾಣದರವನ್ನು ಕಾಂಗ್ರೆಸ್‌ ಭರಿಸಲಿದೆ: ಸೋನಿಯಾ ಗಾಂಧಿ 


ತದನಂತರ ರೈಲ್ವೆ ಸಚಿವಾಲಯವು ಶೇಕಡಾ 85 ರಷ್ಟು ಶುಲ್ಕವನ್ನು ಕೇಂದ್ರ ಸರ್ಕಾರ ಪಾವತಿ ಮಾಡುತ್ತದೆ ಮತ್ತು ಉಳಿದ ಹಣವನ್ನು ರಾಜ್ಯಗಳು ಪಾವತಿಸಬಹುದೆಂದು ಸ್ಪಷ್ಟಪಡಿಸಿತು. ಆದಾಗ್ಯೂ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಯಾಣದರವನ್ನು ವಲಸೆ ಕಾರ್ಮಿಕರಿಂದಲೇ ವಸೂಲಿ ಮಾಡುತ್ತಿರುವುದು ಕಂಡುಬಂದಿದೆ. ಇದರ ವಿರುದ್ಧ ಪ್ರತಿಭಟನೆಯೂ ಆರಂಭವಾಗಿದೆ.

ಇಂತಹ ಸಮಯದಲ್ಲಿ ಪಂಜಾಬ್‌ ಸರ್ಕಾರ ಉಚಿತವಾಗಿ ವಲಸೆ ಕಾರ್ಮಿಕರನ್ನು ಕಳಿಸಿಕೊಡುತ್ತಿದ್ದ ಅದಕ್ಕಾಗಿ ಕರಪತ್ರವನ್ನು ಸಹ ಹಂಚುತ್ತಿರುವುದು ವಿಶೇಷವಾಗಿದೆ.


ಇದನ್ನೂ ಓದಿ: ಉಚಿತ ಟ್ರೈನ್‌ ಎಂಬುದು ದೊಡ್ಡ ಸುಳ್ಳು: ಕಾರ್ಮಿಕರಿಂದ ಹಣ ವಸೂಲಿಗಿಳಿದ ಕೇಂದ್ರ ಸರ್ಕಾರ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಇದು ತಪ್ಪು ಸಂದೇಶ್ ನೀಡುವ ವಿಚಾರವಾಗಿದೆ ಬಿಜೆಪಿ ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು, ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...